ಮನೆ Latest News ಕಾಂಗ್ರೆಸ್ ಇಸ್ ಅ ಫ್ಯಾಮಿಲಿ, ಯಾವುದೇ ದಾಯಾದಿ ಕಲಹ ಇಲ್ಲ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್...

ಕಾಂಗ್ರೆಸ್ ಇಸ್ ಅ ಫ್ಯಾಮಿಲಿ, ಯಾವುದೇ ದಾಯಾದಿ ಕಲಹ ಇಲ್ಲ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

0

ಬೆಂಗಳೂರು; ಕಾಂಗ್ರೆಸ್ ಇಸ್ ಅ ಫ್ಯಾಮಿಲಿ, ಯಾವುದೇ ದಾಯಾದಿ ಕಲಹ ಇಲ್ಲ ಎಂದು  ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೊದಲಿಗೆ 76 ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು ಬಂದು ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಸಂವಿಧಾನ ಜಾರಿಗೆ ಬಂದ ಐತಿಹಾಸಿಕ ದಿನ. ಎಲ್ಲ ಧರ್ಮ, ಜಾತಿ ಒಂದೇ ಎಂದು ಸಾರಿದ ಪವಿತ್ರ ದಿನ. ನಮಗೆಲ್ಲ ಉಸಿರಾಡಲು ಗಾಳಿ ಹೇಗೆ ಬೇಕೋ? .ಹಾಗೆ ನಮಗೆ ಬದುಕಲು ಸಂವಿಧಾನ ಬೇಕು.ಜವಾಹರಲಾಲ್ ನೆಹರು ಅವರ ಆಡಳಿತದಲ್ಲಿ ಸಂವಿಧಾನ ಅರ್ಪಿಸಿಕೊಂಡಿದ್ದೇವೆ. ಸಂವಿಧಾನ ‌ಇಲ್ಲದ್ದಿದ್ದರೆ ಸ್ವಾಭಿಮಾನ ಇರುತ್ತಿರಲಿಲ್ಲ. ಸ್ವಾಭಿಮಾನ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಮಹಾತ್ಮಾ ಗಾಂಧಿ ಅಧಿವೇಶನಕ್ಕೆ 100 ವರ್ಷ ಆದ ಸಂದರ್ಭ. ಮಲ್ಲಿಕಾರ್ಜುನ ಖರ್ಗೆ ಅವರು ಬೆಳಿಗ್ಗೆ ಹೇಳಿದ್ರು. ಜೈ ಬಾಪು, ಜೈ ಭೀಮ, ಜೈ ಸಂವಿಧಾನ ನಾವು ರೂಢಿಸಿಕೊಂಡು ಹೊಗೋಣ. ಸಾಮಾಜಿಕ ನ್ಯಾಯಕ್ಕೋಸ್ಕರ ಸಂವಿಧಾನ ಪಾಲಿಸಿಕೊಂಡು ಹೋಗಬೇಕಿದೆ. ಅಂಬೇಡ್ಕರ್ ಅವರ ಸಂವಿಧಾನ ಯಾಕೆ ಬೇಕು ಅನ್ನೋದನ್ನ ಎತ್ತಿ ತೋರಿಸಿದ್ದಾರೆ

