ಮನೆ Latest News ಬೆಂ. ದಕ್ಷಿಣ ಜಿಲ್ಲೆಗೆ ರಾಮನಗರ ಸೇರ್ಪಡೆ ಕೈತಪ್ಪಲು ಕುಮಾರಸ್ವಾಮಿ ಕಾರಣ ಎಂಬ ಆರೋಪಕ್ಕೆ ವಿಧಾನಸೌಧದಲ್ಲಿ ಪರಿಷತ್...

ಬೆಂ. ದಕ್ಷಿಣ ಜಿಲ್ಲೆಗೆ ರಾಮನಗರ ಸೇರ್ಪಡೆ ಕೈತಪ್ಪಲು ಕುಮಾರಸ್ವಾಮಿ ಕಾರಣ ಎಂಬ ಆರೋಪಕ್ಕೆ ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಟಿ.ಎ ಶರವಣ ತಿರುಗೇಟು

0

ಬೆಂಗಳೂರು: ಬೆಂ. ದಕ್ಷಿಣ ಜಿಲ್ಲೆಗೆ ರಾಮನಗರ ಸೇರ್ಪಡೆ ಕೈತಪ್ಪಲು ಕುಮಾರಸ್ವಾಮಿ ಕಾರಣ ಎಂಬ ಆರೋಪಕ್ಕೆ ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಟಿ.ಎ ಶರವಣ ತಿರುಗೇಟು ಕೊಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ವಿಧಾನ ಪರಿಷತ್  ಸದಸ್ಯ ಟಿ.ಎ ಶರವಣ ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ರಾಮನಗರ ಜನ್ಮ ಕೊಟ್ಟ ಜಿಲ್ಲೆ. ಅದರೊಂದಿಗೆ ಕುಮಾರಸ್ವಾಮಿಗೆ ಭಾವನಾತ್ಮಕ ಸಂಬಂಧ ಇದೆ. ರಾಜಕಾರಣ ಹರಿಯುವ ನೀರು, ನಿಂತ ನೀರಲ್ಲ. ಅವರ ಅವಧಿಯಲ್ಲೇ ರಾಮನಗರ ಜಿಲ್ಲೆ ಅಂತ ಘೋಷಣೆ ಆಗಿದ್ದು. ಅವರ ಕೊಡುಗೆ ಜಿಲ್ಲೆಗೆ ಅಪಾರ ಎಂದ ಅವರು ಇದು ಕಾಲ ಚಕ್ರ, ಆ ಭಾಗದ ಜನರೇ ಉತ್ತರ ಕೊಡ್ತಾರೆ ಎಂದಿದ್ದಾರೆ.

