ಹಾಸನ; ನಾಳೆ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಹಿನ್ನೆಲೆ ಡಿಸಿಎಂ ಡಿ ಕೆ ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ರಾಜ್ಯದ ಇತಿಹಾಸದಲ್ಲಿ ನಾಳೆ ಮೈಲಿಗಲ್ಲು. 2014 ರ ಮಾರ್ಚ್ ನಲ್ಲಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ರು.ಚಿಕ್ಕಬಳ್ಳಾಪುರದಲ್ಲಿ ಈ ಕಾರ್ಯಕ್ರಮ ನಡೆದಿತ್ತು .ಕಾರ್ಯಕ್ರಮ ಆರಂಭವಾದಾಗ ಸಾಕಷ್ಟು ಟೀಕೆ ಕೇಳಿ ಬಂದಿತ್ತು.ಹೀಗಾಗಿ ನಾನು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡ್ತಿದ್ದೇನೆ.ಪಶ್ಚಿಮ ಘಟ್ಟಗಳಿಂದ ಬಯಲು ಸೀಮೆಗೆ ನೀರು ತೆಗೆದುಕೊಂಡು ಹೋಗ್ತಿದ್ದೀವಿ.123 ಕಿಮಿ ಕೆಲಸ ಅಗಿದೆ, 23 ಸಾವಿರ ಕೋಟಿ ವೆಚ್ಚ ವಾಗಿದೆ. ನೀರು ಪೊಲಾಗದಂತೆ ಹೊಸ ಕಾನೂನು ತರ್ತಿವಿ 23 ಸಾವಿರ ಕೋಟಿ ವೆಚ್ಚವಾಗಿದೆ.8 ಪ್ರದೇಶಗಳಿಂದ ಹೆಬ್ಬನಹಳ್ಳಿಗೆ ಬರುತ್ತೆ.ಇಲ್ಲಿಂದ ಹಲವು ಜಿಲ್ಲೆಗಳಿಗೆ ನೀರು ಹೋಗುತ್ತೆ.ಗೌರಿ ಹಬ್ಬದ ದಿನ ಗಂಗೆ ಗೌರಿಯನ್ನ ಒಂದು ಮಾಡ್ತಿದ್ದೇವೆ ಎಂದರು.
ಇನ್ನು ನಾಳಿನ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲಾ ಶಾಸಕರು ಬರಬೇಕು.ಬಹಳ ಜನ ಅಸೆಂಬ್ಲಿಯಲ್ಲಿ ಮಾತಾಡಿದ್ದಾರೆ.ಅವರಿಗೆಲ್ಲಾ ಆಹ್ವಾನ ಕೊಟ್ಟಿದ್ದೇವೆ.ನಾನು ಬಿಜೆಪಿಯವರಿಗೆ ಈಗ ಉತ್ತರ ಕೊಡಲ್ಲ.ಈಗ ಶುಭ ಸಂದರ್ಭ ಗೌರಿ ಗಣೇಶ ಹಬ್ಬದಲ್ಲಿ ಎಲ್ಲಾ ವಿಘ್ನಗಳು ನಿವಾರಣೆಯಾಗಲಿ. ನಾಳೆ ಗಂಗೆ ಪೂಜೆ ಮಾಡ್ತಿವಿ ಒಳ್ಳೆ ವಿಚಾರ ಮಾತಾಡೋಣಾ ಎಂದಿದ್ದಾರೆ.
ಶುಭ ಸಂದರ್ಭದಲ್ಲಿ ಅಶುಭ ಮಾತಾಡೋದು ಬೇಡ.ಹುಕ್ ಆರ್ ಕುಕ್ ನಾವು ಕೆಲಸ ಮಾಡ್ತೀವಿ.ಕೋಲಾರ ಚಿಕ್ಕಬಳ್ಳಾಪುರಕ್ಕೆ ಪೈಪ್ ನಲ್ಲಿ ತೆಗೆದುಕೊಂಡು ಹೋಗ್ತಿವಿ.ಕೆರೆ ತುಂಬಲು 14 ಟಿಎಮ್ ಸಿ ಕುಡಿಯುವ ನೀರಿಗೆ 10 ಟಿಎಮ್ ಸಿ ಉಪಯೋಗ ಮಾಡಲಾಗುತ್ತೆ.ಈಗ ಟ್ರೈಯಲ್ ರನ್ನಿಂಗ್ ಮಾಡಿದ್ದೇವೆ.ಈಗಾಗಲೇ ೧೫ ಟಿಎಂಸಿ ನೀರು ಸಮುದ್ರಕ್ಕೆ ಹೋಗಿದೆ.ನಮ್ಮಣ್ಣನಿಗೆ ಆಮೇಲೆ ಉತ್ತರ ಕೊಡೊಣಾ ಎಂದಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಪ್ಲಾನ್ ಇತ್ತು ಬಿಜೆಪಿಯವರು ಸ್ವಲ್ಪ ಬದಲಾವಣೆ ಮಾಡಿದ್ದಾರೆ.ಡಿಸೆಂಬರ್ ಗೆ ೫ ಟಿಎಂಸಿ ನೀರನ್ನ ತುಮಕೂರಿಗೆ ಹರಿಸುತ್ತೇವೆ.ಈಗ ವಾಣಿ ವಿಲಾಸಿ ಸಾಗರಕ್ಕೆ ಹೋಗುತ್ತೆ.ಇಲ್ಲಿನ ಅಧಿಕಾರಿಗಳು ಸಹಕಾರ ನೀಡಿದ್ದಾರೆ.ದೊಡ್ಡ ದೊಡ್ಡ ಎಸ್ಟೇಟ್ ನವರು ತೊಂದರೆ ಮಾಡ್ತಿದ್ರು, ಅದನ್ನೆಲ್ಲಾ ಸರಿ ಮಾಡಿದ್ದೇವೆ.ಹೋಮಹವನ ಕುಂಬಳಕಾಯಿ ಬಲಿ,ಧಾರ್ಮಿಕ ಕೆಲಸ ಮಾಡಬೇಕು. ನಾಳೆ ಗಂಗೆ ಪೂಜೆ ಮಾಡಿ ಬಾಗೀನ ಕೊಡ್ತೇವೆ ಎಂದಿದ್ದಾರೆ.
ಇನ್ನು ನಾಳೆ ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆ ಉದ್ಘಾಟನೆ ಹಿನ್ನಲೆ,ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಕಲ್ಪ ಪೂಜೆ ನಡೆಯಿತು.ದೊಡ್ಡ ನಾಗರದ ಡಿಸಿ – 3 ಸೆಂಟರ್ ನಲ್ಲಿ ಪೂಜೆ ನಡೆಯಿತು.ಮೈಸೂರಿನ ಚಾಮುಂಡೇಶ್ವರಿ ದೇವಾಲದ ಪ್ರಧಾನ ಅರ್ಚಕರಾದ ಶಶಿ ದೀಕ್ಷಿತ್ ಗುರೂಜಿ ನೇತೃತ್ವದಲ್ಲಿ ಪೂಜೆ ನೆರವೇರಿತು. ಪೂಜೆಯಲ್ಲಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ , ಶಾಸಕರಾದ ಶಿವಲಿಂಗೇಗೌಡ ಸೀಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಭಾಗಿಯಾಗಿದ್ದರು.