ಮನೆ Latest News ಇಡಿ ದೇಶದಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿ : ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್...

ಇಡಿ ದೇಶದಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿ : ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ

0

 

ಬೆಂಗಳೂರು; ಒಂದು ದೇಶ ಒಂದು ಚುನಾವಣೆ ವಿಷಯ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭಾಗಿಯಾಗಿದ್ದರು. ಈ ವೇಳೆ  ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ರಾಜ್ಯಕ್ಕೆ ಆಗಾಗ ಬರ್ತಿನಿ ಹೋಗ್ತಿನಿ. ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಯಾವಾಗ ಅನ್ನೋದನ್ನ ಪಕ್ಷ ತೀರ್ಮಾನ ಮಾಡುತ್ತೆ. ನಿಮಗೂ ಹೇಳ್ತೀವಿ, ಎಲ್ರಿಗೂ ಹೇಳ್ತೀವಿ, ಘೋಷಣೆ ಮಾಡ್ತೀವಿ ಎಂದಿದ್ದಾರೆ.

ಒನ್ ನೇಷನ್, ಒನ್ ಎಲೆಕ್ಷನ್ ಕಮಿಟಿ ಸಂಚಾಲಕರೂ ಕೂಡ ಶಿವರಾಜ್ ಸಿಂಗ್ ಚೌಹಾಣ್ ಅವರು ಆಗಿದ್ದು ಕಾರ್ಯಕ್ರಮದಲ್ಲಿ ಭಾಗಿಯಾದ ಕರ್ನಾಟಕದ ಸಂಚಾಲಕ ಅನಿಲ್ ಆಂಥೋನಿ, ಮಾಜಿ ಸಂಸದ ಮುನಿಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ಎಸ್ ನವೀನ್ ಭಾಗಿಯಾಗಿದ್ದಕರು. ಸಂವಾದದಲ್ಲಿ ಭಾಗಿಯಾದ ವಿವಿಧ ವಲಯದ ನಾಗರೀಕರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಅವರು ಕೃಷಿ ಮಂತ್ರಿಯಾಗಿ ರೈತರ ಜೊತೆ ಕೃಷಿ ಭೂಮಿಯಲ್ಲಿದ್ದೆ. ಬಂಗಲೆಯೊಳಗೆ ನನಗೇನು ಕೆಲಸ ಎಂದು ಚೌವ್ಹಾಣ್ ಚಟಾಕಿ ಹಾರಿಸಿದ್ದಾರೆ. ಕೃಷಿಕರ ಜೊತೆ ಮಾತನಾಡಿ ಸಮಸ್ಯೆ ಆಲಿಸುವುದು ನನ್ನ ಕರ್ತವ್ಯ ಎಂದ ಅವರು ಇಂದು ಲಿಫ್ಟ್ ನಲ್ಲಿ ಸಿಲುಕಿದ ಕತೆ ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ಬಟನ್ ಒತ್ತಿದ್ರು. ಮೇಲೆ ಕೆಳಗೆ ಲಿಫ್ಟ್ ಓಡಾಡಿತು. ಆದ್ರೆ ಬಾಗಿಲು ತೆರೆಯಲೇ ಇಲ್ಲ. ಕೊನೆಗೆ ಬಲವಂತವಾಗಿ ಲಿಫ್ಟ್ ಬಾಗಿಲು ತೆರೆದು ಬಂದೆವು  ಎಂದು ಹೋಟೆಲ್ ನಲ್ಲಿ ಲಿಫ್ಟ್ ನಲ್ಲಿ ಸಿಲುಕಿದ ಕತೆಯನ್ನ ಚೌವ್ಹಾಣ್ ಸೊಗಸಾಗಿ ಹೇಳಿದ್ದಾರೆ.

ಒಂದು ನೇಷನ್, ಒನ್ ಎಲೆಕ್ಷನ್ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಆದ್ರೆ ನಾನು ಕೃಷಿ ಮಾಡಲು, ಕೃಷಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಹಾಗಾಗಿ ತಡವಾಗಿ ಬಂದಿದ್ದೇನೆ ಎಂದು ಹಾಸ್ಯ ಮಾಡಿದ್ದಾರೆ ಚವ್ಹಾಣ್. ಈಗಷ್ಟೇ ರೈತರ ಜೊತೆ ಮಾತಾಡಿ ಬಂದಿದ್ದೇನೆ.ಭಾರತ ಅತ್ಯಂತ ಹಳೆಯ ದೇಶ. 5 ಸಾವಿರ ವರ್ಷಗಳ ಇತಿಹಾಸ ಇದೆ. ಈ ಭೂಮಿ ವಿಶಿಷ್ಟ ಹಾಗೂ ಒಂದು ಪರಿವಾರ ಇದೆ. ಮನುಷ್ಯ ಮಾತ್ರವಲ್ಲ, ಪ್ರಾಣಿಗಳಲ್ಲೂ ಉತ್ತಮ ಗುಣವಿದೆ. ನಾನು ಪುಣ್ಯವಂತ ಭಾರತ ಭೂಮಿಯಲ್ಲಿ ಹುಟ್ಟಿದ್ದೇನೆ.. ಮೋದಿ ಅವರು ನಮ್ಮ ದೇಶವನ್ನ ಅನೇಕ ದೃಷ್ಟಿಯಿಂದ ಮುಂದೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಕೃಷಿ ಮಂತ್ರಿಯಾಗಿ ಶೇ.4.5 ರಷ್ಟು ಪ್ರಗತಿ ಸಾಧಿಸಿದ್ದೇವೆ. ಆಹಾರ ಉತ್ಪಾದನೆಯಲ್ಲಿ 40% ಹೆಚ್ಚಳವಾಗಿದೆ ಅಂತ ಪ್ರಧಾನಿ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಪ್ರತೀ ಕ್ಷಣ ಚುನಾವಣೆ ತಯಾರಿಯಲ್ಲೇ ಇರುತ್ತೆ. ಜನರ ಬಗ್ಗೆ ಯೋಚನೆ ಮಾಡಲ ಅಂತಾರೆ ಎಂದರು.

