ಬೆಳಗಾವಿ; ಹಿಂದೂ ದೇವಸ್ಥಾನ, ಫಾರೆಸ್ಟ್ ಆಸ್ತಿಗಳನ್ನ ಲೂಟಿ ಮಾಡೋಕೆ ಬಿಟ್ಟಿದ್ದೇ ಕಾಂಗ್ರೆಸ್ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸುದ್ದಿಗೋಷ್ಟಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ
ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಹಗರಣದ ಕುರಿತು ಚರ್ಚೆ ಆಗಬೇಕು. ಇದು ತನಿಖೆ ಆಗಬೇಕು. ಇದರ ಜೊತೆ ಮುಡಾ ಹಗರಣ ಆಯ್ತು. ಇದು ದೊಡ್ಡ ಹೋರಾಟ ಮಾಡಿ ತಾರ್ಕಿಕ ಅಂತ್ಯಕ್ಕೆ ತಂದಿದ್ದೇವೆ. ಆದ್ರೆ ಇದರ ನಡುವೆ, ಕೋವಿಡ್ ಕುರಿತು ಎಫ್ ಐಅರ್ ಹಾಕಿದ್ದಾರೆ.ಇಷ್ಟು ದಿನ ಏನ್ ಮಾಡಿದ್ದೀರಿ. ನಾಲ್ಕು ವರ್ಷಗಳ ಹಳೇದನ್ನ ಕೆದಕಿದ್ದಾರೆ. ಆಗ ಪರಿಸ್ಥಿತಿ ಸರಿ ಇರಲಿಲ್ಲ. ಕಾಂಗ್ರೆಸ್ ಸಿದ್ದರಾಮಯ್ಯ ಮನೆಯಿಂದ ಆಚೆ ಬಂದಿಲ್ಲ. ಆದ್ರೆ ಈಗ ಕೇಸ್ ದಾಖಲಿಸಿದ್ದಾರೆ. ಇದರಲ್ಲಿ ದ್ವೇಷ ಇಲ್ಲದೇ ಬೇರೆ ಏನೂ ಇಲ್ಲ ಎಂದಿದ್ದಾರೆ.
ವಿರೋಧ ಪಕ್ಷವಾಗಿ ಇದಕ್ಕೆ ಹೆದರಿದ್ರೆ ಅವರು ಆಡಿದ್ದೇ ಆಟವಾಗುತ್ತದೆ. ಅವರದ್ದು ಓಲೈಕೆ ರಾಜಕೀಯ. ಹಿಂದೂ ದೇವಸ್ಥಾನ, ಫಾರೆಸ್ಟ್ ಆಸ್ತಿಗಳನ್ನಲೂಟಿ ಮಾಡೋಕೆ ಬಿಟ್ಟಿದ್ದೇ ಕಾಂಗ್ರೆಸ್. ಈ ಹೋರಾಡ ಮಾಡುತ್ತಿರೋದು ವಿಪಕ್ಷ. ಆದ್ರೆ ಇದಕ್ಕೆ ಹೆದರಲ್ಲ, ಇನ್ನೂ ಹೋರಾಟ ಮಾಡುತ್ತೇವೆ. ಈಗಾಗಲೇ ವಕ್ಫ್ ಕುರಿತು ಹೋರಾಟ ಮಾಡಿದ್ದೇವೆ. ಅಧಿವೇಶನ ದಲ್ಲಿ ನಾನು ಮಾತಾಡಿದ್ದೀನಿ. ದಾಖಲೆ ಸಮೇತ ಮಾತಾಡಿದ್ದೀನಿ. ಬ್ರಿಟಿಷರ ಕಾಲದಿಂದ ಓಲೈಕೆ ಮಾಡುತ್ತಿದ್ದಾರೆ. ಮುಸ್ಲಿಂ ಅವರಿಗೆ ವೋಟ್ ಬ್ಯಾಂಕ್ ಮಾಡುತ್ತಿದ್ದಾರೆ. ಸ್ಪೆಷಲ್ ಪವರ್ ಅನ್ನ ಮುಸ್ಲಿಂ ಅವರಿಗೆ ಕೊಟ್ಟಿದ್ದಾರೆ ಎಂದರು.
ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಅವರ ಡಿಎನ್ಎ ನಲ್ಲಿ ಎಂದಿದೆ. ಅವರ ಚಾಳಿ ಇವರಿಗೆ ಬಂದಿದೆ. ಸರ್ಫ್ ಹಾಕಿ ತೊಳೆದ್ರೂ ಅವರನ್ನ ಬಿಡಲ್ಲ. ಮೋದಿ ಬಂದ್ಮೇಲೆ ನಾವೇ ಗೊದ್ದಿರೋದು.ಅಲ್ಪ ಸಂಖ್ಯಾತರ ಪರ ನಿಂತ್ರೆ ಸಮಸ್ಯೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ 180 ಕೋಟಿ ಹಗರಣ ನಡೆದಿದೆ. ಅದರ ಬಗ್ಗೆ ಬಿಜೆಪಿ ಹೋರಾಟ ಮಾಡಿತು, ಅದು ಸಚಿವರ ರಾಜೀನಾಮೆ ಕೊಡಬೇಕಾಯ್ತು. ಬಳಿಕ ಮೂಡ ಹಗರಣದ ವಿರುದ್ಧ ಹೋರಾಟ ಮಾಡಿ, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಯ್ತು. ಕೋವಿಡ್ ಸಂದರ್ಭದಲ್ಲಿ ಹಗರಣ ನಡೆದಿದೆ.ಯಡಿಯೂರಪ್ಪ ಸರ್ಕಾರದ ವಿರುದ್ಧ ತನಿಖೆ ಮಾಡುತ್ತಿದೆ.ಇಷ್ಟು ವರ್ಷ ಕಾಂಗ್ರೆಸ್ ಏನು ಮಾಡ್ತಿದ್ರು. ಕೋವಿಡ್ ಸಂಧರ್ಭದಲ್ಲಿ ಪ್ರತೀ ಕ್ಷಣ, ಪ್ರತೀ ಗಂಟೆ ಮುಖ್ಯವಾಗಿತ್ತು.ಹಾಗಾಗಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು.ನಾವು ಪ್ರತೀ ದಿನ ಗಂಟೆಗಟ್ಟಲೆ ಹೊರಗೆ ಕೆಲಸ ಮಾಡಿದೆವು.ಆದ್ರೆ ಸಿದ್ದರಾಮಯ್ಯ ಆಗ ಹೊರಗೆ ಬರಲಿಲ್ಲ.ಈಗ ಯಡಿಯೂರಪ್ಪ ಅವರ ಮೇಲೆ ಕೋವಿಡ್, ಪೊಕ್ಸೋ ಕೇಸ್ ಹಾಕ್ತಿದ್ದಾರೆ. ಕಾಂಗ್ರೆಸ್ ವಿರುದ್ಧದ ಕೇಸ್ಗೆ ಸಮಾನವಾಗಿ ಇರಬೇಕು ಅಂತ ಕೇಸ್ ಹಾಕಿದ್ದಾರೆ.ಇದು ದ್ವೇಷದ ರಾಜಕಾರಣ.ವಕ್ಫ್ ಬೋರ್ಡ್ ಹೆಸರಲ್ಲಿ ಈಗ ರಾಜಕೀಯ ಮಾಡ್ತಿದೆ.ಸರ್ಕಾರದ, ರೈತರ ಆಸ್ತಿಯನ್ನ ಲೂಟಿ ಮಾಡಲು ಕಾಂಗ್ರೆಸ್ ಬಿಟ್ಟಿದೆ.ಇದರ ವಿರುದ್ಧವೂ ಬಿಜೆಪಿ ಹೋರಾಟ ಮಾಡ್ತಿದೆ.ಇವರ ಕೇಸಿಗೆ ಹೆದರಿ ಬಿಜೆಪಿ ಯಾವುದೇ ಹೋರಾಟ ಬಿಡಲ್ಲ.ಇವರ ಬೆದರಿಕೆಗೆ ಹೆದರಿ ಕೂರೋದಿಲ್ಲ.ಹಿಂದೆ ಬ್ರಿಟಿಷರು ಹಿಂದೂ, ಮುಸ್ಲಿಮರ ಹೊಡೆದು ಆಳಿದ್ರು.ಈಗ ಕಾಂಗ್ರೆಸ್ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಮುಸ್ಲಿಮರಿಗೆ ವಿಶೇಷ ಆಧ್ಯತೆ ನೀಡುತ್ತಿದೆ ಎಂದಿದ್ದಾರೆ