ಮನೆ Latest News ಡಿ ಕೆ ಶಿವಕುಮಾರ್ ಹಿಂದುತ್ವ ವಿಚಾರ ಹೊಸದೇನಲ್ಲ : ಸತೀಶ್ ಜಾರಕಿಹೊಳಿ‌ ಹೇಳಿಕೆ

ಡಿ ಕೆ ಶಿವಕುಮಾರ್ ಹಿಂದುತ್ವ ವಿಚಾರ ಹೊಸದೇನಲ್ಲ : ಸತೀಶ್ ಜಾರಕಿಹೊಳಿ‌ ಹೇಳಿಕೆ

0

ಬೆಂಗಳೂರು; ಡಿ ಕೆ ಶಿವಕುಮಾರ್ ಹಿಂದುತ್ವ ವಿಚಾರ ಹೊಸದೇನಲ್ಲ ಎಂದು ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಕೆಶಿ ಹಿಂದುತ್ವ ಜಪ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಡಿಕೆಶಿ ಹಿಂದುತ್ವ ವಿಚಾರ ಹೊಸದೇನಲ್ಲ. ಮೊದಲಿನಿಂದಲೂ ಅವರು ಅದೇ ಹೇಳುತ್ತಿರುವುದು. ಈ ವಿಚಾರ ಹೊಸದೇನಿಲ್ಲ ಎಂದಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ನವೀಕರಣ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ಮೊದಲೇ ಮಾಡಿರುವ ಕೆಲಸ ಅದು. ಇದರಲ್ಲಿ ಹೊಸದ್ದು ಏನು ಇಲ್ಲ.ಈ ವಿಚಾರದ ಬಗ್ಗೆ ನನ್ನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ.

ರಾಜ್ಯದಲ್ಲಿ ಬಂದ್ ಗೆ  ಕರೆ ನೀಡಿರುವ ವಿಚಾರದ ಬಗ್ಗೆ ಮಾತನಾಡಿರುವ ಅವರು ಸಿಎಂ ಅವರು ಮಾತುಕತೆ ಮಾಡುತ್ತಿದ್ದಾರೆ. ಶಾಂತಿಯುತ ಪರಿಹಾರ ಮಾಡುತ್ತಿದ್ದಾರೆ. ಬೆಂಗಳೂರು ಮಟ್ಟದಲ್ಲಿ ಕೂಡ ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಿ ಹೋಗಲಿದೆ. ನಮ್ಮ ಮೇಲೆ ಆರೋಪ‌ ಮಾಡಬಹುದು. ಪೊಲೀಸ್ ಅಧಿಕಾರಿ ಮಾಡಿದ ತಪ್ಪು. ನಮ್ಮ ಜವಾಬ್ದಾರಿ ಅಲ್ಲ ಅದು ಪೊಲೀಸ್ ಜವಾಬ್ದಾರಿ. ನಾವು ಮಾಡಿದ ತಪ್ಪಿಲ್ಲ. ಕಂಡಕ್ಟರ್ ಮೇಲೆ ಹಾಕಿದ ಕೇಸ್ ಗೆ ಇಷ್ಟು ದೊಡ್ಡದಾಗಿದೆ. ಈಗಾಗಲೇ ಪೊಲೀಸ್ ಅಧಿಕಾರಿ ವರ್ಗಾವಣೆ ಆಗಿದೆ. ಪೊಲೀಸ್ ನಮ್ಮ ಅಡಿಯಲ್ಲಿ ಕೆಲಸ ಮಾಡಬೇಕು ಅಂದಿಲ್ಲ. ಅಡಿಷನಲ್ ಕೇಸ್ ಹಾಕಿದ್ದು ತಪ್ಪು. ಮೇಲಿನ ಅಧಿಕಾರಿಗಳ ಮಾತು ಕೇಳಬೇಕಿತ್ತು. ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ. ಸದ್ಯ ಶಾಂತವಾಗಿದೆ, ಮತ್ತೆ ಕದಡಿಸುವುದು ಬೇಡ.ಬಂದ್ ಮಾಡಿದ್ರೆ ಬೆಳಗಾವಿ ಸಿಟಿಗೆ ತೊಂದರೆ ಆಗುತ್ತೆ ಎಂದಿದ್ದಾರೆ.

ಕ್ಷೇತ್ರ ಕಡಿಮೆಯಾಗುವ ವಿಚಾರದ ಬಗ್ಗೆ ಮಾತನಾಡಿದ ಅವರು ದಕ್ಷಿಣ ಭಾರತದಲ್ಲಿ ಕ್ಷೇತ್ರ ಕಡಿಮೆಯಾಗಲಿವೆ. ಅದರ ಬಗ್ಗೆ ಪ್ರತಿಭಟನೆ ಮಾಡಬೇಕಿದೆ. ನಮಗೆ ‌ಕ್ಷೇತ್ರಗಳು ಹೆಚ್ಚಾಗಬೇಕು, ಆದ್ರೆ ಕಡಿಮೆಯಾಗಲಿದೆ ಎಂದ ಅವರು ಪವರ್ ಶೇರಿಂಗ್ ಪ್ರೋಸೆಸ್ ಬಗ್ಗೆ ಹೈ ಕಮಾಂಡ್ ಮುಂದೆ ಡಿಕೆಶಿ ಮಾತಿನ ವಿಚಾರದ ಬಗ್ಗೆ ಮಾತನಾಡಿ ಅವರ ಬೇಡಿಕೆ ಅವರು ಇಟ್ಟಿರಬಹುದು. ಏನು‌ ಡಿಮ್ಯಾಂಡ್ ಮಾಡಿರಬಹುದು ಅನ್ನೋದು ಗೊತ್ತಿಲ್ಲ ಯಾವುದು ಪಬ್ಲಿಕ್ ಆಗಿಲ್ಲ. ಎಲ್ಲರದು ಅವರದೆ ಆದ ಡಿಮ್ಯಾಂಡ್ ಇರುತ್ತದೆ. ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತೆ. ಹೈ ಕಮಾಂಡ್ ತೀರ್ಮಾನಕ್ಕೆ ನಾವು ಒಪ್ಪಬೇಕಾಗುತ್ತೆ ಹೈ ಕಮಾಂಡ್ ತೀರ್ಮಾನ ಎಲ್ಲರೂ ಕೇಳಬೇಕಲ್ಲ ಎಂದರು.