ಬೆಂಗಳೂರು; ಹೆಚ್ಡಿಕೆ ಜಮೀನು ಒತ್ತುವರಿ ತೆರವು ಮಾಡುತ್ತಿರುವ ವಿಚಾರದ ಬಗ್ಗೆ ಸ್ವತಃ ಹೆಚ್ ಡಿ ಕುಮಾರಸ್ವಾಮಿ ಅವರೇ ಪ್ರತಿಕ್ರಿಯಿಸಿದ್ದು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ನಾನು 40 ವರ್ಷಗಳ ಹಿಂದೆ ತೆಗೆದುಕೊಂಡು ಜಮೀನು. ನನ್ನನ್ನು ಬಿಟ್ಟು ಯಾರಿದ್ದಾರೆ ಟಾರ್ಗೆಟ್ ಮಾಡಲು. ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ .ಯಾರೂ ಗಾಬರಿ ಆಗುವುದು ಬೇಡ. ನನ್ನ ಜೀವನದಲ್ಲಿ ಯಾವುದೇ ಅಕ್ರಮಗಳಿಗೆ ಎಡೆ ಮಾಡಿ ಕೊಟ್ಟಿಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಇವತ್ತು, ಈ ರೀತಿಯ ಸರ್ಕಾರದ ದಬ್ಬಾಳಿಕೆ ನಡೆಯುತ್ತಿದೆ ಎಂದರು.
ಬೆಂಗಳೂರಿನಲ್ಲಿ ಯಾವ ರೀತಿ ಲೂಟಿ ಹೊಡೆದಿದ್ದಾರೆ. ಹಲವಾರು ತಪ್ಪು ಮಾಹಿತಿಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಉತ್ತರ ಕೊಡುತ್ತೇನೆ. ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ದೇಶದ ಇತಿಹಾಸದಲ್ಲೆ ಎಸ್ಟಿ ಮಾಡಿಕೊಂಡು ರಾಜ್ಯ ಸರ್ಕಾರ ಈ ರೀತಿ ಹೊರಟಿದೆ. ಎಸ್ಐಟಿ ಮಾಡಿಕೊಂಡು ರಾಜ್ಯ ಸರ್ಕಾರ ಈ ರೀತಿ ಮಾಡಿಕೊಂಡು ಹೊರಟಿದ್ದಾರೆ . ಈ ರಾಜ್ಯದಲ್ಲಿ ನಾನೇ ಕಾಂಗ್ರೆಸ್ ಗೆ ಟಾರ್ಗೆಟ್ . ನಾನು ಇಲ್ಲಿ ಇಲ್ಲ ಅಂದರೆ ಅವರಿಗೆ ಆರಾಮಾಗಿ ಇರುತ್ತಾರೆ. 40 ವರ್ಷಗಳ ಹಿಂದೆ ತೆಗೆದುಕೊಂಡ ಜಮೀನಿಗೆ 100 ಬಾರಿ ತನಿಖೆ ಆಗಿದೆ. ನನ್ನ ಮೇಲೆ ರೀತಿ ನಡೆಯುತ್ತಿದ್ದನ ನೋಡುತ್ತಿದ್ದರೆ, ಜನಸಾಮಾನ್ಯರ ಪರಿಸ್ಥಿತಿ ಹೇಗೆ ನೀವೇ ತಿಳಿದುಕೊಳ್ಳಿ ಎಂದಿದ್ದಾರೆ.
ಯಾರೇ ಒತ್ತುವರಿ ಮಾಡಿದ್ರೂ ಒತ್ತುವರಿನೇ; ವಿಧಾನಸೌಧದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ
ಬೆಂಗಳೂರು; ಯಾರೇ ಒತ್ತುವರಿ ಮಾಡಿದ್ರೂ ಒತ್ತುವರಿನೇ ಎಂದು ವಿಧಾನಸೌಧದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರಿಂದ ಜಮೀನು ಒತ್ತುವರಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಮಾನ್ಯ ಕೇಂದ್ರ ಸಚಿವರು ಕುಮಾರಸ್ವಾಮಿ ಕೆರೆ ಒತ್ತುವರಿ ಮಾಡಿದ್ದಾರೆ.ಹೈಕೋರ್ಟ್ ಕೂಡ ತೆರವಿಗೆ ನಿರ್ದೇಶನ ಕೊಟ್ಟಿದೆ. ಕಂದಾಯ ಇಲಾಖೆ, ಸರ್ವೇ ಇಲಾಖೆ ಜಂಟಿ ಸರ್ವೇ ಮಾಡಿದೆ. ಯಾರೇ ಒತ್ತುವರಿ ಮಾಡಿದ್ರೂ ಒತ್ತುವರಿನೇ ಎಂದಿದ್ದಾರೆ.
ಎರಡು ಜೆಸಿಬಿಗಳು ಅವರ ತೋಟದ ಬಳಿ ನಿಂತಿದೆಯಂತೆ. ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಮಾಡ್ತಾರೆ ಅನ್ಸುತ್ತೆ. ಬಿಜೆಪಿಯವರು ಕುಮಾರಸ್ವಾಮಿಗೆ ಮಂತ್ರಿಗಿರಿ ಅನ್ನೋ ಚಾಕ್ಲೆಟ್ ಕೊಟ್ಟಿದ್ದಾರೆ. ಅವರು ಯಾವಾಗ ಯಾರ ಕಡೆ ವಾಲ್ತಾರೆ ಗೊತ್ತಿಲ್ಲ . ನಾಳೆ ಅವರು ನಮ್ಮ ಪಾರ್ಟಿಗೂ ಬರಬಹುದು. ಅವರು ಅಲ್ಲಿದ್ದಾರೆ ಅದಿಕ್ಕೆ ನಾವು ಮಾತಾಡ್ತೀವಿ.ಕುಮಾರಣ್ಣ ಮೇಲೆ ನನಗೆ ಲವ್ ಇದೆ . ಸಂಸದ ಸುಧಾಕರ್ ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರು ನನ್ನ ಲೇವಲ್ ಅಲ್ಲ, ನನ್ನ ಲೇವಲ್ ಇದ್ರೆ ಮಾತ್ರ ನಾನು ಮಾತಾಡೋದು. ನನ್ನ ಲೇವಲ್ ಕುಮಾರಸ್ವಾಮಿ, ವಿಜಯೇಂದ್ರ, ಪ್ರಹ್ಲಾದ್ ಜೋಷಿ, ಆರ್.ಅಶೋಕ್ ಮಾತ್ರ ಎಂದಿದ್ದಾರೆ.