ಬೆಂಗಳೂರು; ಖ್ಯಾತ ನಿರ್ದೇಶಕ ಮಠ ಖ್ಯಾತಿಯ ಗುರುಪ್ರಸಾದ್ ಸಾವಿಗೂ ಮುನ್ನ ಪತ್ನಿಯೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಗುರುಪ್ರಸಾದ್ ಆತ್ಮಹತ್ಯೆಯ ಸನ್ನಿವೇಶ, ಹಣದ ಸಮಸ್ಯೆ ಬಗ್ಗೆ ಮಾತಾಡಿರೋ ಆಡಿಯೋ ವೈರಲ್ ಆಗಿದ್ದು ಅದರಲ್ಲಿ ಸಾವಿಗೂ ಮುನ್ನ ಎರಡನೇ ಪತ್ನಿ ಸುಮಿತ್ರಾ ಮಧ್ಯೆ ವಾಗ್ವಾದ ನಡೆದಿದೆ. ನಿನಗೆ ಮಗುಗೆ ಏನಾದ್ರು ಮಾಡಿಟ್ಟು ಸಾಯ್ತಿನಿ ಅಂತ ಆಡಿಯೋದಲ್ಲಿ ಗುರುಪ್ರಸಾದ್ ಹೇಳಿದ್ದಾರೆ. ಗುರುಪ್ರಸಾದ್ ಸಾವಿನ ಮಾತು ಸ್ವತಃ ತಾವೇ ರೆಕಾರ್ಡ್ ಮಾಡಿ ತಮ್ಮ ಆಪ್ತರಿಗೆ ಕಳಿಸಿದ್ರಂತೆ.
ಇನ್ನು ಗುರು ಪ್ರಸಾದ್ ಕೊನೆಯ ಸಿನಿಮಾಗೆ ಎರಡನೇ ಪತ್ನಿಯಿಂದಲೇ ಸಂಕಷ್ಟ..! ಎದುರಾಗಿತ್ತು ಎನ್ನಲಾಗಿತ್ತು. ಗುರು ಪ್ರಸಾದ್ ಪತ್ನಿ ನಡೆಗೆ ನಿರ್ಮಾಪಕರು ಆಕ್ರೋಶ ಹೊರಹಾಕಿದ್ದಾರೆ. ಗುರು ಕೊನೆಯುಸಿರೆಳೆದ್ರೂ ಅವರ ಕೊನೆಯ ಸಿನಿಮಾ ಮೂಲಕ ಗೌರವ ಸಲ್ಲಿಸೋಕೆ ಆಗಿಲ್ಲ .ಅಂದುಕೊಂಡಂತಾಗಿದ್ರೆ ಅದ್ದೂರಿಯಾಗಿ ಕೊನೆಯ ಸಿನಿಮಾ ಗುರುಪ್ರಸಾದ್ ಗೆ ಗೌರವ ಕೊಡುವಂತೆ ರಿಲೀಸ್ ಮಾಡಬೇಕಿತ್ತು. ಆದ್ರೆ ಗುರುಪ್ರಸಾದ್ ಪತ್ನಿ ಹಾಗೆ ನಿರ್ಮಾಪಕರ ನಡುವಿನ ಜಟಾಪಟಿಯಿಂದ ಈಗ ತಡೆಯಾಜ್ಞೆ ಬಂದಿದೆ. ಪತ್ನಿ ಸುಮಿತ್ರ ಸಿನಿಮಾದ ನಿರ್ಮಾಪಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ರಂತೆ.. ಎದ್ದೇಳು ಮಂಜುನಾಥ -2 ಗುರು ಪ್ರಸಾದ್ ನಟಿಸಿ ನಿರ್ದೇಶಿಸಿರೋ ಸಿನಿಮಾ. ಸಿನಿಮಾದ ಹಕ್ಕನ್ನ ಮೊದಲು ಮೈಸೂರ್ ರಮೇಶ್ ಅವರಿಗೆ ಬರೆದು ಕೊಟ್ಟಿದ್ರು. ನಂತರ ಸುಮಿತ್ರಾ ಅವರು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ. ಆದರೆ ಇಂದು ನಿರ್ಮಾಪಕರಾದ ರವಿದೀಕ್ಷಿತ್ , ಮೈಸೂರ್ ರಮೇಶ್ ಕೂಡ ಕೋರ್ಟ್ ಮೆಟ್ಟಿಲೇರಿ ನಾಳೆ ರಿಲೀಸ್ ಮಾಡೋ ಪ್ರಯತ್ನದಲ್ಲಿದ್ದಾರೆ. ನಿರ್ಮಾಪಕರಿಗೆ ಸಿಟಿ ಸಿವಿಲ್ ಕೋರ್ಟ್ ಶಾಕ್ ನೀಡಿದೆ ಎನ್ನಲಾಗಿದೆ.