ಮನೆ Latest News ಸದನ ತಡವಾಗಿ ಆರಂಭಕ್ಕೆ ಸಚಿವ ಕೆ.ಎಚ್. ಮುನಿಯಪ್ಪ ಸ್ಪೀಕರ್ ವಿರುದ್ಧ ಬೇಸರ ಹೊರ ಹಾಕಿದ ಸಚಿವ...

ಸದನ ತಡವಾಗಿ ಆರಂಭಕ್ಕೆ ಸಚಿವ ಕೆ.ಎಚ್. ಮುನಿಯಪ್ಪ ಸ್ಪೀಕರ್ ವಿರುದ್ಧ ಬೇಸರ ಹೊರ ಹಾಕಿದ ಸಚಿವ ಕೆ.ಎಚ್. ಮುನಿಯಪ್ಪ

0

ಬೆಳಗಾವಿ: ಸದನ ತಡವಾಗಿ ಆರಂಭಕ್ಕೆ ಸಚಿವ ಕೆ.ಎಚ್. ಮುನಿಯಪ್ಪ ಬೇಸರ ಹೊರ ಹಾಕಿದ ಘಟನೆ ಇವತ್ತು ನಡೆಯಿತು.

ರಾತ್ರಿಯವರೆಗೆ ಸದನ ನಡೆಸುವುದು, ಬೆಳಿಗ್ಗೆ ಬೇಗ ಬಂದರೂ ತಡವಾಗಿ ಬೆಲ್ ಮಾಡಿ ಶುರು ಮಾಡುವುದು ಸರಿಯಲ್ಲ. ನಮಗೆಲ್ಲಾ ಶಿಸ್ತು ಬರಬೇಕಾದರೆ ಪ್ರಶ್ನೋತ್ತರ ಬೇಗ ತೆಗೆದುಕೊಳ್ಳಬೇಕು. ಹೊಸ ಬದಲಾವಣೆ ತರಲೇಬೇಕು, ಶಿಸ್ತು ಇರಲಿ, ಜನರು ನೋಡುತ್ತಿದ್ದಾರೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಈ ವೇಳೆ ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು ಟಿ ಖಾದರ್ ನೀವು ಎಂಪಿ ಆಗಿದ್ದವರು, ಲೋಕಸಭೆಯಿಂದ ಬಂದವರು ನೀವು. ನಿಮ್ಮಂತಹವರು ಈ ಪೀಠದ ಮೇಲೆ ಕುಳಿತುಕೊಂಡರೆ ಅದೆಲ್ಲವೂ ಆಗುತ್ತದೆ ಎಂದಿದ್ದಾರೆ. ಈ ವೇಳೆ ಮಾಡುತ್ತಿದ್ದೀರಿ  ಬಿಜೆಪಿ ಸದಸ್ಯರು ಸಚಿವರಿಗೆ ಅವಮಾನ ಮಾಡುತ್ತಿದ್ದೀರಿ ಎಂದಿದ್ದಾರೆ.

ಈ ವೇಳೆ ಮಹಿಳೆ ಹಾಗೂ ಜಾತಿ ನಿಂದನೆ ಬಗ್ಗೆ ಚರ್ಚೆಗೆ ಯಾಕೆ ಅವಕಾಶ ಕೊಡುತ್ತಿಲ್ಲ, ಮಹಿಳೆಯರ ವಿಷಯದಲ್ಲಿ ಧ್ವನಿ ಎತ್ತಲು ಏಕೆ ಬಿಡುತ್ತಿಲ್ಲ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಪ್ರಶ್ನೆ ಮಾಡಿದ್ದಾರೆ. ಅವಕಾಶ ಕೊಟ್ಟಿಲ್ಲ ಅಂತಲ್ಲ, ನಿಯಮ 69 ನಲ್ಲಿ ಚರ್ಚೆಗೆ ಕೊಟ್ಟಿದ್ದೇನೆ ಸರಿಯಾಗಿ ಕೇಳಿ. ಅಜೆಂಡಾದಲ್ಲಿ ಬಂದಾಗ ಚರ್ಚೆಗೆ ಕೂಡಾ ಬಂತು, ಅದರ ಬಗ್ಗೆ ಚರ್ಚೆ ಬಂದಾಗ ಎಷ್ಟು ಜನರು ನಿಂತು ಮಾತಾಡಿದರು? ಕೋರ್ಟ್ ನಲ್ಲಿ ಹಾಗೂ ಎಸ್ಐಟಿ ಯಲ್ಲಿರುವಾಗ ಯಾವ ಆಧಾರದ ಮೇಲೆ ಕೊಡಬೇಕು ಎಂದು ಆಲೋಚನೆ ಮಾಡುತ್ತಿದ್ದೇವೆ. ನೀವು ಕುಳಿತುಕೊಂಡು ಕೇಳಿ ಎಂದು ಶಾಸಕಿ ನಯನಾ ಮೇಲೆ  ಸ್ಪೀಕರ್ ಯು ಟಿ ಖಾದರ್ ಗರಂ ಆಗಿದ್ದಾರೆ.

ಈ ಬಾರಿ ವಿರೋಧ ಪಕ್ಷದವರು ಹಾಗೂ ನೀವು ನಮ್ಮ ಮಾತನ್ನು ಕೇಳಿಸಿಕೊಳ್ಳಬೇಕು  ಎಂದ ನಯನಾ ಮೋಟಮ್ಮ ಉತ್ತರಿಸಿದ್ದಾರೆ. ನಾಳೆ ಬೆಳಿಗ್ಗೆ ಇದರ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಖಾದರ್ ಈ ವೇಳೆ ಭರವಸೆ ಕೊಟ್ಟಿದ್ದಾರೆ..