ಮನೆ Latest News ನಾಗಮಂಗಲ ಗಲಭೆ ವಿಚಾರ; ಪರಿಹಾರ ಕೊಡೋ ಬಗ್ಗೆ ಪರಿಶೀಲಿಸ್ತೀವಿ ಎಂದ ಗೃಹ ಸಚಿವ ಡಾ. ಜಿ....

ನಾಗಮಂಗಲ ಗಲಭೆ ವಿಚಾರ; ಪರಿಹಾರ ಕೊಡೋ ಬಗ್ಗೆ ಪರಿಶೀಲಿಸ್ತೀವಿ ಎಂದ ಗೃಹ ಸಚಿವ ಡಾ. ಜಿ. ಪರಮೇಶ್ವರ್

0

ಬೆಂಗಳೂರು; ನಾಗಮಂಗಲ ಗಲಭೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಮಾಡಿ ವರದಿ ಕೊಡಲು ಹೇಳಿದ್ದೇವೆ.ಈಗಾಗಲೇ ಅಲ್ಲಿ ಕ್ಯಾಂಪ್ ಮಾಡಿದ್ದಾರೆ.ತನಿಖೆ ನಡೆಯುತ್ತಿದೆ.ಕಾನೂನಿನ ಚೌಕಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತಗೋತೇವೆ ಎಂದಿದ್ದಾರೆ.

ಅದು ಅವರದ್ದೇ ಜವಬ್ದಾರಿ, ಇಡೀ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಏನೇ ಆದರೂ ನೀವೇ ಜವಾಬ್ದಾರಿ ಅಂತಾ ಹೇಳಿದ್ವಿ.ನಾಗಮಂಗಲದ ಅಧಿಕಾರಿಯಿಂದ ಸ್ವಲ್ಪ ನಿರ್ಲಕ್ಷ್ಯ ಕಂಡು ಬಂದಿದೆ. ಹಾಗಾಗಿ ಅವರನ್ನು ಸಸ್ಪೆಂಡ್ ಮಾಡಿದ್ದಾರೆ.ಡಿವೈಎಸ್ಪಿ ಮೇಲೆ ಎಲ್ಲ ತನಿಖೆ ನಡೀತ್ತಿದೆ.ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನು ಗಲಾಟೆಯಿಂದಾಗಿ ಆಗಿರುವ ನಷ್ಟಕ್ಕೆ ಪರಿಹಾರ ಕೊಡುವ ವಿಚಾರಕ್ಕೆ  ಸಂಬಂಧಪಟ್ಟಂತೆ ಮಾತನಾಡಿದ ಅವರು ಈಗಾಗಲೇ ವರದಿ ಕೇಳಿದ್ದೇವೆ.ಪರಿಹಾರ ಕೊಡಲು ನಿಯಮಗಳಿವೆ.ಅದನ್ನು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದರ ಮಧ್ಯೆ ಘಟನೆ ಕುರಿತು ಬಿಜೆಪಿ ನಾಯಕರ ಟೀಕೆ ಬಗ್ಗೆ ರಿಯ್ಯಾಕ್ಟ್ ಮಾಡಿದ ಡಾ.ಜಿ ಪರಮೇಶ್ವರ್ ಅಲ್ಲ ಸರ್ಕಾರ ಹೋಗಿ ಗಲಾಟೆ ಮಾಡಿ ಅಂತ ಹೇಳೋಕಾಗುತ್ತಾ?ಈ ರೀತಿ ಆಗಬಾರದಾಗಿತ್ತು ಅನ್ನೋದು ಒಂದು ದೊಡ್ಡ ಸ್ಟೇಟ್ಮೆಂಟ್ ಆಗಿದೆ.ನಮ್ಮ ಭಾಷೆ, ಕನ್ನಡ ಭಾಷೆ ಇವರಿಗೆ ಅರ್ಥ ಆಗಲ್ವಾ?ನಾವು ಹಳ್ಳಿಯಿಂದ ಬಂದವರು.ಹಳ್ಳಿ ಭಾಷೆಯನ್ನ ಮಾತನಾಡಿದ್ದೇನೆ.ಟೆಕ್ಸ್ಟ್ ಬುಕ್ ಭಾಷೆಯನ್ನು ಮಾತನಾಡುವುದಕ್ಕೆ ಆಗುವುದಿಲ್ಲ .ನಾವು ಕಂಟ್ರೋಲ್ ಮಾಡಿದ್ದೇವೆ.ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮವನ್ನು ವಹಿಸಿದ್ದೇವೆ.ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಬಿಡೋದಿಲ್ಲ.ಯಾವುದೇ ಹಬ್ಬದಲ್ಲಿ ಆದರೂ ಅನಾವಶ್ಯಕ ಗೊಂದಲ ಸೃಷ್ಟಿ ಮಾಡೋರನ್ನ ಬಿಡೋದಿಲ್ಲ .ಕಾನೂನಿನ ಚೌಕಟ್ಟಲ್ಲಿ ಯಾರೇ ಆದರೂ ಕ್ರಮವಹಿಸುತ್ತೇವೆ ಎಂದಿದ್ದಾರೆ.

