ಮನೆ Latest News ಪ್ರವರ್ಗ 2 ಬಿ ಗೆ 1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಆಗ್ರಹ, ಸಿಎಂ ಕಚೇರಿಯಿಂದ ...

ಪ್ರವರ್ಗ 2 ಬಿ ಗೆ 1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಆಗ್ರಹ, ಸಿಎಂ ಕಚೇರಿಯಿಂದ ಸ್ಪಷ್ಟನೆ: ಇದೆಲ್ಲಾ ಬರೀ ಡ್ರಾಮಾ ಎಂದ ಬಿಜೆಪಿ ನಾಯಕರು

0

ಬೆಂಗಳೂರು; ಪ್ರವರ್ಗ 2ಬಿ ಗೆ 1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಮುಸ್ಲಿಂ ಸಚಿವರು ಮತ್ತು ಶಾಸಕರು ಪತ್ರ ಬರೆದಿದ್ದಾರೆ. ಮುಸ್ಲಿಂ ಸಮುದಾಯ ಸಚಿವರು, ಶಾಸಕರ ನಿಯೋಗದಿಂದ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದೆ. ಸಚಿವ ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಇನ್ನು ಪತ್ರಕ್ಕೆ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ತನ್ವೀರ್ ಸೇಠ್, ಅಬ್ದುಲ್ ಜಬ್ಬಾರ್, ಎನ್ ಎ ಹ್ಯಾರಿಸ್, ರಿಜ್ವಾನ್ ಅರ್ಷದ್, ಆಸೀಫ್ ಸೇಠ್, ಖನೀಜಾ ಫಾತಿಮಾ, ಇಕ್ಬಾಲ್ ಹುಸೇನ್, ಬಲ್ಕಿಸ್ ಬಾನು ಸಹಿ ಹಾಕಿದ್ದಾರೆ. ಕಾಮಗಾರಿಯಲ್ಲಿ 4% ಮುಸ್ಲಿಂಮರಿಗೆ ಮೀಸಲಾತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ನಿಯೋಗ ಮನವಿ ಮಾಡಿದೆ. ಮುಸ್ಲಿಂ ಶಾಸಕರ ಮನವಿ ಮೇರೆಗೆ ಆರ್ಥಿಕ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ  ನೀಡಿದ್ದಾರೆ. ಕಡತ ಮಂಡಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಇದರ ಮಧ್ಯೆ  ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಸ್ಪಷ್ಟನೆ ಹೊರ ಬಿದ್ದಿದೆ. ಮಸ್ಲೀಮರಿಗೆ ಮೀಸಲಾತಿ ನೀಡಬೇಕೆಂದು ಬೇಡಿಕೆ ಇದೆ. ಆದರೆ ಸರ್ಕಾರದ ಮುಂದೆ ಪ್ರಸ್ತಾವನೆ ಇಲ್ಲ ಎಂದು ಮತ್ತೊಂದು ಸುಳ್ಳಿಗೆ ಸ್ಪಷ್ಟನೆ  ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ.

ಇನ್ನು ಅಲ್ಪಸಂಖ್ಯಾತ ಮೀಸಲಾತಿಗೆ ಮುಸ್ಲಿಂ ಶಾಸಕರಿಂದ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ ಕೆ ಶಿವಕುಮಾರ್  ಇದು ಎಲ್ಲಾ ಸುಳ್ಳು ಸುಳ್ಳು. ಎಲೆಕ್ಷನ್ ಟೈಮ್ ನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಪ್ರಸ್ತಾಪನೆ ಇಲ್ಲ. ಯಾವುದೇ ಚರ್ಚೆ ಹಾಗಿಲ್ಲ.ಬಿಜೆಪಿಯವರು ಕ್ರಿಯೇಟ್ ಮಾಡುತ್ತಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಲ್ಸಿ ಸಿ ಟಿ ರವಿ  ಕೋಮುವಾದ, ಮತ ಆಧಾರಿತವಾಗಿ ಮೀಸಲಾತಿ ಕೊಡಲು ಅವಕಾಶ ಇಲ್ಲ. ಇದು ಸಂವಿಧಾನಕ್ಕೆ ವಿರುದ್ಧ. ಬಹುಶಃ ಪಾಕಿಸ್ತಾನದಲ್ಲಿ ಇಲ್ಲದೇ ಇರುವಂತಹದ್ದನ್ನು ಇಲ್ಲಿ ಮಾಡಲು ಹೊರಟಿದೆ.ಕಾಂಗ್ರೆಸ್ ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಕಾಂಗ್ರೆಸ್ ಷರಿಯಾವನ್ನು ಸಂವಿಧಾನದ ಮೇಲೆ ಹೇರಲು ಹೊರಟಿದೆ ಎಂದಿದ್ದಾರೆ.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ ಪ್ರವರ್ಗ 2ಬಿ ಗೆ 1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿಗೆ ಪ್ರಸ್ತಾವನೆ ಮಾತ್ರ ಬಂದಿರಲಿಲ್ಲ ಮುಂದಿನ‌ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಪಾಸ್ ಮಾಡಬೇಕು ಅಂತ ಆ ಮಸೂದೆ ಕೂಡಾ ಪ್ರಿಂಟ್ ಆಗಿ ಬಂದಿದೆ. ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ದಲಿತರಿಗೆ ಟೆಂಡರ್ ರಿಸರ್ವೇಷನ್ ಅಂತ ಮಾಡಿ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದ್ದಾರೆ. ದಲಿತರ 25 ಸಾವಿರ ಕೋಟಿ ಯಾಕೆ ತೆಗೆದಿರಿ?. ಈಗ ಮುಸ್ಲಿಂ ಓಲೈಕೆಗಾಗಿ ಟೆಂಡರ್ ಮೀಸಲಾತಿ ತರುತ್ತಿದ್ದಾರೆ. ಇದು ಮುಸ್ಲಿಮರ ಪ್ರೇಮ ಅಲ್ಲ, ಮುಸ್ಲಿಮರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಮುಸ್ಲಿಮರಿಗೆ ಟೆಂಡರ್ ಮೀಸಲಾತಿ ತಂದರೆ ಜನ‌ ಕುಪಿತರಾಗಲಿ, ವಿರೋಧಿಸಲಿ ಅಂತ ತರುತ್ತಿದ್ದಾರೆ. ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡುವುದು ಸಂವಿಧಾನದಲ್ಲಿ ಅವಕಾಶ ಇಲ್ಲ. ಸುಳ್ಳು ಹೇಳಿ ಸ್ಪಷ್ಟನೆ ಕೊಡುವುದು ಅವರೇ, ಕಣ್ಣೀರು ಒರೆಸುವ ನಾಟಕ ಆಡುವವರೂ ಅವರೇ ಎಂದು ಅವರು ಹೇಳಿದ್ದಾರೆ.