ಬೆಂಗಳೂರು; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಬೆಲೆ ಏರಿಕೆ ಆಗಿಯೇ ಇಲ್ವಾ?. ಬೆಲೆ ಏರಿಕೆ ಕೆಲವೊಮ್ಮೆ ಅಗತ್ಯ ಮತ್ತು ಅನಿವಾರ್ಯ. ಬೆಲೆ ಏರಿಸುವುದು ಕೂಡ ಒಂದು ಅಂಗ. Inflation ಇರುವುದರಿಂದ ಬೆಲೆ ಏರಿಕೆ ಸಹಜ. ಖರ್ಚು ಹೆಚ್ಚಾದಾಗ ಆದಾಯ ವೃದ್ದಿ ಮಾಡಿಕೊಳ್ಳಲು ಬೆಲೆ ಏರಿಕೆ ಒಂದು ವೃತ್ತ ಎಂದಿದ್ದಾರೆ.
ಇ.ಡಿ ಅನೇಕ ಪ್ರಕರಣ ದಾಖಲಿಸಿದೆ. ಬೇರೆ ಬೇರೆ ಬಿಜೆಪಿ ನಾಯಕರ ಕೇಸಲ್ಲಿ ಇ.ಡಿ ಆಸಕ್ತಿ ಇಲ್ಲ. ಸಿದ್ದರಾಮಯ್ಯ ಕೇಸಲ್ಲಿ ಮಾತ್ರ ಇ.ಡಿ ಯಾಕೆ ಓಡಿ ಬರುತ್ತದೆ?. ಬಿಜೆಪಿ ವಿರೋಧಿಗಳನ್ನು ಮುಗಿಸಬೇಕು ಎಂಬುದು ಷಡ್ಯಂತ್ರ. ಇ.ಡಿ ಯಿಂದ ಬ್ಲ್ಯಾಕ್ ಮೇಲ್ ಆಗುತ್ತದೆ. ಕೇವಲ ಕಾಂಗ್ರೆಸ್ ಮತ್ತು ವಿಪಕ್ಷ ಗಳ ಮೇಲೆ ಇ.ಡಿ ಓಡೋಡಿ ಬರುತ್ತವೆ. ಸಿದ್ದರಾಮಯ್ಯ ಪ್ರಕರಣ ದಲ್ಲಿ ನಾವು ಎದುರಿಸುವುದಕ್ಕೆ ಸಿದ್ದ ಇದ್ದೇವೆ ಎಂದಿದ್ದಾರೆ
ಎಲ್ಲರಿಗೂ ಒಂದೇ ರೂಲ್ ಮಾಡಿ ಹಾಗಾದ್ರೆ?. ಟಿಟಿಡಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಲಿ ಹಾಗಾದರೆ. ಹಾಗಾದರೆ ಶಬರಿಮಲೆಯನ್ನು ಕೇಂದ್ರ ಸರ್ಕಾರವೇ ಪಡೆದುಕೊಂಡುಬಿಡಲಿ. ಧಾರ್ಮಿಕ ದತ್ತಿ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರದ ಅಧಿಕಾರ ಇದೆ. ಇದಕ್ಕೂ ಕೇಂದ್ರ ಕ್ಕೂ ಏನು ಸಂಬಂಧ?. ವಕ್ಫ್ ಕಾಯ್ದೆ ಮೂಲಕ ಎಲ್ಲವನ್ನೂ ಕಂಟ್ರೋಲ್ ಗೆ ತೆಗೆದುಕೊಳ್ಳುತ್ತೇವೆ ಎಂದು ಹೊರಟಿದೆ. ಕೇಂದ್ರ ಸರ್ಕಾರದ ಸರ್ವಾಧಿಕಾರಿ ಗದಾ ಪ್ರಹಾರ ಸರಿಯಲ್ಲ. ಅಹಂಕಾರದ ನಡೆ ಒಳ್ಳೆಯದಲ್ಲ. ಮುಸ್ಲೀಂ ಸಮಾಜವನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಏಕಾಏಕಿ ನಾವು ಏನು ಬೇಕಾದ್ರೂ ಮಾಡ್ತೀವಿ ಅಂದ್ರೆ ಅದು ಒಪ್ಪತಕ್ಕದ್ದಲ್ಲ.ಕಾನೂನು ಬಾಹಿರ ಕ್ರಮಗಳನ್ನು ನಾವು ಪ್ರಶ್ನೆ ಮಾಡಬೇಕು ಎಂದಿದ್ದಾರೆ.
