ಮನೆ Latest News ಪತ್ನಿಯನ್ನು ಭೇಟಿಯಾಗುವ ವೇಳೆ ದಾಸನನ್ನು ಕಾಡಿದ ಬೆನ್ನುನೋವು; ಹೆಜ್ಜೆ ಇಡಲು ಪರದಾಡಿದ ಡಿ ಬಾಸ್

ಪತ್ನಿಯನ್ನು ಭೇಟಿಯಾಗುವ ವೇಳೆ ದಾಸನನ್ನು ಕಾಡಿದ ಬೆನ್ನುನೋವು; ಹೆಜ್ಜೆ ಇಡಲು ಪರದಾಡಿದ ಡಿ ಬಾಸ್

0
darshan bail

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೀವ್ರವಾದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಇಂದು ಅವರನ್ನು ಪತ್ನಿ ವಿಜಯಲಕ್ಷ್ಮೀ ಭೇಟಿ ಮಾಡಲು ಬಳ್ಳಾರಿ ಜೈಲಿಗೆ ಆಗಮಿಸಿದ್ದರ. ಈ ವೇಳೆ ದರ್ಶನ್ ಅವರು ಪತ್ನಿಯನ್ನು ಭೇಟಿಯಾಗಲು ತಮ್ಮ ವಿಶೇಷ ಸೆಲ್ ನಿಂದ ಸಂದರ್ಶಕರ ಕೊಠಡಿಗೆ ಆಗಮಿಸಿದ್ರು. ಆಗ ದರ್ಶನ್ ಅವರು ಬೆನ್ನು ನೋವಿನಿಂದಾಗಿ ನಡೆಯಲು ಸಾಧ್ಯವಾಗದೇ ಪರದಾಡುತ್ತಿದ್ದದ್ದು ಕಂಡು ಬಂತು.

ತೀವ್ರವಾದ ಬೆನ್ನು ನೋವು ಇರೋದರಿಂದ ದಾಸ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದದ್ದು ಕಂಡು ಬಂತು. ಎಂದಿನಂತೆ ಪತ್ನಿ ವಿಜಯಲಕ್ಷ್ಮೀ ಪತ್ನಿಗಾಗಿ ಹಣ್ಣು, ಬಟ್ಟೆ, ಡ್ರೈ ಫ್ರೂಟ್ಸ್ ತಂದಿದ್ದರು. ಇನ್ನು ವಿಜಯಲಕ್ಷ್ಮೀ ಅವರಿಗೆ ಅವರ ಸಂಬಂಧಿ ಸುಶಾಂತ್ ನಾಯ್ಡು ಅವರು ಸಾಥ್ ನೀಡಿದ್ರು.

ಇನ್ನೊಂದು ಕಡೆ ಬಳ್ಳಾರಿ ಜೈಲಿನಲ್ಲಿ ಡಿ ಬಾಸ್ ದರ್ಶನ್ ಗೆ ಫಿಜಿಯೋ ಥೆರಫಿ ಟ್ರೀಟ್ ಮೆಂಟ್ ಆರಂಭವಾಗಿದೆ. ನ್ಯೂರೋ ಸರ್ಜನ್ ವರದಿ ಆಧರಿಸಿ ಟ್ರೀಟ್ ಮೆಂಟ್ ಶುರು ಮಾಡಲಾಗಿದೆ. ನ್ಯೂರೋ ಸರ್ಜನ್ ಡಾ.ವಿಶ್ವನಾಥ್ ಅವರ ತಪಾಸಣೆ ನಡೆಸಿ ವರದಿ ನೀಡಿದ್ದರು. ಎಂಆರ್ ಐ ಸ್ಕ್ಯಾನ್ ಜೊತೆಗೆ ಫಿಜಿಯೋ ಥೆರಫಿಗೆ ಸೂಚಿಸಿದ್ದರು. ಇಂದಿನಿಂದ ಒಂದು ಗಂಟೆ ಕಾಲ ಫಿಜಿಯೋ ಥೆರಫಿ ಟ್ರೀಟ್ ಮೆಂಟ್ ಆರಂಭವಾಗಿದೆ.ಬೆನ್ನು ನೋವು ಉಲ್ಬಣಿಸಿದ್ದರಿಂದ ವೈದ್ಯರ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೈಲ್ ಅಧಿಕಾರಿಗಳು…ವಿಮ್ಸ್ ನಿಂದ ಫಿಜಿಯೋ ಥೆರಫಿ ಫೋರ್ಟಬಲ್ ಮಿಷನ್ ತರಿಸಿದ್ದಾರೆ. ವಿಮ್ಸ್ ವೈದ್ಯರಿಂದಲೇ ಪ್ರತಿದಿನ 7 ದಿನಗಳ ಕಾಲ ಮಧ್ಯಾಹ್ನ 3 ರಿಂದ 4 ಗಂಟೆಗೆ ಟ್ರಿಟ್ ಮೆಂಟ್ ನಡೆಯಲಿದೆ.

