ಮನೆ Latest News ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರವನ್ನು ಡಿಕೆಶಿ ಒಪ್ಪಿಸಲಿ; ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಹೇಳಿಕೆ

ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರವನ್ನು ಡಿಕೆಶಿ ಒಪ್ಪಿಸಲಿ; ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಹೇಳಿಕೆ

0

ಬೆಂಗಳೂರು; ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರವನ್ನು ಡಿಕೆಶಿ ಒಪ್ಪಿಸಲಿ ಎಂದು ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಹೇಳಿದ್ದಾರೆ.

ಮೇಕೆದಾಟು ಯೋಜನೆಗೆ ಅವಕಾಶ ಇಲ್ಲ ಎಂಬ ತಮಿಳುನಾಡು ಮಂತ್ರಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಕೆಶಿ ವಿಮಾನ ಹತ್ತಿ ತಮಿಳುನಾಡಿಗೆ ಹೋಗಿದ್ದು ನೋಡಿದ್ರೆ ಎಲ್ಲೋ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿಬಿಡ್ತಾರೆ ಅನ್ಕೊಂಡಿದ್ವಿ.ಇವರ ಸ್ನೇಹ ಇರೋದು ಕೇವಲ ಬಿಜೆಪಿ ವಿರೋಧಿಸಲು ಅಂತ ಆಯ್ತಲ್ಲ.ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಒಪ್ಪಿಸಲಿ ಎಂದಿದ್ದಾರೆ.

ಸಂವಿಧಾನ ಬದಲಾವಣೆ ಹೇಳಿಕೆ ತಿರುಚಲಾಗಿದೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ಕೊಟ್ಟ ಸಿ ಟಿ ರವಿ ಸತ್ಯ ಯಾವುದು ಸುಳ್ಳು ಯಾವುದು ಅಂತ ಇನ್ನೊಮ್ಮೆ ಡಿಕೆಶಿ ತಮ್ಮ ಸಂದರ್ಶನ ನೋಡಲಿ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?.ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಶಾಬಾನೋ ಪ್ರಕರಣದಲ್ಲೂ ಕಾಂಗ್ರೆಸ್ ನಡೆದುಕೊಂಡಿದೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಗೆ ಅವಕಾಶ ಇಲ್ಲ. ಇದು ಕಾನೂನಿನಲ್ಲಿ ಎಕ್ಸ್‌ಪರ್ಟ್ ಆಗಿರುವ ಸಿದ್ದರಾಮಯ್ಯಗೆ ಗೊತ್ತಿಲ್ವಾ? ಗೊತ್ತಿದೆ, ಆದರೂ ಸುಮ್ನಿದ್ದಾರೆ ಅಂದ್ರೆ ಇದು ಓಲೈಕೆ ರಾಜಕಾರಣ ಅಲ್ಲದೇ ಇನ್ನೇನು. ಡಿಕೆಶಿ ಅವ್ರು ತಮ್ಮ ಮನಸ್ಥಿತಿ ಏನಿದೆಯೋ ಅದರಂತೆ ಸಂದರ್ಶನದಲ್ಲಿ ಮಾತಾಡಿದ್ದಾರೆ.ಸಂವಿಧಾನ ಬದಲಾವಣೆ ಹೇಳಿಕೆಗೆ ಜನಾಕ್ರೋಶ ಹೆಚ್ಚಾಯಿತು ಅಂತ ಡಿಕೆಶಿ ಈಗ ಉಲ್ಟಾ ಹೊಡೀತಿದ್ದಾರೆ.ಅವರ ಹೇಳಿಕೆ ಬಗ್ಗೆ ಡೌಟ್ ಇದ್ರೆ ಈಗಲೂ ಯೂಟ್ಯೂಬ್ ನಲ್ಲಿ ಅವರ ಹೇಳಿಕೆ ಇದೆ, ಹೋಗಿ ಡಿಕೆಶಿ ನೋಡಲಿ ಎಂದು ಸಿ ಟಿ ರವಿ ಹೇಳಿದ್ದಾರೆ.

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವಿಚಾರ: ನಾವು ಕೋರ್ಟ್ ಮೊರೆ ಹೋಗಿದ್ದೇವೆ, ನ್ಯಾಯ ಸಿಗುವ ವಿಶ್ವಾಸ ಇದೆ ಎಂದ ಡಿ ಕೆ ಶಿವಕುಮಾರ್

ಬೆಂಗಳೂರು; ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ಒಡ್ಡಿರೋದರ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ನಾವು ಕೋರ್ಟ್ ಮೊರೆ ಹೋಗಿದ್ದೇವೆ, ನ್ಯಾಯ ಸಿಗುವ ವಿಶ್ವಾಸ ಇದೆ ಎಂದಿದ್ದಾರೆ.

