ಮನೆ Latest News ಮುಡಾ ಸೈಟ್ ವಾಪಸ್ ಕುರಿತು ಬಿಜೆಪಿ ಟೀಕೆ ವಿಚಾರ: ಸೈಟ್ ವಾಪಾಸ್ ಕೊಟ್ಟರೆ ಹೇಗೆ ತಪ್ಪಾಗುತ್ತೆ?...

ಮುಡಾ ಸೈಟ್ ವಾಪಸ್ ಕುರಿತು ಬಿಜೆಪಿ ಟೀಕೆ ವಿಚಾರ: ಸೈಟ್ ವಾಪಾಸ್ ಕೊಟ್ಟರೆ ಹೇಗೆ ತಪ್ಪಾಗುತ್ತೆ? ಎಂದ ಸಿದ್ದರಾಮಯ್ಯ

0

ಬೆಂಗಳೂರು; ಮುಡಾ ಸೈಟ್ ವಾಪಸ್ ಕುರಿತು ಬಿಜೆಪಿ ಟೀಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.  ಸೈಟ್ ವಾಪಾಸ್ ಕೊಟ್ಟರೆ ಹೇಗೆ ತಪ್ಪಾಗುತ್ತೆ? ಎಂದು ಪ್ರಶ್ನಿಸಿದ್ದಾರೆ.

ಅವರು ಮನನೊಂದು ಸೈಟ್ ವಾಪಾಸ್ ಮಾಡಿದ್ದಾರೆ. ಕಾಂಟ್ರವರ್ಸಿ ಬೇಡ ಅಂತಾ ಸೈಟುಗಳನ್ನು ಹಿಂದಿರುಗಿಸಿದ್ದಾರೆ.ಇದು ಹೇಗೆ ತಪ್ಪು‌ ಆಗುತ್ತೆ?ಬಿಜೆಪಿಯವರು ಸುಳ್ಳು‌ ಹೇಳುವುದರಲ್ಲಿ ನಿಸ್ಸೀಮರು ಎಂದಿದ್ದಾರೆ.ರಾಜೀನಾಮೆ ಕೊಟ್ರೆ ಮುಗಿದು ಹೋಗುತ್ತಾ? ಅನಗತ್ಯವಾಗಿ ರಾಜೀನಾಮೆ ಕೇಳುತ್ತಿದ್ದಾರೆ.ರಾಜೀನಾಮೆ ಕೊಡೋಕೆ ನಾನು ತಪ್ಪೇ ಮಾಡಿಲ್ವಲ್ಲ ಎಂದಿದ್ದಾರೆ.

ಇನ್ನು ಬಿಜೆಪಿ ವೀಡಿಯೋ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಇದರಲ್ಲಿ ನನ್ನದೇನು ಪಾತ್ರ ಇಲ್ಲ.ಯಡಿಯೂರಪ್ಪ ನವರು ಡಿನೋಟಿಫೈ ಮಾಡಿದ್ರು.ನಾನು‌ ಏನಾದ್ರೂ ಡಿನೋಟಿಫೈ ಮಾಡಿದ್ದೀನಾ?.ನನ್ನದೇನಾದರೂ ಆದೇಶ ಪ್ರತಿ‌ ಇದ್ಯಾ? ಪತ್ರದ ವ್ಯವಹಾರ ಇದೆಯಾ? ಕೇವಲ ಲ್ಯಾಂಡ್ರಿಂಗ್ ಇದ್ಯಾ.ಏನೂ ಇಲ್ಲ, ಹೀಗಾಗಿ ಎರಡೂ ಪ್ರಕರಣಗಳು ಬೇರೆ.ಇವೆರಡಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ.

ಇನ್ನು ಮುಂದಿನ ಕಾನೂನು ಹೋರಾಟಕ್ಕೆ ಸಂಬಂಧಪಟ್ಟಂತೆ ಆಪ್ತ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ.ಮುಡಾ ಪ್ರಕರಣ ಬೆಳವಣಿಗೆ ಬಗ್ಗೆ ಆಪ್ತ ಸಚಿವರೊಂದಿಗೆ ಸಿಎಂ ಚರ್ಚೆ ಮಾಡಿದ್ದಾರೆ.ಕಾವೇರಿ ನಿವಾಸದಲ್ಲಿ ಆಪ್ತ ಸಚಿವರೊಂದಿಗೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ.ಸಚಿವರಾದ ಜಮೀರ್ ಅಹ್ಮದ್, ಕೆ.ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್ ಜೊತೆ ಚರ್ಚೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜಕೀಯ ಬೆಳವಣಿಗೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕಾನೂನು ಹೋರಾಟ ಮುಂದುವರೆಸುವ ಬಗ್ಗೆ ಆಪ್ತ ಸಚಿವರೊಂದಿಗೆ ಚರ್ಚೆ ಮಾಡಿದ್ದಾರೆ. ಸಮಾಲೋಚನೆ ವೇಳೆ ಸಿಎಂ ಸಿದ್ದರಾಮಯ್ಯರಿಗೆ ಆಪ್ತ ಸಚಿವರಿಂದ ಆತ್ಮಸ್ಥೈರ್ಯ ತುಂಬಿದ್ದಾರೆ.

