ಮನೆ Latest News ಗುತ್ತಿಗೆದಾರರು ಒಂದು ವರ್ಷ ಯಾವುದೇ ಗುತ್ತಿಗೆ ಕೆಲಸವನ್ನು ತೆಗೆದುಕೊಳ್ಳಬೇಡಿ ಕೆಲಸ ಮಾಡಬೇಡಿ: ಕೇಂದ್ರ ಸಚಿವ ಕುಮಾರಸ್ವಾಮಿ...

ಗುತ್ತಿಗೆದಾರರು ಒಂದು ವರ್ಷ ಯಾವುದೇ ಗುತ್ತಿಗೆ ಕೆಲಸವನ್ನು ತೆಗೆದುಕೊಳ್ಳಬೇಡಿ ಕೆಲಸ ಮಾಡಬೇಡಿ: ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ

0

ಬೆಂಗಳೂರು; ಗುತ್ತಿಗೆದಾರರು ಒಂದು ವರ್ಷ ಯಾವುದೇ ಗುತ್ತಿಗೆ ಕೆಲಸವನ್ನು ತೆಗೆದುಕೊಳ್ಳಬೇಡಿ ಕೆಲಸ ಮಾಡಬೇಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗ ಯಾರಿಗೂ ತೊಂದರೆ ಕೊಡುವ ಕೆಲಸ ಮಾಡಿಲ್ಲ. ಗುತ್ತಿಗೆದಾರರಿಗೆ ಒಂದು ಮನವಿ ಮಾಡುತ್ತೇನೆ. ನಿಜಕ್ಕೂ ಈ ರಾಜ್ಯವನ್ನು ನೀವು ಉಳಿಸಬೇಕು ಎಂದು ನಿಮ್ಮಲ್ಲಿ ಒಗ್ಗಟ್ಟು ಇದ್ದರೆ ಒಂದು ವರ್ಷ ಯಾರು ಕೆಲಸ ಮಾಡಬೇಡಿ.ಆಂಧ್ರದವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಲಿ ಯಾರನ್ನಾದರೂ ಕರೆದುಕೊಂಡು ಬಂದು ಕೆಲಸ ಮಾಡಲಿ. ಬರಲಿ ಯಾರು ಬಂದು ಕೆಲಸ ಮಾಡುತ್ತಾರೆ ನೋಡೋಣ ಎಂದಿದ್ದಾರೆ.