ನಮ್ಮ ನೀರು ನಮ್ಮ ಹಕ್ಕು. ಅದು ಅವರದ್ದು ರಾಜಕೀಯ ನಿರ್ಧಾರ. ನಾವು ಕೋರ್ಟ್ ಮೊರೆ ಹೋಗಿದ್ದೇವೆ, ನ್ಯಾಯ ಸಿಗುವ ವಿಶ್ವಾಸ ಇದೆ. ನಮ್ಮ ವಾದ ನಾವು ಮಾಡ್ತೇವೆ, ಅವರ ವಾದ ಅವರು ಮಾಡಲಿ. ನಾವು ಯೋಜನೆಯ ಡಿಪಿಆರ್ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಮೇಕೆದಾಟು ಯೋಜನೆಗೆ ಏನೆಲ್ಲ ಮಾಡಬೇಕೋ ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೂ ಗೊತ್ತಿದೆ, ಪ್ರಕರಣ ಕೋರ್ಟ್ ನಲ್ಲಿದೆ. ಕಾನೂನು ಪ್ರಕಾರ ಏನು ಹೋರಾಟ ಮಾಡಬೇಕೋ ಮಾಡ್ತೀವಿ ಎಂದಿದ್ದಾರೆ.

ಸ್ಟಾಲಿನ್ ಅವರಿಗೆ ಅವರದ್ದೇ ಆದ ರಾಜಕೀಯ ನಿಲುವು ಇರುತ್ತಲ್ಲ. ದೇವೇಗೌಡ್ರು, ಕುಮಾರಸ್ವಾಮಿ ಹೇಳಿದ್ರು, ನಾವು ಕೈಹಿಡಿದು ಬರೆಸಿಕೊಳ್ತೇವೆ ಅಂದಿದ್ರು. ಯಾಕೆ ಬರೆಸಿಕೊಳ್ಳಲು ಆಗುತ್ತಿಲ್ಲ? ಅದನ್ನು ಯಾರೂ ಕೇಳ್ತಿಲ್ಲವಲ್ಲ?. ಹಾಗೆಯೇ ರಾಜಕೀಯದಲ್ಲಿ ಬೇಕಾದಷ್ಟು ಒತ್ತಡ ಇರುತ್ತೆ.ಮೇಕೆದಾಟು ಯೋಜನೆ ನಮಗಿಂತ ತಮಿಳುನಾಡಿಗೇ ಅನುಕೂಲ ಹೆಚ್ಚು.ಸಮುದ್ರ ಸೇರುವ ವ್ಯರ್ಥ ನೀರು ಬಳಸಿಕೊಳ್ಳಲು ಈ ಯೋಜನೆ ಮಾಡಲಾಗ್ತಿದೆ. ದಯವಿಟ್ಟು ತಮಿಳುನಾಡು ಸರ್ಕಾರ ಸಹಕಾರ ಕೊಡಲಿ.ಆಂಧ್ರದ ಸಿಎಂಗೂ ಸಮಯ ಕೇಳಿದ್ದೀನಿ, ಅವರು ಹೇಳಿದ ಕೂಡಲೇ ಹೋಗಿ ಮಾತಾಡ್ತೇನೆ ಎಂದಿದ್ದಾರೆ.

ಇಂದು ಗೃಹ ಸಚಿವರಿಗೆ ರಾಜಣ್ಣ ದೂರು ಕೊಟ್ಟ ಬಗ್ಗೆ ಮಾತನಾಡಿದ ಅವರು ಗೃಹ ಸಚಿವರು ನಮ್ಮ ಪಕ್ಷದ ಹಿರಿಯ ಸಚಿವರು. ಅವರು ಸದನದಲ್ಲಿ ತನಿಖೆ ಮಾಡ್ತೇವೆ ಅಂದಿದ್ದಾರೆ. ರಾಜಣ್ಣ ಅವರಿಗೆ ನ್ಯಾಯ ಒದಗಿಸಿ ಕೊಡೋದಾಗಲೀ, ಪಕ್ಷಕ್ಕೆ ನ್ಯಾಯ ಕೊಡಿಸೋದಾಗಲೀ, ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ಕೊಡಿಸೋ‌ ಕೆಲಸ ಪರಮೇಶ್ವರ್ ಮಾಡ್ತಾರೆ ಎಂದ್ರು.

ಸಂವಿಧಾನ ಬಗ್ಗೆ ವಿವಾದಾತ್ಮಕ ಹೇಳಿಕೆ, ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಂವಿಧಾನ ಬದಲಾವಣೆ ಮಾಡಬೇಕು ಅಂತ ಹೇಳಲು ನನಗೇನು ತಲೆ ಕೆಟ್ಟಿದೆಯಾ?. ನಾನು ಹಾಗೆ ಹೇಳಿದೀನಿ ಅಂತ ಹೇಳ್ತಿರೋ ಅವರಿಗೆ ತಲೆ ಕೆಟ್ಟಿದೆ. ಸಂವಿಧಾನ ಬದಲಾವಣೆ ಮಾಡ್ತೇವೆ ಅಂತ ನಾನು ಹೇಳಿದ್ದು ಸಾಬೀತು ಮಾಡಿದರೆ ಈಗಲೇ ರಾಜಕೀಯ ನಿವೃತ್ತಿ ತಗೋತೇನೆ. ನಾನು ಆ ಸಂದರ್ಶನದಲ್ಲಿ ಸತ್ಯ ಮಾತಾಡಿದೀನಿ, ಅದು ಅವರಿಗೆ ಸಹಿಸಲು ಆಗಲ್ಲ. ಸಂವಿಧಾನ ಬದಲಾವಣೆ ಬಗ್ಗೆ ಅವರ ನಾಯಕರೇ ಮಾತಾಡಿದ್ದಾರೆ ಎಂದಿದ್ದಾರೆ.