ಮನೆ Latest News ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು

0

ಬೆಂಗಳೂರು; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ ಕೆ ಸುರೇಶ್ ಕುಮಾರಸ್ವಾಮಿ ಅವರು ಆರ್ಸಿಬಿ ಗೆದ್ಮೇಲೆ ಜೆಡಿಎಸ್ ಏನು ಟ್ವೀಟ್ ಮಾಡಿದ್ದಾರೆ ತೋರಿಸಬೇಕು. ಮಾತು ತಿರುಚೋದ್ರಲ್ಲಿ ಅವರು ನಿಸ್ಸಿಮರು. ಅವರ ಘನತೆಗೆ ಸರಿ ಬರುತ್ತೋ ಗೊತ್ತಿಲ್ಲ. ಅವರಿಗೆ ಇನ್ನೂ ಒತ್ತಡ ಇದೆ, ಆರೋಗ್ಯ ಸರಿಯಿಲ್ಲ, ಅದರ ಬಗ್ಗೆ ಗಮನ ಹರಿಸಬೇಕು. ರಾಜ್ಯದ ಜನರ ಬಗ್ಗೆ ಚಿಂತನೆ ಮಾಡಬೇಕು ಅಂತ ಹೇಳುತ್ತೇವೆ ಎಂದಿದ್ದಾರೆ.

ಬಿಜೆಪಿಯಿಂದ ಮಂಗಳೂರು ಚಲೋ ವಿಚಾರದ ಬಗ್ಗೆ ಮಾತನಾಡಿದ ಅವರು  ಮಂಗಳೂರಿಗೆ ಅದಕ್ಕೆ ಆದ ಇತಿಹಾಸ ಇದೆ. ವಿನಾಕಾರಣ ಕರಾವಳಿ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ಮಾಡೋ ಯತ್ನ ಮಾಡಲಾಗ್ತಿದೆ. ಸೌಹಾರ್ದ ವಾತಾವರಣ ಸೃಷ್ಟಿ ಮಾಡಬೇಕು. ರಾಜಕಾರಣ ದೃಷ್ಟಿಯಿಂದ ಜನರಿಗೆ ಎತ್ತಿಕಟ್ಟೋ ಯತ್ನ ಸರಿಯಿಲ್ಲ. ಆರೋಗ್ಯಕ್ಕೆ ಒಳ್ಳೆಯದ್ದು ಅಲ್ಲ. ಕೇಂದ್ರ ಸರ್ಕಾರಕ್ಕೆ ಹೇಳಲಿ, ಅಲ್ಲೊಂದು ಮಾತು ಇಲ್ಲೊಂದು ಮಾತು ಆಡುತ್ತಾರೆ, ಅದನ್ನ ಬಿಡಬೇಕು ಎಂದಿದ್ದಾರೆ.

ಕುಮಾರಸ್ವಾಮಿ ಮಾತು ಸೀರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಬೆಳಗ್ಗೆ ಒಂದು ರಾತ್ರಿ ಒಂದು ಹೇಳ್ತಾರೆ. ಈಗ ನಡೆದಿರೋ ಸಾವಿನ ದುರಂತದ ಬಗ್ಗೆ ಎಸ್ಕೇಪ್ ಆಗುತ್ತಿಲ್ಲ. ಅಚಾತುರ್ಯವಾಗಿ ನಡೆದಿದೆ. ಪ್ರಯಾಗರಾಜ್ ನಲ್ಲಿ ಕಾಲ್ತುಳಿತ ಆಗಿದೆ. ಕೇಂದ್ರ ಸರ್ಕಾರ ಅದನ್ನ ಮುಚ್ಚಿಹಾಕೋ ಪ್ರಯತ್ನ ಮಾಡಿತ್ತು. ಕೆಲವೊಂದು ಲೋಪದೋಷಗಳು ಆಗಿರಬಹುದು. ಈಗ ಸಾಂತ್ವನ ಹೇಳೋ ಕಾಲ. ದಿನಕ್ಕೊಂದು ರಾಜಕೀಯ ಕ್ಕಾಗಿ ಮಾಧ್ಯಮ ಮುಂದೆ ಹೇಳಿಕೆ ಕೊಡಬಾರದು. ಎಲ್ಲದಕ್ಕೂ ವಿರಾಮ ಹಾಕಬೇಕು. ಸರಿ ಪಡಿಸೋಕೆ ವಿಪಕ್ಷ ಗಳು ಸಲಹೆ ಕೊಡಬೇಕು ಎಂದರು.