ಮನೆ ಪ್ರಸ್ತುತ ವಿದ್ಯಮಾನ ಬಳ್ಳಾರಿ; 8ನೇ ಬಾರಿಗೆ ಪತಿಯನ್ನು ಭೇಟಿಯಾಗಿ ಧೈರ್ಯ ತುಂಬಿದ ವಿಜಯಲಕ್ಷ್ಮೀ ದರ್ಶನ್

ಬಳ್ಳಾರಿ; 8ನೇ ಬಾರಿಗೆ ಪತಿಯನ್ನು ಭೇಟಿಯಾಗಿ ಧೈರ್ಯ ತುಂಬಿದ ವಿಜಯಲಕ್ಷ್ಮೀ ದರ್ಶನ್

0

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ದರ್ಶನ್ 8ನೇ ಬಾರಿಗ ಭೇಟಿಯಾದರು. ಪತ್ನಿ ವಿಜಯಲಕ್ಷ್ಮಿ, ಆಪ್ತರಾದ ಅನುಷಾ ಶೆಟ್ಟಿ, ಸುಶಾಂತ್ ನಾಯ್ಡು ಸೇರಿ ಒಟ್ಟು 5 ಜನ ಭೇಟಿಯಾಗಿ ಮಾತುಕತೆ ನಡೆಸಿದರು.

ಳಿಗ್ಗೆ ಖಾಸಗಿ ಹೋಟಲ್ ನಲ್ಲಿ ವಿಶ್ರಾಂತಿ‌ ಪಡೆದ ವಿಜಯಲಕ್ಷ್ಮಿ ಬಳಿಕ ಜೈಲಿಗ ಭೇಟಿ ನೀಡಿದರು. ಇನ್ನು ಪತ್ನಿಯನ್ನು ಭೇಟಿಯಾಗಲು ವಿಶೇಷ ಭದ್ರತಾ ಕೊಠಡಿಯಿಂದ ದರ್ಶನ್ ಸಂದರ್ಶಕರ ಕೊಠಡಿಗೆ ಬಂದರು. ಈ ವೇಳೆ ದರ್ಶನ್ ಅಭಿಮಾನಿಗಳು ಜೈ ಡಿಬಾಸ್ ಅಂತಾ ಘೋಷಣೆ ಕೂಗಿದ್ರು. ಅಭಿಮಾನಿಗಳ ಜೈಕಾರ ಕೇಳುತ್ತಲೆ ದರ್ಶನ್ ಸಣ್ಣದೊಂದು ನಗೆ ಬೀರಿದ್ರು.

ಬಳಿಕ ಸಂದರ್ಶಕರ ಕೊಠಡಿಯಲ್ಲಿ ಪತ್ನಿ ಹಾಗೂ ಸ್ನೇಹಿತರೊಂದಿಗೆ ದರ್ಶನ್ ಮಾತುಕತೆ ನಡೆಸಿದ್ರು. ಈ ವೇಳೆ ದರ್ಶನ್  ಆರೋಗ್ಯದ ಬಗ್ಗೆ ಪತ್ನಿ ಹಾಗೂ ಸ್ನೇಹಿತರು ವಿಚಾರಿಸಿದ್ರು.ವಿಜಯಲಕ್ಷ್ಮಿ, ಅನುಷಾ ಶೆಟ್ಟಿ, ಗ್ರೇಸ್ ಮರ್ಸಿ, ರೋಹಿತ್ ಮತ್ತು‌ ಸುಶಾಂತ್ ನಾಯ್ಡು ಅವರು ದರ್ಶನ್ ಅವರನ್ನು ಭೇಟಿ ಮಾಡಿದ್ರು.ಇನ್ನು ಜಾಮೀನು ವಿಚಾರಕ್ಕ ಸಂಬಂಧಝಪಟ್ಟಂತೆ ಚರ್ಚೆ ನಡೆಸಿದ್ರು ಎನ್ನಲಾಗಿದೆ.

ಇನ್ನು ನಟ ದರ್ಶನ್ ಗೆ 20 ದಿನಗಳಿಂದ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಈ ಹಿಂದೆ ಅವರ ಪರ ವಕೀಲ ಈ ಕುರಿತು ಮಾಹಿತಿ ನೀಡಿದ್ರು. ಬೆನ್ನುನೋವಿಗೆ ಬಳಲಿ ಬೆಂಡಾದ ಕಾಟೇರ ಮೆಡಿಕಲ್ ಬೇಡ್ ಗೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ವೈದ್ಯರು MRI ಸ್ಕ್ಯಾನ್ ಗೆ ಸೂಚಿಸಿದ್ರೂ ದರ್ಶನ್ ಡೋಂಟ್ ಕೇರ್ ಎಂದಿದ್ದಾರೆ. ಪತಿಗೆ ಬೆನ್ನುನೋವು ಹೆಚ್ಚಳ ಹಿನ್ನಲೆಯಲ್ಲಿ ವಿಜಯಲಕ್ಷ್ಮೀ ಪತಿಯ ಆರೋಗ್ಯ ವಿಚಾರಿಸಿದ್ದಾರೆ.

