ಮನೆ ಪ್ರಸ್ತುತ ವಿದ್ಯಮಾನ ಸಿಎಂ ವಿರುದ್ದ ಆರೋಪ ಮಾಡುತ್ತಿದ್ದ ಅವರಿಗೆ ಮೂರು ಭಾಗದಿಂದ ಜನ ಸ್ಪಷ್ಟ ಸಂದೇಶ ನೀಡಿದ್ದಾರೆ;...

ಸಿಎಂ ವಿರುದ್ದ ಆರೋಪ ಮಾಡುತ್ತಿದ್ದ ಅವರಿಗೆ ಮೂರು ಭಾಗದಿಂದ ಜನ ಸ್ಪಷ್ಟ ಸಂದೇಶ ನೀಡಿದ್ದಾರೆ; ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ

0

ಬೆಂಗಳೂರು; ಸಿಎಂ ವಿರುದ್ದ ಆರೋಪ ಮಾಡುತ್ತಿದ್ದ ಅವರಿಗೆ ಮೂರು ಭಾಗದಿಂದ ಜನ ಸ್ಪಷ್ಟ ಸಂದೇಶ  ನೀಡಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ. ಇವತ್ತು ಮೂರು ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅಭ್ಯರ್ಥಿ ಗೆ ಗೆಲುವು ಆಗಿದೆ. ವಿರೋಧ ಪಕ್ಷಗಳು ಗ್ಯಾರಂಟಿ ವಿರುದ್ದ ಪ್ರಹಾರ ಮಾಡುತ್ತಿದ್ದವು. ಸಿಎಂ ವಿರುದ್ದ ಆರೋಪ ಮಾಡುತ್ತಿದ್ದ ಅವರಿಗೆ ಮೂರು ಭಾಗದಿಂದ ಜನ ಸ್ಪಷ್ಟ ಸಂದೇಶ  ನೀಡಿದ್ದಾರೆ. ಗೆಲುವು ಕೋಡೋದರ ಮೂಲಕ ವಿರೋಧ ಪಕ್ಷಗಳಿಗೆ ಉತ್ತರ ನಿಡಿದ್ದಾರೆ. ನೀವು ಮಾಡುವ ಆರೋಪ ಮತ್ತು ಇಲ್ಲ ಸಲ್ಲದ ಹೇಳಿಕೆಗಳು ಸರಿಯಿಲ್ಲ‌ಅಂತ ಜನ ನಮಹೆ ಮನ್ನಣೆ ನೀಡಿದ್ದಾರೆ. ಚನ್ನಪಟ್ಟಣ ದ ಮತದಾರರು ಸ್ಪಷ್ಟ ಸಂದೇಶ ನೀಡಿದ್ದಾರೆ. ಎನ್ ಡಿಗೆ ಮತ್ರು ಬಿಜೆಪಿಗೆ ಉತ್ತರ ನೀಡಿದ್ದಾರೆ.ಚನ್ನಪಟ್ಟಣ, ಶಿಗ್ಗಾಂವಿ ಯಲ್ಲಿ ಎರಡೂ ಕ್ಷೇತ್ರದಲ್ಲಿ ಸಂದೇಶ ನೀಡಿದ್ದಾರೆ. ಆರೋಪಕ್ಕೆ ಕಡಿವಾಣ ಹಾಕಿ ಅಭಿವೃದ್ಧಿ ಗೆ ಮನ್ನಣೆ ನೀಡಿದ್ದಾರೆ.ಅವರ ಆರೋಪಗಳಿಗೆ ಮಾಜಿ ಪ್ರಧಾನಿ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರು ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಸ್ಪಷ್ಟ ತೀರ್ಪು ನೀಡಿದ್ದಾರೆ ಎಂದರು.

ಇನ್ನು ರಾಜ್ಯದ ಮೂರು ಪ್ರದೇಶದಲ್ಲಿ ವಿರೋಧ ಪಕ್ಷಕ್ಕೆ ಉತ್ತರ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿ,ಜೆಡಿಎಸ್ ಗೂ ಜನ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ ಪುತ್ರ ಇಬ್ಬರಿಗೂ ಉತ್ತರ ಕೊಟ್ಟಿದ್ದಾರೆ. ಅವರ ನಿಲುವು, ಬದ್ದತೆಗೆ ಕಡಿವಾಣ ಹಾಕಬೇಕು. ರಾಜ್ಯದ ಅಭಿವೃದ್ಧಿ ಗೆ ಜನ ಮನ್ನಣೆ ಕೊಟ್ಟಿದ್ದಾರೆ ಎಂದಿದ್ದಾರೆ.

ಈ ಮೂರು ಚುನಾವಣೆ ನಮ್ಮ ಗ್ಯಾರಂಟಿ ಮತ್ತು ಅಭಿವೃದ್ಧಿ ನಮಗೆ ಮುಖ್ಯ; ಡಿ ಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು; ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಬಗ್ಗೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಇವತ್ತು ೨೦೨೮ ರ ಚುನಾವಣೆ ಯ ದಿಕ್ಸೂಚಿ ಗೆ ಜನತೆ ಸಂದೇಶ ಕೊಟ್ಟಿದ್ದಾರೆ. ನಿನ್ನೆ ಸಂಜೆಯೇ ನಾನು ಹೇಳಿದ್ದೆ. ನಿಮ್ಮ ಸಮೀಕ್ಷೆ ಸುಳ್ಳಾಗುತ್ತದೆ.ನಾವು ಮಾಡೋ ಸಮೀಕ್ಷೆಯೇ ಬೇರೆ ಅಂತ‌ ಹೇಳಿದ್ದೆ ಎಂದಿದ್ದಾರೆ.

ಮೂರು ಕ್ಷೇತ್ರದ ಫಲಿತಾಂಶ ಬಂದಿದೆ. ಮೊದಲಿಗೆ ಚನ್ನಪಟ್ಟಣದಲ್ಲಿ ನಿಖಿಲ್‌ಸೋಲು ಎಂದು ಹೇಳೋಕೆ ತಯಾರಿಲ್ಲ.ಅವರ ತಂದೆ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಎಂಪಿ, ಎರಡು ಬಾರಿ ಸಿಎಂ ಆಗಿದ್ದರು. ಅವರು ಆ ಕ್ಷೇತ್ರದಲ್ಲಿ ಬಿಟ್ಟು ಹೋದ ಕುರುಹುಗಳಿಗೆ ಜನ ಉತ್ತರ ನೀಡಿದ್ದಾರೆ. ಶಿಗ್ಗಾಂವಿ ಯಲ್ಲೂ ಭರತ್ ಸೋಲು ಅನ್ನೋದು ಹೇಳಲ್ಲ. ಅಲ್ಲಿನ ಜನರ ಪ್ರೀತಿ ವಿಶ್ವಾಸ ನೋಡಿಕೊಂಡು ಅಲ್ಲಿ ಈ ಹಿಂದೆ ನಮ್ಮ ಅಭ್ಯರ್ಥಿ ಸೋತಿದ್ದರು. ಈಗ ಅಲ್ಲಿ ಯೂ ಗೆದ್ದಿದ್ದಾರೆ. ಈಗ ಸಂಡೂರಲ್ಲಿ ನಾವು ಗೆದ್ದಿದ್ದೇವೆ. ಈ ಮೂರು ಚುನಾವಣೆ ನಮ್ಮ ಗ್ಯಾರಂಟಿ ಮತ್ತು ಅಭಿವೃದ್ಧಿ ನಮಗೆ ಮುಖ್ಯ ಎಂದಿದ್ದಾರೆ.