ಮನೆ Latest News ಹುಬ್ಬಳ್ಳಿ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಗೃಹ ಸಚಿವ ಪರಮೇಶ್ವರ್ ಆದೇಶ

ಹುಬ್ಬಳ್ಳಿ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಗೃಹ ಸಚಿವ ಪರಮೇಶ್ವರ್ ಆದೇಶ

0

ಹುಬ್ಬಳ್ಳಿ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಗೃಹ ಸಚಿವ ಪರಮೇಶ್ವರ್ ಆದೇಶ ನೀಡಿದ್ದಾರೆ.ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್ ಬಿಹಾರ ಮೂಲದ ವ್ಯಕ್ತಿ ಐದು ವರ್ಷದ ಮಗುವನ ಎತ್ತಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.  ಆತನನ್ನ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾನೆ.  ಪೊಲೀಸರು ಅವರ ಆತ್ಮ ರಕ್ಷಣೆ ಮಾಡಿಕೊಳ್ಳಬೇಕಲ್ಲ. ಹೀಗಾಗಿ ಕಾಲಿಗೆ ಫೈಯರ್ ಮಾಡಿದ್ದಾರೆ ಅದು ಬೆನ್ನಿಗೆ ಬಿದ್ದಿದೆ. ಆತನನ್ನ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ ಆದರೆ ಆತ ಆಸ್ಪತ್ರೆಗೆ ಹೋಗುವಾಗಲೇ ತೀರಿಕೊಂಡಿದ್ದಾನೆ ಎಂದು ರಿಪೋರ್ಟ್ ಇದೆ.ನಾನು ತಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ.  ತನಿಖೆ ಮಾಡಿದ ನಂತರದಲ್ಲಿ ಸತ್ಯಾಂಶ ಗೊತ್ತಾಗುತ್ತದೆ ಎಂದಿದ್ದಾರೆ.

ಹೊರ ರಾಜ್ಯದವರಿಗೆ ರಾಜ್ಯದಲ್ಲಿ ಕಾನೂನಿನ ಭಯ ಇಲ್ಲದ ವಿಚಾರದ ಬಗ್ಗೆ ಮಾತನಾಡಿದ ಅವರು ಹೊರ ರಾಜಧಾನಿ ಸಾಕಷ್ಟು ಜನ ಬೆಂಗಳೂರಿಗೆ ಬರುತ್ತಾರೆ.ಬಂದಂತವರಿಗೆ ಇಲ್ಲಿನ ಸಂಸ್ಕೃತಿ ಜನರ ಭಾವನೆ ಅರ್ಥ ಆಗುವುದಿಲ್ಲವೋ ಗೊತ್ತಿಲ್ಲ ಅವರು ಆ ರೀತಿ ವರ್ತನೆ ಮಾಡುತ್ತಾರೆ.ಹೊರ ರಾಜರಿಂದ ಬಂದವರದ್ದೇ ಹೆಚ್ಚು ಪ್ರಕರಣಗಳನ್ನು ನೋಡುತ್ತಿದ್ದೇವೆ . ಸುಮಾರು ಕಡೆ ಕಟ್ಟಡ ಕಾರ್ಮಿಕರಿಂದ ಕ್ರೈಮ್ ಗಳು ಆಗಿದ್ದಾವೆ.ಇದರ ಬಗ್ಗೆ ಕ್ರಮಕ್ಕೆ ಕಾರ್ಮಿಕ ಇಲಾಖೆ ಮತ್ತು ನಾವು ಜಂಟಿಯಾಗಿ ಸಭೆ ಮಾಡುತ್ತೇವೆ ಎಂದ್ರು.

