ಮನೆ Latest News ದರ್ಶನ್ ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಾವು ತೀರ್ಮಾನ ಮಾಡಕ್ಕಾಗಲ್ಲ; ಗೃಹ ಸಚಿವ...

ದರ್ಶನ್ ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಾವು ತೀರ್ಮಾನ ಮಾಡಕ್ಕಾಗಲ್ಲ; ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ದರ್ಶನ್ ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಾವು ತೀರ್ಮಾನ ಮಾಡಕ್ಕಾಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡಕ್ಕಾಗಲ್ಲ.ಜೈಲು ಪ್ರಾಧಿಕಾರವು ಕೋರ್ಟಿನ ನಿರ್ದೇಶನ ಮೇರೆಗೆ ಸ್ಥಳಾಂತರ ಮಾಡಲಿದೆ. ವಿಚಾರಣಾ ಕೈದಿ ಆಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳಡಿ ಸ್ಥಳಾಂತರ ಮಾಡ ಬೇಕಾಗುತ್ತದೆ.ಇನ್ನು ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಕ್ಲಾರಿಟಿ ಸಿಗಲಿದೆ ಎಂದಿದ್ದಾರೆ.

ಇನ್ನು  ಜೈಲಿನಲ್ಲಿ ಮೂರು ವಿಭಾಗ ಮಾಡೋ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಭದ್ರತೆ ಧೃಷ್ಟಿಯಿಂದ ಆಂತರಿಕಾ ಆಡಳಿತ ವಿಭಾಗ ಮಾಡಬಹುದು.ಮೂರು ಜೈಲು‌ ಮಾಡೋಕೆ ಆಗಲ್ಲ.ಒಳಗಡೆ ಮೂರು ಬ್ಲಾಕ್ ಇದೆ. ಬೇರೆ ಬ್ಯಾರಕ್ ಇದೆ.ಜೈಲಿನಲ್ಲಿ ತನಿಖಾ ಹಂತದ ಕೈದಿಗಳು,ಲೈಪ್ ಪ್ರಿಸನರ್ಸ್ ಅವರನ್ನೆಲ್ಲ ಬೇರೆ ಇಟ್ಟಿರ್ತಾರೆ.ಅದನ್ನ ಜೈಲಿನ ಅಧಿಕಾರಿಗಳಿಗೆ ಬಿಟ್ಟಿದ್ದೇವೆ ಎಂದರು.

ಇದೇ ವೇಳೆ ಪರಮೇಶ್ವರ್ ಅವರು ಜೈಲಿಗೆ ಭೇಟಿ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬ್ಯಾರಕನಿಂದ ಮತ್ತೊಂದು ಬ್ಯಾರಕ್ ಗೆ ಹೋಗೋಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈಗಾಗಲೇ 9 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಬೇರೆ ಯಾರು ದರ್ಶನ್ ಗುಂಪಿಗೆ ಸಹಾಯ ಮಾಡಿದ್ದಾರೆ. ಸಿಗರೇಟ್, ಚೇರ್, ಕಾಫಿ ತಂದುಕೊಟ್ಟಿದ್ದು ಎಲ್ಲದನ್ನ ಸಿಸಿಟಿವಿ ಆಧರಿಸಿ ಕ್ರಮ ಆಗಿದೆ.ಐಪಿಎಸ್ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಲಾಗುತ್ತಿದೆ ಎಂದರು.

ಇನ್ನು ಜೈಲಿನ ಸುಧಾರಣೆಗೆ ವರದಿ ಅನುಷ್ಠಾನ ವಿಚಾರಕ್ಕೆ  ಪ್ರತಿಕ್ರಿಯಿಸಿದ ಅವರು ಎಚ್ ಕೆ ಪಾಟೀಲ್ ವರದಿ ಕೊಟ್ಟಿದ್ದು ಗಮನಕ್ಕೆ ಬಂದಿರಲಿಲ್ಲ.ಅದನ್ನ ತರಿಸಿಕೊಳ್ಳುತ್ತೇನೆ.ಈಗಿರೋ ವ್ಯವಸ್ಥೆ ಬದಲಾವಣೆ ಅಗತ್ಯವಿದೆ.ಇದನ್ನ ಮಾಡುತ್ತೆವೇವೆ.ಈಗಾಗಲೇ 9 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ.ಚೀಫ್ ಸೂಪರಿಂಟೆಂಡೆಂಟ್ ಅವರನ್ನೂ ಸಸ್ಪೆಂಡ್ ಮಾಡಿದ್ದೇವೆ.ಇನ್ನೊಬ್ರು ಸೂಪರಿಂಟೆಂಡೆಂಟ್ ರನ್ನೂ ಸಸ್ಪೆಂಡ್ ಮಾಡಿದ್ದೇವೆ.ಇನ್ಯಾರ್ಯಾರು ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಸಸ್ಪೆಂಡ್ ಮಾಡಲಾಗಿದೆ.ತನಿಖೆ ಇನ್ನೂ ಮುಂದುವರೆದಿದೆ.ಮುಂದಿನ ತನಿಖೆಗಾಗಿ ಇಂದು ಒಬ್ಬರು ಐಪಿಎಸ್ ಅಧಿಕಾರಿ ನೇಮಕ ಮಾಡ್ತೇವೆ.ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ತೇವೆ ಎಂದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್  ಫೋಟೋ ವೈರಲ್ ಪ್ರಕರಣ; 7 ಜನ ಅಧಿಕಾರಿಗಳನ್ನು ಅಮಾನತುಗೊಳಿಸಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಆದೇಶ

ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರಿಲ್ಯಾಕ್ಸ್ ಮೂಡನಲ್ಲಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಾಧಿಕಾರಿ ಸೇರಿ ಒಟ್ಟು 7 ಜನರನ್ನು ಅಮಾನತು ಮಾಡಲಾಗಿದೆ ಎಂದು ಅಮಾನತುಗೊಳಿಸಿ ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೆ ಫೋಟೋ ಬಗ್ಗೆ ನಿನ್ನೆ ಸಂಜೆ  ಸುಮಾರು ನಾಲ್ಕೂವರೆ ಗಂಟೆಗೆ ಸುದ್ದಿ ಬಂತು.ದರ್ಶನ್ ಮತ್ತು ನಾಲ್ಕು ಜನ ಟೀ ಕುಡಿದುಕೊಂಡು ಆರಾಮಾಗಿರುವ ಫೋಟೋ ಬಂತು.ಕೂಡಲೇ ಬಂಧೀಖಾನೆ ಡಿಜಿಗೆ ಕರೆ ಮಾಡಿ ಸಂಬಂಧ ಪಟ್ಟ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೆ. ತಡರಾತ್ರಿ 1 ಗಂಟೆವರೆಗೆ ತನಿಖೆ ಆಗಿದೆ. ಫೋಟೋ ವೈರಲ್ ಆದ ಬೆನ್ನಲ್ಲೇ ಏಳು ಜನ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ.ಜೈಲರ್ ಶರಣಬಸವ ಅಮೀನಗಡ, ಪ್ರಭು ಎಸ್ ಕಂದೇವಾಲ್,ತಿಪ್ಪೇಸ್ವಾಮಿ,ಶ್ರೀಕಾಂತ್,ವೆಂಕಪ್ಪ ಕೊರ್ತಿ,ಸಂಪತ್ ಕುಮಾರ್ ಕಡಪಟ್ಟಿ,ಬಸಪ್ಪ ತೇಲಿ ಈ ಏಳು ಜನರನ್ನು ಅಮಾನತು ಮಾಡಲಾಗಿದೆ.

ಇನ್ನು ಈ ಘಟನೆ ಹೇಗೆ ನಡೆದಿದೆ ಎಂದು ವರದಿ ಕೇಳಿದ್ದೇನೆ.ಬಂಧೀಖಾನೆ ಡಿಜಿ ಕೂಡ ಸ್ಥಳಕ್ಕೆ ಹೋಗಿದ್ದಾರೆ.ಏಳು ಜನ ಅಮಾನತು ಆದವರು ಭಾಗಿಯಾಗಿದ್ದಾರೆ. ಅವಕಾಶ ಮಾಡಿಕೊಟ್ಟವರ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ. ಅಲ್ಲದೇ ಜೈಲ್ ಸೂಪರಿಡೆಂಟ್ ರನ್ನು ಕೂಡ ವರ್ಗಾವಣೆ ಮಾಡ್ತೇವೆ. ಅವರ ವಿರುದ್ದ ಕೂಡ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಜೈಲಿನಲ್ಲಿ ಜಾಮರ್ ಹಾಕಿದೀವಿ ಸಿಸಿಟಿವಿ ಹಾಕಿದೀವಿ.ಆದರೂ ಇಂಥ ಘಟನೆ ನಡೆದರೆ ಪೊಲೀಸ್ ಅಧಿಕಾರಿ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಜೈಲ್ ಸೂಪರಿಡೆಂಡ್ ಭಾಗಿಯಾಗಿದ್ರೆ ಅವರ ಮೇಲೂ ಕೂಡ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.ಅವರ ವಿರುದ್ಧ ಕೂಡ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.ನೀವು ಪ್ರಶ್ನೆ ಮಾಡಿದ ವೇಳೆ ಚಿಕನ್ ಬಿರಿಯಾನಿ ಕೊಟ್ಟಿರಲಿಲ್ಲ.ಈ ಘಟ‌ನೆ ಸಮರ್ಥನೆ ಮಾಡಿಕೊಳ್ತಿಲ್ಲ.ಯಾರ ಮೊಬೈಲ್ ನಲ್ಲಿ ಫೋಟೋ ಇದೆ, ಹೇಗೆ ಮೊಬೈಲ್ ಒಳಗೆ ಹೋಯ್ತು ಎಲ್ಲವೂ ತನಿಖೆ ಆಗುತ್ತಿದೆ.ಎಲ್ಲರೂ ಕೂಡ ದರ್ಶನ್ ಭೇಟಿಗೆ ಹೋಗ್ತಾ ಇಲ್ಲ.ತನಿಖೆಯಲ್ಲಿ ಯಾರೆಲ್ಲ ದರ್ಶನ್ ಭೇಟಿ ಮಾಡ್ತಿದ್ದಾರೆ ಅದೂ ಕೂಡ ಹೊರಗೆ ಬರುತ್ತದೆ ಎಂದಿದ್ದಾರೆ.

