ಬೆಂಗಳೂರಿನ ಸಮಸ್ಯೆಗಳ ಬಗ್ಗೆ ದೊಡ್ಡ ಹೋರಾಟ ಮಾಡಲು ತೀರ್ಮಾನ ಮಾಡಲಾಗಿದೆ ಎಂದಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಮಸ್ಯೆಗಳ ಬಗ್ಗೆ ದೊಡ್ಡ ಹೋರಾಟ ಮಾಡಲು ತೀರ್ಮಾನ ಮಾಡಲಾಗಿದೆ. ಮೂರು ದಿನಗಳ ಕಾಲ ಬೇರೆ ಬೇರೆ ದಿನಾಂಕಗಳಂದು ಬಿಬಿಎಂಪಿ ವಲಯ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲಾಗುವುದು. ಹಾಲಿನ ದರ, ವಿದ್ಯುತ್ ದರ, ಕಸದ ಸೆಸ್, ಆಸ್ತಿ ತೆರಿಗೆ ಮತ್ತು ಪಾರ್ಕಿಂಗ್ ಶುಲ್ಕದ ಬಗ್ಗೆ ಪ್ರತಿಭಟನೆ ಮಾಡಲಾಗುವುದು. ಮನೆ ಮೆನೆಗೂ ಕರಪತ್ರಗಳನ್ನು ತಲುಪಿಸಲು ನಿರ್ಧಾರ ಮಾಡಲಾಗಿದೆ. ಏಪ್ರಿಲ್ 28 ರಂದು ಬಿಬಿಎಂಪಿ ವಲಯ ಕಚೇರಿಗಳ ಎದುರು ಪ್ರತಿಭಟನೆ ಮಾಡುತ್ತೇವೆ.
ಬಿಬಿಎಂಪಿ ಮುಖ್ಯ ಕಚೇರಿ ಎದುರು ಕೂಡಾ ಪ್ರತಿಭಟನೆ ಮಾಡುತ್ತೇವೆ. ಬೆಸ್ಕಾಂ ಮತ್ತು ಬಿಡಬ್ಲ್ಯೂಎಸ್ ಎಸ್ ಬಿ ಕಚೇರಿ ಎದುರು ಪ್ರತಿಭಟನೆ ಮತ್ತು ಮನವಿ ಸಲ್ಲಿಕೆ ಮಾಡುತ್ತೇವೆ. ಬೆಲೆ ಏರಿಕೆ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಬಿಬಿಎಂಪಿ ಚುನಾವಣೆ ಮುಂದೂಡುತ್ತಿದೆ ಎಂದ ಅವರು ಬಿಜೆಪಿ ಶಾಸಕರ ಅಮಾನತು ಬಗ್ಗೆ ಸ್ಪೀಕರ್ ಮತ್ತು ಸಚಿವರ ಜೊತೆ ಮಾತಾಡಿದ್ದೇವೆ. ಸಿಎಂ ಜೊತೆ ಕೂಡಾ ನಾನು ಮಾತಾಡುತ್ತೇನೆ. ಅವರು ತೀರ್ಮಾನ ಹೇಳಿದ ಮೇಲೆ ನಾವು ಮುಂದಿನ ನಿರ್ಧಾರ ಮಾಡುತ್ತೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕದ ಬಗ್ಗೆ ನಾವು ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ. ಸಹಿ ಹಾಕದಂತೆ ನಾವು ರಾಜ್ಯಪಾಲರಿಗೆ ಮನವಿ ಮಾಡಿದ್ದೆವು. ರಾಜ್ಯಪಾಲರು ಸಹಿ ಹಾಕಿದ್ದಾರೆ, ಮುಂದೆ ಕಾನೂನು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಹೇಳಿದ ಪ್ರಕಾರ ರಾಜಭವನ ಬಿಜೆಪಿ ಕಚೇರಿಯೇನಲ್ಲ. ಸಹಿ ಹಾಕಿದರೆ ಅವರಿಗೆ ಅದು ಜನರಲ್, ಸಹಿ ಹಾಕದಿದ್ದರೆ ಅದು ಬಿಜೆಪಿ ಕಚೇರಿ.ಇದು ಮಾಮೂಲಿ ಕಾಂಗ್ರೆಸ್ ನವರ ಕುತಂತ್ರ ಎಂದರು.
