ಮನೆ Latest News ಚನ್ನಪಟ್ಟಣ ಎನ್ ಡಿ ಅಭ್ಯರ್ಥಿ ಗೊಂದಲ; ಸಿ ಪಿ ಯೋಗೇಶ್ವರ್ ಮನವೊಲಿಕೆಗೆ ಮುಂದಾದ ಜೆಡಿಎಸ್...

ಚನ್ನಪಟ್ಟಣ ಎನ್ ಡಿ ಅಭ್ಯರ್ಥಿ ಗೊಂದಲ; ಸಿ ಪಿ ಯೋಗೇಶ್ವರ್ ಮನವೊಲಿಕೆಗೆ ಮುಂದಾದ ಜೆಡಿಎಸ್ ನಾಯಕರು

0

ಬೆಂಗಳೂರು; ಚನ್ನಪಟ್ಟಣ ಎನ್ ಡಿ  ಅಭ್ಯರ್ಥಿ ಗೊಂದಲಕ್ಕೆ ತೆರೆ ಎಳೆಯಲು ಸಿ ಪಿ ಯೋಗೇಶ್ವರ್ ಮನವೊಲಿಕೆ ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಅದರಂತೆ  ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಜೆಡಿಎಸ್ ನಾಯಕರು ಭೇಟಿ ಮಾಡಿದ್ರು. ಮಾಜಿ ಸಚಿವ ಸಾರಾ ಮಹೇಶ್ ನೇತೃತ್ವದಲ್ಲಿ ಸಿಪಿ ಯೋಗೇಶ್ವರ್ ಮನವೊಲಿಕೆಗೆ ಯತ್ನಿಸಿದ್ರು.

ಇನ್ನು ನ.13ರಂದು ಮೂರು ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಹಿನ್ನೆಲೆ  ಎಲ್ಲಾ ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರ ಸಭೆ ನಡೆಯಿತು.ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ಸೇರಿ ಐವರು ನಾಯಕರ ಭೇಟಿಯಾದ್ರು.ಉಪಚುನಾವಣೆ ನಿಮಿತ್ತ NDA ಮೈತ್ರಿಕೂಟಕ್ಕೆ ಶಕ್ತಿ ತುಂಬುವ  ಕಾರ್ಯತಂತ್ರಕ್ಕೆ JDS ಮುಂದಾಗಿದೆ.

ಈ ಹಿನ್ನೆಲೆ ಇಂದು ಕೇಂದ್ರ ಸಚಿವ ಹೆಚ್.ಡಿ‌. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಸಭೆ ನಡೆಯಲಿದೆ.ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಯಲಿದೆ.ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.

ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ ಹಾಗೂ ಆಲ್ಕೋಡ್ ಹನುಮಂತಪ್ಪ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.ಎರಡೂ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹಿನ್ನೆಲೆ ಹಾಗೂ ಜೆಡಿಎಸ್ ಸ್ಥಳೀಯ ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸಭೆ ಆಯೋಜನೆ  ಮಾಡಲಾಗಿದೆ.

ಪ್ರಧಾನಿ ಮೋದಿಯವರು ದೇಶಾದ್ಯಂತ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.ಕಾಂಗ್ರೆಸ್ ಮುಕ್ತ ಭಾರತ ಮಾಡುವ ಅವರ ಸಂಕಲ್ಪದ ಭಾಗವಾಗಿ .ಕೇಂದ್ರ ಸಚಿವ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಸಭೆಗಳ ಆಯೋಜನೆ ಮಾಡಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ಗೋವಿಂದ ಕಾರಜೋಳ ನನ್ನ ಜತೆ ಕುಮಾರಸ್ವಾಮಿ ನಿನ್ನೆ ಮಾತನಾಡಿದ್ದಾರೆ.ನಾವು ಯೋಗೇಶ್ವರ್ ಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಅಂದಿದ್ದೇವೆ.ಕುಮಾರಸ್ವಾಮಿಯವರು ಟಿಕೆಟ್ ಬಗ್ಗೆ ನಿರ್ಧಾರ ಮಾಡುತ್ತಾರೆ.ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ.ಇನ್ನೆರಡು ದಿನದೊಳಗೆ ಮೈತ್ರಿ ಅಭ್ಯರ್ಥಿ ಫೈನಲ್ ಆಗಲಿದ್ದಾರೆ.ಚನ್ನಪಟ್ಟಣದಲ್ಲಿ ಟಿಕೆಟ್ ಗೊಂದಲ ಇರುವುದು ನಿಜ.ಎಲ್ಲವೂ ಬಗೆಹರಿಯಲಿದೆ, ಅದು ಜೆಡಿಎಸ್ ಕ್ಷೇತ್ರ.ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿಗೆ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಭರತ್ ಸ್ಫರ್ಧೆ ಇಲ್ಲ ಅಂತಾ ಬಸವರಾಜ ಬೊಮ್ಮಾಯಿ‌ ನನ್ನ ಬಳಿ ಹೇಳಿದ್ದಾರೆ.ನಾನೇ ಶಿಗ್ಗಾಂವ್ ಕ್ಷೇತ್ರದ ಉಸ್ತುವಾರಿಯಾಗಿದ್ದೇನೆ. ಅಲ್ಲೂ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು