ಬೆಂಗಳೂರು: ಇವತ್ತಿನ ರಾಜ್ಯಾಧ್ಯಕ್ಷ ಮಿಸ್ಟರ್ ಬಿ.ವೈ. ವಿಜಯೇಂದ್ರ ಅವರ ಧೋರಣೆ ಬೇಸರ ತಂದಿದೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯನ್ನು ನಂಬಿ ಇಲ್ಲಿ ಆಂತರಿಕ ಪ್ರಜಾಪ್ರಭುತ್ವ, ಆರ್ ಎಸ್ ಎಸ್ ಆದರ್ಶ ಇದೆ ಅಂತಾ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದೆ.ಬಿಜೆಪಿಗೆ ಮರಳು ಭೂಮಿಯಂತಿದ್ದ ಚಿಕ್ಕಬಳ್ಳಾಪುರದಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಒತ್ತೆ ಇಟ್ಟು ಬಿಜೆಪಿಗೆ ಸೇರಿದ್ದೆ.ಯಡಿಯೂರಪ್ಪನವರನ್ನು ಸಿಎಂ ಮಾಡಬೇಕು ಅಂತಾ 17 ಜನ ಬಿಜೆಪಿಗೆ ಬಂದೆವು.ಯಡಿಯೂರಪ್ಪನವರು ರಾಜೀನಾಮೆ ಕೊಟ್ಟ ಮೇಲೆ ಬೊಮ್ಮಾಯಿ ಅವರ ಜೊತೆ ಕೂಡಾ ಅಷ್ಟೇ ವಿಶ್ವಾಸದಿಂದ ಕೆಲಸ ಮಾಡಿದ್ದೇನೆ.ಅಂತಿಮವಾಗಿ ನನಗೆ ಬಿಜೆಪಿ ತತ್ವ ಸಿದ್ದಾಂತ ಅಷ್ಟೇ ಮುಖ್ಯ.ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿಕೊಂಡು ಬಂದಿದ್ದೇನೆ.ಒಂದು ಬಾರಿ ನನಗೆ ಚಿಕ್ಕಬಳ್ಳಾಪುರದಲ್ಲಿ ಆಘಾತ ಆಯಿತು.ಇವತ್ತು ಪಕ್ಷ ಕಟ್ಟುತ್ತೇವೆ ಅಂತಾ ಹೊರಟಿದ್ದವರು ಟಾರ್ಗೆಟ್ ಮಾಡಿ ಎಷ್ಟು ಸೋಲಿಸುವಂತಹ ಪ್ರಯತ್ನ ಮಾಡಿದರು.2019 ರಲ್ಲಿ ಸಾಕಷ್ಟು ಅಪಾದನೆಗಳನ್ನೂ ಎದುರಿಸಬೇಕಾಯಿತು.ಇವತ್ತು ಬಿಜೆಪಿಯಲ್ಲಿ ಸಂಘಟನಾ ಚುನಾವಣೆ ನಡೆಯುತ್ತಿದೆ.ವಂಶವಾದ ಇಲ್ಲ, ಪ್ರಜಾಪ್ರಭುತ್ವ ಇದೆ ಪಕ್ಷದಲ್ಲಿ ಅಂತಾ ನಂಬಿದ್ದೇನೆ ಎಂದರು.
