ಮನೆ Latest News ಬಾದಾಮಿ ಕಾರ್ಯಕ್ರಮದ ಹೇಳಿಕೆಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬಾದಾಮಿ ಕಾರ್ಯಕ್ರಮದ ಹೇಳಿಕೆಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್

0

ಬೆಂಗಳೂರು: ಬಾದಾಮಿ ಕಾರ್ಯಕ್ರಮದಲ್ಲಿ ನಮ್ಮ ಬಳಿ ದುಡ್ಡಿಲ್ಲ ಎಂಬ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ನವ್ರು ಬಜೆಟ್ ನಲ್ಲಿ ಹಣ ಕೊಟ್ಟಿದ್ದಾರೆ. ಸರ್ಕಾರದಲ್ಲಿ ಹಣಕಾಸು ಮುಗ್ಗಟ್ಟು ಇಲ್ಲ. ಅವರ್ಯಾರೋ ಏನೋ ತಮಾಶೆಗೆ ಹೇಳಿದ್ರು ಅಂತ ನಾನು ಆರೀತಿ ರಿಯಾಕ್ಟ್ ಮಾಡಿರಬಹುದು ಅಷ್ಟೇ. ಹಣದ ಕೊರತೆ ಸರ್ಕಾರದಲ್ಲಿ ಇಲ್ಲವೇ ಇಲ್ಲ. ಆದ್ರೆ ಬಿಡುಗಡೆ ಆಗುವಾಗ ಸ್ವಲ್ಪ ವಿಳಂಬ ಆಗಬಹುದೇನೋ?. ನನ್ನ ಹೇಳಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ. ನಾನು ಸರ್ಕಾರದ ಬಳಿ ದುಡ್ಡಿಲ್ಲ ಅಂತ ಹೇಳಿಲ್ಲ, ಯಾರು ಹೇಳಿದ್ರು?. ನಾನೇ ಸಮರ್ಥನೆ ಮಾಡಿಕೊಂಡಿದ್ದೇನೆ. ಸುಮ್ನೆ ಕೆಲವರು ಎಣ್ಣೆ ಎಣ್ಣೆ ಅಂತ ತಮಾಶೆ ಮಾಡ್ತಿದ್ರು, ಅದಕ್ಕೆ ಸುಮ್ನೆ ಹೇಳ್ದೆ. ಭಾಷಣದಲ್ಲೂ ಹೇಳಿದ್ದೇನೆ, ನಮ್ಮ ಬಳಿ ಯಾವುದಕ್ಕೂ ಹಣದ ಕೊರತೆ ಇಲ್ಲ. ಪ್ರತೀ ಕ್ಷೇತ್ರಕ್ಕೆ 50 ಕೋಟಿ ರೂ ಆ್ಯಕ್ಷನ್ ಪ್ಲ್ಯಾನ್ ಮಾಡಲಾಗ್ತಿದೆ. ಹಣದ ಮುಗ್ಗಟ್ಟು ಇಲ್ಲ, ಬಿಡುಗಡೆ ವೇಳೆ ಕೆಲ ಸಂದರ್ಭದಲ್ಲಿ ನಿಧಾನ ಆಗಬಹುದು. ಡಿಪಿಆರ್ ಮಾಡ್ಬೇಕು, ಎಸ್ಟಿಮೇಟ್ ಹಾಕಬೇಕು ಆ ಸಂದರ್ಭ ವಿಳಂಬ ಆಗಿರಬಹುದು. ಶಾಸಕರು ಅನುದಾನ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿರಬಹುದು. ಮನಸಿಗೆ ಬೇಜಾರಾದಾಗ ಆಥರ ಮಾತುಗಳೂ ಒಮ್ಮೊಮ್ಮೆ ಬಂದು ಬಿಡ್ತವೆ ಎಂದಿದ್ದಾರೆ.

ಇದೇ ವೇಳೆ ಯುವತಿ ಮೇಲೆ ಕುಡುಕರಿಂದ ಹಲ್ಲೆ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇಂಥ ಘಟನೆಗಳನ್ನು ನಾವು ಲಘುವಾಗಿ ಪರಿಗಣಿಸಲ್ಲ.ಕೂಡಲೇ ಕೇಸ್ ಹಾಕಿ ಅರೆಸ್ಟ್ ಮಾಡೋ ಕೆಲಸ ಮಾಡ್ತೇವೆ.ಕೂಡಲೇ ಕ್ರಮ ತಗೊಳ್ಳೋ ಕೆಲಸ ಆಗಿದೆ.ಇವೆಲ್ಲ ಸಮಾಜದ ಮೇಲೆ ಪರಿಣಾಮ ಬೀರ್ತವೆ, ಹಾಗಾಗಿ ನಾವು ಈ ಪ್ರಕರಣಗಳನ್ನು ಗಂಭೀರವಾಗಿ ತಗೊಂಡು ಕ್ರಮ ತಗೋತೇವೆ ಎಂದು ತಿಳಿಸಿದ್ದಾರೆ.

ಕಾಲ್ತುಳಿತ ಪ್ರಕರಣದ ವರದಿ ಕೇಂದ್ರಕ್ಕೆ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿ ಪೊಲೀಸ್ ವೈಫಲ್ಯ ಕಾರಣ ಎಂದು ವರದಿಯಲ್ಲಿ ಉಲ್ಲೇಖವಾಗಿ ಅಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಆ ವರದಿ ನೋಡಿಲ್ಲ. ಅದ್ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ನೋಡಬೇಕು.ನಾನೂ ಮಾಧ್ಯಮಗಳಲ್ಲೇ ನೋಡಿ ಗೊತ್ತಾಗಿದ್ದು ಎಂದರು. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿಚಾರಣೆ ಮಾಡದೇ ಪೊಲೀಸರು ಕಳಿಸಿರುವ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಡಾಬಸ್‌ಪೇಟೆ ಹತ್ತಿರ ಯಾರೋ ಓವರ್ ಟೇಕ್ ಮಾಡಿದ್ರು ಅಂತ ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್, ಡ್ರೈವರ್ ಕಾರು ನಿಲ್ಲಿಸಿ ಹೊಡೆದಿದ್ದಾರೆ ಅಂತ ಕೇಸ್ ಹಾಕಿದ್ದಾರೆ. ಪೊಲೀಸರು ಕೇಸ್ ತಗೊಂಡಿದ್ದಾರೆ. ಅನಂತ್ ಕುಮಾರ್ ಹೆಗಡೆ ಹೊಡೆದಿಲ್ಲ ಅಂತ ಹೇಳಿ ಪೊಲೀಸರು ಹೇಳಿದ್ರು. ಮುಂದಿನ ಹಂತದ ತನಿಖೆ ಮಾಡಿ ಕ್ರಮ ತಗೋತೀವಿ ಅಂತ ಪೊಲೀಸರು ನನಗೆ ಹೇಳಿದ್ದಾರೆ. ಮುಂದೆ ತನಿಖೆಯಲ್ಲಿ ಅನಂತ್ ಕುನಾರ್ ಹೆಗಡೆ ಭಾಗಿಯಾಗಿದ್ದಾರಾ ಇಲ್ವಾ ಅಂತ ಪೊಲೀಸರು ತನಿಖೆ ಮಾಡ್ತಾರೆ ಎಂದಿದ್ದಾರೆ.