ಚುನಾವಣೆಯಲ್ಲಿ ವರ್ಷವಿಡಿ ಎಲ್ಲ ರಾಜಕೀಯ ಪಕ್ಷ ಬ್ಯುಸಿ ಆಗಿರ್ತವೆ .ಕೇಂದ್ರ ಸರ್ಕಾರಕ್ಕೆ ಒಂದು‌ ವರ್ಷವಾಗಿದೆ. ಇದರ ನಡುವೆ 6-7 ರಾಜ್ಯಗಳ ಚುನಾವಣೆ . ಎಲ್ಲ ನಾಯಕರು ಚುನಾವಣೆ ಪ್ರಚಾರ ದಲ್ಲಿ ಬ್ಯುಸಿ. ಒಂದರ ಮೇಲೊಂದು ಚುನಾವಣೆ . ಪ್ರತಿ 6 ತಿಂಗಳಿಗೊಂದು‌ ಚುನಾವಣೆ . ಇದರಿಂದ ಎಷ್ಟು ನಷ್ಟವಾಗುತ್ತದೆ. ಇಷ್ಟು ಸಮಯವನ್ನ ಜನರ ಕಲ್ಯಾಣಕ್ಕಾಗಿ ನಾಯಕರು ಬಳಸಿದರೆ ಉತ್ತಮವಾಗುತ್ತಿತ್ತು. ಚುನಾವಣೆ ಕಾರಣ ನೀತಿ ಸಂಹಿತೆ . ನಾಯಕರು, ವೀಕ್ಷಕರಾಗಿ ಹೋಗ್ತಾರೆ. ಅಧಿಕಾರಿಗಳು ಚುನಾವಣೆ ಸಿದ್ದತೆಯಲ್ಲಿ ಬ್ಯುಸಿ. ಚುನಾವಣಾ ವೆಚ್ಚ ಹೆಚ್ಚಾಗುತ್ತಲೇ ಇದೆ. ಪಕ್ಷಗಳು ಖರ್ಚು ಮಾಡುತ್ತವೆ, ಸ್ವತಂತ್ರ ಅಭ್ಯರ್ಥಿಗಳು ವೆಚ್ಚಮಾಡುತ್ತಾರೆ. ವಿಧಾನಸಭೆ, ಲೋಕಸಭೆ ಚುನಾವಣೆ ಒಟ್ಟಿಗೆ ಆದರೆ ಉತ್ತಮ . ಒಂದೇ ವೇದಿಕೆಯಲ್ಲಿ ಪ್ರಚಾರ ನಡೆದುಹೋಗತ್ತೆ. ಒಂದೇ ಖರ್ಚಿನಲ್ಲಿ ರಾಜ್ಯ, ದೇಶದ ಚುನಾವಣೆ  . ಇಲ್ಲಿ ಸೋತವರು ಅಲ್ಲಿ ಸ್ಪರ್ಧೆ ಮಾಡುವುದೂ ನಿಲ್ಲುತ್ತದೆ. ಆಡಳಿತ ನಡೆಸುವವರಿಗೂ ಭಯ ಇರುತ್ತದೆ. ಉತ್ತಮ ಕೆಲಸ ಮಾಡಬೇಕಾದ ಪರಿಸ್ಥಿತಿ ಉದ್ಬವ ಆಗುತ್ತದೆ. ಏರ್ ಸ್ಟ್ರೈಕ್ ಅನ್ನೂ ಚುನಾವಣೆ ಗಿಮಿಕ್ ಎನ್ನುತ್ತಾರೆ, ಸಾಕ್ಷಿ‌ ಕೇಳ್ತಾರೆ. ಕನಿಷ್ಟ ನಾಲ್ಕು ವರೆ ವರ್ಷ ಜನರಿಗಾಗಿ ಸರ್ಕಾರ ಕೆಲಸ ಮಾಡಲಿ. 6 ತಿಂಗಳು ಚುನಾವಣೆ ಮೂಡಿನಲ್ಲಿರಲಿ. ಮತದಾರರ ಜಾಗೃತವಾಗಿದ್ದಾನೆ. ಒಮ್ಮೆಲೆ ಚುನಾವಣೆ ನಡೆದರೂ ಯಾರಿಗೆ ಓಟ್ ಹಾಕಬೇಕು ಎಂದು ಯೋಚಿಸಿ ನಿರ್ಧಾರ ಮಾಡ್ತಾನೆ. ಇಡಿ ದೇಶದಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿ ಎಂದರು.