ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಇಂದೆಗ 10 ದಿನ. ಜುಲೈ 4 ವರವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ 6106 ಆಗಿರುವ ನಟ ದರ್ಶನ್ ಅವರನ್ನು ಜೈಲಿನ ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಸದ್ಯ ಮೂರನೇ ವಿಶೇಷ ಬ್ಯಾರಕ್ ನಲ್ಲಿದ್ದಾರೆ ನಟ ದರ್ಶನ್.
ಇನ್ನು ದರ್ಶನ್ ಅರೆಸ್ಟ್ ಆದಾಗಿನಿಂದಲೂ ದರ್ಶನ್ ಅವರನ್ನು ನೋಡದಕ್ಕೆ ಅವರ ತಾಯಿ ಮೀನಾ ತೂಗುದು, ಸಹೋದರ ದಿನಕರ್ ತೂಗುದೀಪ ಯಾಕೆ ಬರ್ತಿಲ್ಲ. ಅವರ ನಡುವೆ ಮನಸ್ತಾಪ ಇದ್ಯಾ ಎಂಬ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಅದೆಲ್ಲಾ ಸುದ್ದಿಗಳಿಗೆ ಇಂದು ಬ್ರೇಕ್ ಬಿದ್ದಿದೆ. ದರ್ಶನ್ ಅವರನ್ನು ಭೇಟಿಯಾಗೋದಕ್ಕೆ ಅವರ ತಾಯಿ ಮೀನಾ ತೂಗುದೀಪ ಹಾಗೂ ತಮ್ಮ ದಿನಕರ್ ತೂಗುದೀಪ ವಿಜಯಲಕ್ಷ್ನೀ ದರ್ಶನ್ ಹಾಗೂ ವಿನೀಶ್ ಜೊತೆ ಬಂದಿದ್ದರು.
ತಾಯಿಯನ್ನು ನೋಡುತ್ತಿದ್ದಂತೆ ದರ್ಶನ್ ಮಗುವಿನಂತೆ ಅತ್ತಿದ್ದಾರೆ. ತಾಯಿ ಮೀನಾ ತೂಗುದೀಪ ಅವರು ಕೂಡ ಮಗನನ್ನು ಅಪ್ಪಿಕೊಂಡು ಅತ್ತಿದ್ದಾರೆ. ಈ ವೇಳೆ ಸಹೋದರ ದಿನಕರ್ ಇಬ್ಬರಿಗೂ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ತಮ್ಮ ದಿನಕರ್ ಜೊತೆ ಇದೇ ವೇಳೆ ದರ್ಶನ್ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ದರ್ಶನ್ ಕುಟುಂಬಕ್ಕೆ ರಾಜಾತಿಥ್ಯ ಆರೋಪ
ಇನ್ನು ಸಾಮಾನ್ಯರಿಗೊಂದು ಕಾನೂನು ನಟ ದರ್ಶನ್ ಕುಟುಂಬಕ್ಕೆ ಒಂದು ಕಾನೂನು ಎಂಬ ಆರೋಪ ಕೇಳಿ ಬಂದಿದೆ. ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದು, ಆಸ ಮೂಲಕ ಬಂಧಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿದೆ ಎಂದು ಆರೋಪಿಸಲಾಗಿದೆ.
ಸಾಮಾನ್ಯರು ಜೈಲಿಗೆ ಎಂಟ್ರಿ ಕೊಡಬೇಕಾದರೆ ಹತ್ತಾರು ರೂಲ್ಸ್ ಗಳನ್ನು ಫಾಲೋ ಮಾಡ್ಬೇಕಾಗುತ್ತೆ. ಆದ್ರೆ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಅದು ಯಾವುದೂ ಅನ್ವಯವಾಗಿಲ್ಲ. ರಾಜಾರೋಷವಾಗಿ ನಟ ದರ್ಶನ್ ಕುಟುಂಬದವರಿಗೆ ಜೈಲಿಗೆ ಎಂಟ್ರಿ ಕೊಡಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಮಾಧ್ಯಮಗಳ ಕಣ್ತಪ್ಪಿಸಿ ನಟ ದರ್ಶನ್ ಅವರನ್ನು ಅವರ ಕುಟುಂಬ ಭೇಟಿ ಮಾಡಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಜೈಲಿಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸ್ ಸಿಬ್ಬಂದಿ ಉದಯ್ ಮಾಧ್ಯಮಗಳ ಕಣ್ತಪ್ಪಿಸಿ ಖಾಸಗಿ ಕಾರಿನಲ್ಲಿ ಜೈಲಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಕಳೆದ ವಾರವೂ ದರ್ಶನ್ ಭೇಟಿಯಾಗಿದ್ದ ಪತ್ನಿ, ಪುತ್ರ
ಕಳೆದ ವಾರ ನಟ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಜೈಲಿನಲ್ಲಿ ಭೇಟಿಯಾಗಿದ್ರು. ಈ ವೇಳೆ ದರ್ಶನ್ ಅವರು ಪುತ್ರ ವಿನೀಶ್ ನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ರು.ಪತ್ನಿ ಮುಂದೆಯೂ ದರ್ಶನ್ ತೀರಾ ಭಾವುಕರಾಗಿದ್ದರು. ಅವತ್ತೇ ನಟ, ಡಿ ಬಾಸ್ ಸ್ನೇಹಿತ ವಿನೋದ್ ಪ್ರಭಾಕರ್ ಅವರು ಕೂಡ ದರ್ಶನ್ ಅವರನ್ನು ಭೇಟಿ ಮಾಡಿದ್ರು. ದರ್ಶನ್ ಅವರ ಜೊತೆ ಜಾಸ್ತಿ ಮಾತನಾಡಿರಲಿಲ್ಲ. ನಿನ್ನೆ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ದರ್ಶನ್ ಅವರನ್ನು ಭೇಟಿಯಾಗ್ತಾರೆ. ಈ ವೇಳೆಯು ದರ್ಶನ್ ಭಾವುಕರಾಗಿದ್ದರು ಎನ್ನಲಾಗಿದೆ. ರಕ್ಷಿತಾ ದರ್ಶನ್ ಅವರನ್ನು ನಿ ಕಣ್ಣೀರು ಹಾಕಿದ್ರು. ಯಾವುದೇ ಪ್ರತಿಕ್ರಿಯೆ ನೀಡಿರಿಲಿಲ್ಲ.