ಬೆಂಗಳೂರು; ಆರ್ ಸಿ ಬಿ ವಿಜಯೋತ್ಸವದ ಮೇಲೆ ಕಾಲ್ತುಳಿತವಾಗಿ 10 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ ಬಿಜೆಪಿ ಪ್ರತಿಭಟನೆಗೆ ಮುಂದಾಗಿದ್ದು ಇದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ನಾವು ಹೆಣದ ಮೇಲೆ ರಾಜಕೀಯ ಮಾಡಲ್ಲ. ಇದು ಬಿಜೆಪಿಯವರ ಕೆಲಸ ಎಂದು ಡಿಕೆ ಕೌಂಟರ್ ಕೊಟ್ಟಿದ್ದಾರೆ. ವಿಮಾನ ದುರಂತದ ಬಗ್ಗೆ ತನಿಖೆ ಆಗ್ತಿದೆ. ಹಾಗೆಯೇ ಕಾಲ್ತುಳಿತ ಪ್ರಕರಣದ ತನಿಖೆ ನಡೀತಿದೆ. ತನಿಖೆ ನಡೀತಿರೋವಾಗ ರಾಜಕೀಯ ಮಾಡುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಇನ್ನು ಹೆಚ್ ಡಿಕೆ ಆರೋಗ್ಯವಾಗಿರಲಿ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಅಹಮದಾಬಾದ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅಹ್ಮದಾಬಾದ್ ದುರಂತ ಆಗಬಾರದಿತ್ತು. ಯಾವ ದೇಶದಲ್ಲೂ ಇಂತಹ ಘಟನೆ ಆಗಬಾರದು. ಕೆಲವರಿಗೆ ಸುಟ್ಟು ಹೋಗಿದೆ, ಇನ್ಫೆಕ್ಷನ್ ಆಗುತ್ತೆ ಅಂತ ನಮಗೆ ತೋರಿಸೋಕೆ ಹೋಗಿಲ್ಲ. ಆ ಸ್ಪಾಟ್ ನೋಡಿದ್ರೆ ಇನ್ನೂ ೫೦೦ ಮೀಟರ್ ವಿಮಾನ ಮುಂದೆ ಹೋಗಿದ್ದರೆ ಸಾವಿರಾರು ಜನರಿಗೆ ತೊಂದರೆ ಆಗ್ತಿತ್ತು. ಕೆಲವರು ಧೈರ್ಯವಾಗಿದ್ದಾರೆ, ಇನ್ನೂ ಕೆಲವರು ಆತಂಕದಲ್ಲಿದ್ದಾರೆ. ದುರಂತದಲ್ಲಿ ಓರ್ವ ಉಳಿದುಕೊಂಟಿದ್ದ, ಈಗ ಅವರು ಮಾನಸಿಕ ಆಘಾತದಲ್ಲಿದ್ದಾರೆ. ಖರ್ಗೆ ಸಾಹೇಬರು ವಿಡಿಯೋ ಕಾಲ್ ಮಾಡಿ ಮಾತಾಡಿಸಿದ್ದಾರೆ.ನಇಡೀ ಟೀಮ್ ಅಲ್ಲಿ ಬಂದಿತ್ತು.ನಈಗ ಬ್ಲ್ಯಾಕ್ ಬಾಕ್ಸ್ ಗಾಗಿ ವೇಟ್ ಮಾಡುತ್ತಿದ್ದೇವೆ.ಆ ಮೇಲೆ ಇಡೀ ಕಾಂಗ್ರೆಸ್ ಪಕ್ಷ ಸಾಂತ್ವನ ಹೇಳೋ ದೃಷ್ಟಿ ಯಿಂದ ಅಲ್ಲಿಗೆ ಹೋಗಿದ್ವಿ . ಇಂತಹ ದುರಂತ ಆಗಬಾರದು ಅಂತ ನೊಂದವರಿಗೆ ಪ್ರಾರ್ಥನೆ ಮಾಡಿದ್ದೇವೆ. ಬಿಜೆಪಿಯವರು , ದಳದವರು ಈಗ ಮಾತಾಡ್ತಾರೆ. ಅವರಿಗೆ ಏನೂ ಇಲ್ಲ ಕೆಲಸ.. ಅವು ಹಳೇದೆಲ್ಲಾ ತಿರುಚಿ ಹೇಳಬಹುದು, ಆದ್ರೆ ನಾನು ಬೇರೆಯವರ ರೀತಿ ಹೇಳೋದಿಲ್ಲ. ಕೇಂದ್ರ ಸಚಿವರು ಇದ್ದಾರೆ. ಡಿಜಿಸಿಐ ನಲ್ಲಿ ಏನು ಮಾಡಬೇಕು ಅದೆಲ್ಲಾ ಇದೆ ಎಂದಿದ್ದಾರೆ.
ನಾನು ಟೆಕ್ನಿಕಲ್ ಮನುಷ್ಯ ಅಲ್ಲ, ಚರ್ಚೆ ಆಗ್ತಿದೆ. ರಾಜಕೀಯ ಮಾಡೋಕೆ ಇಲ್ಲ .ಸತ್ತವರ ಮೇಲೆ, ಹೆಣದ ಮೇಲೆ ರಾಜಕೀಯ ಮಾಡೋದಿಲ್ಲ. ಇದು ಬಿಜೆಪಿಯವರ ಕೆಲಸ, ಈಗಹೆಣದ ಮೇಲೆ ಮಾತಾಡುತ್ತಿದ್ದಾರೆ, ಅವರು ಅದನ್ನ ಮಾಡಲಿ. ನಾನು ಈಗ ಅದರ ಬಗ್ಗೆ ಮಾತಾಡೋದಿಲ್ಲ. ಇದು ಸೀರಿಯಲ್ ಆಗಿರೋ ಘಟನೆ, ದೇಶಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ. ಗೃಹಲಕ್ಷ್ಮೀ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬಹಳ ಸಂತೋಷ, ಅವರು ಆರೋಗ್ಯಕರವಾಗಿರಲಿ ಎಂದಿದ್ದಾರೆ.