ಮನೆ Latest News ಸರ್ಕಾರದ ಬಳಿ ಹಣ ಇಲ್ಲ ಎಂಬ ತಮ್ಮ ಹೇಳಿಕೆ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಗೃಹ...

ಸರ್ಕಾರದ ಬಳಿ ಹಣ ಇಲ್ಲ ಎಂಬ ತಮ್ಮ ಹೇಳಿಕೆ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್

0

ಬೆಂಗಳೂರು: ಸರ್ಕಾರದ ಬಳಿ ಹಣ ಇಲ್ಲ ಎಂಬ ತಮ್ಮ ಹೇಳಿಕೆ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ವಿರುದ್ಧ ಗರಂ ಆದ  ಗೃಹ ಸಚಿವ ಪರಮೇಶ್ವರ್ ನಾನು ಹಾಗೆ ಎಲ್ಲಿ ಹೇಳಿದೀನಿ, ಆ ರೀತಿ ನಾನು ಹೇಳಿಲ್ಲ. ಬಿಜೆಪಿಯವ್ರು ಅರ್ಥ ಮಾಡಿಕೊಳ್ಳಬೇಕು.ಬಾದಾಮಿ ಅಭಿವೃದ್ಧಿ, ಬಾದಾಮಿ ಗುಹೆಗಳ ರಕ್ಷಣೆಗೆ ೧೦೦೦ ಕೋಟಿ ಪ್ರಸ್ತಾವನೆ ರೆಡಿ ಮಾಡಿ ಕೇಂದ್ರಕ್ಕೆ ಕಳಿಸಿ ಅಂದೆ.ಅಷ್ಟೊಂದು ದುಡ್ಡು ನಾವು ಕೊಡಲು ಆಗೋದಿಲ್ಲ, ಆ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಿ ಅಂದಿದ್ದೆ, ಕೇಂದ್ರವೂ ಕೊಟ್ರೆ ಅ‌ನುಕೂಲ ಆಗುತ್ತೆ ಅಂದಿದ್ದೆ. ಇಷ್ಟೇ ಹೇಳಿದ್ದು, ದುಡ್ಡೇ ಇಲ್ಲ ಅಂತ ನಾನೆಲ್ಲಿ ಹೇಳಿದ್ದೆ.ಬಜೆಟ್ ಗಾತ್ರ ಸಹಜವಾಗಿ ಹೆಚ್ಚಾಗಿದೆ, ಹಣ ಇಲ್ಲ ಅಂತ ಹೇಗೆ ಹೇಳೋಕ್ಕಾಗುತ್ತೆ. ನೀರಾವರಿಗೆ, ಅಭಿವೃದ್ಧಿಗೆ ಹಣ ಕೊಟ್ಟಿದೀವಿ, ಗ್ಯಾರಂಟಿಗೊಂದೇ ಕೊಟ್ಟಿಲ್ಲ.ಸರ್ಕಾರದ ಬಳಿ ದುಡ್ಡೇ ಇಲ್ಲ ಅಂತ ಹೇಳ್ತೀನಾ ನಾನು? ಅಷ್ಟು ಪ್ರಜ್ಞೆ ಇಲ್ವಾ ನನಗೆ. ಸರ್ಕಾರದಲ್ಲಿದ್ದುಕೊಂಡು ನಾವು ಆರೀತಿ ಎಲ್ಲ ಮಾತಾಡಲು ಸಾಧ್ಯವಿಲ್ಲ, ನಾವು ಹಾಗೆಲ್ಲ ಮಾತಾಡೋದೂ ಇಲ್ಲ. ನನಗೆ ವಸ್ತುಸ್ಥಿತಿ ಗೊತ್ತಿದೆ, ನನಗಿಂತ ಚೆನ್ನಾಗಿ ಯಾರಿಗೆ ಅರ್ಥ ಆಗುತ್ತೆ. ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ನಾವು ಹಾಗೆಲ್ಲ ಮಾತಾಡಲು ಹೋಗೋದಿಲ್ಲ.ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದಿದ್ದಾರೆ.

ಶಾಸಕರ ಅಸಮಧಾನ ವಿಚಾರದ ಬಗ್ಗೆ ಮಾತನಾಡಿ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳ್ಕೊಂಡಿದ್ದಾರೆ.ಅವರು ರಾಜ್ಯದ ಸಮಸ್ಯೆ ಹೇಳಿದ್ದಾರಾ?.ಅವರ ಕ್ಷೇತ್ರಗಳಲ್ಲಿ ಸಮಸ್ಯೆ ಇದೆ, ಸರಿಯಾದ ಸಮಯಕ್ಕೆ ಹಣ ಬಿಡುಗಡೆ ಆಗ್ತಿಲ್ಲ ಅಂತ ಕಷ್ಟ ಹೇಳ್ಕೊಂಡಿದ್ದಾರೆ. ಇದನ್ನು ಸಿಎಂ ಬಗೆಹರಿಸ್ತಾರೆ. 50 ಕೋಟಿ ಆ್ಯಕ್ಷನ್ ಪ್ಲಾನ್ ಮಾಡಿ ಅಂತ ಖುದ್ದು ಶಾಸಕರಿಗೆ ಸಿಎಂ ಹೇಳಿದ್ದಾರೆ. ವಿಪಕ್ಷ ಶಾಸಕರಿಗೂ ಹೇಳಿದ್ದಾರೆ.ದುಡ್ಡಿಲ್ಲದೇ ಇದ್ದಿದ್ದರೆ ಈಥರ ಸಿಎಂ ಹೇಳ್ತಿದ್ರಾ?. ಜಮೀರ್ ಅಹಮದ್ ಇಲಾಖೆಯಲ್ಲಿ ವಿಪಕ್ಷ ಶಾಸಕರಿಗೆ ಹೆಚ್ಚಿನ ಅನುದಾನ ಕೊಟ್ಟಿರೋ ವಿಚಾರ ಗೊತ್ತಿಲ್ಲ ನನಗೆ.ಅದು ಆ ಇಲಾಖೆಯ ಆಂತರಿಕ ವಿಚಾರ, ಜಮೀರ್ ನೇ ಕೇಳಿ ಎಂದು ಗರಂ ಆಗಿದ್ದಾರೆ.

