ಮನೆ Latest News ಹಸುವಿನ ಕೆಚ್ಚಲು ಕೊಯ್ದ ಆರೋಪಿ ಮೆಂಟಲ್ ಅಲ್ಲ;: ಕೆಚ್ಚಲು ಕೊಯ್ಯಲ್ಪಟ್ಟ ಹಸು ಮಾಲೀಕ ಕರ್ಣ ಹೇಳಿಕೆ

ಹಸುವಿನ ಕೆಚ್ಚಲು ಕೊಯ್ದ ಆರೋಪಿ ಮೆಂಟಲ್ ಅಲ್ಲ;: ಕೆಚ್ಚಲು ಕೊಯ್ಯಲ್ಪಟ್ಟ ಹಸು ಮಾಲೀಕ ಕರ್ಣ ಹೇಳಿಕೆ

0

 

ಬೆಂಗಳೂರು; ಹಸುವಿನ ಕೆಚ್ಚಲು ಕೊಯ್ದ ಆರೋಪಿ ಮೆಂಟಲ್ ಅಲ್ಲ ಎಂದು ಕೆಚ್ಚಲು ಕೊಯ್ಯಲ್ಪಟ್ಟ ಹಸು ಮಾಲೀಕ ಕರ್ಣ ಹೇಳಿದ್ದಾರೆ. ಕರ್ಣ ನಿವಾಸಕ್ಕೆ ಇಂದು ಬಿಜೆಪಿ ನಾಯಕರು ತೆರಳಿ ಸಂಕ್ರಾಂತಿ ಹಬ್ಬದ ಹಿನ್ನೆಲೆ ಅಲ್ಲೇ ಗೋ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಹಸುಗಳ ಮಾಲೀಕ ಕರ್ಣ ಬಂಧನ ಮಾಡಿರು ಆರೋಪಿಯನ್ನು ಐದು ವರ್ಷದಿಂದ ನಾನು ಇಲ್ಲೇ ನೋಡಿದ್ದೇನೆ. ಆತ ಮೆಂಟಲ್ ಅಲ್ಲ. ಮೆಂಟಲ್ ಆಗಿದ್ದರೆ ಅವನಿಗೆ ಹೇಗೆ ಕೆಲಸ ಕೊಡುತ್ತಾರೆ? ಎಂದಿದ್ದಾರೆ.

ಬಿಜೆಪಿಯವರು ಹಸು ಕೊಡುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ.ಫೋನ್ ಮಾಡಿ ಹಸು ತಂದು ಕೊಟ್ಟರು. ನನಗೆ ಆಗಿದ್ದು ಬೇರೆ ಯಾರಿಗೂ ಆಗಬಾರದು.ನನ್ನ ತಾತ, ಅಪ್ಪನ ಕಾಲದಿಂದ ನಾನು ಇಲ್ಲಿ ಇದ್ದೇವೆ.ಅಶೋಕ್ ಅವರು ಒಂದು ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎಂದರು.

ಸಂಸದ ಪಿ.ಸಿ. ಮೋಹನ್ ಇದೇ ವೇಳೆ ಮಾತನಾಡಿ ಕಾಂಗ್ರೆಸ್ ಅವರು ಹಸು ತೆಗೆದುಕೊಳ್ಳಲು ಅಂತ ಕರ್ಣನಿಗೆ ಒತ್ತಡ ಹಾಕಿದ್ದಾರೆ. ಪೊಲೀಸರು ಅವರಿಗೆ ಸಹಕಾರ ಕೊಟ್ಟಿದ್ದಾರೆ. ಸಾವಿರ ಹಸು ಬೇಕಾದರೂ ನಾವು ಕೊಡುತ್ತೇವೆ. ಯಾರನ್ನೋ ಬಂಧನ ಮಾಡಿದ್ರೆ ಆಗಲ್ಲ. ಕೃತ್ಯ ಮಾಡಿರುವವರನ್ನು ಬಂಧನ ಮಾಡಿ. ಅಲ್ಲಿವರೆಗೂ ನಾವು ಹೋರಾಟ ಮಾಡುತ್ತೇವೆ.ಕುಡಿದ ಅಮಲಿನಲ್ಲಿ ಇರುವುದು ಸರ್ಕಾರ ಎಂದರು.

ಇನ್ನು ಕೆಚ್ಚಲು ಕುಯ್ಯಲ್ಪಟ್ಟ ಹಸುಗಳನ್ನು ನೋಡಲು ಪಶು ಆಸ್ಪತ್ರೆಗೆ ಬಿಜೆಪಿ ನಾಯಕರು ಭೇಟಿ ನೀಡಿದರು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ್ ಮತ್ತು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಭೇಟಿ ನೀಡಿದರು.

ಇದೇ ವೇಳೆ ಮಾತನಾಡಿದ ಆರ್ ಅಶೋಕ್ ಸರ್ಕಾರ ಹಸು ಕೊಡಿಸುವುದು ಬೇಡ. ಇದರಲ್ಲಿ ಸರಿಯಾದ ತನಿಖೆ ಆಗಬೇಕು. ಒಂದು ಲಕ್ಷ ಕೊಟ್ಟಿದ್ದು ಹಸುಗಳ ಚಿಕಿತ್ಸೆಗೆ. ಸಿ.ಟಿ. ರವಿ ಬಂಧನ ಮಾಡಿ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದರು. ಈಗ ಬಂಧನ ಮಾಡಿದವನನ್ನು ಜೈಲಿಗೆ ಹಾಕಿದ್ದಾರೆ‌. ತನಿಖೆಗೆ ಅವನನ್ನು ಪಡೆದಿಲ್ಲ. ಈ ಸರ್ಕಾರ ಕೇಸ್ ಮುಚ್ಚಿ ಹಾಕಲು ಹೊರಟಿದೆ. ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ. ಸ್ಥಾನ ತ್ಯಾಗ ಮಾಡುವ ಮುನ್ನ ಗೋವುಗಳಿಗೂ ತ್ಯಾಗ ಮಾಡಿ.ನಿಮಗೆ ಜೀವನ ಪೂರ್ತಿ ಹಾಲು ಹಾಲು ಕೊಟ್ಟ ಗೋವಿಗೆ ಒಳ್ಳೆಯದು ಮಾಡಿ ಎಂದರು.