ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಚ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಅವರು ನಾಪತ್ತೆಯಾಗಿರುವ ವಿಚಾರ ಭಾರೀ ಸದ್ದು ಮಡಿತ್ತು. 7 ವರ್ಷಗಳಿಂದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದು ಅವರು ಬದುಕಿರುವ ಸಾಧ್ಯತೆ ಕಮ್ಮಿ ಅಂತಾ ಹೇಳಲಾಗುತ್ತಿತ್ತು. ತನ್ನ ಗೆಳತಿಗೆ ಅಶ್ಲೀಲ ಕಮೆಂಟ್ ಮಾಡಿದವನ ಜೀವ ತೆಗೆದ ದರ್ಶನ್ ತನಗೆ ಕೋಟ್ಯಂತರ ರೂಪಾಯಿ ವಂಚಿಸಿದವನನ್ನು ಸುಮ್ನೆ ಬಿಡ್ತಾರಾ ಅನ್ನೋ ಮಾತುಗಳು ಕೇಳಿ ಬಂದಿದ್ದವು, ಇದೀಗ ಮಲ್ಲಿಕಾರ್ಜುನ್ ನಾಪತ್ತೆಯಾದ ಸುದ್ದಿ ವೈರಲ್ ಆದ ಬೆನ್ನಲ್ಲೇ ಅವರಕು ತಾನೂ ಬದುಕಿರೋದಾಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.ಅಲ್ಲದೇ ತಾನು ಗೋವಾದಲ್ಲಿ ಇರೋದಾಗಿ ಅವರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರೀತಿಯ ತೇಜಸ್ವಿನಿಗೆ ಅಂತ ಪತ್ರವನ್ನು ಆರಂಭಿಸಲಾಗಿದ್ದು,. ಮೊದಲನೆಯದಾಗಿ ದಯವಿಟ್ಟು ನನ್ನನ್ನು ಕ್ಷಮಿಸು. ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸದ ಪರಿಸ್ಥಿತಿಯಲ್ಲಿದ್ದೇನೆ ಅಂತ ಪತ್ರದಲ್ಲಿ ಬರೆಯಲಾಗಿದೆ.
ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ ಬಂದು ಸಾಲ ತೀರಿಸಿ, ನನಗಂಟಿರೋ ಕಳಂಕವನ್ನು ಹೋಗಲಾಡಿಸಿ, ಮತ್ತೆ ಧೈರ್ಯವಾಗಿ ತಲೆಯೆತ್ತಿ ಎಲ್ಲರ ಮುಂದೆ ಜೀವನ ನಡೆಸುಬೇಕೆಂದುಕೊಂಡಿದ್ದೇನೆ. ಅಲ್ಲಿಯವರೆಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ ಅಂತ ಪತ್ರದಲ್ಲಿ ಬರೆಯಲಾಗಿದೆ.
ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ ಅಂತ ಆ ಪತ್ರದಲ್ಲಿ ಬರೆಯಲಾಗಿದೆ. ನನ್ನ ಈ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಅಂತ ಪತ್ರದಲ್ಲಿ ಬರೆದಿದ್ದು, ಕೊನೆಯಲ್ಲಿ ಮಲ್ಲಿಕಾರ್ಜುನ್ ಅಂತ ಸಹಿ ಹಾಕಲಾಗಿದೆ.
ಏನಿದು ದರ್ಶನ್ ಮಲ್ಲಿಕಾರ್ಜುನ್ ತಕರಾರು?
2018ರಲ್ಲಿ ಮಲ್ಲಿಕಾರ್ಜುನ್ ದಿಢೀರ್ ನಾಪತ್ತೆಯಾಗಿದ್ದರು. ಅದಕ್ಕೆ ಕಾರಣ ಅವರು ಮಾಡಿಕೊಂಡಿದ್ದ ಕೋಟ್ಯಂತರ ರೂಪಾಯಿ ಸಾಲ.ದರ್ಶನ್ ಹೆಸರು ಬಳಸಿಕೊಂಡು ಅವರು 10 ಕೋಟಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ದರ್ಶನ್ ಹೆಸರು ಹೇಳಿಕೊಂಡು ಸಿನಿಮಾ ನಿರ್ಮಾಣ ಹಾಗೂ ವಿತರಣೆಗೆ ಕೈ ಹಾಕಿದ್ದ ಮಲ್ಲಿಕಾರ್ಜುನ ಎಲ್ಲಾ ಕಡೆ ಕೈ ಸುಟ್ಟುಕೊಂಡಿದ್ದರು. ಬಳಿಕ ಸಾಲ ತೀರಿಸಲಾಗದೇ ತಮ್ಮ ಕುಟುಂಬವನ್ನು ಬೆಂಗಳೂರಿಂದ ಶಿಫ್ಟ್ ಮಾಡಿಸಿ ಯಾರಿಗೂ ಹೇಳದೆ ನಾಪತ್ತೆಯಾಗಿದ್ದರು. ಇದುವರೆಗೂ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಅವರು ಜೀವಂತ ಇರಲಿಕ್ಕಿಲ್ಲ ಎಂದು ಬಹುತೇಕರು ಅಂದುಕೊಂಡಿದ್ದರು. ಇದೀಗ ದರ್ಶನ್ ಪ್ರಕರಣ ಸದ್ದು ಮಾಡುತ್ತಿದ್ದಂತೆ ಅವರ ನಾಪತ್ತೆ ವಿಚಾರವೂ ಭಾರೀ ಸದ್ದು ಮಾಡಿತ್ತು. ಇದೀಗ ಮಲ್ಲಿಕಾರ್ಜುನ್ ತಾನು ಜೀವಂತವಾಗಿ ಇರೋದಾಗಿ ಹೇಳಿರೋದರಿಂದ ಅವರ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದೆ.