ಮನೆ Latest News ವರಿಷ್ಠರೇ ಯಾಕೆ ಕಾರ್ಯಕರ್ತರ ವೇಗ ಕುಂಠಿಸುವ ಕೆಲಸ ಮಾಡುತ್ತಿದ್ದೀರಿ?: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ...

ವರಿಷ್ಠರೇ ಯಾಕೆ ಕಾರ್ಯಕರ್ತರ ವೇಗ ಕುಂಠಿಸುವ ಕೆಲಸ ಮಾಡುತ್ತಿದ್ದೀರಿ?: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಪ್ರಶ್ನೆ

0

ಬೆಂಗಳೂರು: ವರಿಷ್ಠರೇ ಯಾಕೆ ಕಾರ್ಯಕರ್ತರ ವೇಗ ಕುಂಠಿಸುವ ಕೆಲಸ ಮಾಡುತ್ತಿದ್ದೀರಿ? ಎಂದು  ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಪ್ರಶ್ನೆ  ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ನೇಮಕಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಯಾಕೋ ಏನೋ ಸಕಾಲಕ್ಕೆ ನಿರ್ಧಾರ ತೆಗೆದುಕೊಳ್ಳದೇ ಇರುವುದು ಕಾರ್ಯಕರ್ತರಲ್ಲಿ ಆತಂಕ ಮೂಡಿಸಿರುವುದು ನಿಜ. ವರಿಷ್ಠರು ಒಮ್ಮೆ ಇದನ್ನು ಅಳೆದೂ ತೂಗಿ ಮಾಡಿ ಮುಗಿಸಬೇಕಿತ್ತು. ನಾಯಕತ್ವದ ವಿಚಾರದಲ್ಲಿ ಸಣ್ಣಪುಟ್ಟ ಗೊಂದಲ ಇದ್ದಾಗ ಕಾರ್ಯಕರ್ತರು ತಮ್ಮ ವೇಗವನ್ನು ತಗ್ಗಿಸಿಬಿಡುತ್ತಾರೆ. ರಾಜ್ಯದಲ್ಲಿ ಇರುವ ವಿಷಯಗಳನ್ನು ನೋಡುವಾಗ ನಮ್ಮಷ್ಟು ಪುಣ್ಯವಂತರು ಇಲ್ಲ. ಆದರೆ ಯಾವುದೇ ಹೋರಾಟವನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಕೆಲಸ ಆಗಲಿಲ್ಲ. ವರಿಷ್ಠರು ಬರುತ್ತಾರೆ ವರದಿ ಪಡೆದು ಹೋಗುತ್ತಾರೆ ಅಷ್ಟೇ.ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ಚರ್ಚೆಯೇ ಮಾಡಲಿಲ್ಲ. ವರಿಷ್ಠರು ಯಾಕೆ ಕಾರ್ಯಕರ್ತರ ವೇಗ ಕುಂಠಿಸುವ ಕೆಲಸ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಕಲ್ಲು, ಬಂಡೆ ಯಾರನ್ನು ಬೇಕಾದರೂ ಅಧ್ಯಕ್ಷ ಮಾಡಿ.