ಬಳ್ಳಾರಿ ಜೈಲಿನಲ್ಲಿ ನೋಡೋಕೆ ಆಗುತ್ತಿಲ್ಲ ಡಿ ಬಾಸ್ ಕಷ್ಟ; ಬೆನ್ನು ನೋವಿನಿಂದಾಗಿ ನಡೆಯೋದಕ್ಕೆ ಆಗದೇ ಪರದಾಡುತ್ತಿದ್ದಾರೆ ದರ್ಶನ್

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ಡಿ ಬಾಸ್ ದರ್ಶನ್ ಅವರ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ಕೋರ್ಟ್ ವಜಾ ಮಾಡಿದೆ. ಸದ್ಯ ಬೇಲ್ ಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಒಂದು ಕಡೆ ಬೇಲ್ ಚಿಂತೆಯಾದರೆ ಮತ್ತೊಂದು ಕಡೆ ಡಿ ಬಾಸ್ ದರ್ಶನ್ ಅತೀವವಾದ ಬೆನ್ನು ನೋವಿನಿಂದ ಬಳಲಿ ಬೆಂಡಾಗಿ ಹೋಗಿದ್ದಾರೆ.

ಈಗಾಗಲೇ ದರ್ಶನ್ ಅವರ ಬೆನ್ನುನೋವಿಗಾಗಿ ಮೆಡಿಕಲ್ ಬೆಡ್ ಹಾಗೂ ಪಿಲ್ಲೋ ನೀಡಲಾಗಿದೆ. ಹೀಗಿದ್ರೂ ಅವರಿಗೆ ಬೆನ್ನು ನೋವು ಕಮ್ಮಿಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಬೆನ್ನು ನೋವು ಸಮಸ್ಯೆ ಉಲ್ಬಣಿಸುತ್ತಿದೆ.ದರ್ಶನ್ ನಿನ್ನೆ ಹೈಸೆಕ್ಯೂರಿಟಿ ಸೆಲ್ ನಿಂದ ವಕೀಲರನ್ನು ಭೇಟಿಯಾಗಲು ಬಂದಾಗ ಅವರು ಬೆನ್ನುನೋವಿನಿಂದಾಗಿ ಎಷ್ಟು ಕಂಗಾಲಾಗಿದ್ದಾರೆ ಅನ್ನೋದು ಗೊತ್ತಾಯ್ತು.ನಡೆಯುತ್ತಿದ್ದಂತೆ ದರ್ಶನ್ ಅವರು ನಡು ಮತ್ತು ಬೆನ್ನನ್ನು ಹಿಡಿದುಕೊಂಡು ನಡೆದಿದ್ದಾರೆ. ಪ್ರತಿ ಬಾರಿ ವಿಜಿಟಿಂಗ್ ರೂಮ್ ಗೆ ನಡೆದುಕೊಂಡು ಬರುವಾಗ ನಡೆಯಲ್ಲಿ ನಿಖರತೆ ಇತ್ತು.ಆದರೆ ಶನಿವಾರ ವಕೀಲರನ್ನು ಭೇಟಿಯಾಗಲು ಬಂದಾಗ ದರ್ಶನ್ ಅವರು ನಡೆಯುತ್ತಿದ್ದು ನೋಡುತ್ತಿದ್ದಾಗ ಅವರಿಗೆ ಎಷ್ಟು ನೋವಿದೆ ಅನ್ನೋದು ಗೊತ್ತಾಯ್ತು.

ಇದೀಗ ಇದೇ ದರ್ಶನ್ ಅವರ ಬೇಲಿಗೆ ಪ್ರಮುಖ ಅಂಶ ಆಗೋ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ವೈದ್ಯರ ವರದಿಯನ್ನು ಜೈಲ್ ಅಧಿಕಾರಿಗಳು ದರ್ಶನ್ ವಕೀಲರಿಗೆ ನೀಡಿದ್ದಾರೆ. ಪ್ರತಿದಿನವು ಬೆನ್ನುನೋವಿನಿಂದ ಮುಕ್ತಿ ಪಡೆಯಲು ದರ್ಶನ್ ವ್ಯಾಯಾಮ ಮಾಡುತ್ತಿದ್ದಾರೆ. ಬೆನ್ನು ನೋವಿನಿಂದ ಮುಕ್ತಿ ಪಡೆಯಲು ಫಿಜಿಯೋ ಥೆರಫಿಸ್ಟ್ ಕಲಿಸಿದ ವ್ಯಾಯಾಮ ಮಾಡುತ್ತಿದ್ದಾರೆ.