ಅನಂತ್ ಕುಮಾರ್ ಹೆಗಡೆ ಪ್ರಕರಣದ ಬಗ್ಗೆ ಮಾತನಾಡಿ ಅನಂತ್ ಕುಮಾರ್ ಹೆಗಡೆ ಹಲ್ಲೆ ಮಾಡಿಲ್ಲ‌ ಅಂತ ಪೊಲೀಸರು ನನಗೆ ಪ್ರಾಥಮಿಕ ಮಾಹಿತಿ ಕೊಟ್ರು. ಹೊಡೆದವರು ಅವರ ಗನ್‌ ಮ್ಯಾನ್, ಡ್ರೈವರ್ ಅಂತ ಪೊಲೀಸರು ಹೇಳಿದ್ರು.ಎಫ್ಐಆರ್ ನಲ್ಲಿ ಅವ್ರೂ ಹೊಡೆದಿದ್ದಾರೆ ಅನ್ನೋದು ಇದ್ರೆ ಪೊಲೀಸರು ತನಿಖೆ ಮಾಡ್ತಾರೆ. ಮುಂದಿನ ತನಿಖೆ ನಂತರ ವಸ್ತುಸ್ಥಿತಿ ಗೊತ್ತಾಗುತ್ತೆ ಎಂದ ಅವರು ಸಂಪಿಗೆಹಳ್ಳಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಜೈಶ್ರೀರಾಮ್ ಕೂಗುವಂತೆ ಒಂದು ಗುಂಪಿನಿಂದ ಒತ್ತಾಯ, ಎಫ್ಐಆರ್ ದಾಖಲು ವಿಚಾರದ ಬಗ್ಗೆ ಮಾತನಾಡುತ್ತಾ ಪೊಲೀಸರು ಇದರ ಬಗ್ಗೆ ಕ್ರಮ ತಗೋತಾರೆ.ಇದಕ್ಕೇ ಸಂಬಂಧಪಟ್ಟ ಕಾನುನು ಇದೆ, ಅದರಂತೆ ಪೊಲೀಸರು ಕ್ರಮ‌ ತಗೋತಾರೆ.ಇಂತಹ ಘಟನೆಗಳ ವೇಳೆ ಸರ್ಕಾರ ಯಾವುದೇ ಸೂಚನೆ ಕೊಡೋದಿಲ್ಲ ಎಂದಿದ್ದಾರೆ.

ಅಸಮಧಾನಿತ ಶಾಸಕರ ಜೊತೆ ಮಾತುಕತೆಗೆ ಸಿಎಂಗೆ ಹೈಕಮಾಂಡ್ ಸೂಚನೆ ಬಗ್ಗೆ ಪ್ರತಿಕ್ರಿಯಿಸಿ ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳು ದೆಹಲಿಯಲ್ಲಿದ್ದಾರೆ, ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದಾರೆ. ವರಿಷ್ಠರು ಶಾಸಕರನ್ನು ಕರೆದು ಮಾತಾಡಿ ಅಂದ್ರೆ ಮಾತಾಡ್ತಾರೆ ಎಂದರು. ಮಂತ್ರಿಗಳು ಶಾಸಕರ ಭೇಟಿ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು  ಶಾಸಕರು ಈ ಆರೋಪ ಮಾಡಿರಬಹುದು, ಅವರಿಗೆ ವೈಯಕ್ತಿಕವಾಗಿ ತೊಂದರೆ ಆಗಿರಬಹುದು. ಶಾಸಕರೇ ಹೇಳಿದ ಮೇಲೆ ನಾವು ಒಪ್ಪಬೇಕಲ್ಲ. ಅದನ್ನೆಲ್ಲ ಸಿಎಂ ಬಗೆಹರಿಸ್ತಾರೆ. ಈಗಾಗಲೇ ಸಿಎಲ್‌ಪಿ ಸಭೆಯಲ್ಲಿ ಶಾಸಕರಿಗೆ ಮಾತಾಡಲು ಅವಕಾಶ ಕೊಡಲಾಗಿತ್ತು. ಕೆಲವರು ಇದನ್ನು ಪ್ರಸ್ತಾಪಿಸಿದ್ದಾರೆ, ಮಂತ್ರಿಗಳು ಭೇಟಿ ಆಗದ ಬಗ್ಗೆ ಕೆಲವರು ಸಭೆಯಲ್ಲಿ ಹೇಳಿದ್ದಾರೆ. ಇದೇನು ಅಂಥ ದೊಡ್ಡ ವಿಷಯ ಅಲ್ಲ, ಬಗೆಹರಿಸ್ತಾರೆ, ಸಿಎಂ ಅದರ ಬಗ್ಗೆ ಗಮನ ಹರಿಸ್ತಾರೆ.ಎಲ್ಲ ಸರ್ಕಾರಗಳಲ್ಲೂ ಶಾಸಕರ ಅಸಮಧಾನ ಇದ್ದೇ ಇರುತ್ತೆ. ಶಾಸಕರ ಎಲ್ಲ ಬೇಡಿಕೆಗಳನ್ನೂ ಸಂಪೂರ್ಣವಾಗಿ ಬಗೆಹರಿಸಲು ಆಗೋದಿಲ್ಲ ಎಂದಿದ್ದಾರೆ.