ಜೈಲಿನಲ್ಲಿ 24 ಗಂಟೆ ಮಾನಿಟರಿಂಗ್ ನಡೆಯುತ್ತಿರುತ್ತದೆ.ಸಿಸಿಟಿವಿಯಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಹೋಗ್ತಾ ಇರುತ್ತದೆ.ಅದನ್ನು ಹೊರತುಪಡಿಸಿ ಕೂಡ ಈ ಘಟನೆ ನಡೆದಿದೆ.ಯಾರ ಒತ್ತಡವೂ ಕೂಡ ನಮ್ಮ ಮೇಲೆ ಇಲ್ಲ.ಯಾರೂ ಕೂಡ ನನ್ನ ಲೆವೆಲ್ ಗೆ ಮುಟ್ಟುವುದಕ್ಕೆ ಆಗುವುದಿಲ್ಲ.ಯಾರ ಒತ್ತಡಕ್ಕೂ ಕೂಡ ಮಣಿಯುವುದಿಲ್ಲ.ಇರುವ ಲ್ಯಾಪ್ಸಸ್ ಸರಿ ಮಾಡುತ್ತೇವೆ.ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ತೇವೆ ಎಂದು ಅವರು ಹೇಳಿದ್ದಾರೆ.

ಇಂತಹ ಘಟನೆ ಆದಾಗ ಹಿರಿಯ ಅಧಿಕಾರಿಗಳು ಅದನ್ನು ನೋಡಲೇಬೇಕು.ಮಾನಿಟರಿಂಗ್ ನಲ್ಲಿ ಲ್ಯಾಪ್ಸ್ ಆದಾಗ ಇಂಥ ಘಟನೆ ನಡೆಯುತ್ತಿದೆ.ಹಿರಿಯ ಅಧಿಕಾರಿಗಳು ಹೊಣೆಗಾರರಾಗಿದ್ದರೆ ಅವರನ್ನೂ ಕೂಡ ಅಮಾನತು ಮಾಡ್ತೇವೆ.ಮೊನ್ನೆ ಸಿಸಿಬಿ ರೇಡ್ ಮಾಡಿದಾಗ ಏನೂ ಸಿಗಲಿಲ್ಲ ಅಂತ ಹೇಳಿದ್ದಾರೆ.ಅದನ್ನೂ ಕೂಡ ತನಿಖೆ ಮಾಡ್ತೇವೆ.ರೇಡ್ ಆಗುವ ಮೂರು ದಿನ ಮುಂಚೆ ಸಿಸಿಟಿವಿ ಚೆಕ್ ಮಾಡ್ತಿದ್ದೇವೆ.ಮಾಹಿತಿ ಸೋರಿಕೆ ಆಗಿತ್ತಾ ಎಂಬ ಬಗ್ಗೆಯೂ ವೆರಿಫೈ ಮಾಡ್ತಿದ್ದೇವೆ.ಈ ಕೇಸ್ ಅನ್ನು ಯಾವುದೇ ಕಾರಣಕ್ಕೂ ಲೂಸ್ ಮಾಡುವುದಿಲ್ಲ.ಯಾರ ಒತ್ತಡಕ್ಕೂ ಕೂಡ ಮಣಿಯುವುದಿಲ್ಲ.ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದೇನೆ.ನಾನು ಕೋಪ ಮಾಡಿಕೊಳ್ಳುತ್ತಿಲ್ಲ, ನಾವು ಹೇಳುವುದನ್ನು ಕೇಳಿ.ಯಾರೂ ಕೂಡ ಅನುಮಾನ ಪಡುವುದು ಬೇಕಿಲ್ಲ.ಕಾನೂನು ಪ್ರಕಾರ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ತೀವಿ.ದರ್ಶನ್ ಮೇಲೆ ಈ ವಿಚಾರಕ್ಕೆ  ಪ್ರತ್ಯೇಕ ಕೇಸ್ ಮಾಡಬೇಕಾ ನೋಡ್ತೀನಿ.ಆತಿಥ್ಯ ಸಿಗದೇ ಇರುವ ಕಡೆ ದರ್ಶನ್ ಕಳಿಸಬೇಕಾ ನೋಡೋಣ ಎಂದು ಅವರು ಹೇಳಿದ್ದಾರೆ.