ಮನೆ ಸಿನಿಮಾ ಗೆಳೆಯ ಹನುಮಂತನ ಟ್ರಿಕ್ ಬಳಸಿ ಮಿಡ್ ವೀಕ್ ಎಲಿಮಿನೇಷನ್ ನಿಂದ ಪಾರಾದ ಧನ್ ರಾಜ್

ಗೆಳೆಯ ಹನುಮಂತನ ಟ್ರಿಕ್ ಬಳಸಿ ಮಿಡ್ ವೀಕ್ ಎಲಿಮಿನೇಷನ್ ನಿಂದ ಪಾರಾದ ಧನ್ ರಾಜ್

0

ಬಿಗ್ ಬಾಸ್ ಮನೆಯಲ್ಲಿ ಹನುಮಂತು ಯಾಕೆ ಅಷ್ಟು ಈಸಿಯಾಗಿ ಟಾಸ್ಕ್ ಗಳನ್ನು ಮುಗಿಸುತ್ತಾರೆ. ಅವರು ಯಾಕೆ ಟಾಸ್ಕ್ ಗಳಲ್ಲಿ ಆ ರೀತಿ ಯಶಸ್ಸು ಪಡೆಯುತ್ತಾರೆ ಅನ್ನೋದನ್ನು ಕಳೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಉಳಿದ ಸ್ಪರ್ಧಿಗಳಿಗೆ ಪಿನ್ ಟು ಪಿನ್ ಎಕ್ಸ್ ಪ್ಲೈನ್ ಮಾಡಿದ್ರು. ಅಲ್ಲದೇ ಯಾವ ರೀತಿ ಅವರು ಸ್ಮಾಟ್ ಆಗಿ ಆಡುತ್ತಿದ್ದಾರೆ ಎಂದು ವಿವರಿಸಿ ತನ್ನನ್ನು ಹನುಮಂತು ಜೊತೆ ಕಂಪೇರ್ ಮಾಡಿ ಮಾತನಾಡಿದ್ದರು. ಅಲ್ಲದೇ ಎಲ್ಲರೂ ಆ ಕ್ಷಣದಲ್ಲಿ ಜೀವಿಸಿದರೆ ಬದುಕು ಸುಲಭ ಎಂದಿದ್ದರು. ಹನುಮಂತು ಕೂಡ ಅದೇ ರೀತಿ ಬದುಕುತ್ತಿದ್ದಾರೆ. ಈ ರೀತಿಯಾಗಿ ಬದುಕುವವರು ತುಂಬಾ ಕಮ್ಮಿ ಜನ ಎಂದು ವಿವರಿಸಿದ್ದರು.

ಈ ಮಾತನ್ನು ಅನೇಕ ಬಾರಿ ಧನ್ ರಾಜ್ ಆಚಾರ್ ಅವರಿಗೂ ಹನುಮಂತು ಹೇಳಿದ್ದರು. ದೋಸ್ತಾ ಎಲ್ಲರೂ ಕಪ್ ಗೆಲ್ಲಲಿ ನಾವು ಮಾತ್ರ ಟಾಸ್ಕ್ ಗೆಲ್ಲೋಣ ಅಂತಾ . ಅಂದ್ರೆ ನಾವು ಈಗಿನದ್ದು ಏನಿದಿಯೋ ಅದನ್ನು ನೋಡಿ ಕೊಳ್ಳೋಣ ಬಾಕಿಯದ್ದು ಮುಂದಕ್ಕೆ ನೋಡೋಣ ಅಂತಾ. ದೋಸ್ತಾ ನಾವು ಟಾಸ್ಕ್ ಗೆಲ್ಲೋಣ ಅವರೆಲ್ಲಾ ಕಪ್ ಗೆಲ್ಲಲಿ ಎಂದಿದ್ದರು.ಅದರ ಅರ್ಥ ನಾವು ಈ ಟಾಸ್ಕ್ ನ್ನು ಗೆದ್ರೆ ಕಪ್ ಅನ್ನು ಕೂಡ ಈಸಿಯಾಗಿ ಗೆಲ್ಲಬಹುದು ಅಂತಾ. ಗೆಳೆಯ  ಹೇಳಿಕೊಟ್ಟ ಈ ಗೇಮ್ ಪ್ಲ್ಯಾನ್ ಅನ್ನು ಧನ್ ರಾಜ್ ಅವರು ನಿನ್ನೆಯ ಟಾಸ್ಕ್ ನಲ್ಲಿ ಅನುಸರಿಸಿದ್ರು. ಯಾವುದೇ ಟೆನ್ಶನ್ ಇಲ್ಲದೇ ಹನುಮಂತು ಅವರು ಟಾಸ್ಕ್ ಅನ್ನು ಹೇಗೆ ಆಡುತ್ತಾರೋ ಅದೇ ರೀತಿ ಧನ್ ರಾಜ್ ಅವರು ಕೂಡ ನಿನ್ನೆ ಆಡಿದ್ರು. ಪರಿಣಾಮ ಉಳಿದ ಸ್ಪರ್ಧಿಗಳು ಊಹೆ ಮಾಡದೇ ರೀತಿ ಟಾಸ್ಕ್ ಗಳಲ್ಲಿ ಪರ್ಫಾಮೆನ್ಸ್ ತೋರಿಸಿದ ಮಿಡ್ ವೀಕ್ ಎಲಿಮಿನೇಷನ್ ನಿಂದ ಧನ್ ರಾಜ್ ಪಾರಾಗ್ತಾರೆ. ಅಲ್ಲದೇ ಎಲ್ಲಾ ಮುಗಿದ ಬಳಿಕ ಹನುಮಂತು ಬಳಿ ಬಂದು ಧನ್ ರಾಜ್ ಹೇಳುತ್ತಾರೆ ದೋಸ್ತಾ ನನಗೆ ನೀನೇ ಇನ್ಸಿಫಿರೇಶನ್ ನೀನು ಮಾಡೋ ಹಾಗೇ ನಾನು ಯಾವುದೇ ಟೆನ್ಶನ್ ಮಾಡದೇ ಆಟವನ್ನು ಕೂಲಾಗಿ ಆಡಿದೆ ಹಾಗಾಗಿ ನನಗೆ ಈಸಿಯಾಗಿ ಗೆಲ್ಲಲ್ಲು ಸಾಧ್ಯವಾಯ್ತು ಎಂದು ಧನ್ ರಾಜ್ ಹೇಳಿದ್ದಾರೆ. ಅದಕ್ಕೆ ಉತ್ತರಿಸಿದ ಹನುಮಂತು ಗೆಳೆಯ ಗೆಲುವನ್ನು ಸಂಭ್ರಮಿಸಿ ದೋಸ್ತಾ ನಿನ್ನ ಆಟ ನೀ ಆಡಿದ್ದಿ. ನನ್ನ ಆಟ ನಾನು ಆಡಿದೆ ಎಂದಿದ್ದಾರೆ. ಕೊನೆಗೆ ಮಿಡ್ ವೀಕ್ ಎಲಿಮಿನೇಷನ್ ನಿಂದ ಪಾರಾದ ಧನ್ ರಾಜ್ ಇವತ್ತು ನಾನು ಆರಾಮಾಗಿ ನಿದ್ದೆ ಮಾಡ್ಬೋದು ಎಂದಿದ್ದಾರೆ.

ಇಲ್ಲಿ ಧನ್ ರಾಜ್ ಒಂದು ಉದಾಹರಣೆಯಷ್ಟೇ ಹನುಮಂತು ಅವರು ಬದುಕುತ್ತಿರುವ ರೀತಿ ಕೇವಲ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮಾತ್ರವಲ್ಲ ನಮ್ಮಗೆಲ್ಲರಿಗೂ ಪಾಠ. ನಾವೆಲ್ಲ ಬದುಕಿನಲ್ಲಿ ಮುಂದೆ ಬರಬಹುದಾದ ಸವಾಲುಗಳನ್ನು ನೆನೆದು ಇಂದಿನ ಚಿಕ್ಕ ಸವಾಲನ್ನು ಗೆಲ್ಲಲು ಸೋಲುತ್ತೇವೆ. ಆ ಕ್ಷಣದ ಖುಷಿಯನ್ನು ಕಳೆದುಕೊಳ್ಳುತ್ತೇವೆ. ಟೆನ್ಶನ್ ಮಾಡ್ಕೊಂಡು ಸಮಸ್ಯೆಯನ್ನು ಈಸಿಯಾಗಿ ಬಗೆಹರಿಸುವ ಆಪ್ಶನ್ ಇದ್ರೂ ಅದನ್ನ ಮರೆತು ಬಿಡ್ತೀವಿ. ಆದರೆ ಹನುಮಂತು ರೀತಿ ಎಲ್ಲ ಪರಿಸ್ಥಿತಿಯಲ್ಲೂ ಆರಾಮವಾಗಿದ್ದು ಸೈಲೆಂಟ್ ಆಗಿ ಒಂದೆರಡು ನಿಮಿಷ ಕೂತು ಆಲೋಚನೆ ಮಾಡಿದ್ರೆ ಖಂಡಿತಾ ಎಷ್ಟೇ ಕಷ್ಟದ ಸಿಚುವೇಷನ್ ಇದ್ರೂ ಅದರಿಂದ ಹೊರ ಬರಬಹುದು.ಕಿಚ್ಚ ಸುದೀಪ್ ಅವರು ಕೂಡ ವೀಕೆಂಡ್ ಎಪಿಸೋಡ್ ನಲ್ಲಿ ಇದೇ ಮಾತನ್ನು ಹೇಳಿದ್ದು. ಅಲ್ಲದೇ ಹನುಮಂತು ಅವರನ್ನು ಸ್ಮಾರ್ಟ್ ಹನುಮಂತು ಅಂತಾ ಕರೆದಿದ್ದು. ಜಸ್ಟ್ ಲುಂಗಿ, ಅಂಗಿಯಲ್ಲೇ ಸಿಂಪಲ್ಲಾಗಿ ಇದ್ಕೊಂಡು ಇಡೀ ಮನೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಹೊರಗಿನ ತೋರ್ಪಡಿಕೆಗಿಂತ ನಮ್ಮ ಬುದ್ಧಿವಂತಿಕೆ, ಗುಣ ಎಷ್ಟು ಮುಖ್ಯ ಅನ್ನೋದನ್ನು ತೋರಿಸಿದ್ದಾರೆ. ಹನುಮಂತು ಅವರ ರೀತಿ ಬದುಕಿದ್ರೆ ನಮ್ಮ ಜೀವ್ನ ಕೂಡ ಖುಷಿಯಾಗಿರೋದ್ರಲ್ಲಿ ನೋ ಡೌಟ್.