ಅವರಿಗೆ ಸಿಕ್ಕ ಮಾಹಿತಿ ಸಿಕ್ಕಿರೋದನ್ನ ಕಲೆ ಹಾಕಿದ್ದಾರೆ : ೪೦ ಪರ್ಸೆಂಟ್ ಕಮಿಷನ್ ಗೆ ದಾಖಲೆ ಇಲ್ಲ ಅನ್ನೋ ವಿಚಾರಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ
ಬೆಂಗಳೂರು: ೪೦ ಪರ್ಸೆಂಟ್ ಕಮಿಷನ್ ಗೆ ದಾಖಲೆ ಇಲ್ಲ ಅನ್ನೋ ವಿಚಾರಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ಸಿಕ್ಕ ಮಾಹಿತಿ ಸಿಕ್ಕಿರೋದನ್ನ ಕಲೆ ಹಾಕಿದ್ದಾರೆ ಎಂದಿದ್ದಾರೆ.
ಇನ್ನೂ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಯಾಕಂದ್ರೆ ನಾವು ಇದನ್ನೇ ಇಟ್ಟುಕೊಂಡು ಚುನಾವಣಗೆ ಹೋಗಿದ್ವಿ. ಹಾಗಾಗಿ ಉಳಿದ ತನಿಖೆಯನ್ನ ನಾಗಮೋಹನ್ ದಾಸ್ ಕಮಿಟಿ ಮಾಡಬೇಕಾಗುತ್ತದೆ ಎಂದ್ರು. ಮುಡಾ ಪ್ರಕರಣದಲ್ಲಿ ಇಡಿ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅನುಮತಿ ಕೊಟ್ಟಿದ್ರೆ ತನಿಖೆ ಮಾಡ್ತಾರೆ.ಕೋರ್ಟ್ ಅನುಮತಿ ಕೊಟ್ಟ ಮೇಲೆ ತನಿಖೆ ಮಾಡ್ಲೆ ಬೇಕು ಅಲ್ವ,ಮಾಡ್ಲಿ ಎಂದಿದ್ದಾರೆ.
ದರ ಏರಿಕೆ ವಿರೋಧಿ ಬಿಜೆಪಿ ಅಹೋರಾತ್ರಿ ಹೋರಾಟ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಬೆಲೆ ಏರಿಕೆ ಯಾಕೆ ಆಗುತ್ತೆ. ಬೆಲೆ ಏರಿಕೆಗಳು ನಮ್ಮ ಪಾಲಿಸಿಗಳ ಮೇಲೆ ಆಗುತ್ತೆ. ಕೇಂದ್ರ ಸರ್ಕಾರ ಪಾಲಿಸಿಗಳನ್ನ ಮಾಡಬೇಕಾಗ ಅದನ್ನ ಗಮನದಲ್ಲಿಟ್ಟುಕೊಳ್ಳಬೇಕು. ಇದು ಆರ್ಥಿಕ ಇನ್ಪ್ಯಾಕ್ಟ್ ಆಗುತ್ತೆ ಅಂತ ಅವ್ರು ತಿಳಿದುಕೊಳ್ಳಬೇಕು. ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜಾಸ್ತಿ ಮಾಡ್ತಾರೆ ಅಂದಾಗ, ರಾಜ್ಯ ಸರ್ಕಾರಗಳು ಅದಕ್ಕೆ ಅನುಗುಣವಾಗಿ ಅವ್ರು ರೈಸ್ ಮಾಡಿಕೊಳ್ತಾರೆ. ಇದು ಈಗಲೇ ಅಲ್ಲ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೇಂದ್ರ ಸರ್ಕಾರ ತೆರಿಗಳನ್ನ ಕಂಟ್ರೋಲ್ ಇಟ್ಟುಕೊಂಡ್ರೆ, ರಾಜ್ಯ ಸರ್ಕಾರಗಳಿಗೆ ಅನುಕೂಲ ಆಗುತ್ತೆ ಎಂದರು.