ನನ್ನ ಹಿಟ್ ಅಂಡ್ ರನ್ ಅಂತಾರೆ,ಯುಟರ್ನ್ ಸಿದ್ದರಾಮಯ್ಯ ಎಂದು ಕರೆಯಬಹುದಾ?; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು; ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಎಲ್ಲಾ  14 ಸೈಟುಗಳನ್ನು ವಾಪಾಸ್ ನೀಡುತ್ತೇನೆ ಎಂದು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಅವರು ನನ್ನ ಹಿಟ್ ಅಂಡ್ ರನ್ ಅಂತಾರೆ. ಅವರನ್ನು ,ಯುಟರ್ನ್ ಸಿದ್ದರಾಮಯ್ಯ ಎಂದು ಕರೆಯಬಹುದಾ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ರಾಜಕೀಯ ಒಂದೊಂದು ರೀತಿಯ ತಿರುವು ಪಡೆಯುತ್ತಿದೆ.ಈ ಸರಕಾರದಲ್ಲಿ ರಾಜ್ಯಪಾಲರ ಮುಂದೆ ಸಿಎಂ ತನಿಖೆಗೆ ಅನುಮತಿ ಗೆ ಹೋಯ್ತು.ಹಲವಾರು ಕ್ಯಾಬಿನೆಟ್ ಸಭೆಗಳನ್ನು ಕರೆದಿದ್ದಾರೆ. ಸಿಎಂ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ.ಎಲ್ಲವನ್ನು ಪರಾಮರ್ಶೆ ಮಾಡಬೇಕಿದೆ.ಮುಡಾದಿಂದ ಆದ ತಪ್ಪು ಎಂದು ಸಿಎಂ ಆಗಿದೆ ಹೇಳಿದ್ದರು.ತಮ್ಮ ಗಮನಕ್ಕೆ ಬಾರದೆ ತಮ್ಮ ಆಸ್ತಿ ಒತ್ತುವರಿ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಅದರ ಆಸ್ತಿ ಮೊತ್ತ 62 ಕೋಟಿ ಎಂದು ಸಿಎಂ ಹೇಳಿದ್ದರು.ಇಷ್ಟೆಲ್ಲಾ ಆದಮೇಲೆ ವಕೀಲರು ಜುಜುಬಿ ಸೈಟು ಎಂದು ಹೇಳಿದ್ದರು.ನಿನ್ನೆ ಸಚಿವರೊಂದಿಗೆ ಸಿಎಂ ಮಾತನಾಡಿದ್ದಾರೆ.ಕಾವೇರಿಗೆ ಕಾರು ಬರ್ ಅಂತಾ ಬರ್ತಾವೆ ಬರ್ ಅಂತಾ ಹೋಗ್ತವೆ.ನ್ಯಾಯಕ್ಕೆ ಹುಟ್ಟಿರೋ ಹೆಚ್.ಕೆ ಪಾಟೀಲ್ ಹೇಳಿಕೆ ಗಮನಿಸಿದ್ದೇನೆ.ಪತ್ರವನ್ನು ಕೂಡ ನೋಡಿದ್ದೇನೆ.ನಾನು ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ.ಸೈಟ್ ವಾಪಾಸ್ ಕೊಟ್ಟಿರುವುದು ಆಶ್ಚರ್ಯ ಎಂದು ಸಿಎಂ ಹೇಳಿದ್ದಾರೆ.ಸಿಎಂ ಗಮನಕ್ಕೆ ಬಾರದೆ ವಾಪಾಸ್ ಕೊಟ್ರಾ..? ಎಂದಿದ್ದಾರೆ.

ನನ್ನ ಹಿಟ್ ಅಂಡ್ ರನ್ ಅಂತಾರೆ.ಯುಟರ್ನ್ ಸಿದ್ದರಾಮಯ್ಯ ಎಂದು ಕರೆಯಬಹುದಾ..?ಈಗ ಏಕಾಏಕಿ ಸೈಟು ವಾಪಾಸ್ ಪಡೆಯಲು ಹೇಳಿಕೊಟ್ಟವರು ಯಾರು..? ಎಂದು ಪ್ರಶ್ನೆ ಮಾಡಿದ್ದಾರೆ.