ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ ಎಂದು ಬಳ್ಳಾರಿ ಸೆಂಟ್ರಲ್ ಜೈಲಿಗೆ ವಿಸಿಟ್ ಮಾಡಿದ ಬಳಿಕ ಡಿಐಜಿ ಶೇಷಾ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಜೈಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ.ಜೈಲಿನ ನಿಯಮಗಳ ಪ್ರಕಾರ ಸೌಲಭ್ಯ ಕೊಡಲಾಗಿದೆ.ಹೈ ಸೆಕ್ಯೂರಿಟಿ ಸೆಲ್ ನಲ್ಲೇ ದರ್ಶನ್ ಇಡಲಾಗಿದೆ ಎಂದರು.
ಆ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ದರ್ಶನ್ ಅವರ ಜೊತೆಗೆ ಕೇವಲ ನಾಲ್ಕು ಕೈದಿಗಳು ಇದ್ದಾರೆ.ಒಂದೊಂದು ಸೆಲ್ ನಲ್ಲಿ ಒಬ್ಬೊಬ್ಬರೇ ಇರೋದು. ಭದ್ರತೆ ದೃಷ್ಟಿಯಿಂದ ಈ ಹೈ ಸೆಕ್ಯೂರಿಟಿ ಸೆಲ್ ಗಳನ್ನ ಬಳಕೆ ಮಾಡ್ತೇವೆ ಎಂದರು. ಹೈ ಸೆಕ್ಯೂರಿಟಿ ಸೆಲ್ ನ 15ನೇ ಅಂದ್ರೆ ಕೊನೆಯ ಕೋಣೆಯಲ್ಲಿ ಹಾಕಲಾಗಿದೆ. ಬ್ಯಾಕ್ ಪೈನ್ ಸಮಸ್ಯೆ ಇದೆ ಅಂತೆ, ಹೀಗಾಗಿ ಮೋಷನ್ ಹೋಗೋದು ಕಷ್ಟ ಆಗುತ್ತಿದೆ ಅಂತಾ ಹೇಳುತ್ತಿದ್ದಾರೆ. ಅವರಿಗೆ ಇಂಡಿಯನ್ ಟಾಯ್ಲೆಟ್ ವ್ಯವಸ್ಥೆ ಇದೆ.ಹಾಗಾಗಿ ವೆಸ್ಟರ್ನ್ ಟಾಯ್ಲೆಟ್ ಸೌಲಭ್ಯ ಕೇಳುತ್ತಿದ್ದಾರೆ. ಅದರ ಬಗ್ಗೆ ಮೆಡಿಕಲ್ ರಿಪೋರ್ಟ್ ನೋಡಿ ವ್ಯವಸ್ಥೆ ಮಾಡಲಾಗುವುದು ಎಂದರು. ಕೈ ನೋವಿನ ಬಗ್ಗೆ ಅವರು ಹೇಳಿದ್ದಾರೆ. ಟಿವಿ ಬೇಕು ಎಂದು ಕೇಳಿಲ್ಲ, ಕೇಳಿದ್ರೆ ನಮ್ಮ ಪರಮಾಧಿಕಾರ ಬಳಕೆ ಮಾಡಿಕೊಂಡು ಕೊಡ್ತೇವೆ ಎಂದ ಡಿಐಜಿ ಶೇಷಾ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಭೇಟಿ; ಅರ್ಧ ಗಂಟೆಗಳ ಕಾಲ ಮಾತುಕತೆ
ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರು. ಇಂದು ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಹಾಗೂ ವಕೀಲರು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ದರ್ಶನ್ ಪತ್ನಿ ಹಾಗೂ ಮಗ ಬಂದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಸೆಲ್ ನಿಂದ ದರ್ಶನ್ ಅವರನ್ನು ಸಂದರ್ಶಕರ ಕೊಠಡಿಗೆ ಕರೆ ತಂದ್ರು. ದರ್ಶನ್ ಅವರು ಮೊನ್ನೆ ಬಳ್ಳಾರಿ ಜೈಲಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಹೋಗುವಾಗ ಕಪ್ಪು ಟೀ ಶರ್ಟ್ , ಬ್ಲೂ ಜೀನ್ಸ್ ಧರಿಸಿದ್ದರು. ಇಂದು ಕೂಡ ಅದೇ ಉಡುಪನ್ನು ಧರಿಸಿದ್ದರು. ಪೊಲೀಸರೊಂದಿಗೆ ನೇರವಾಗಿ ಸಂದರ್ಶಕರ ಕೊಠಡಿಗೆ ಬಂದ ಡಿ ಬಾಸ್ ಸುಮಾರು ಅರ್ಧ ಗಂಟೆಗಳ ಕಾಲ ಸಂದರ್ಶಕರ ಕೊಠಡಿಯಲ್ಲಿ ಮಾತನಾಡಿದ್ದಾರೆ.
ಜೈಲಿಗೆ ಭೇಟಿ ನೀಡುವ ವೇಳೆ ವಿಜಯಲಕ್ಷ್ಮೀ ದರ್ಶನ್ ಅವರು ಮೂರು ಬ್ಯಾಗ್ ಗಳಲ್ಲಿ ಬಟ್ಟೆ, ಬಿಸ್ಕೀಟ್, ಡ್ರೈಪ್ರೂಟ್ಸ್, ಗಳನ್ನು ತಂದಿದ್ದರು. ಪೊಲೀಸರು ಎಲ್ಲಾ ಬ್ಯಾಗ್ ಗಳನ್ನು ಪರಿಶೀಲಿಸಿ ಒಳಗಡೆ ಹೋಗದಕ್ಕೆ ಬಿಟ್ಟಿದ್ದಾರೆ. ಇನ್ನು ಸಂದರ್ಶಕರ ಕೊಠಡಿಯಲ್ಲಿ ಪತ್ನಿಯನ್ನು ನೋಡುತ್ತಲೇ ದರ್ಶನ್ ಭಾವುಕರಾಗಿದ್ದಾರೆ. ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇನ್ನು ವಕೀಲರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಅರ್ಧಗಂಟೆ ಮಾತನಾಡಿದ ಬಳಿಕ ದರ್ಶನ್ ಪತ್ನಿ ತಂದ ವಸ್ತುಗಳನ್ನು ತೆಗೆದುಕೊಂಡು ತನ್ನ ಸೆಲ್ ಕಡೆ ತೆರಳಿದ್ದಾರೆ.
ಇನ್ನು ವಿಜಯಲಕ್ಷ್ಮೀ ಅವರು ಜೈಲು ಬಳಿ ಬರುತ್ತಲೇ ಅವರನ್ನು ನೋಡೋದಕ್ಕೆ ಕಾರು ಬಳಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು ಎನ್ನಲಾಗಿದೆ. ತೀರಾ ಭಾವುಕರಾದಂತೆ ವಿಜಯಲಕ್ಷ್ಮೀ ದರ್ಶನ್ ಕಂಡು ಬಂದರು.