ಬೆಂಗಳೂರು; ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರ ನಿಧನ ಸಂದರ್ಭದಲ್ಲಿಯು ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಜನರಿಗೆ ತಪ್ಪು ಸಂದೇಶ ನೀಡುವ ಪ್ರಯತ್ನ ಮಾಡ್ತಿದೆ.ಈಗಾಗಲೇ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಮಾಧಿಗೆ ಸ್ಮಾರಕಕ್ಕೆ ಜಾಗ ನೀಡ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ.ಮನಮೋಹನ್ ಸಿಂಗ್ ಗೆ ಅವಮಾನ ಮಾಡಿದ್ರು ಅಂತಾ ಕಾಂಗ್ರೆಸ್ ನವರು ಹೇಳ್ತಿದ್ದಾರೆ.ಬೆಳಗಾವಿಯ ಕಾರ್ಯಕ್ರಮ ದಲ್ಲಿ ಮನಮೋಹನ್ ಸಿಂಗ್ ಅವರ ಫೋಟೊ ಹಾಕಿದ್ರಾ.?ಅವರು ಸತ್ತಮೇಲೆ ರಾಜಕಾರಣಕ್ಕಾಗಿ ನೆನಪು ಮಾಡ್ಕೊಳ್ತಿದ್ದಾರೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ಇದಕ್ಕೆ ಉತ್ತರ ಕೊಡಬೇಕು.ಕಾಂಗ್ರೆಸ್ ನಲ್ಲಿ ಮೂರು ಜನ ಪದಾಧಿಕಾರಿಗಳಿದ್ದಾರೆಖರ್ಗೆ ವೇಣುಗೋಪಾಲ , ಸರ್ಜೆವಾಲ ಪಧಾದಿಕಾರಿಗಳು. ರಾಹುಲ್ ಗಾಂಧಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸರ್ವಾಧಿಕಾರಿಗಳು. ಮಲ್ಲಿಕಾರ್ಜುನ ವೇಣುಗೋಪಾಲ ಸರ್ಜೆವಾಲ ಹೇಳಿದಾಗೆ ನಡೆಯೋಲ್ಲ ಇವರು ಉತ್ಸವ ಮೂರ್ತಿಗಳು. ಸೂಕ್ತವಾದ ಜಾಗವನ್ನ ಸ್ಮಾರಕಕ್ಕೆ ನೀಡ್ತಿವಿ ಅಂತ ಈಗಾಗಲೇ ಪ್ರಧಾನಿ ಹೇಳಿದ್ದಾರೆ. ಟ್ರಸ್ಟ್ ಮಾಡಬೇಕು ಈ ಮೂಲಕ ಎಲ್ಲಿ ಕಟ್ಟಬೇಕೆಂಬ ನಿಯಾಮವಳಿ ಇದೆ.ದೇಶದ ಉದ್ದಗಲಕ್ಕೆ ಬೊಬ್ಬೆ ಹಾಕಿ ಅವಮಾನ ಮಾಡ್ತಿದ್ದಾರೆಂದು ಆರೋಪ ಮಾಡ್ತಿದ್ದಾರೆ ಕಾಂಗ್ರೆಸ್ ನವರು ಎಂದರು.
ಅಂಬೇಡ್ಕರ್ ಗೆ ಹಣಕಾಸು ಇಲಾಖೆ ಕೊಡದೆ.ಕಾನೂನು ಇಲಾಖೆ ಕೊಟ್ರು ಅವಮಾನ ಮಾಡಿ ರಾಜೀನಾಮೆ ಕೊಟ್ಟು ಬಂದ್ರು.೧೯೫೨ ರ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನ ಸೋಲಿಸಿದಾಗ ನೆಹರು ಅವರ ಸೋಲಿನ ಸಂಭ್ರಾಮಚರಣೆ ಮಾಡಿದ್ರು. ಇದು ದಲಿತರಿಗೆ ಮಾಡಿದ ಅವಮಾನವಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.ಸುಳ್ಳು ಹೇಳಿ ಅಂಬೇಡ್ಕರ್ ಅವರಿಗೆ ಜೀವತಾವಧಿಯಲ್ಲಿ ಭಾರತ ರತ್ನ ಕೊಡಲಿಲ್ಲ. ನೆಹರು ಅವರೆ ತಮಗೆ ತಾವೆ ಭಾರತ ರತ್ನ ಕೊಟ್ಟಿಕೊಂಡ್ರು. ಅಂಬೇಡ್ಕರ್ ಅವರಿಗೆ ರಾಜ್ ಘಾಟ್ ನಲ್ಲಿ ಸಮಾಧಿಗೆ ಜಾಗ ಕೊಡಲಿಲ್ಲ . ೫೦೦೦ ಬಾಡಿಗೆ ಕೊಟ್ಟು ಮುಂಬೈಗೆ ತಂದು ಸಮಾಧಿ ಮಾಡಿದ್ದನ್ನ ಮರೆಯೋಕೆ ಆಗಲ್ಲ.ಕಾಂಗ್ರೆಸ್ ಉರಿಯುವ ಮನೆ ಕಾಂಗ್ರೆಸ್ ಗೆ ಹೋಗಬೇಡಿ ಎಂದು ಅಂಬೇಡ್ಕರ್ ಸಂದೇಶ ಕೊಟ್ಟಿದ್ರು.ವಿಪಿ ಸಿಂಗ್ ಉಚ್ಚಾಟನೆ ಮಾಡಿದ್ರು, ದೇವರಾಜ್ ಅರಸ್ ಅವರನ್ನ ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಿದ್ರು ಎಂದರು.
ದೇವೇಗೌಡರನ್ನ ಯಾವ ಕಾರಣಕ್ಕೆ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದಕ್ಕೆ ಉತ್ತರ ಕೊಡಬೇಕು. ಸಂವಿಧಾನವನ್ನ ಧರ್ಮ ಗ್ರಂಥ ಅಂತ ಹೇಳಿದ್ದು ಪ್ರಧಾನಿ ಮೋದಿಯವರು. ಅಂಬೇಡ್ಕರ್ ಅವರಿಗೆ ಅಮಿತ್ ಶಾ ಅವಮಾನ ಮಾಡಿಲ್ಲ.ಕಾಂಗ್ರೆಸ್ ನವರ ಮೋಸ ಮಾಡುವ ವಿಚಾರಕ್ಕೆ ದಲಿತರು ಕಿವಿಗೊಡಬಾರದು.ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್ ಗಿಲ್ಲ ಎಂದರು.
ಇನ್ನು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರಿಗೆ ನೆನಪು ಮಾಡಿಸ್ತೇನೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ವಿನಾಃ ಕಾರಣ ಆರೋಪ ಮಾಡಿ ರಾಜೀನಾಮೆ ಕೇಳಿದ್ರಿ. ಪ್ರಿಯಾಂಕ್ ಖರ್ಗೆ ಅವರೇ ನೀವು ಯುವಕರಿದ್ದೀರಿ. ರಾಜಕೀಯದಲ್ಲಿ ನಿಮಗೆ ಇನ್ನೂ ಸಾಕಷ್ಟು ಅವಕಾಶಗಳು ಇವೆ.ಏನೇ ಇರಲಿ.. ನಿಷ್ಪಕ್ಷಪಾತ ತನಿಖೆ ನಡೆಯಲಿ. ನೀವು ರಾಜೀನಾಮೆ ನೀಡಿ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡಲಿ. ಎಂದು ಸಿಎಂ ಅವರಿಗೆ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.