ಮನೆ Latest News ಸುಪ್ರೀಂಕೋರ್ಟ್ ಆದೇಶ ಮಾಡಿದರೂ ಒಳ ಮೀಸಲಾತಿಯನ್ನು ಸರ್ಕಾರ ಕೊಟ್ಟಿಲ್ಲ : ಬೆಂಗಳೂರಿನಲ್ಲಿ ‌ಸಂಸದ ಗೋವಿಂದ ಕಾರಜೋಳ...

ಸುಪ್ರೀಂಕೋರ್ಟ್ ಆದೇಶ ಮಾಡಿದರೂ ಒಳ ಮೀಸಲಾತಿಯನ್ನು ಸರ್ಕಾರ ಕೊಟ್ಟಿಲ್ಲ : ಬೆಂಗಳೂರಿನಲ್ಲಿ ‌ಸಂಸದ ಗೋವಿಂದ ಕಾರಜೋಳ ಹೇಳಿಕೆ

0

ಬೆಂಗಳೂರು;  ಸುಪ್ರೀಂಕೋರ್ಟ್ ಆದೇಶ ಮಾಡಿದರೂ ಒಳ ಮೀಸಲಾತಿಯನ್ನು ಸರ್ಕಾರ ಕೊಟ್ಟಿಲ್ಲ ಎಂದು ಬೆಂಗಳೂರಿನಲ್ಲಿ ‌ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಒಳ ಮೀಸಲಾತಿ ಜಾರಿ ವಿಳಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಸರ್ಕಾರ ಏಕಸದಸ್ಯ ಆಯೋಗ ರಚಿಸಿ ಮೂರು ತಿಂಗಳಾಗಿದೆ.ಈವರೆಗೆ ಆಯೋಗ ವರದಿ ಕೊಟ್ಟಿಲ್ಲ.ಸರ್ಕಾರ ಈಗ ಆಯೋಗದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲು ಮುಂದಾಗಿದೆ.ನ್ಯಾ. ನಾಗಮೋಹನ ದಾಸ್ ಆಯೋಗ ಮಧ್ಯಂತರ ವರದಿಯಾದರೂ ಸರ್ಕಾರಕ್ಕೆ ಕೊಡಲಿ.ಸುಪ್ರೀಂಕೋರ್ಟ್ ಆದೇಶ ಮಾಡಿದರೂ ಒಳ ಮೀಸಲಾತಿಯನ್ನು ಸರ್ಕಾರ ಕೊಟ್ಟಿಲ್ಲ. ಮೋಸ‌ ಮಾಡುವ ತಂತ್ರಗಾರಿಕೆಯಿಂದ ಸರ್ಕಾರ ವಿಳಂಬ ಮಾಡುತ್ತಿದೆ.ಆಯೋಗದಿಂದ ಮಧ್ಯಂತರ ವರದಿಯನ್ನಾದರೂ ಪಡೆದು ಸರ್ಕಾರ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕೊಡಬೇಕು.ಸರ್ಕಾರ ಒಳಮೀಸಲಾತಿ ಕೊಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದಿದ್ದಾರೆ.

ದಲಿತರು, ಮುಸ್ಲಿಮರು ಎಲ್ಲಿದ್ದಾರೋ ಅಲ್ಲೇ ಇರಬೇಕು ಎನ್ನುವುದು ಕಾಂಗ್ರೆಸ್ ಜಾಯಮಾನ.ಈ ಸಮುದಾಯಗಳನ್ನು ಓಟ್ ಬ್ಯಾಂಕ್ ಮಾಡಿಕೊಳ್ಳಲು ಎಲ್ಲಿದ್ದೀರೋ ಅಲ್ಲೇ ಇರಿ ಅಂತಾರೆ ಕಾಂಗ್ರೆಸ್ ನವರು. ಎಐಸಿಸಿ ಅಧ್ಯಕ್ಷರೇ ಮಲ್ಲಿಕಾರ್ಜುನ ಖರ್ಗೆ.ಮತ್ತೆ ಯಾಕೆ ಅವರು ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಮಾಡಲಿಲ್ಲ?.ನಮ್ಮಲ್ಲೂ ಅವಕಾಶ ಬಂದಾಗ ದಲಿತ ಸಿಎಂ ಮಾಡಿ ಅಂತ ಒತ್ತಾಯಿಸುತ್ತೇನೆ ಎಂದ ಅವರು ಕುಂಭಮೇಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ ಮಲ್ಲಿಕಾರ್ಜುನ ಖರ್ಗೆಯವರು ವ್ಯಂಗ್ಯದ ಮಾತಾಡಿದ್ದಾರೆ.ಅವರು ಈ ದೇಶದ ಸಂಸ್ಕ್ರತಿ ಅರ್ಥ ಮಾಡಿಕೊಳ್ಳಬೇಕು.ಸೆಕ್ಯುಲರಿಸಂ ಕಾಂಗ್ರೆಸ್ ಗುತ್ತಿಗೆ ಅಲ್ಲ. ಸೆಕ್ಯೂಲರಿಸಂ ಬಗ್ಗೆ ಭಂಡತನದ ಮಾತಾಡುವುದರಿಂದ ಯಾವುದೇ ಸಾಧನೆ ಆಗಲ್ಲ. ಅಂಬೇಡ್ಕರ್ ಅವರೇ ದೇವರು-ಧರ್ಮದ ಆಚರಣೆ ವೈಯಕ್ತಿಕ, ಯಾರೂ ಧಾರ್ಮಿಕ ಭಾವನೆಗೆ ಧಕ್ಕೆ‌ ಮಾಡಬೇಡಿ ಅಂದಿದ್ದಾರೆ. ಪುಣ್ಯ ಸ್ನಾನ ಕುಂಭಮೇಳದಲ್ಲೇ ಮಾಡಬೇಕು ಅಂತಿಲ್ಲ, ನದಿ ಸ್ನಾನವೇ ಪುಣ್ಯದ್ದು. ನದಿ ಸ್ನಾನ ಪವಿತ್ರ ಭಾವನೆ ತರುವಂಥದ್ದು. ಪೂಜೆ ಪುನಸ್ಕಾರ ಅವರವರ ವೈಯಕ್ತಿಕ ವಿಚಾರ.ಹಿರಿಯರಾಗಿ ಖರ್ಗೆಯವರು ಇಂಥ ಸಣ್ಣ ವಿಚಾರ ಮಾತಾಡಬಾರದು ಎಂದಿದ್ದಾರೆ.

ಪಕ್ಷದಲ್ಲಿ ಗೊಂದಲ ಮುಂದುವರಿಕೆ ವಿಚಾರದ ಬಗ್ಗೆ ಮಾತನಾಡಿ ಸಣ್ಣಪುಟ್ಟ ಗೊಂದಲಗಳು ನೆಗಡಿ, ಕೆಮ್ಮಿನ ಹಾಗೆ.ಎಲ್ಲ ಸರಿಯಾಗುತ್ತದೆ, ವರಿಷ್ಠರು ಸರಿ ಮಾಡುತ್ತಾರೆ ಎಂದು ತೇಪೆ ಹಾಕುವ ಕೆಲಸ ಮಾಡಿದ್ದಾರೆ,