ಜಾತಿ ಜನಗಣತಿ ವರದಿ ವಿಚಾರದ ಬಗ್ಗೆ ಮಾತನಾಡಿದ ಅವರು  ಇನ್ನು ವರದಿಯನ್ನು ಓದುತ್ತಿದ್ದೇನೆ ನಾಲ್ಕೈದು ಪೇಜ್ ಓದಿದ್ದೇನೆ .ಒಟ್ಟಾರೆ ಇದರಲ್ಲಿ ಎರಡು ಮೂರು ವಿಚಾರಗಳಿವೆ. 2018ರಲ್ಲಿ ಪ್ರಾರಂಭ ಮಾಡಿ ಮುಗಿದಿದೆ ಎಂದು ಹೇಳಿ ಎರಡು ಮೂರು ವರ್ಷ ಆಯ್ತು.ಅದರ ಇಂಪ್ಯಾಕ್ಟ್, ಯೋಜನೆಗಳು ಚರ್ಚೆ ಒಂದು ಭಾಗದಲ್ಲಿ ಇಡೋಣ. ಅದನ್ನ ಹೊರಗಡೆ ತರಲು ಕಷ್ಟ ಆದಂತ ಸಂದರ್ಭ ಈಗ ಮಾನ್ಯ ಮುಖ್ಯಮಂತ್ರಿಗಳು ಅವರದೇ ಹೊರಗಡೆ ತಂದಿದ್ದಾರೆ. ವಸ್ತುಸ್ಥಿತಿ ಏನಿದೆ ಎಂದು ಗೊತ್ತಾಗಿದೆ. ಮುಂದೆ ಅದರ ಎಫೆಕ್ಟ್ ಯೋಜನೆಗಳು ಕಾರ್ಯಕ್ರಮ ಈಗಲೇ ಹೇಳಲು ಆಗುವುದಿಲ್ಲ. ಕೊಟ್ಟಿರುವ ಪ್ರತಿಗಳನ್ನು ಎಲ್ಲಾ ಮಂತ್ರಿಗಳು ಓದಿಕೊಂಡು ಬರಬೇಕು. 17ರಂದು ಬೇರೆ ಯಾವುದು ವಿಷಯ ಬೇಡ ಈ ಒಂದು ವಿಚಾರದ ಮೇಲೆ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. ಚರ್ಚೆ ಮಾಡಿದ ನಂತರದಲ್ಲಿ ಸ್ವೀಕರಿಸುವ ಬಗ್ಗೆ ಬರುತ್ತದೆ.ಈಗ ವರದಿಯ ಬಗ್ಗೆ ನಾವು ಏನು ಹೇಳಲು ಆಗುವುದಿಲ್ಲ ಎಂದರು.

2018ರಿಂದ ಪ್ರಾರಂಭವಾಗಿದ್ದು 10 ವರ್ಷಗಳ ಬಳಿಕ ನಾವು ಆಚೆಗೆ ತರುತ್ತಿದ್ದೇವೆ. ಸ್ಟಡಿ ಮಾಡಿ ಚರ್ಚೆ ಮಾಡೋಣ.ರಾಜಕೀಯ ಟಿಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ.ಸಮುದಾಯದ ಅಭಿಪ್ರಾಯಗಳು ,ರಾಜಕಾರಣಿಗಳ ಅಭಿಪ್ರಾಯಗಳು ,ಎಲ್ಲವೂ ಬರುತ್ತಿದೆ ಚರ್ಚೆ ಮಾಡಿ ನಂತರ ನೋಡುತ್ತೇವೆ ಎಂದು ತಿಳಿಸಿದ್ದಾರೆ.ಬಿಟಿಎಂ ಲೇಔಟ್ ಪ್ರಕರಣದಲ್ಲಿ ಕೇರಳ ಬಂಧಿಸಲಾಗಿದೆ. ಆತ ಗುಲ್ಬರ್ಗ ಮೂಲದವನು ಅಂತ ಹೇಳಲಾಗ್ತಿದೆ, ಕೇರಳದಲ್ಲಿ ಬಂಧಿಸಲಾಗಿದೆ.ಆತನ ಬಳಿ ಮಾಹಿತಿ ಪಡೆದು ಕೇಸ್ ಮುಂದುವರಿಸುತ್ತಾರೆ ಎಂದಿದ್ದಾರೆ.

