ಮನೆ ಪ್ರಸ್ತುತ ವಿದ್ಯಮಾನ ಸ್ಯಾಂಡಲ್ ವುಡ್ ನಿಂದ ಸದ್ಯಕ್ಕೆ ದರ್ಶನ್ ಅವರನ್ನು ನಿಷೇಧಿಸಲ್ಲ; ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ...

ಸ್ಯಾಂಡಲ್ ವುಡ್ ನಿಂದ ಸದ್ಯಕ್ಕೆ ದರ್ಶನ್ ಅವರನ್ನು ನಿಷೇಧಿಸಲ್ಲ; ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಸ್ಪಷ್ಟನೆ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಟ ದರ್ಶನ್  ಅರೆಸ್ಟ್ ಆಗುತ್ತಿದ್ದಂತೆ ದರ್ಶನ್ ಅವರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬ ಸಾಮಾಜಿಕ ಜವಬ್ದಾರಿ ಇರೋ ನಟ ಈ ರೀತಿ ನಡೆದುಕೊಳ್ಳೋದು ಎಷ್ಟರಮಟ್ಟಿಗೆ ಸರಿ ಎಂದು ಜನ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಇಂತಹ ನಟನ ಸಿನಿಮಾವನ್ನು ಜನ ನೋಡ್ಬೇಕಾ ಅವನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿ ಎಂಬ ಆಗ್ರಹ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಇಂದು ವಾಣಿಜ್ಯ ಮಂಡಳಿ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ತಮ್ಮ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ದರ್ಶನ್ ಆರೋಪಿ ಅಷ್ಟೇ. ಅವರು ಅಪರಾಧಿ ಎಂದು ಸಾಬೀತಾಗಿಲ್ಲ. ಹಾಗಾಗಿ ತೀರ್ಪು ಬರುವ ಮೊದಲೇ ಅವರನ್ನು ನಿಷೇಧ ಮಾಡುವ ಬಗ್ಗೆ ಯಾವುದೇ ನಿರ್ಧಾರ ಈಗ ತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ರು.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇ ಇಂತಹ  ಹೀನ ಕೆಲಸ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ನಾವು ಆಗ್ರಹಿಸುತ್ತೇವೆ, ನಾಳೆ ರೇಣುಕಾಸ್ವಾಮಿ ಮನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಎಲ್ಲರೂ ತೆರಳಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬ ಕೆಲಸ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ಸ್ ಚಳಿ ಬಿಡಿಸಿದ ಬ್ಯೂಟಿ ಕ್ವೀನ್ ರಮ್ಯಾ

ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಧ್ವನಿ ಎತ್ತಿದ ಮೊದಲ ನಟಿ ಅಂದ್ರೆ ಅದು ರಮ್ಯಾ. ಎಕ್ಸ್ ನಲ್ಲಿ ಹಳೆಯ ಪೋಸ್ಟ್ ಒಂದನ್ನು ರೀ ಪೋಸ್ಟ್ ಮಾಡಿದ ರಮ್ಯಾ ದರ್ಶನ್ ಗೆ ಜೀವಾವಧಿ ಶಿಕ್ಷೆಯಾಗುತ್ತಾ ಎಂದು ಪ್ರಶ್ನಿಸಿದ್ದರು.ಅದಾದ ಬೆನ್ನಲ್ಲೇ ಇದೀಗ ರಮ್ಯಾ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಹಾಕಿ ಟ್ರೋಲರ್ಸ್ ಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ದರ್ಶನ್ ಪ್ರಕರಣವನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ಅವರು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಅನ್ನೋ ಆಪ್ಶನ್ ಇದೆ. ಸಾಮಾಜಿಕ ಮಾಧ್ಯಮದಲ್ಲಿ ಬ್ಲಾಕ್ ಅನ್ನೋ ಒಪ್ಶನ್ ಇದೆ.ನಮಗೆ ಇಷ್ಟ ಇಲ್ಲದವರು, ಟ್ರೋಲ್ ಮಾಡುವವರು, ಕೆಟ್ಟ ಕಾಮೆಂಟ್ಸ್ ಮೂಲಕ ಕಿರುಕುಳ ಕೊಡುವವರು ಇದ್ದೇ ಇರ್ತಾರೆ .ನಾನು ಸೇರಿದಂತೆ ನಟ ನಟಿಯರನ್ನು ಟ್ರೋಲ್ ಮಾಡೋ ದುರುಳರಿರ್ತಾರೆ.ಕೆಟ್ಟ ಮೆಸೇಜ್ ಕಳಿಸಿದ್ರೆ ಕೊಂದೇ ಬಿಡುವ ಶೋಚನೀಯ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಕಾನೂನು ಪಾಲಿಸುವ ನಾಗರಿಕರು ಮಾಡಬೇಕಾದಂತಹ ಪ್ರಕರಣಗಳನ್ನು ನಾನು ದಾಖಲಿಸಿದ್ದೇನೆ.

ಟ್ರೋಲ್ ಮಾಡುವವರು ಕಿರುಕುಳ ನೀಡಿದ್ರೆ, ಪೊಲೀಸರಿಂದ ಎಚ್ಚರಿಕೆ ಕೊಡಿಸಬೇಕು.ಟ್ರೋಲರ್ಸ್  ಜೀವನವನ್ನು ಹಾಳುಮಾಡುತ್ತಿದ್ದಾರೆ.ಯಾರೂ ಕಾನೂನಿಗಿಂತ ಮೇಲಲ್ಲ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾರಿಗೂ ಹೊಡೆಯಲು ಮತ್ತು ಕೊಲ್ಲಲು ಹಕ್ಕಿಲ್ಲ ನ್ಯಾಯ ಸಿಗುತ್ತೋ, ಇಲ್ಲವೋ , ಒಂದು ಕಂಪ್ಲೇಂಟ್ ಕೊಡಿ ಪೊಲೀಸರು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಪೋಲೀಸರು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ .ರೇಣುಕಾಸ್ವಾಮಿಗೆ ನ್ಯಾಯ ಕೊಡಿ ದರ್ಶನ್ ಎಂದು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ರಮ್ಯಾ ಬರೆದುಕೊಂಡಿದ್ದಾರೆ.ಅಲ್ಲದೇ ಹ್ಯಾಶ್ ಟ್ಯಾಗ್ ಬಳಸಿ ದರ್ಶನ್, ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ ಹೆಸರನ್ನು ರಮ್ಯಾ ಉಲ್ಲೇಖಿಸಿದ್ದಾರೆ.