ಮನೆ ಪ್ರಸ್ತುತ ವಿದ್ಯಮಾನ ರಾಜಣ್ಣರ ಮತಪಟ್ಟಿ ಬಗ್ಗೆ ಮಾತಾಡಿದ್ದಕ್ಕೆ ಅವರ ತಲೆದಂಡ ಆಯ್ತು: ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿಕೆ

ರಾಜಣ್ಣರ ಮತಪಟ್ಟಿ ಬಗ್ಗೆ ಮಾತಾಡಿದ್ದಕ್ಕೆ ಅವರ ತಲೆದಂಡ ಆಯ್ತು: ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿಕೆ

0

ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಪರಿಷತ್ ಸದಸ್ಯ ಎನ್ ರವಿಕುಮಾರ್ ಉಪಸ್ಥಿತಿರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್ ಇದು ಆತಂಕದಿಂದ ಕರೆದಿರುವ ಸುದ್ದಿಗೋಷ್ಟಿ ಅಲ್ಲ. ನಮಗೇನು ಗಾಬರಿನೂ ಅಲ್ಲ, ಕಳ್ಳರು ಅಲ್ಲ. ರಾಜ್ಯದ ದೃಷ್ಟಿಯಿಂದ ಮಾರಕ ನಿರ್ಧಾರ ಕೈಗೊಂಡ ನಿನ್ನೆಯ ಕ್ಯಾಬಿನೆಟ್ ಸಭೆ. ಡಿಸಿಎಂ ಇದು ಸರ್ಕಾರದ ನಿರ್ಧಾರ ಮಾಡ್ತೀವಿ ಅಂದಿದ್ದಾರೆ. ಯಾವುದು ನಿರ್ಧಾರ ಜನಸಾಮಾನ್ಯರ ಹಿತದೃಷ್ಟಿಯಿಂದ ತಗೊಬೇಕು. ಆದರೆ ನಾವು ಮಾಡಿದ್ದೋ ಹೌದು ಅನ್ನೋ ಅಹಂಕಾರ, ಸರ್ಕಾರದ ಅದ್ಧಪತನಕ್ಕೆ ಕಾರಣ . ಸಿಲಿಕಾನ್ ಸಿಟಿ ಅನ್ನೋ ಹೆಸರಿಗೆ ತೋರಿಸುವ ತಿರಸ್ಕಾರ ಇದು. ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್. ಸುಪ್ರೀಂಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ. ಬೇರೆ ದೇಶಗಳು ಭಾರತದ ಚುನಾವಣೆ ಪದ್ದತಿ ಯನ್ನು ಮೆಚ್ಚಿಕೊಂಡಿವೆ. ರಾಹುಲ್ ಗಾಂಧಿ ಮೆಚ್ಚಿಸೋದಕ್ಕೆ ಅವರ ತಾಳಕ್ಕೆ ಕುಣಿಯಲು ಇವಿಎಂ ಬಳಸೋದಿಲ್ಲ ಎಂದಿದ್ದಾರೆ. ಬ್ಯಾಲೆನ್ಸ್ ಪೇಪರ್ ಕೂಡ ಒಂದು ಸ್ಟಾಟಪ್ ಎಂದುಕೊಂಡಿದ್ದಾರೆ. ಹಳೆ ಯುಗಕ್ಕೆ ತೆಗೆದುಕೊಂಡ ಹೋಗುವ ನಿರ್ಧಾರ ವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಇವಿಎಂ ಮೇಲೆ ಅನುಮಾನ ಅಂತಾದರೆ ಸರ್ಕಾರವನ್ನು ವಿಸರ್ಜಿಸಿ, ಮತ್ತೊಮ್ಮೆ ಬ್ಯಾಲೆಟ್ ಪೇಪರ್ ಮೇಲೆ ಗೆದ್ದು ಬರಲಿ. ಬ್ಯಾಲೆಟ್ ಪೇಪರ್ ಮೂಲಕ ಪರಮೇಶ್ವರ್ ಅವರು ಹೆಂಗೆ ಒತ್ತುತ್ತಿದ್ದೇವೆ ಗೊತ್ತಾ ಅನ್ನೋ ಪದ್ದತಿಗೆ ತಗೊಂಡು ಹೋಗ್ತಿದ್ದಾರೆ. ಇದು ಕಾಂಗ್ರೆಸ್ ನ ದಿವಾಳಿ ತನಕ್ಕೆ ತೆಗೆದುಕೊಂಡು ಹೋಗುತ್ತದೆ. ಅಮೇಥಿ ಯಲ್ಲಿ ರಾಹುಲ್ ಗಾಂಧಿ ಸೋತಾಗ ನಾವು ಇವಿಎಂ ಮೇಲೆ ದೂರಿಲ್ಲ. ಇವಿಎಂ ಬಂದ ಮೇಲೆ ಕಾಂಗ್ರೆಸ್ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಜೊತೆಗೆ ಹಲವು ರಾಜ್ಯಗಳಲ್ಲೂ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನಲ್ಲಿ ಸತ್ಯ ಹೇಳಿದರೆ ಸಹಿಸೋದಿಲ್ಲ. ರಾಜಣ್ಣರ ಮತಪಟ್ಟಿ ಬಗ್ಗೆ ಮಾತಾಡಿದ್ದಕ್ಕೆ ಅವರ ತಲೆದಂಡ ಆಯ್ತು. ಅವರ ವಿರುದ್ಧ ಡಿಕೆ ಶಿವಕುಮಾರ್ ಷಡ್ಯಂತ್ರ ಮಾಡಿದ್ರು ಅಂತಾರೆ, ಅದೇನೋ ಗೊತ್ತಿಲ್ಲ. ಆದರೆ ಷಡ್ಯಂತ್ರ ಅನ್ನೋದು ಕಾಂಗ್ರೆಸ್ ನಲ್ಲಿ ಚಲಾವಣೆಯಲ್ಲಿರುವ ಪದ ಎಂದರು.

ಬ್ಯಾಲೆಟ್ ಪೇಪರ್ ಮೇಲೂ ವಿಶ್ವಾಸವಿಲ್ಲ ಈಗಾಗಲೇ ಅದರ ಪರಮೇಶ್ವರ್ ಹೇಳಿದ್ದಾರೆ. ಒಂದು ಕ್ಷೇತ್ರದಲ್ಲಿ ೫೦ ಅಭ್ಯರ್ಥಿ ಗಳು ಸ್ಪರ್ಧೆ ಮಾಡಿದ್ರೆ 50 ಮತ ಪತ್ರ ಬೇಕು. 50 ಅಭ್ಯರ್ಥಿ ಗಳು ಸ್ಪರ್ಧೆ ಮಾಡಿದ್ರೆ ಎರಡು ಇವಿಎಂ ಸಾಕು. ಕಾಂಗ್ರೆಸ್ ನಲ್ಲಿ ಬ್ಯಾಲೆಟ್ ಬಾಕ್ಸ್ ನ್ನು ಕದಿಯೋದನ್ನು ನಾವು ನೋಡಿದ್ದೇವೆ. ಇವಿಎಂ ಇರೋದ್ರಿಂದ ತಿರಸ್ಕೃತ ಮತದಾರರು ಇರಲ್ಲ. ಇವಿಎಂ ಬಂದಾಗ ಒಂದು ನೋಟಾ ಅಂತಾ ತಂದಿದ್ದಾರೆ.  ಹೆಚ್ ಕೆ ಪಾಟೀಲ್ ಗೆ ನಾನು ಸವಾಲು ಹಾಕುತ್ತೇನೆ. ಇವಿಎಂ ಬಗ್ಗೆ ಎಲ್ಲಿಂದ ದೂರು ಬಂದಿದೆ, ಇವಿಎಂ ಬಗ್ಗೆ ಎಲ್ಲಾದರೂ ಸಮೀಕ್ಷೆ ಮಾಡಿದ್ದೀರಾ..?. ಯಾವುದನ್ನು ಮಾಡದೇ ಕಪೋಲ ಕಲ್ಪತ ನಾಟಕ ಇದು. ತಮ್ಮ ನಾಯಕನನ್ನು ತೃಪ್ತಿ ಪಡಿಸಲು ಮತದಾರರಿಗೆ ಮಾಡ್ತಿರುವ ದ್ರೋಹ  ಇದು. ಬ್ರಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರಿನ ಒಂದು ಭಾಗನಾ ಇದು ಇವಿಎಂ ಬ್ಯಾನ್..?. ರಾಜ್ಯ ಸರ್ಕಾರದ ನಿಲುವನ್ನು ಪ್ರತಿಯೊಬ್ಬ ಪ್ರಜ್ಞಾವಂತ ಮತದಾರ ಖಂಡಿಸುತ್ತಾನೆ.ಇವಿಎಂ ಯಿಂದ ಮತಗಳ್ಳತನ ಆಗಿದೆ ಅಂದರೆ ಇವ್ರು ಅದೇ ಇವಿಎಂ ಗೆದ್ದಿರೋದ್ರಿಂದ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.