ಪಹಲ್ಗಾಮ್ ಉಗ್ರರ ದಾಳಿಗೆ ಭದ್ರತಾ ವ್ಯವಸ್ಥೆ ವೈಫಲ್ಯ ಎಂಬ ರಾಜ್ಯ ಕಾಂಗ್ರೆಸ್ ಆರೋಪ ವಿಚಾರದ ಬಗ್ಗೆ ಮಾತನಾಡಿ ಭದ್ರತೆ ಕೊಡುವುದು ಮಿಲಿಟರಿ ವ್ಯವಸ್ಥೆ. ಅವರ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದರೆ ಇನ್ನು ನೀವು ದೇಶದಲ್ಲಿ ಯಾರ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೀರಿ?. ನಾವು ಸೈನಿಕರೇ ಪರಮೋಚ್ಛ ಅಂತಾ ಹೇಳುವವರು. ಸೈನಿಕರ ಮಾನಸಿಕ ಸ್ಥೈರ್ಯ ಕುಂದಿಸುವ ಕೆಲಸ ಕಾಂಗ್ರೆಸ್ ಮಾಡಬಾರದು.ಉಗ್ರರು ಹಿಂದೂ ಹಿಂದೂ ಅಂತಾ ಹುಡುಕಿ ಹೊಡೆದಿದ್ದಾರೆ. ಇದನ್ನು ಬೇರೆ ಕಡೆ ಡೈವರ್ಟ್ ಮಾಡುವ ಕೆಲಸ ಕಾಂಗ್ರೆಸ್ ಮಾಡಬಾರದು. ನಾವು ಇವರಿಗೆ ಪ್ರಶ್ನೆ ಮಾಡಿದರೆ ಇವರ ಯೋಗ್ಯತೆ ಏನಾಗುತ್ತದೆ?. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದಾಗ ಯಾರ ವೈಫಲ್ಯ?. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗಿದ್ದು ಯಾರ ವೈಫಲ್ಯ? ರಾಜ್ಯದಲ್ಲಿ ಈಗ ನಡೆಯುತ್ತಿರುವುದು ಯಾರ ವೈಫಲ್ಯ?. ಮಂತ್ರಿಗಳ ಮೇಲೆಯೇ ಅತ್ಯಾಚಾರ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಮಂತ್ರಿಗಳನ್ನೇ ಸರಿಯಾಗಿ ಕಾವಲು ಕಾಯಲು ಆಗಲಿಲ್ಲ. ದೇಶದ ಸೈನಿಕರ ಬಗ್ಗೆ ಹೇಳುವ ಚಟ ಕಾಂಗ್ರೆಸ್ ನವರಿಗೆ ಯಾಕೆ ಅಂಟಿದೆ ಅಂತಾ ನನಗೆ ಅರ್ಥ ಆಗುತ್ತಿಲ್ಲ ಎಂದು ತಿಳಿಸಿದ್ರು.
ಪಾಕಿಸ್ತಾನಕ್ಕಿಂತ ದೇಶದ ಒಳಗಿರುವ ಸ್ಲೀಪರ್ ಸೆಲ್ ಗಳನ್ನು ಮೊದಲು ಮಟ್ಟ ಹಾಕಬೇಕು. ಪ್ರಧಾನಿ ಈಗಾಗಲೇ ಒಳಗೆ ಇರುವವರನ್ನೂ ಬಿಡಲ್ಲ, ಹೊರಗೆ ಇರುವವರನ್ನೂ ಬಿಡಲ್ಲ ಎಂದು ಹೇಳಿದ್ದಾರೆ.