ಮನೆ Latest News ಸತೀಶ್ ಜಾರಕಿಹೊಳಿ ಅವರು ಒಳ್ಳೆಯ ನಾಯಕರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಎಂಬ ಹೇಳಿಕೆಗೆ...

ಸತೀಶ್ ಜಾರಕಿಹೊಳಿ ಅವರು ಒಳ್ಳೆಯ ನಾಯಕರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಎಂಬ ಹೇಳಿಕೆಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

0

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಅವರು ಒಳ್ಳೆಯ ನಾಯಕರೇ. ಇಂತಹ ವಿಷಯಗಳು ಎಲ್ಲ ಜೊತೆ ಚರ್ಚೆ ಮಾಡಿ ವರಿಷ್ಠರು ತೀರ್ಮಾನ ಮಾಡ್ತಾರೆ. ಆಕಾಂಕ್ಷೆಗಳು ಆಗುವುದರಲ್ಲಿ ತಪ್ಪಿಲ್ಲ. ಅದನ್ನ ಸರಿ ಇಲ್ಲ ಅಂತಲೂ ಹೇಳುವುದಿಲ್ಲ ಎಂದಿದ್ದಾರೆ.

ಸಚಿವರ ಬಹಿರಂಗ ಹೇಳಿಕೆಗೆ ಕೆಪಿಸಿಸಿ ಪೂರ್ಣ ವರದಿ ಕೇಳಿದ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನನಗೆ ಗೊತ್ತಿಲ್ಲ. ವರದಿ ಕೇಳಿದ್ದಾರೆ ಈಗಾಗಲೇ ಕೊಟ್ಟಿದ್ದೇನೆ. ಸುರ್ಜೇವಾಲ ಭೇಟಿಗೆ ಅವಕಾಶ ಸಿಕ್ಕಿಲ್ಲ. ಸಿಎಲ್ ಪಿನಲ್ಲಿ ಮಾತ್ರ ನೋಡಿದೆ ಅಷ್ಟೆ. ಜಾತಿ ಜನಗಣತಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಕ್ಯಾಬಿನೆಟ್ ನಲ್ಲಿ‌ ಬರುತ್ತೊ ಇಲ್ವೊ ಗೊತ್ತಿಲ್ಲ. ನೋಡೋಣ ಯಾವಾಗ ಚರ್ಚೆಗೆ ಬರುತ್ತೆ ಅಂತ. ಸಿಎಂ ಬದಲಾವಣೆ ಚರ್ಚೆ ಇಲ್ಲ.ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಹೈಕಮಾಂಡ್ ಚರ್ಚೆ ಮಾಡುತ್ತೆ .ಪಕ್ಷದ ವರಿಷ್ಠರು ಇದ್ದಾರೆ, ಅವರು ನೋಡಿಕೊಳ್ತಾರೆ ಎಂದರು.

ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಯಾವ ಹುದ್ದೆಯು ಖಾಲಿ ಇಲ್ಲ. ಪಕ್ಷದಲ್ಲಿ ಯಾವುದಾದ್ರು ಹುದ್ದೆ ಬದಲಾವಣೆ ಮಾಡಬೇಕು ಅಂದ್ರೆ ಹೈಕಮಾಂಡ್ ಇದೆ . ಏನಿದ್ರು ಹೈಕಮಾಂಡ್ ನಾಲ್ಕು ಗೋಡೆ ಮಧ್ಯೆನೆ ಆಗೋದು. ನಾನು ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಅಲ್ಲ. ಆದರೆ ಅರ್ಹತೆ ನನಗೆ ಇಲ್ಲ,‌ ಯಾವ ಹುದ್ದೆನು ಖಾಲಿ ಇಲ್ಲ . ಖಾಲಿ ಇದ್ರು ನಾನು ಕೇಳುವುದಿಲ್ಲ .ಅವರೇ ಕೊಟ್ಟರೆ ನಿಭಾಯಿಸುತ್ತೇನೆ. ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವನ್ನ ಬೆಂಗಳೂರಿನವರಿಗೆ ಕೊಟ್ಟರೆ ಒಳ್ಳೆಯದು. ನಾನೇ ಅಷ್ಟೆ ಅಲ್ಲ ಬೇರೆ ಯಾರಿಗಾದ್ರು ಕೊಡಲಿ. ಜಾತಿ ಜನಗಣತಿ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಲ ಕೂಡಿ ಬರಬೇಕು, ಇನ್ನೂ ಕಾಲ ಕುಡಿ ಬಂದಿಲ್ಲ. ಆ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ.ಹಿಂದೆ ಬಿಜೆಪಿಯವರು ವರದಿ ತೆಗೆದುಕೊಳ್ಳಲಿಲ್ಲ .ಇದೀಗ ನಾವು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಬೆಳಗಾವಿ ರಾಜಕಾರಣದಿಂದ ಸರ್ಕಾರ ಬಿದ್ದು ಹೋಗುತ್ತೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಆರ್. ಅಶೋಕ್ ಅವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ.ಅದಕ್ಕೆ ಏನೋ ಒಂದು ಹೇಳಬೇಕು ಅದಕ್ಕೆ ಹೇಳಿಕೆ ಕೊಡುತ್ತಿದ್ದಾರೆ. ಅವರ ಹೇಳಿಕೆಗೆ ಎಲ್ಲಾ ಉತ್ತರ ಕೊಡೊಕೆ ಆಗಲ್ಲ. ನಿಮ್ಮ ಪಕ್ಷದ ಮೊದಲು ಸರಿ ಮಾಡಿಕೊಳ್ಳಿ . ಬಿಜೆಪಿ ರಾಜ್ಯಾಧ್ಯಕ್ಷರನ್ನ ಬದಲಾವಣೆ ಮಾಡಿ ಅಂತಾ ಯತ್ನಾಳ್ ಹೇಳುತ್ತಿದ್ದಾರೆ. ನಿಮ್ಮದು ಮೊದಲು ತೊಳಿದುಕೊಳ್ಳಿ ಎಂದು ತಿರುಗೇಟು ಕೊಟ್ಟಿದ್ದಾರೆ.