ಎಷ್ಟೇ ಅಪಮಾನ ಆಗಿದ್ದರೂ ನಾವೆಲ್ಲರೂ ಒಂದೇ ಅಂತಾ ಕೆಲಸ ಮಾಡಿಕೊಂಡು ಬಂದಿದ್ದೇವೆ.2024 ರಲ್ಲಿ ಸ್ವಾಭಾವಿಕವಾಗಿ ಟಿಕೆಟ್ ನನಗೇ ಬರಬೇಕಿತ್ತು.ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ನಾನು ಮಾಡಿದ್ದೇನೆ.ಇಂದು ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಆಗಿದೆ.ಯಾವುದೇ ಚುನಾವಣೆ ಸಂವಿಧಾನ ಬದ್ಧವಾಗಿ ಆಗಬೇಕು, ಆಂತರಿಕ ಪ್ರಜಾಪ್ರಭುತ್ವ ಇರಬೇಕು. ಚಿಕ್ಕಬಳ್ಳಾಪುರದಲ್ಲಿ ಯಾವುದೇ ಚುನಾವಣೆ ಮಾಡಲಿಲ್ಲ.ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ಆಗಿದೆ.ಏಕಚಕ್ರಾಧಿಪತ್ಯ ರೀತಿ ಆಗಿದೆ.ನಿಮಗೆ ಎಸ್ ಬಾಸ್, ಜೀ ಹುಜೂರ್ ಎನ್ನುವವರು ಬೇಕು.ನಿಮಗೆ ಬೇಕಾದವರಿಗೆ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಮಾಡಿಕೊಂಡಿದ್ದಾರೆ.ಇವತ್ತಿನ ರಾಜ್ಯಾಧ್ಯಕ್ಷ ಮಿಸ್ಟರ್ ಬಿ.ವೈ. ವಿಜಯೇಂದ್ರ ಅವರ ಧೋರಣೆ ಬೇಸರ ತಂದಿದೆ.ಯಾರನ್ನೂ ವಿಶ್ವಾಸಕ್ಕೆ ತೆಗದುಕೊಳ್ಳುವ ಜಾಯಮಾನ ಇಲ್ಲ.ಇವರ ದರ್ಪ, ಇವರ ಅಹಂಕಾರ.ಅವರ ಹತ್ತಿರ ಸಾವಿರಾರು ಕೋಟಿ ಇರಬಹುದು.ಇವರ ಹಿಂಬಾಲಕರು ನನ್ನ ಸೋಲಿಸಲು ಪ್ರಯತ್ನ ಪಟ್ಟರು.ಜಿಲ್ಲಾಧ್ಯಕ್ಷರ ವಿಚಾರಕ್ಕೆ ಸೌಜನ್ಯಕ್ಕೂ ನನ್ನ ಜೊತೆ ಚರ್ಚೆ ಮಾಡಿಲ್ಲ.ಫೋನ್ ಮಾಡಿದರೂ ರೆಸ್ಪಾಂಡ್ ಮಾಡಲ್ಲ.ಎರಡು ಮೂರು ಬಾರಿ ಅಪಾಯಿಂಟ್ ಮೆಂಟ್ ಫಿಕ್ಸ್ ಮಾಡಿ ಕ್ಯಾನ್ಸಲ್.ನಡ್ಡಾ ಅವರಿಗೆ ಮೆಸೇಜ್ ಹಾಕಿದರೆ ಅಪಾಯಿಂಟ್ ಮೆಂಟ್ ಕೊಡುತ್ತಾರೆ.ನಮ್ಮನ್ನು ತುಳಿಯಲು, ಸಮಾಧಿ ಮಾಡಲು ಹೊರಟಿದ್ದೀರಾ?.ನಿಮ್ಮ ನಾಯಕತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಂದು ಸೀಟ್ ಗೆಲ್ಲಿ ನೋಡೋಣ? ಎಂದು ಸವಾಲು ಹಾಕಿದ್ದಾರೆ.