ನಾವು ೨೦ ಸಾವಿರಕ್ಕೂ ಹೆಚ್ಚು ತೆರಿಗೆಯನ್ನ ಕೇಂದ್ರ ಸರ್ಕಾರಕ್ಕೆ ಕಟ್ಟಲಾಗುತ್ತಿದೆ. ನಮಗೆ ಬರಬೇಕಾದನ್ನ ಬರ್ತಾ ಇಲ್ಲ.ಅದನ್ನ ಕೋಡದೆ ಇದ್ದಾಗ ನಾವು ಏನು ಮಾಡಬೇಕು. ನಮ್ಮ ಆದಾಯ ಮೂಲಗಳನ್ನ ಹೆಚ್ಚಳ ಮಾಡಿಕೊಳ್ಳಬೇಕು. ರಾಜ್ಯ ನಡೆಸಲು ನಮಗೆ ಆದಾಯ ಮೂಲ ಬೇಕು ಅಲ್ವ. ಅದಕ್ಕೆ ನಾವು ಅದಕ್ಕೆ ಜಾಸ್ತಿ ಮಾಡಿಕೊಂಡಿದ್ದೇವೆ. ಸ್ವಾಭಾವಿಕ ಡೀಸೆಲ್, ಪೆಟ್ರೋಲ್ ಗೆ ೨ ರೂಪಾಯಿ ಜಾಸ್ತಿ ಆಯ್ತು. ರಾಜ್ಯ ಸರ್ಕಾರ ಮಾಡಿದೆ ಅಂದ್ರೆ. ರಾಜ್ಯ ಸರ್ಕಾರ ಟ್ಯಾಕ್ಸ್ ಕಂಟ್ರೋಲ್ ಮಾಡಬಹುದು ಅಷ್ಟೇ. ಅದನ್ನ ನಾವು ಕಂಟ್ರೋಲ್ ಮಾಡಬಹುದು ಅಷ್ಟೇ. ಬೆಲೆ ಏರಿಕೆ ಜಾಸ್ತಿ ಆಗಿದೆ. ಡೀಸೆಲ್ ಬೆಲೆ ಜಾಸ್ತಿ ಅದ್ರೆ ಅದರ ಇನ್ಫ್ಯಾಕ್ಟ್ ಯಾರ ಮೇಲೆ ಆಗುತ್ತೆ. ತರಕಾರಿ ಮಾರಾಟ ಮಾಡುವವನ ಮೇಲೆ ಬರುತ್ತೆ. ಅದರಿಂದ ಕೇಂದ್ರ ಸರ್ಕಾರ ಇದನ್ನ ನಿಯಂತ್ರಣ ಇಟ್ಟುಕೊಂಡರೇ ಮಾತ್ರ. ಬೆಲೆಗಳು ನಿಯಂತ್ರಣದಲ್ಲಿ ಇರುತ್ತೆ ಎಂದು ಪರಮೇಶ್ವರ್ ಬೆಲೆ ಏರಿಕೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಡಿಸಿಎಂ ಜೊತೆ ಕೋಪ ಮಾಡಿಕೊಂಡು ಕಾರ್ಯಕ್ರಮಕ್ಕೆ ಹೋಗಿಲ್ವವೆಂಬ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದ ತರ ಏನು ಇಲ್ಲ. ನಾನು ಈಗಲೇ ಬೇಕಿದ್ದರೆ ಕೆಪಿಸಿಸಿ ಅಧ್ಯಕ್ಷರ ಮನೆಗೆ ಹೋಗ್ತೀನಿ. ಬಂದಾಗ ಬೇಕಾದ ಮನೆ ಹೋಗ್ತೀನಿ. ನಾವು ಒಳ್ಳೆಯ ಸ್ನೇಹಿತರು ಎಂದ ಪರಮೇಶ್ವರ್ ಎಂದಿದ್ದಾರೆ.
