ಬಳ್ಳಾರಿ; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಫೋಟೋ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಸುಕಿನ ಜಾವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ದರ್ಶನ್ ಅವರನ್ನು ಕರೆದುಕೊಂಡು ಹೊರಟ ಪೋಲಿಸರು ಆಂಧ್ರ ಮಾರ್ಗವಾಗಿ ಬೆಳಗ್ಗೆ 10 ಗಂಟೆ ಸುಮಾರಿಗೆ ಬಳ್ಳಾರಿ ಜೈಲು ತಲುಪಿದ್ದಾರೆ. ಇನ್ನು ಬಳ್ಳಾರಿ ಜೈಲಿಗೆ ಹೋಗುವಾಗ ದರ್ಶನ್ ಮನೆಯಿಂದ ಶೂಟಿಂಗ್ ಗೆ ಹೊರಟ ರೇಂಜಿಗೆ ಟೀ ಶರ್ಟ್ ಗೆ ಸನ್ ಗ್ಲಾಸ್ ಸಿಕ್ಕಿಸಿಕೊಂಡು, ಕೈಯಲ್ಲಿ ಬಿಸ್ಲರಿ ಬಾಟಲ್ ಹಿಡ್ಕೊಂಡು ಸ್ಟೈಲಿಶ್ ಆಗಿಯೇ ಹೋಗಿದ್ದಾರೆ. ಬಳ್ಳಾರಿ ಜೈಲಿನ ಗೇಟು ಬಳಿ ಬರುತ್ತಿದ್ದಂತೆ ಜೈಲಾಧಿಕಾರಿಗಳು ದರ್ಶನ್ ಅವರ ಹೀರೋ ಗೆಟಪ್ ನ್ನು ಪೊಲೀಸರು ಕೈದಿ ಗೆಟಪ್ ಗೆ ಬದಲಾಯಿಸಿದ್ದಾರೆ. ಕತ್ತನಲ್ಲಿದ್ದ ಸರ, ಕೈಯಲ್ಲಿದ್ದ ಕಡಗ ಎಲ್ಲವನ್ನು ತೆಗೆದು ಸೆಲ್ ಗೆ ಕಳುಹಿಸಿದ್ದಾರೆ.
ಇನ್ನು ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಗೆ ಕೈದಿ ಸಂಖ್ಯೆ 511 ನ್ನು ನೀಡಲಾಗಿದೆ. ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರಿಗೆ ಕೈದಿ ಸಂಖ್ಯೆ 6106 ನ್ನು ನೀಡಲಾಗಿತ್ತು. ಆದರೆ ಇಲ್ಲಿ ವಿಚಾರಣಾಧೀನ ಕೈದಿ ಸಂಖ್ಯೆ 6,106ನ್ನು ಕೊಡಲಾಗಿದೆ. ಅಂದು ದರ್ಶನ್ ಗೆ ಬೆಂಗಳೂರು ಜೈಲಿನಲ್ಲಿ ಕೈದಿ ಸಂಖ್ಯೆ 6,106 ನ್ನು ನೀಡಿದಾ ದರ್ಶನ್ ಅಭಿಮಾನಿಗಳು ಕೆಲವರು ಅದನ್ನೇ ಟ್ಯಾಟೂ ಹಾಕಿಸಿಕೊಂಡಿದ್ದರು. ತಮ್ಮ ವಾಹನಗಳ ಮೇಲೆ ಬರೆಸಿಕೊಂಡಿದ್ದರು. ಇದೀಗ ಕೈದಿ ಸಂಖ್ಯೆ ಬದಲಾಗಿದ್ದು ಅಂದು ಟ್ಯಾಟೂ ಹಾಕಿಸಿಕೊಂಡವರೆಲ್ಲಾ ಇಂದು ಕಂಗಾಲಾಗಿದ್ದಾರೆ. ಈಗಲೂ ಅದೇ ರೀತಿ ಟ್ಯಾಟೂ ಹಾಕಿಸಿಕೊಳ್ತಾರಾ ಎಂದು ಒಂದಷ್ಟು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇಂದು ದರ್ಶನ್ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟ ಸ್ಟೈಲ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಜ ಎಲ್ಲಿದ್ದರೂ ರಾಜನೇ ಅಂತಾ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
ಇನ್ನು ಬಳ್ಳಾರಿ ಜೈಲು ರಾಜ್ಯದ ಹಳೆಯ ಜೈಲುಗಳಲ್ಲಿ ಒಂದಾಗಿದ್ದು ಬ್ರಿಟಿಷರ ಕಾಲದಲ್ಲಿ ಇದನ್ನು ನಿರ್ಮಿಸಲಾಗಿದೆ. ಹಿಂದೆ ಕಠೋರ ಶಿಕ್ಷೆಗಳಿಗಾಗಿ ಈ ಜೈಲು ಕುಖ್ಯಾತಿಯನ್ನು ಪಡೆದಿತ್ತು. 16 ಎಕರೆ ವಿಸ್ತೀರ್ಣದಲ್ಲಿರುವ ಈ ಜೈಲಿನಲ್ಲಿ 15 ವಿಶೇಷ ಭದ್ರತಾ ಸೆಲ್ ಗಳಲ್ಲಿದ್ದು ಈ 15 ವಿಶೇಷ ಭದ್ರತಾ ಸೆಲ್ ಗಳಲ್ಲಿ 15ನೇ ಸೆಲ್ ನಲ್ಲಿ ನಟ ದರ್ಶನ್ ಅವರು ಇರಿಸಲಾಗಿದೆ. ಅವರಿಗಾಗಿ ಮೂವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಸಿಸಿಟಿವಿ ಕಣ್ಗಾವಲಿನಲ್ಲೇ ನಟ ದರ್ಶನ್ ಅವರು ಇರಲಿದ್ದಾರೆ.
ಇತ್ತ ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ದರ್ಶನ್ ಅವರ ಅಭಿಮಾನಿಗಳು ಜೈಲಿನ ಬಳಿ ಜಮಾಯಿಸಿದ್ದರು. ಅವರನ್ನು ನಿಯಂತ್ರಿಸೋದೇ ಪೊಲೀಸರಿಗೆ ಬಹು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಜೈಲಿನ ಹೊರಗೂ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ದರ್ಶನ್ ಅವರು ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗ್ತಾರೆ ಅನ್ನೋ ವಿಚಾರ ಗೊತ್ತಾಗುತ್ತಿದ್ದಂತೆ ಮೊನ್ನೆ ರಾತ್ರಿಯಿಂದಲೇ ಜೈಲು ಬಳಿ ಸಾಕಷ್ಟು ಅವರ ಅಭಿಮಾನಿಗಳು ಜಮಾಯಿಸಿದ್ದರು. ಇಂದು ದರ್ಶನ್ ಬರುತ್ತಿದ್ದಂತೆ ಡಿ ಬಾಸ್ ಪರವಾಗಿ ಘೋಷಣೆಗಳನ್ನು ಕೂಗಿದ್ರು.