ನಾವು ಈ ಬಗ್ಗೆ ಮಾತಾಡಿದರೆ ಅದರ ಬಗ್ಗೆ ಅಡ್ಡಿಯೂ ಆಗುತ್ತದೆ ಎಲ್ಲಾ ನಾಯಕರ ಸುತ್ತ ಒಂದು ಸಣ್ಣ ಚಕ್ರವ್ಯೂಹ ಇದೆ. ಇಂದು ಇಬ್ಬರು ನಾಯಕರು ದೆಹಲಿಗೆ ಹೋಗಿದ್ದಾರೆ. ಒಬ್ಬರು ಹೋದರು ಅಂತಾ ಇನ್ನೊಬ್ಬರು ಹೋಗಿದ್ದಾ ಗೊತ್ತಿಲ್ಲ. ಒಬ್ಬರು ಫ್ಲೈಟ್ ಟಿಕೆಟ್ ಬುಕ್ ಮಾಡಿದರು ಅಂತಾ ಇನ್ಬೊಬ್ಬರು ಬುಕ್ ಮಾಡಿದ್ರಾ ಗೊತ್ತಿಲ್ಲ. ನಮ್ಮಲ್ಲಿ ಖಂಡಿತವಾಗಿಯೂ ಎಲ್ಲವೂ ಸರಿ ಇಲ್ಲ. ನಮ್ಮ ರಾಜ್ಯ ಕೋರ್ ಕಮಿಟಿ ಹಿಂದಿನ ಸಂಪ್ರದಾಯ ಮುಂದುವರಿಸಿಕೊಂಡು ಹೋಗುವ ಕಮಿಟಿ ಆಗಿದೆ ಅಷ್ಟೇ.ಅಲ್ಲಿ ನಿಜವಾಗಿ ವಿಷಯಾಧಾರಿತ ಚರ್ಚೆ ನಡೆಯುತ್ತಿಲ್ಲ. ಅಧ್ಯಕ್ಷ ಸೇರಿ ಯಾವುದೇ ತೀರ್ಮಾನದ ಬಗ್ಗೆ ಕೋರ್ ಕಮಿಟಿ ಅಭಿಪ್ರಾಯ ಕೇಳುವುದೇ ಇಲ್ಲ.ಅಧ್ಯಕ್ಷ ಒಳ್ಳೆಯವವನೋ ಕೆಟ್ಟವನೋ ಅಂತಾ ಕೆಲಸ ಮಾಡುವ ಕಾರ್ಯಕರ್ತ ಹೇಳಬೇಕು. ರಾಜಕೀಯದಲ್ಲಿ ತೀರ್ಥ ಹಾಕಿದರೆ ಶುದ್ದೀಕರಣ ಆಗಲ್ಲ, ಸ್ನಾನವೇ ಮಾಡಬೇಕು. ಈಗಾಗಲೇ ಶುದ್ದೀಕರಣ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷ, ವಿಪಕ್ಷ ‌ನಾಯಕ ಬಾಹ್ಯವಾಗಿ ಇಬ್ಬರೂ ಚೆನ್ನಾಗಿದ್ದಾರೆ. ಆದರೆ ಆಂತರಿಕವಾಗಿ ಇಬ್ಬರೂ ಹೇಗಿದ್ದಾರೆ ಅಂತಾ ಗೊತ್ತಿಲ್ಲ. ಕೋರ್ ಕಮಿಟಿ ಇರುವುದು ಚರ್ಚೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಹೋರಾಟ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೋ ಜನ ಕರೆದು ತಂದು ಮಾಡುವುದಲ್ಲ. ನಾವು ಎಷ್ಟೇ ವಿಷಯ ಮಾತಾಡಿದರೂ ಸರ್ಕಾರ ಅವರದ್ದೇ ದಾರಿಯಲ್ಲಿದ್ದಾರೆ. ನಾನು ವರಿಷ್ಠರಿಗೆ ಪತ್ರ ಬರೆದಿದ್ದಕ್ಕೆ ಬಾಯಿಗೆ ಬಂದಂತೆ ಮಾತಾಡಿ ಬೀದಿ ರಂಪಾಟ ಮಾಡುವವರ ಮೇಲೆ ಕ್ರಮ ಆಗಿದೆ. ರಾಜ್ಯಾಧ್ಯಕ್ಷರ ಘೋಷಣೆ ಮಾಡದೇ ಹೀಗೆಯೇ ತೇಲಿಸಿಕೊಂಡಿದ್ದರೆ ಆಗಲ್ಲ. ಪ್ರಶ್ನೆ ಮಾಡಿದರೆ ಉತ್ತರ ಕೊಡುವುದಕ್ಕೆ ತಡಕಾಡುವ ಸ್ಥಿತಿ ಇದೆ. ಯಡಿಯೂರಪ್ಪನವರು ಪಕ್ಷದ ಕಚೇರಿಗೆ ಮತ್ತೆ ಭೇಟಿ ಯಾಕೆ ಅಂತಾ ಹೇಳಲು ಸಾಧ್ಯವಿಲ್ಲ.ಅವರು ಸಡನ್ ಆಗಿ ರಂಗ ಪ್ರವೇಶ ಮಾಡುವುದೂ ಇದೆ, ಸೈಲೆಂಟ್ ಆಗಿರುವುದೂ ಇದೆ. ರಾಜಕೀಯ ಕೃಪಾ ಕಟಾಕ್ಷದ ಕಾರಣಕ್ಕೆ ಪಕ್ಷದಲ್ಲಿ ಇಂದು ಗುಂಪುಗಾರಿಕೆ ನಡೆಯುತ್ತಿದೆ.ಚೇಲಾಗಿರಿ ಮಾಡದೇ ಯಾವುದೇ ಪಕ್ಷದಲ್ಲಿ ರಾಜಕೀಯ ಸ್ಥಾ‌ನಮಾನ ಸಿಗಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಗೃಹ ಸಚಿವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸಿಎಂ ಸೇರಿ ಸರ್ಕಾರದ ಎಲ್ಲರಿಗೂ ಈಗ ಎಲ್ಲವೂ ತಮಾಷೆಯೇ ಆಗಿದೆ. ಸಿದ್ದರಾಮಯ್ಯಗಿಂತ ದೊಡ್ಡ ತಪ್ಪು ಶಾಸಕ ರಾಜೂ ಕಾಗೆ ಮಾಡುತ್ತಿದ್ದಾರೆ. ಸಿಎಂ ಮನೆ ಮುಂದೆ ಹೋಗಿ ಧರಣಿ ಕೂರುವ ತಾಕತ್ ಒಬ್ಬ ಕಾಂಗ್ರೆಸ್ ಶಾಸಕರಿಗೆ ಇದ್ಯಾ?.ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರು ಧರಣಿ ಕುಳಿತಿದ್ದರು. ಜಿ.ಎಂ. ಸಿದ್ದೇಶ್ವರ ತಂಡ ನನ್ನನ್ನು ಮನೆಗೆ ಬಂದು ಭೇಟಿ ಮಾಡಿದ್ದರು.ನೀವು ರಾಜ್ಯದ ಕೋರ್ ಕಮಿಟಿ ಮುಂದೆ ಹೇಳಿ ಏನೂ ಪ್ರಯೋಜನ ಇಲ್ಲ, ದೆಹಲಿ ಮಟ್ಟದಲ್ಲಿ ಹೋಗಿ ಮಾತಾಡಿ ಎಂದು ಹೇಳಿದ್ದೇನೆ.ನಾನು ಅಧ್ಯಕ್ಷ ಆಗಿರುವಾಗ ಪ್ರತಿ ವಾರ ಪ್ರಧಾನ ಕಾರ್ಯದರ್ಶಿಗಳ ಸಭೆ ಮಾಡುತ್ತಿದ್ದೆವು. ಈಗ ಪ್ರಧಾನ ಕಾರ್ಯದರ್ಶಿಗಳ ಸಭೆ ಆಗುತ್ತಿದ್ಯಾ ಗೊತ್ತಿಲ್ಲ.ಕರ್ನಾಟಕದಲ್ಲಿ ಯಾರಲ್ಲೂ ಮಾತಾಡಿದರೂ ನಿಮಗೆ ಪರಿಹಾರ ಸಿಗಲ್ಲ ಎಂದು ನೇರವಾಗಿ ಸಿದ್ದೇಶ್ವರ ತಂಡಕ್ಕೆ ಹೇಳಿದ್ದೇನೆ.ಕೋರ್ ಕಮಿಟಿಯಲ್ಲಿ ನೀವು ಚರ್ಚೆ ಮಾಡಿ ಎಂದು ಹೇಳಲು ಅವರು ನನ್ನ ಭೇಟಿ ಮಾಡಿದ್ದರು. ಬಿಜೆಪಿ ರಾಷ್ಟ್ರೀಯ ನಾಯಕರು ಅದ್ಭುತ ನಾಯಕರಿದ್ದಾರೆ.ಯಾವ ಸಮಯದಲ್ಲಿ ಯಾವ ಔಷಧಿ ಕೊಡಬೇಕು, ಯಾವ ನಿರ್ಧಾರ ತೆಗೆದುಕೊಳ್ಳಬೇಕು ಅಂತಾ ಅವರಿಗೆ ಗೊತ್ತಿದೆ.ನಾನು ಈ ಹಿಂದೆ ಕೋರ್ ಕಮಿಟಿಯಲ್ಲಿ ನೇರವಾಗಿ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದರು.

ದೆಹಲಿಯಿಂದ ಸೀಟು ತರುತ್ತೇನೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನನ್ನ ಸೀಟು ನಾನು ತೆಗೆದುಕೊಂಡು ಬರುತ್ತೇನೆ ಅಂತಾ ಅವರು ಬಹಳ ಕರೆಕ್ಟ್ ಆಗಿ ಹೇಳಿದ್ದಾರೆ.ರಾಜ್ಯದಿಂದ ಈಗ ಇರುವ ಮಂತ್ರಿಗಳಲ್ಲಿ ಅವರೇ ಪ್ರಭಾವಿಗಳು.ಎನ್ ಡಿಎ ವಿಚಾರಗಳ ಬಗ್ಗೆ ತಿಂಗಳಿಗೊಮ್ಮೆ ಸಭೆ ಮಾಡಿ ಚರ್ಚೆ ಮಾಡುವ ಅವಶ್ಯಕತೆ ಇದೆ. ಸಮನ್ವಯ ಸಮಿತಿ ಭಾರೀ ಅವಶ್ಯಕತೆ ಇದೆ ಎಂದ ತಿಳಿಸಿದರು.