ರಾಹುಲ್ ಗಾಂಧಿ ಸಮ್ಮುಖದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲಿದೆ ಆಂತರಿಕ ಗೊಂದಲ ಅಂತ ನನಗೆ ಗೊತ್ತಿಲ್ಲ. ನೀವೆ ಸೃಷ್ಟಿ ಮಾಡಿ ಹೇಳ್ತಾ ಇದ್ದೀರಾ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ಯೋಜನೆಗಳನ್ನ ಕೋಡ್ತಾ ಇದ್ದೀವಿ. ಸಣ್ಣಪಣ್ಣ ಅಭಿಪ್ರಾಯಗಳಲ್ಲಿ ಭಿನ್ನ ಇರಬಹುದು ಅಷ್ಟೇ.ಅದಕ್ಕೆ ಏನು ಗೊಂದಲ ಅಂದ್ರೆ ಹೇಗೆ. ಈಗ ಕೆಪಿಸಿಸಿ ಅಧ್ಯಕ್ಷರು ಬದಲಾವಣೆ ಆಗಬೇಕು ಅಂತಾರೆ. ಕೆಲವರು ಅವ್ರೆ ಮುಂದುವರೆಸಿ ಅಂತಾರೆ. ಇದು ಇರೋದೆ ಅಲ್ವ. ನಾನು ಇರೋವಾಗ ಸಹ ಅದೇ ರೀತಿ ಇತ್ತು. ನಾನು ಎರಡನೇ ಸಲ ಅಧ್ಯಕ ಆಗಬೇಕಾದ ಇದೇ ರೀತಿ ಇತ್ತು. ಆಗ ಹಿರಿಯ ನಾಯಕರ ಕರೆದು ಮಾತಾಡಿದ್ರು. ಆಗ ಪರಮೇಶ್ವರ್ ಮುಂದುವರೆಸಿದ್ರು,. ಈಶ್ವರ್ ಖಂಡ್ರೆ ದೆಹಲಿಗೆ ಹೋಗಿರೋದು ಗೊತ್ತಿಲ್ಲ. ಪ್ರತಿಕ್ರಿಯೆ ನಡೆಯುತ್ತಿರೋದು ಹಾಗೆ ಇದೆ. ಏನಕ್ಕೆ ಯಾರು ಅಭಿಪ್ರಾಯ ಕೇಳಿಲ್ಲ.ಏನು ಮುಖ್ಯವಾಗಿ ಇಲ್ಲ.ನನ್ನ ಅಭಿಪ್ರಾಯ ಮುಖ್ಯ ಅಲ್ಲ.ಹೊಸ ನೀರು ಬಂದಾಗ ಹಳೆ ನೀರು ಹೋಗಬೇಕು. ನೀವು ಯಾವ ರೀತಿ ಬೇಕಾದರೂ ವಿಮರ್ಶೆ ಮಾಡಿ. ನನಗೆ ಅನ್ವಯ ಆಗುತ್ತೆ ಅಂದ್ರೆ ಅದನ್ನೆ ಮಾಡಿ ಎಂದು ಪರಮೇಶ್ವರ್ ಹೇಳಿದ್ದಾರೆ.