ರಾಮನಗರ, ರಾಮನಗರ ಜಿಲ್ಲೆಯಾಗಿಯೇ ಉಳಿಯಬೇಕು. ಬೆಂಗಳೂರು ನಗರ ವೇಗವಾಗಿಯೇ ಬೆಳೆದಿದೆ. ಗ್ರೇಟರ್ ಬೆಂಗಳೂರನ್ನ ಗ್ರೇಟೆಸ್ಟ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಬೆಂಗಳೂರನ್ನ ಒಡೆಯಲು ಹೊರಟಿದ್ದಾರೆ. ತಾಕತ್ ಇದ್ರೆ ಸ್ಥಳೀಯ ಚುನಾವಣೆ, ಬಿಬಿಎಂಪಿ ಚುನಾವಣೆ ನಡೆಸಿ. ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಸವಾಲ್ ಹಾಕಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಜಮೀನು ಒತ್ತುವರಿ ತೆರವು ವಿಚಾರದ ಬಗ್ಗೆ ಮಾತನಾಡಿ ಕುಮಾರಸ್ವಾಮಿ ಅವರನ್ನ ಜನತೆ ಗೆಲ್ಲಿಸಿ ಕೇಂದ್ರದ ಮಂತ್ರಿಯಾಗಿದ್ದಾರೆ. ಅದನ್ನ ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳೊಕೆ ಆಗ್ತಿಲ್ಲ. ೪೦ ವರ್ಷದ ಹಿಂದೆ ಖರೀದಿಸಿದ್ದ ೪೦ ಎಕರೆ ಜಮೀನನನ್ನ ಕೆಣಕಿ ಆರೋಪ ಮಾಡಿ ಸರ್ಕಾರ ತೇಜೋವಧೆ ಮಾಡ್ತಿದೆ. ದೇವೇಗೌಡರು ರಾಜಕೀಯ ಜೀವನದಲ್ಲಿ ಕಳಂಕ ರಹಿತ ರಾಜಕಾರಣಿ. ಅಕ್ರಮವನ್ನ ಸಕ್ರಮ ಮಾಡಿಕೊಳ್ಳೊದಕ್ಕೆ ಕುಮಾರಸ್ವಾಮಿ ಕೈ ಹಾಕಿಲ್ಲ. ನಾವು ಹೈಕೊರ್ಟ್ ಆದೇಶವನ್ನ ಪಾಲಿಸುತ್ತೇವೆ. ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮಾಡ್ತಿವಿ. ಅಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ.ನಾವು ಸದನದಲ್ಲಿ ಕೇಳುವ ಪ್ರಶ್ನೆಗೆ ಸಚಿವರು ಉತ್ತರ ಕೊಡ್ತಿಲ್ಲ. ಯಾವುದೇ ಪ್ರಶ್ನೆಗೆ ಉತ್ತರ ಕೊಡದೆ ರಾಜ್ಯ ಸರ್ಕಾರ ಪಲಾಯನ ಮಾಡ್ತಿದೆ.ಗ್ಯಾರಂಟಿ ಅನುಷ್ಠಾನವನ್ನ ಯಾವ ಯಾವ ಏಜೆನ್ಸಿಗಳಿಗೆ ಕೊಟ್ಟಿದೆ ಅಂತ ಪ್ರಶ್ನೆ ಮಾಡಿದ್ದೆ. ೬ ಏಜೆನ್ಸಿಗೆ ಕೊಟ್ಟಿದ್ದಾರೆ, ಜಾತಿ ಬಣ್ಣ ಕಟ್ಟುತ್ತಾರೆ.ಮಂತ್ರಿಗಳನ್ನ ಸಮುದಾಯವನ್ನ ಕೇಳಿ ಪ್ರಶ್ನೆ ಮಾಡಬೇಕಾ..? ೫೨ ಸಾವಿರ ಕೋಟಿಯನ್ನ ಯಾವ ರೀತಿ ಬಳಕೆ ಮಾಡ್ತಿದ್ದಾರೆ ಅಂತ ಕೇಳೊದು ತಪ್ಪಾ. ಗೃಹಲಕ್ಷ್ಮಿಯನ್ನ ಯೋಜನೆಯನ್ನ ೬ ತಿಂಗಳು ಲಕ್ಷ್ಮಿ ಎಂದು ಘೋಷಣೆ ಮಾಡಿ. ಇಲ್ಲಾ ಚುನಾವಣೆ ಬಂದಾಗ ಮಾತ್ರ ಹಾಕ್ತಿವಿ ಎಂದು ಹೇಳಿ.ಮಹಿಳೆಯರು ಶಾಪ ಹಾಕ್ತಿದ್ದಾರೆ ಎಂದಿದ್ದಾರೆ.

 ರಾಮನಗರ ಜಿಲ್ಲೆಗೆ ಬೆಂ. ದಕ್ಷಿಣ ಜಿಲ್ಲೆ ಸೇರ್ಪಡೆಗೆ ಜನರ ವಿರೋಧ ಇಲ್ಲ: ವಿಧಾನಸೌಧದಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಬೆಂಗಳೂರು; ರಾಮನಗರ ಜಿಲ್ಲೆಗೆ ಬೆಂ. ದಕ್ಷಿಣ ಜಿಲ್ಲೆ ಸೇರ್ಪಡೆಗೆ ಜನರ ವಿರೋಧ ಇಲ್ಲ ಎಂದು  ವಿಧಾನಸೌಧದಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆ ಸೇರ್ಪಡೆಗೆ ಕೇಂದ್ರ ನಿರಾಕರಿಸಿದ ಬಗ್ಗೆ ಮಾತನಾಡಿದ ಅವರು ಯಾವ ಜನರ ವಿರೋಧ ಇಲ್ಲ. ರಾಮನಗರ ಜಿಲ್ಲೆಗೆ ಬೆಂ. ದಕ್ಷಿಣ ಜಿಲ್ಲೆ ಸೇರ್ಪಡೆಗೆ ಜನರ ವಿರೋಧ ಇಲ್ಲ. ಆದರೆ ಜನ ನಾಯಕರ ವಿರೋಧ ಇದೆ ಅಷ್ಟೆ ಎಂದಿದ್ದಾರೆ. ಬೆಂಗಳೂರು ಜಿಲ್ಲೆ 8 ವಿಧಾನಸಭಾ ಕ್ಷೇತ್ರ, ರಾಮನಗರದ 4 ಕ್ಷೇತ್ರ ಬೆಂಗಳೂರು ಜಿಲ್ಲೆ ಅಂತ ಇತ್ತು. ಮಕೃಷ್ಣ ಹೆಗಡೆ ಇದ್ದಾಗ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಅಂತ ಎರಡು ಭಾಗ ಆಯಿತು. ಕೇಂದ್ರ ಸರ್ಕಾರ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ಒಂದು ಸ್ಟೇಡಿಯಂಗೆ ಇವರ ಹೆಸರುಗಳನ್ನ ಇಟ್ಟಿಕೊಂಡ್ರು ಎಂದಿದ್ದಾರೆ.