ನನ್ನ ಸಮಾಧಾನದ ದಿನ ಮುಗಿಯಿತು, ಇನ್ನೇನಿದ್ದರೂ ಯುದ್ಧ. ಸಿ.ಟಿ. ರವಿ, ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಅವರನ್ನು ಏನು ಮಾಡಿದಿರಿ. ಅಂದು ರಮೇಶ್ ನಿಮಗೆ ಬಹಳ ಚೆನ್ನಾಗಿದ್ದರು.ಬಿಜೆಪಿ ಬಹಳ ಪ್ರಬಲವಾಗಿರುವ ಕಡೆ ನೀವು ರಾಜ್ಯಾಧ್ಯಕ್ಷರಾಗಿ ತಿಣುಕಾಡಿಕೊಂಡು ಗೆದ್ದಿದ್ದೀರಿ.ಅದು ಕೂಡಾ ಅಡ್ಜೆಸ್ಟ್ ಮೆಂಟ್ ನಲ್ಲಿ.ಇನ್ನೊಬ್ಬರು ಅಭ್ಯರ್ಥಿ ಅಗಿರುತ್ತಿದ್ದರೆ ಗೊತ್ತಾಗಿರುತ್ತಿತ್ತು.ನಾನು ವರಿಷ್ಠರ ಗಮನಕ್ಕೆ ತಂದಿದ್ದೇನೆ.ಕೋರ್ ಕಮಿಟಿಯಲ್ಲಿ ಚಿಕ್ಕಬಳ್ಳಾಪುರ ಸೇರಿ 13 ಜಿಲ್ಲೆಗಳ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಸುಳ್ಳು ಹೇಳಿದ್ದೇನೆ.ನೀವು ಯಾರನ್ನು ನಂಬಿಕೊಂಡಿದ್ದೀರಿ ಅಂತಾ ಗೊತ್ತಿದೆ.ಅವರು ನಿಮಗೆ ರಿಯಲ್ ಎಸ್ಟೇಟ್ ನಲ್ಲಿ ಕಾಸು ತಂದುಕೊಡಬಹುದು, ರಾಜಕೀಯ ಮಾಡಲಾಗಲ್ಲ.ನಾನು ಇದನ್ನು ಎಲ್ಲಾ ಮೋದಿ, ಅಮಿತ್ ಷಾ, ನಡ್ಡಾ ಭೇಟಿ ಮಾಡಿ ಗಮನಕ್ಕೆ ತರುತ್ತೇನೆ.ನಿಮ್ಮ ವ್ಯವಹಾರ ಎಲ್ಲಾ ಗಮನಕ್ಕೆ ತರುತ್ತೇನೆ.ಕೇವಲ ಬಸವರಾಜ ಬೊಮ್ಮಾಯಿಯವರ ಜೊತೆ ಚೆನ್ನಾಗಿ ಕೆಲಸ ಮಾಡಿದ್ದೇವೆ ಅಂತಾ ನಮ್ಮ ಮೇಲೆ ದ್ವೇಷನಾ?ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ನವರ ಗಮನಕ್ಕೆ ಇನ್ನೂ ತಂದಿಲ್ಲ.ಅವರೇನು ಪಾಪ ಏನು ಮಾಡುತ್ತಾರೆ.ಅವರೇನೂ ಮಗನ ಸರಿ ಮಾಡುತ್ತಾರಾ ಇಲ್ಲ.ಇವರು ಅವರಿಗಿಂತ ಮೇಲೆ ಹೋಗಿದ್ದಾರೆ.ನಾನಂತೂ ಬಹಳ ಮನ ನೊಂದಿದ್ದೇನೆ.ನಮ್ಮ ರಾಜಕೀಯ ಭವಿಷ್ಯವನ್ನೇ ಮುಗಿಸಲು ಹೊರಟಿದ್ದಾರೆ.ಅಂತಿಮವಾಗಿ ನನ್ನ ರಾಜಕೀಯ ನಡೆ ಹೇಳುತ್ತೇನೆ.ನನಗೆ ಪದವಿ ಮುಖ್ಯ ಅಲ್ಲ, ಸ್ವಾಭಿಮಾನ ಮುಖ್ಯ.ಒಂದೇ ವರ್ಷದಲ್ಲೇ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದೆ.ವರಿಷ್ಠರ ಭೇಟಿ ಮಾಡಿದ ಬಳಿಕ ನನ್ನ ಬೆಂಬಲಿಗರ ಸಭೆ ಮಾಡಿ ಅಭಿಪ್ರಾಯ ಪಡೆಯುತ್ತೇನೆ ಎಂದರು.
ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು, ಹೀಗೆಯೇ ಅಗುತ್ತದೆ ಅಂತಾ ಹೇಳಲಾಗುತ್ತಾ?.ವರಿಷ್ಠರ ಭೇಟಿ ಮಾಡಿ ಚರ್ಚೆ ಮಾಡಿದ ಬಳಿಕ ಮುಂದಿನ ತೀರ್ಮಾನ. ಬಣಗಳಿಗೆ ನನಗೆ ಅನೇಕ ಬಾರಿ ಆಹ್ವಾನ ಇತ್ತು, ನಾನು ಹೋಗಿಲ್ಲ.ಹಾಗಂತ ಅವರು ಹೇಳುತ್ತಿರುವುದು ಸರಿಯಲ್ಲ ಅಂತಾ ಹೇಳಲ್ಲ.ನಮ್ಮ ಡೀಸೆನ್ಸಿಯನ್ನು ಅವರು ವೀಕ್ ನೆಸ್ ಅಂತಾ ತಿಳಿದುಕೊಂಡರು.ನಮ್ಮ ಶಕ್ತಿಯನ್ನು ಮುಂದೆ ತೋರಿಸುತ್ತೇವೆ.ಎಲ್ಲಾ ನಾಯಕರ ಹತ್ತಿರ ಕೂಡಾ ಮಾತಾಡಿದ್ದೇನೆ.ಕೆಲವರ ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂತಾರೆ, ಆ ಕೆಟಗರಿಯವರು ಇವರು ಅನ್ನಿಸುತ್ತದೆ.ಸಮಯ ಕೊಡದ ಇವರಿಂದ ಪಕ್ಷದ ಸಂಘಟನೆ ಸಾಧ್ಯ ಏನ್ರೀ? ಎಂದು ಪ್ರಶ್ನಿಸಿದ್ದಾರೆ.
ನಾನು ಯಾವುದೇ ಸ್ಥಾನಮಾನಕ್ಕೆ ಲಾಬಿ ಮಾಡಿಲ್ಲ.ಪಕ್ಷ ಯಾರನ್ನು ನೇಮಕ ಮಾಡುತ್ತದೋ ಅದನ್ನು ಒಪ್ಪಿಕೊಳ್ಳುತ್ತೇನೆ.ನೀವು ಈಗ ಅಡ್ಡದಾರಿಯಲ್ಲಿ ರಾಜ್ಯಾಧ್ಯಕ್ಷರಾಗಬೇಕು ಈಗ.ರಾಷ್ಟ್ರೀಯ ನಾಯಕರು ಏನು ಹೇಳಿದ್ದಾರೋ ಅದನ್ನು ಮಾಡುತ್ತೇವೆ.ಆದರೆ ಅಂತರಿಕ ಪ್ರಜಾಪ್ರಭುತ್ವವನ್ನೇ ನೀವು ಕೊಲೆ ಮಾಡಿದರೆ?.ಇಡೀ ಪಕ್ಷದ ಚುನಾವಣಾ ವ್ಯವಸ್ಥೆಯನ್ನೇ ದುರ್ಬಲಗೊಳಿಸಲಾಗಿದೆ.ರಾಜ್ಯಾಧ್ಯಕ್ಷ ಚುನಾವಣಾ ಪ್ರಕ್ರಿಯೆಯನ್ನೇ ಮ್ಯಾನುಪುಪೇಟ್ ಮಾಡಲಾಗಿದೆ.ನನ್ನ ಜಿಲ್ಲೆಯಲ್ಲೇ ನೀವು ಸಮಾಧಿ ಕಟ್ಟಲು ಹೋದರೆ ನೋಡಿಕೊಂಡು ಕಟ್ಟಿಸಿಕೊಳ್ಳಬೇಕಾ?.ನಿಮಗೆ ಒಳ್ಳೆಯದು ಮಾಡಿದವರಿಗೇ ನೀವು ಸಮಾಧಿ ಕಟ್ಟುವುದಾದರೆ ಇನ್ನು ಬೇರೆಯವರಿಗೆ ಏನು ಮಾಡುತ್ತೀರಿ? ಎಂದಿದ್ದಾರೆ.