ನವದೆಹಲಿ ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಮ್ಮಕ್ಕಿನಿಂದ ಮೀಸಲಾತಿ ನೀಡಲಾಗಿದೆ ನವದೆಹಲಿಯಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಗುತ್ತಿಗೆಯಲ್ಲಿ ನಾಲ್ಕು ಪರ್ಸೆಂಟ್ ಮೀಸಲಾತಿ ಅಸಂವಿಧಾನಿಕ. ಅಂಬೇಡ್ಕರ್ ರಚಿಸಿದ ಸಂವಿಧಾನದ ವಿರುದ್ಧವಾಗಿದೆ. ಸಿದ್ದರಾಮಯ್ಯ ಸರಕಾರ ಮುಸ್ಲಿಂ ಮೀಸಲಾತಿ ವಾಪಾಸ್ ಪಡೆಯಬೇಕು.ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದೆ.ಕಾಂಗ್ರೆಸ್ ನ ಓಟ್ ಬ್ಯಾಂಕ್ ರಾಜಕಾರಣವನ್ನು ಅಂಬೇಡ್ಕರ್ ವಿರೋಧಿಸಿದ್ದರು.ಕಾಂಗ್ರೆಸ್ ಕೇವಲ ಮುಸ್ಲಿಮರ ಬಗ್ಗೆ ಯೋಚನೆ ಮಾಡುತ್ತೆ.ದಲಿತರು, ಒಬಿಸಿ ಬಗ್ಗೆ ಕಾಂಗ್ರೆಸ್ ಯೋಜನೆ ಮಾಡಲ್ಲ.ಧರ್ಮಾಧಾರಿತ ಮೀಸಲಾತಿ ಅಸಂವಿಧಾನಿಕ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಮ್ಮಕ್ಕಿನಿಂದ ಮೀಸಲಾತಿ ನೀಡಲಾಗಿದೆ
ಸಂಸತ್ ,ಕೋರ್ಟ್ ನಲ್ಲಿ ಸಿದ್ದರಾಮಯ್ಯ ಸರಕಾರದ ಪ್ರಸ್ತಾಪದ ವಿರುದ್ಧ ಹೋರಾಟದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಪಿಎಫ್ಐ ಕೇಸ್ ವಾಪಾಸ್ ಪಡೆದಿದ್ದರು. ಇನ್ನಿತರ ಮುಸ್ಲಿಂ ಸಂಘಟನೆಗಳ ವಿರುದ್ಧ ಕೇಸ್ ವಾಪಸ್ ಪಡೆದಿದ್ದರು.1600ಕ್ಕೂ ಹೆಚ್ಚು ಕೇಸ್ ವಾಪಸ್ ಪಡೆದಿದ್ದರು.ಇದರಿಂದ ಸಾಕಷ್ಟು ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದವು. ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದವು. 2ನೇ ಅವಧಿಯಲ್ಲಿ ಇಂತಹ ಸಂಘಟನೆಗಳ ಸದಸ್ಯರಿಗೆ ಆರ್ಥಿಕ ಶಕ್ತಿ ತುಂಬಲು ಈ ಮೀಸಲಾತಿ ನೀಡಲಾಗುತ್ತಿದೆ ಎಂದರು.
ಸಂವಿಧಾನದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ಕೊಡುವಂತಿಲ್ಲ;ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಬೆಂಗಳೂರು; ಸಂವಿಧಾನದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ಕೊಡುವಂತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮುಸ್ಲಿಂಮರಿಗೆ ಮೀಸಲಾತಿ ಕೊಟ್ಟಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದ್ಮೆಲೆ ಮುಸ್ಲಿಂಮರ ಒಲೈಕೆ ನಡಿತಿದೆ. ದಲಿತರ ಜೀವನ ಮಟ್ಟ ಸುಧಾರಿಸಬೇಕು ಎಂದು ಸಂವಿಧಾನದ ಮೂಲಕ ಶಕ್ತಿ ತುಂಬಲಾಯ್ತು. ಆದ್ರೆ ಈ ಸರ್ಕಾರ ಮುಸ್ಲಿಂಮರಿಗೆ 4% ಗುತ್ತಿಗೆ ಮೂಲಕ ಮೀಸಲು ನೀಡಿದೆ. ಸಂವಿಧಾನದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ಕೊಡುವಂತಿಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಮೀಸಲಾತಿ ತರಲಾಗಿದೆ. ಮುಸ್ಲಿಂಮರಿಗೆ ಎಲ್ಲಾ ಸೌಲಭ್ಯ ಕೊಡ್ತಿವಿ ಅಂತಿದೆ. ವಿಧಾನಸೌಧದ ಒಳಗೆ ಹೊರಗೆ ಹೋರಾಟ ಮಾಡ್ತಿವಿ ಎಂದು ಎಚ್ಚರಿಸಿದ್ದಾರೆ.
ಸಂವಿಧಾನ ವಿರೋಧಿ ನಡೆಯ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡ್ತಿದ್ದಾರೆ ಎಂದ ಅವರು ರನ್ಯಾ ರಾವ್ ಕೇಸನಲ್ಲಿನ ಸಚಿವರ ಹೆಸರು ಬಹಿರಂಗಗೊಳಿಸೋ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಮಂತ್ರಿಗಳು ಇದ್ದಾರಾ ಇಲ್ವೋ ಅಂತ ಉತ್ತರ ಕೊಡಬೇಕಿತ್ತು. ಸರ್ಕಾರ ಇನ್ನು ಉತ್ತರ ಕೊಟ್ಟಿಲ್ಲ. ಯತ್ನಾಳ್ ಘೋಷಣೆ ಮಾಡ್ತಿವಿ ಎಂದಿರೋ ವಿಚಾರ ಬೆಳಿಗ್ಗೆ ಗೊತ್ತಾಯ್ತು. ಅವರ ಜೊತೆ ನಾನು ಮಾತಾಡ್ತಿನಿ ಎಂದು ಆರ್ ಆಶೋಕ್ ಹೇಳಿದ್ದಾರೆ.