ಕೊನೆಗೂ ಸಿಕ್ತು ಷ್ಯೂರಿಟಿ;  ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಜೈಲಿನಿಂದ ರಿಲೀಸ್

ತುಮಕೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದಿಗೆ ಮುಂದೂಡಿಕೆಯಾಗಿದೆ. ಇದರ ನಡುವೆ ಪ್ರಕರಣದ ಮೂವರು ಆರೋಪಿಗಳಿಗೆ ಸೆಪ್ಟಂಬರ್ 23 ರಂದು ಜಾಮೀನು ಮಂಜೂರಾಗಿತ್ತು. ಪ್ರಕರಣದ ಎ15, ಎ16, ಎ17 ಆರೋಪಿಗೆ ಜಾಮೀನು ಮಂಜೂರಾಗಿತ್ತು. ಆದರೆ ಜಾಮೀನು ಮಂಜೂರಾದ್ರೂ ಮೂವರು ಆರೋಪಿಗಳು ಜೈಲಿನಲ್ಲೇ ಇರುವಂತಾಗಿತ್ತು

ಪ್ರಕರಣದ ಎ15 ನಿಖಿಲ್ ನಾಯಕ್, ಎ 17 ಕಾರ್ತಿಕ್ ಗೆ 57ನೇ ಸಿಸಿಹೆಚ್ ಕೋರ್ಟ್ ಮೊನ್ನೆ ಬೇಲ್ ಮಂಜೂರು ಮಾಡಿತ್ತು. ಎ 16 ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ನೀಡುವ ವೇಳೆ ಇವರಿಗೆ ಕೋರ್ಟ್ ಷ್ಯೂರಿಟಿ ಕೇಳಿದೆ. ಆದರೆ ಷ್ಯೂರಿಟಿ ನೀಡಲು ಸಾಧ್ಯವಾಗದೇ ಇರೋದರಿಂದ ಆರೋಪಿಗಳು ಕಳೆದ 10 ದಿನಗಳಿಂದ ಜೈಲಿನಲ್ಲೇ ಇದ್ದರು. ಆದರೆ ಮೊನ್ನೆ ಅಂದರೆ ಅಕ್ಟೋಬರ್ 1 ರಂದು ಆರೋಪಿಗಳಿಗೆ ಷ್ಯೂರಿಟಿ ಸಿಕ್ಕಿದೆ. 10 ದಿನಗಳಿಂದ ಆರೋಪಿಗಳ ಕುಟುಂಬದವರು ಷ್ಯೂರಿಟಿಗಾಗಿ ಪರದಾಡುತ್ತಿದ್ದರು.ಕೊನೆಗೂ ಮೊನ್ನೆ ಷ್ಯೂರಿಟಿ ಸಿಕ್ಕಿದೆ. ಷ್ಯೂರಿಟಿ ಸಿಕ್ಕ ಬೆನ್ನಲ್ಲೇ ಕೋರ್ಟ್ ಜಾಮೀನು ಪತ್ರವನ್ನು ಮೇಲ್ ಮೂಲಕ ಜೈಲಾಧಿಕಾರಿಗಳಿಗೆ ರವಾನಿಸಿದ್ದು ಅವರು ಎಲ್ಲಾ ಕಾನೂನೂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆರೋಪಿಗಳನ್ನು ರಿಲೀಸ್ ಮಾಡಿದ್ದಾರೆ.

ಇನ್ನು ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮದವರ ಜೊತೆ ಮಾತನಾಡಲು ಆರೋಪಿಗಳು ನಿರಾಕರಿಸಿದ್ದಾರೆ. ನಾವು ಕೇಸ್ ಬಗ್ಗೆ ಏನು ಹೇಳಲ್ಲ. ಏನು ಹೇಳ ಬೇಕೋ ಅದನ್ನು ತನಿಖೆ ವೇಳೆ ಹೇಳಿದ್ದೇವೆ ಅಂತಾ ಆರೋಪಿಗಳು ತಿಳಿಸಿದ್ದಾರೆ. ಅಲ್ಲದೇ ಜೈಲಿನಲ್ಲಿ ನಮಗೆ ಯಾವುದೇ ತೊಂದರೆ ಆಗಿಲ್ಲ. ಆರಾಮವಾಗಿ ಇದ್ದೆವು ಎಂದು ತಿಳಿಸಿದ್ದಾರೆ.