ಇನ್ನು ಇದೇ ವೇಳೆ ಮಾ.22ಕ್ಕೆ ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ವಿಚಾರದ ಬಗ್ಗೆ ಮಾತನಾಡಿದ ಅವರು ನಮಗೆ ಮನವಿಯನ್ನು ಮೌಕಿಕ ರೂಪದಲ್ಲಿ ಹೇಳಿದ್ದಾರೆ.ಅವರ ಬೇಡಿಕೆಗಳು ರಾಜ್ಯದ ಪರವಾಗಿಯೇ ಇದೆ. ಅವರ ಹೋರಾಟ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ. ಅವರ ಕಾಳಜಿ ಸರಿಯಿದೆ. ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಬಂದ್ ಗೆ ಬೆಂಬಲ ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು  ಸಿಎಂ ಜೊತೆ ಮಾತನಾಡಬೇಕು ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ವೆಚ್ಚ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ 31 ಜಿಲ್ಲೆಗೂ ಹೋಗಬೇಕಲ್ಲ.ಎಲ್ಲಾ ಕಡೆಯೂ ಫ್ಲೈಟ್ ಇರಲ್ಲ. ನಮ್ಮ ರಾಜ್ಯದ ಸಿಎಂ ಅಷ್ಟೇ ಅಲ್ಲ, ಎಲ್ಲಾ‌ ರಾಜ್ಯದ ಸಿಎಂ ಕೂಡ ಬಳಸುತ್ತಾರೆ. ಇದರಲ್ಲಿ ಏನೂ ತಪ್ಪು ಕಾಣಿಸ್ತಿಲ್ಲ. ಪ್ರಧಾನಿ 8 ಸಾವಿರ ಕೋಟಿ ಕೊಟ್ಟು ಹೊಸ ಪ್ಲೈಟ್ ತಗೊಂಡಿದ್ದಾರೆ .ಅವರು ಹೊರ ದೇಶಗಳಿಗೆ ಹೋಗೊದಕ್ಕೆ ಬಳಸುತ್ತಾರೆ . ರಾಜನಾಥ್ ಸಿಂಗ್ ಗೆ ಸ್ಪೆಷಲ್ ಫ್ಲೈಟ್ ಇದೆ. ಅಮಿತ್ ಶಾ ಗೈ ಸ್ಪೆಷಲ್ ಫ್ಲೈಟ್ ಇದೆ. ಅದರ ಬಗ್ಗೆಯೂ ಚರ್ಚೆಯಾಗಲಿ . ಹುಬ್ಬಳ್ಳಿ, ಮಂಗಳೂರು ಕೆಲವು  ಕಡೆ ಅಷ್ಟೇ ಫ್ಲೈಟ್ ಇದೆ. ಫ್ಲೈಟ್ ಇದ್ರೂ ಸಮಯ ಅಡ್ಜೆಸ್ಟ್ ಆಗಲ್ಲ.ಬೆಳಿಗ್ಗೆ 6 ಗಂಟೆಗೆ ಫ್ಲೈಟ್ ಇದ್ರೆ ನಂತರ ಇರೋದಿಲ್ಲ. ಹಾಗಾಗಿ ಟೈಮ್ ಅಡ್ಜೆಸ್ಟ್ ಆಗಲ್ಲ. ಇದೇ ಕಾರಣಕ್ಕೆ ಬಳಕೆ ಮಾಡಿರುತ್ತಾರೆ .ಸಮಯದ ಅಭಾವ ಇರೋದ್ರಿಂದ ಬಳಕೆ ಮಾಡಿರುತ್ತಾರೆ.ಇದರಲ್ಲಿ ತಪ್ಪೇನು ಕಾಣಿಸ್ತಾ ಇಲ್ಲ ಎಂದು ಸಿಎಂ ರನ್ನು ಸಮರ್ಥಿಸಿಕೊಂಡಿದ್ದಾರೆ.