ಬೆಂಗಳೂರು: ಮೂರು ಚುನಾವಣೆಗಳಲ್ಲಿ ಲೂಟಿ ಹಣ ಖರ್ಚು ಮಾಡ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಚುನಾವಣಾ ಆಯೋಗಕ್ಕೆ ಬಿಜೆಪಿಯವರು ದೂರು ಕೊಡಲಿ. ದೂರು ಕೊಡದೇ ಕ್ರಮ ತಗೊಳ್ಳಿ ಅದ್ರೆ ಹೇಗೆ?.ದೂರು ಕೊಡದಿದ್ರೆ ಬಿಜೆಪಿಯವರ ಆರೋಪ ಸುಳ್ಳು ಅಂತ ಆಗುತ್ತಲ್ವಾ?. ಚುನಾವಣಾ ಆಯೋಗಕ್ಕೆ ತಿಳಿಸಲಿ ಅವರು. ಬಿಜೆಪಿಯವರ ಆರೋಪದಲ್ಲಿ ಸತ್ಯ ಇಲ್ಲ ಎಂದಿದ್ದಾರೆ.
ಇನ್ನು ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್ ದಾಖಲು ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಬಿಜೆಪಿಯವರಿಗೆ ಇದೊಂದು ಅಭ್ಯಾಸ ಆಗಿ ಹೋಗಿದೆ. ಏಳೆಂಟು ವರ್ಷದ ಹಿಂದಿನ ಘಟನೆಯನ್ನು ನಿನ್ನೆ ನಡೆದಿದೆ ಅನ್ನುವ ಹಾಗೆ ಅವರು ಪೋಸ್ಟ್ ಮಾಡಿದ್ದಾರೆ. ಇನ್ನು ಕೆಲವು ಹೊರದೇಶದಲ್ಲಾದ ಘಟನೆಗಳ ಚಿತ್ರಗಳನ್ನು ನಮ್ಮಲ್ಲಾಗಿದೆ ಅಂತ ಬಿಂಬಿಸಿ ಪೋಸ್ಟ್ ಮಾಡಿದ್ದಾರೆ. ಇದೆಲ್ಲ ಹಾಕಿ ತಪ್ಪು ಸಂದೇಶ ಕೊಡಲು ಪ್ರಯತ್ನಿಸ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದೆಲ್ಲ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಹೀಗಾಗಿ ಕಾನೂನು ಪ್ರಕಾರ ಅವರ ಮೇಲೆ ಎಫ್ಐಆರ್ ಹಾಕಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಡಿಕೆಶಿಯವರ ತಗ್ಗಿ ಬಗ್ಗಿ ನಡೀಬೇಕು ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದರ ಬಗ್ಗೆ ನನಗೆ ಗೊತ್ತಿಲ್ಲ, ನಾನೇನು ಮಾತಾಡಲಿ. ಡಿಕೆಶಿ ಹೇಳಿಕೆ ಗೊತ್ತಿಲ್ಲ ನನಗೆ. ನನ್ನ ಮುಗಿಸಿದರೆ ಕಾಂಗ್ರೆಸ್ ಮುಗಿಸಿದಂತೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಿಎಂ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಹೇಳಿದ್ದಕ್ಕೆ ನನ್ನ ಪ್ರತಿಕ್ರಿಯೆ ಕೇಳೋದು ಸರಿಯಿಲ್ಲ. ನಮ್ಮ ನಾಯಕರು ಅವರ ಅಭಿಪ್ರಾಯ ಹೇಳ್ತಾರೆ. ಅದಕ್ಕೆ ನಮ್ಮ ಅಭಿಪ್ರಾಯ ಹೇಳೋದು ಸಮಂಜಸ ಅಲ್ಲ ಎಂದಿದ್ದಾರೆ.