 ಈ ರಾಜ್ಯದಲ್ಲಿ ನಡೆಯುತ್ತಿರುವ ಇಂಥ ಕೆಟ್ಟ ಆಡಳಿತ. ನಿಮ್ಮಲ್ಲೇ ಗುಂಪು ಮಾಡಿಕೊಂಡು ಅದರಲ್ಲಿ ಒಡಕು ಬಂದರೆ ನಿಮ್ಮನ್ನ ಉಪಯೋಗ ಪಡೆದುಕೊಳ್ಳುತ್ತಾರೆ.ಇವೆಲ್ಲವೂ ಕ್ಲೀನಾಗಬೇಕು ಸರಿಯಾಗಬೇಕು ಎಂದರೆ ಗುತ್ತಿಗೆದಾರರು ಒಂದು ವರ್ಷ ಯಾವುದೇ ಗುತ್ತಿಗೆ ಕೆಲಸವನ್ನು ತೆಗೆದುಕೊಳ್ಳಬೇಡಿ ಕೆಲಸ ಮಾಡಬೇಡಿ. ಹೇಗೂ ಇವರು ಕೆಲಸವನ್ನು ಕೊಡುತ್ತಿಲ್ಲ. ನೀವು ಕೇಳುತ್ತಿರುವುದು ಹಿಂದಿನ ದುಡ್ಡು ಕೇಳುತ್ತಿದ್ದೀರಿ. ಶಾಂತ ರೀತಿ ಪ್ರತಿಭಟನೆ ಮಾಡಿ ಯಾರು ಆತ್ಮಹತ್ಯೆಗೆ ಶರಣಾಗಬೇಡಿ ದಯಮರಣಕ್ಕೆ ಯಾಕೆ ಅರ್ಜಿ ಹಾಕಿಕೊಳ್ಳುತ್ತೀರಾ. ನೀವು ತಪ್ಪು ಮಾಡಿದ್ದೀರಾ, ತಪ್ಪು ಸರ್ಕಾರದಲ್ಲಿ ಆಗಿರುವುದು. ತಪ್ಪಿನ ವಿರುದ್ಧ ಹೋರಾಡುವ ಮಾಡುವ ನಿರ್ಧಾರ ನಿಮ್ಮ ಕೈಯಲ್ಲಿದೆ. ನೀವೇನು ಭಿಕ್ಷುಕರಲ್ಲ ಕೆಲಸ ಮಾಡಿದ್ದೀರಿ ಕೆಲಸದ ಪೇಮೆಂಟ್ ಕೇಳುತ್ತಿದ್ದೀರಿ. ಪ್ರಾಮಾಣಿಕವಾಗಿ ಕೆಲಸ ಮಾಡಿ ಯಾಕೆ ದಯಾಮರಣ ಕೇಳುತ್ತೀರಿ. ಕೆಲಸ ಮಾಡದೆ ಬಿಲ್ ತೆಗೆದುಕೊಂಡು ಹಣ ಹೊಡಿದ ಎಷ್ಟೋ ಜನ ಅಧಿಕಾರಿಗಳು ದೊಡ್ಡ ದೊಡ್ಡ ಗುತ್ತಿಗೆದಾರರು ಇದ್ದಾರೆ. ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಉಡಾಫೆ ಹೇಳಿಕೆಗಳನ್ನ ಬಿಡಿ. ಏನೇನು ಆಗಿದೆ ಅದನ್ನ ಸರಿಪಡಿಸಿಕೊಳ್ಳುವ ಕೆಲಸ ಮಾಡಿ . ಎಷ್ಟೋ ಕುಟುಂಬದಲ್ಲಿ ಹೆಣ್ಣು ಮಕ್ಕಳ ಒಡವೆ ಬ್ಯಾಂಕ್ ಗಳಲ್ಲಿ ಅಡ ಇಟ್ಟು ಗುತ್ತಿಗೆ ಕೆಲಸ ಮಾಡಿಸಿದ್ದಾರೆ. ಯಾರ ಬಳಿ ಸಮಸ್ಯೆಯನ್ನು ಹೇಳಿಕೊಳ್ಳಲು ಆಗಲ್ಲ ಬಿಡುವುದು ಆಗಲ್ಲ ಎಂದಿದ್ದಾರೆ.

ನಾಳೆ ಜಾತಿ ಜನಗಣತಿ ಕ್ಯಾಬಿನೆಟ್ ಚರ್ಚೆ ವಿಚಾರದ ಬಗ್ಗೆ ಮಾತನಾಡಿ ಎರಡು ಸಮುದಾಯ ಪ್ರಶ್ನೆ ಅಲ್ಲ ಇದು.ಅದು ಸಿದ್ದರಾಮಯ್ಯ ಹೇಳೋದು. ಸಮಾಜದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಯಾವ ಯಾವ ತರ ಬದಲಾವಣೆ ತಂದಿದ್ದೇವೆ. ಯಾವ ಯಾವ ಸಮಾಜದ ಪರಿಸ್ಥಿತಿ ಏನಿದೆ. ಅದರ‌ ಮಾಹಿತಿ ಇಟ್ಟು. ಜಾತಿಗಣತಿ‌ ಎಷ್ಟು ಇದೆ ಒಂದು ಭಾಗ ಇಟ್ಟುಕೊಳ್ಳಿ.ಅದು ನಮಗೆ ಬೇಕಾಗಿಲ್ಲ. ಇಲ್ಲಿ ಬೇಕಾಗಿರೋದು ಯಾವ ಯಾವ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಬಡತನ ರೇಖೆಯಲ್ಲಿ ಯಾರು ಇದ್ದಾರೆ. ಮೇಲೆ ಯಾರು ಇದ್ದಾರೆ ಅವರಿಗೆ ಸರ್ಕಾರ ತುಳಿತಕ್ಕೆ ಮೇಲೆ ಎತ್ತೋಕೆ ಏನು ಮಾಡಿದ್ದಾರೆ. ನಾಳೆ ಏನು ಮಾಡ್ತಾರೆ ನೋಡೋಣ. ತರ್ಲಿ‌ ಚರ್ಚೆ ಮಾಡೋಣ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.