ಮನೆ Latest News ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ ಬಾಸ್ ಜೈಲುಪಾಲು; ನೆಚ್ಚಿನ ನಟನನ್ನು ನೋಡಲು ಪರಪ್ಪನ ಅಗ್ರಹಾರದತ್ತ ಬರುತ್ತಿರುವ...

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ ಬಾಸ್ ಜೈಲುಪಾಲು; ನೆಚ್ಚಿನ ನಟನನ್ನು ನೋಡಲು ಪರಪ್ಪನ ಅಗ್ರಹಾರದತ್ತ ಬರುತ್ತಿರುವ ಅಭಿಮಾನಿಗಳು

0

ಬೆಂಗಳೂರು : ತನ್ನ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 13 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿರೋದರಿಂದ ಜುಲೈ 4 ರವರೆಗೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿರಲಿದ್ದಾರೆ. ಆ ಬಳಿಕ ಮತ್ತೆ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತೆ.

ಇನ್ನು ದರ್ಶನ್ ಜೈಲು ಸೇರುತ್ತಿದ್ದಂತೆ ಅವರ ಅಭಿಮಾನಿಗಳ ತೀವ್ರ ಬೇಸರಕ್ಕೆ ಒಳಗಾಗಿದ್ದರು.ಇದೀಗ ತಮ್ಮ ನೆಚ್ಚಿನ ನಟನನ್ನು ನೋಡು ಬೇರೆ ಬೇರೆ ಜಿಲ್ಲೆ ಜಿಲ್ಲೆಗಳಿಂದ ಅಭಿಮಾನಿಗಳು ಪರಪ್ಪನ ಅಗ್ರಹಾರದತ್ತ ಧಾವಿಸುತ್ತಿದ್ದಾರೆ. ಬಳ್ಳಾರಿ ತುಮಕೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಇಂದು ಫ್ಯಾನ್ಸ್ ಜೈಲಿನ ಬಳಿ ಆಗಮಿಸಿದ್ದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅಭಿಮಾನಿಗಳು ಡಿ ಬಾಸ್ ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆಯಾಗಲಿ. ಇಷ್ಟೆಲ್ಲಾ ಆದ್ರೂ ನಮ್ಗೆ ಅವರ ಮೇಲಿನ ಅಭಿಮಾನ ಮಾತ್ರ ಯಾವತ್ತೂ ಕಮ್ಮಿಯಾಗಲ್ಲ ಎಂದಿದ್ದಾರೆ.

ನಿನ್ನೆ ದರ್ಶನ್ ಭೇಟಿಯಾದ ಪತ್ನಿ, ಪುತ್ರ

ನಿನ್ನೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ದರ್ಶನ್ ರನ್ನು ಭೇಟಿಯಾದರು. ಈ ವೇಳೆ ಮಗನನ್ನು ನೋಡುತ್ತಿದ್ದಂತೆ ಆತನನ್ನು ಬಿಗಿದಪ್ಪಿಕೊಂಡ ದಾಸ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕೆಲ ಹೊತ್ತು ಮಾತನಾಡಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ ಬಾಸ್ ಪತ್ನಿ ಜೊತೆ ಕೆಲ ಹೊತ್ತು ಮಾತನಾಡಿದ್ದು ಈ ವೇಳೆ ಭಾವುಕರಾಗಿದ್ದರು ಎನ್ನಲಾಗಿದೆ. ಸುಮಾರು  ಅರ್ಧ ಗಂಟೆಗಳ ಕಾಲ ದರ್ಶನ್ ಪತ್ನಿ ಹಾಗೂ ಮಗನ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಮಗನೊಂದಿಗೆ ಮಾತನಾಡುತ್ತಾ ಹೆಚ್ಚು ಸಮಯ ಕಳೆದಿದ್ದಾರೆ ಎನ್ನಲಾಗಿದೆ.

ಗೆಳೆಯನನ್ನು ಭೇಟಿಯಾಗಿದ್ದ ವಿನೋದ್ ಪ್ರಭಾಕರ್

ಇನ್ನು ನಿನ್ನೆ ದರ್ಶನ್ ಅವರನ್ನು ನೋಡಲು ನಟ ವಿನೋದ್ ಪ್ರಭಾಕರ್ ಕೂಡ ಇಂದು ಜೈಲಿಗೆ ಆಗಮಿಸಿದ್ದರು. ದರ್ಶನ್ ಭೇಟಿಯ ಬಳಿಕ ಮಾತನಾಡಿದ ಅವರು ದರ್ಶನ್ ಮೌನವಾಗಿದ್ರು…ಏನ್ ಟೈಗರ್ ಅಂತ ಹೇಳಿದ್ರು.ಅಷ್ಟೇ ಅವರು ನನ್ನ ಬಳಿ ಮಾತಾನಾಡಿದ್ದು ಎಂದಿದ್ದಾರೆ, ಅವರಿಗೆ ಶೇಕ್ ಹ್ಯಾಂಡ್ ಮಾಡಿ ಬಂದೆ ಎಂದು ಹೇಳಿದ್ದಾರೆ.ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ.ಈ ಪ್ರಕರಣ ಬಹಳ ಗಂಭೀರವಾಗಿದೆ.ಏನು ಮಾತನಾಡಬೇಕು ಎನ್ನುವ ಕ್ಲಾರಿಟಿ ನನಗಿಲ್ಲ.ಯಾರಿಗೆ ಸಾಂತ್ವನ ಹೇಳಬೇಕು ಅಂತ ತಿಳಿಯಲಿಲ್ಲ.ನನ್ನ ಪ್ರಕಾರ ಎಲ್ಲರಿಗೂ ಒಳ್ಳೆಯದು ಆಗುತ್ತೆ ಎಂದು ವಿನೋದ್ ಹೇಳಿದ್ದರು.

ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

ನಿನ್ನೆ ದರ್ಶನ್ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ ಅಂತಾ ಹೇಳಲಾಗಿತ್ತು. ಆದರೆ ಇದೀಗ ದರ್ಶನ್ ಹೊರತುಪಡಿಸಿ ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಕೇಶವಮೂರ್ತಿ, ನಿಖಿಲ್ ನಾಯಕ್, ರವಿಶಂಕರ್, ನಂದೀಶ್ ನನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.