ಮುಸ್ಲಿಂ ನವರನ್ನ ಓಲೈಕೆ ಮಾಡೋದಕ್ಕೆ ಅವರನ್ನ ನಂಬರ್ ಒನ್ ಅಂತ ತೋರಿಸಿದ್ದಾರೆ: ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಹೇಳಿಕೆ

ಬೆಂಗಳೂರು; ಮುಸ್ಲಿಂ ನವರನ್ನ ಓಲೈಕೆ ಮಾಡೋದಕ್ಕೆ ಅವರನ್ನ ನಂಬರ್ ಒನ್ ಅಂತ ತೋರಿಸಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಒಬ್ಬೊಬ್ಬರಿಗೆ ವಿರೋಧ ಮಾಡೋದಕ್ಕೂ ಕಾರಣವಿದೆ.ಮುಸ್ಲಿಂ ನವರನ್ನ ಓಲೈಕೆ ಮಾಡೋದಕ್ಕೆ ಅವರನ್ನ ನಂಬರ್ ಒನ್ ಅಂತ ತೋರಿಸಿದ್ದಾರೆ.ವೀರಶೈವ ರನ್ನ ಆರು ತುಂಡು ಮಾಡಲಾಗಿದೆ. ಎಲ್ಲರನ್ನೂ ತುಂಡು ತುಂಡು ಮಾಡಲಾಗಿದೆ. ಎಲ್ಲರಿಗಿಂತ ಮೆಜಾರಿಟಿ ಅಂತ ಮುಸ್ಲಿಂ ಅವರನ್ನ ತೋರಿಸಲಾಗಿದೆ. ಇದೆಲ್ಲವೂ ನಡೀತದಾ? ಸೆನ್ಸಸ್ ಮಾಡೋದು ಕೇಂದ್ರ ಸರ್ಕಾರ. ಕಾಂತರಾಜು ಅವರ ವರದಿಯಲ್ಲಿ ಹಿಂದೆ ಮಾಡಿದ್ದು.ಇದು ಈಗ ಮಾಡಿದ್ದಾ?? ಇದರಲ್ಲಿ ಯಾರೂ ಸಾಯಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದ್ರಿಂದ ಲಾಭ ನಷ್ಟ ದ ಬಗ್ಗೆ ಪ್ರಶ್ನೆ ಇಲ್ಲ. ಒಕ್ಕಲಿಗರು,ಲಿಂಗಾಯತರನ್ನ ಒಡೆಯೋದಕ್ಕೆ ಹೊರಟಿದ್ದಾರೆ.ನಮ್ಮ ಜನಾಂಗದವರನ್ನೂ ಕಡಿಮೆ ತೋರಿಸಿ ಗೊಂದಲ ಸೃಷ್ಟಿ ಮಾಡಿದ್ದಾರೆ.ಜನಾಂಗದ ನಡುವೆ ಹೋರಾಟ ಮಾಡೋದಕ್ಕೆ ಯತ್ನಿಸುತ್ತಿದ್ದಾರೆ. ಮಾಡಿದ್ದು ಸರ್ಕಾರ, ಅನುಭವಿಸುತ್ತಿರೋದು ನಾವು. ನಮ್ಮಲ್ಲೇ ಜಗಳ ಮಾಡೋದಕ್ಕೆ ಹೋಗ್ತಿದ್ದಾರೆ ಜಾತಿಗಣತಿ ಯಾಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಲಿಂಗಾಯತ ಸಮುದಾಯ ದಿಂದ ಪ್ರತ್ಯೇಕ ಗಣತಿ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ರತೀ ಜಾತಿ ಯವರು ಪ್ರತ್ಯೇಕ ವಾಗಿ ಮಾಡಲಿ. ಅದನ್ನ ತಡೆಯೋದಕ್ಕೆ ನೀವು ಯಾರು?.ಅವರವರು ಪ್ರತ್ಯೇಕ ವಾಗಿ ಗಣತಿ ಮಾಡಲಿ.ಆದ್ರೆ ನಿಮ್ಮ ಸ್ಟ್ಯಾಂಡ್ ನೀವು ಹೇಳಿ. ಯಾರಿಗೆ ಅನ್ಯಾಯ ಮಾಡುತ್ತಿದ್ದೀರಿ ಅನ್ನೋದನ್ನೂ ಹೇಳಲಿ ಎಂದಿದ್ದಾರೆ.