ಜಗತ್ತಿನಲ್ಲಿ ಭಾರತದ ಸಂವಿಧಾನ‌ ಶ್ರೇಷ್ಠ. ಕಾನೂನು ಎಲ್ಲರಿಗೂ ಕೂಡ ಒಂದೇ. ಕೇವಲ ದಾಖಲೆ, ಪುಸ್ತಕ ಅಂತ ಅಲ್ಲ.ಬದುಕಿನಲ್ಲಿ ಸಮಾಜ, ದೇಶದ ಗೌರವ ಯಾವ ರೀತಿ ಕಾಪಾಡಿಕೊಂಡು ಹೋಗಬೇಕು. ಅನ್ನೋದನ್ನ ತಿಳಿಸಿದ್ದಾರೆದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕೊಟ್ಟಿದ್ದೇವೆ. ದೇಶಕ್ಕೆ ಆಗುವ ಅಪಮಾನ ತಪ್ಪಿಸಬೇಕಿದೆ. ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮ ನಿರಂತರ ಮಾಡೋಣ.ಜನವರಿ 21 ರಂದು ಬೆಳಗಾವಿಯಲ್ಲಿ ಮಾಡಿದ್ದೇವೆ.ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಆ ತರಹದ ಕಾರ್ಯಕ್ರಮ ಆಗಬೇಕು.ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ.ಸರ್ಕಾರದ ವತಿಯಿಂದ ಕಾರ್ಯಕ್ರಮ ಮಾಡಲು ಚಿಂತನೆ ನಡೆದಿದೆ.ಶಾಲಾ ಕಾಲೇಜುಗಳಲ್ಲಿ ಈ ಕಾರ್ಯಕ್ರಮ ಮಾಡುತ್ತೇವೆ.ಸರ್ಕಾರ, ಪಕ್ಷದ ‌ಜೊತೆಗೆ 224 ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುತ್ತೇವೆ.ಗಾಂಧಿಜಿಯವರು ತತ್ವ ಸಿದ್ದಾಂತ, ಅಂಬೇಡ್ಕರ್ ಸಂವಿಧಾನದ ಅರಿವು ಮೂಡಿಸಬೇಕಿದೆ.ನಮ್ಮ ಸಚಿವರು, ಶಾಸಕರು ಪಾಲ್ಗೊಳ್ಳಬೇಕು.ಕಾಂಗ್ರೆಸ್ ಶಾಸಕರು ಮಾತ್ರವಲ್ಲ.ಎಲ್ಲ ಶಾಸಕರು ಪಾಲ್ಗೊಳ್ಳಬಹದು.ಇದು ಸರ್ಕಾರದ ಕಾರ್ಯಕ್ರಮ ಎಂದರು.

ಮಲ್ಲಿಕಾರ್ಜುನ ಖರ್ಗೆ ಜೊತಗೆ ಚರ್ಚೆ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಖರ್ಗೆ ಅವರೇ ಕಟ್ಟಿಸಿದ ಆಫೀಸ್ ಇದು.ಕಟ್ಟಡಕ್ಕೆ  ನಾನು ಹೊರಗಡೆ ಮುಖವಾಡ ಚೆಂಜ್ ಮಾಡಿದ್ದೇನೆ.ಅವರು ಕಾಫಿ ನೂ ಕುಡಿಯಬಾರದಾ? ಫ್ಯಾಮಿಲಿ ವಿಷಯಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ.ಕಾಂಗ್ರೆಸ್ ಇಸ್ ಅ ಫ್ಯಾಮಿಲಿ.ಯಾವುದೇ ದಾಯಾದಿ ಕಲಹ ಇಲ್ಲ.ಮೊನ್ನೆ ಸಿಎಂ ಕೂಡ ಚಿತ್ರದುರ್ಗದಲ್ಲಿ  ಹೇಳಿದ್ದಾರೆ ಎಂದರು.ಬೆಂಗಳೂರು ಅಭಿವೃದ್ಧಿಗೆ ಕೇಂದ್ರಕ್ಕೆ ಪತ್ರ ಬರೆದ ವಿಚಾರದ ಬಗ್ಗೆ  ಮಾತನಾಡಿದ ಅವರು ಬೆಂಗಳೂರು ಮುಖಾಂತರ ಭಾರತ ನೋಡಲಾಗುತ್ತಿದೆ.ಬೆಂಗಳೂರು ಅಂತರಾಷ್ಟ್ರೀಯ ನಗರವಾಗಿದೆ.ಅತಿ ಹೆಚ್ಚು ಟ್ಯಾಕ್ಸ್ ಕಲೆಕ್ಟ್ ಆಗುತ್ತಿದೆ.ಅದಕ್ಕಾಗಿ ಅಭಿವೃದ್ಧಿಗೆ ಹೆಚ್ಚಿನ ಅನುಧಾನಕ್ಕೆ ಮನವಿ ಮಾಡಿದ್ದೇವೆ.ಬೇರೆ ದೇಶದ ದೂತವಾಸ ಕಚೇರಿಗಳು ಇಲ್ಲಿವೆ.ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದೇವೆ.ಅವರು ಇಲ್ಲಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ.ಯಾವುದೇ ಗಡುವು ಕೊಟ್ಟಿಲ್ಲ.ಜೋಶಿ,ಶೆಟ್ಟರ್ ಸೇರಿದಂತೆ ಅನೇಕ ಹಿರಿಯ ನಾಯಕರಿದ್ದಾರೆ.ಅವರಿಗರ ಮನವಿ ಮಾಡಿದ್ದೇವೆ.ಭದ್ರಾ,ಮೇಕೆದಾಟುವಿಗೆ ಅನುಮತಿ ಕೊಡಿಸಲಿ ಎಂದಿದ್ದಾರೆ.