ನಾಗಮಂಗಲ ಗಲಭೆ ವಿಚಾರ; ಬಿಜೆಪಿ, ಜೆಡಿಎಸ್ ನಾಯಕರಿಗೆ ಸಚಿವ ಸಂತೋಷ ಲಾಡ್ ತಿರುಗೇಟು

ಬೆಂಗಳೂರು; ನಾಗಮಂಗಲ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿ, ಜೆಡಿಎಸ್ ನಾಯಕರಿಗೆ ಸಚಿವ ಸಂತೋಷ ಲಾಡ್ ತಿರುಗೇಟು ಕೊಟ್ಟಿದ್ದಾರೆ. ಇದು ಒಂದು ಕೆಟ್ಟ ಘಟನೆ.ಕರ್ನಾಟಕ ಅಲ್ಲ ದೇಶದಲ್ಲೇ ಇಂತಹ ಘಟನೆ ಆಗಬಾರದು.ಯಾರು ಮಾಡಿದ್ದಾರೆ ಅವರನ್ನ ಹುಡುಕಬೇಕು.ಕುಮಾರಸ್ವಾಮಿ ಖಂಡನೆ ಮಾಡ್ತಿದ್ದಾರಲ್ಲ.ಅವರನ್ನ ಹಿಡಿದು ಶಿಕ್ಷೆ ಕೊಡಬೇಕು ಅಷ್ಟೇ.ಬಿಜೆಪಿ ನಾಯಕರಿಗೆ ಇದು ಬಿಟ್ಟು ಬೇರೆ ಏನಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮನ ಟೆಂಪಲ್ ಸೋರ್ತಿದೆ.3500 ಕೋಡಿ ತೆಗೆದು ಟೆಂಪಲ್ ಕಟ್ಟಿದ್ದಾರೆ.ನಮ್ಮಪ್ಪನು ಇಟ್ಟಿಗೆ ಕೊಟ್ಟಿದ್ದಾನೆ.ಸೋರ್ತಿದೆಯಲ್ಲ ಯಾಕೆ ಅವರು ಮಾತನಾಡ್ತಿಲ್ಲ.ಹಿಂದುಗಳ ಸಮಸ್ಯೆ ಬಗ್ಗೆ ಯಾಕೆ ಮಾತನಾಡ್ತಿಲ್ಲ.ಹಿಂದೂ ಮಕ್ಕಳಿಗೆ ಕೆಲಸ ಕೊಡ್ತಾರೆ.ದೇಶದಲ್ಲಿ ಹಿಂದು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗ್ತಿವೆ.ಇದರ ಬಗ್ಗೆ ಅವರು ಮಾತನಾಡ್ತಾರಾ.ಯಾಕೆ ಬಿಜೆಪಿಯವರು ಅದರ ಬಗ್ಗೆ ಮಾತನಾಡಲ್ಲ ಎಂದು ಪ್ರಶ್ನಿಸಿದ್ದಾರೆ.

ರೈಲ್ವೆ ಅಕ್ಸಿಂಡೆಂಟ್ ಎಷ್ಟು ಆಗಿವೆ.ರೈಲ್ವೆ ಹಳಿಗಳು ತಪ್ಪಿವೆ ಕೇಳಿ ಅವರನ್ನ ಮಾತನಾಡ್ತಾರಾ.ಸೆಬಿಯಲ್ಲಿ ದೊಡ್ಡ ಹಗರಣ ಆಗಿದೆಯಲ್ಲ.ಕೇಳಿ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡ್ತಾರಾ?ನೀವು ಅವರನ್ನ ಕೇಳಿ ಕೊಡ್ತಾರಾ?.ಸುಮ್ಮನೆ ಹಿಂದೂಗಳು ಅಂತ ಹೇಳ್ತಾರೆ.ಹಿಂದೂ ಮುಸ್ಲಿಂ ಎಲ್ಲರು ಒಂದೇ ಆಲ್ವಾ.ಹಿಂದೂಗಳನ್ನೇ ಯಾಕೆ ಸಪ್ರೇಟ್ ಮಾಡ್ತಾರೆ.ಯಾಕೆ ಹಿಂದೂಳ ಸಬ್ ಕ್ಯಾಸ್ಟ್ ಬಗ್ಗೆ ಮಾತನಾಡ್ತಿಲ್ಲ.ಅಲ್ಲಿ ಒಬಿಸಿ, ಬೇರೆ ಬೇರೆಯವರು ಇಲ್ವಾ.ಬರಿ ಹಿಂದೂ ಅಂದರೆ ಹೇಗೆ ಎಂದು ಸಂತೋಷ್ ಲಾಡ್ ಪ್ರಶ್ನೆ ಮಾಡಿದ್ದಾರೆ.