ಮನೆ Latest News ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆ ಕೋರಿ ಹೈಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಅರ್ಜಿ‌

ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆ ಕೋರಿ ಹೈಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಅರ್ಜಿ‌

0

ಬೆಂಗಳೂರು; ಮೂಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಹೈ ಕೋರ್ಟ್‌ ಗೆ ಸಿಎಂ ಸಿದ್ದರಾಮಯ್ಯ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಪರ ಹೈಕೋರ್ಟ್‌ ಗೆ ವಕೀಲರಾದ ಕಪಿಲ್‌ ಸಿಬಲ್, ಅಭಿಷೇಕ್‌ ಮನು ಸಿಂಘ್ವಿ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ವಾದ ಮಂಡಿಸಿದ ಸಿಎಂ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ,ರಾಜ್ಯಪಾಲರು ಸರಿಯಾಗಿ ಪರಿಶೀಲನೆ ನಡೆಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದು ವಾದ ಮಂಡಿಸಿದರು.ಇನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರ  ಪರವಾಗಿ ವಕೀಲ ತುಷಾರ್  ಮೆಹ್ತಾ ಅವರು ಮಂಡಿಸಿದರು.ಈ ವೇಳೆ ತುಷಾರ್ ಮೆಹ್ತಾ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕು ಎಂದು ಮನವಿ ಮಾಡಿದರು. ಆಗ ಮಧ್ಯ ಪ್ರವೇಶಿಸಿದ ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಗ್ವಿ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ಇದೆ. ಮಧ್ಯಂತರ ಆದೇಶ ಬೇಕಿರುವುದರಿಂದ ಇಂದೇ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ರಾಜ್ಯಪಾಲರ ಕಚೇರಿಗೆ ಅರ್ಜಿಯ ಪ್ರತಿ ನೀಡಲಾಗಿದೆ ನಿಜ. ಹಾಗಂದ ಮಾತ್ರಕ್ಕೆ ಅವರ ವಾದ ಕೇಳಬೇಕಿಲ್ಲ ಎಂದು ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಇನ್ನು ವಾದ ಮುಂದುವರಿಸಿದ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮುಡಾ ಫೈಲ್ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಂಡಿಲ್ಲ.ಹೊಸ ಬಿಎನ್‌ಎಸ್ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.ಶೋಕಾಸ್‌ನಲ್ಲಿ ದೂರುದಾರರ ದೂರಿನ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಸ್ನೇಹಪ್ರಿಯ ಕೃಷ್ಣ, ಪ್ರದೀಪ್ ದೂರಿನ ಪ್ರಸ್ತಾಪವಿಲ್ಲ ಎಂದರು. ಅಲ್ಲದೇ ಟಿ.ಜೆ.ಅಬ್ರಹಾಂ ದೂರಿಗೆ ಮಾತ್ರ ಶೋಕಾಸ್‌ ನೋಟಿಸ್‌ ನೀಡಲಾಗಿದೆ.ಸರ್ಕಾರದ ವಿರುದ್ಧ ರಾಜ್ಯಪಾಲರು ಅಂದೇ ತೀರ್ಮಾನ ಮಾಡಿದ್ದಾರೆ.ಬಾಕಿಯಿದ್ಧ 12 ದೂರುಗಳ ಬಗ್ಗೆ ಕ್ರಮ ಕೈಗೊಂಡಿಲ್ಲ. 2004ರಲ್ಲಿ ಸಿಎಂ ಬಾಮೈದನಿಗೆ ಮಾರಾಟವಾಗಿದೆ.2005ರಲ್ಲಿ ಕೃಷಿ ಜಮೀನಾಗಿ ಪರಿವರ್ತಿಸಲಾಗಿದೆ. 2010ರಂದು ಸಿಎಂ ಪತ್ನಿಗೆ ಸಹೋದರ ದಾನಪತ್ರ ನೀಡಿದ್ದಾರೆ ಎಂದ್ರು.

ಇನ್ನು ರಾಜ್ಯಪಾಲರ ಪರ ತುಷಾರ್ ಮೆಪ್ತಾ ವಾದ ಮಾಡುತ್ತಾ ಎಂ.ಪಿ. ತೀರ್ಪು ಈ ಕೇಸಿಗೆ ನೇರವಾಗಿ ಹೊಂದುತ್ತದೆ.ಕ್ಯಾಬಿನೆಟ್ ನಿರ್ಣಯದ ಉದ್ದೇಶ ಸಿಎಂ ರಕ್ಷಿಸುವುದು.ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರವಿದೆ.ಐವರು ಪೀಠ ರಾಜ್ಯಪಾಲರ ಪರ ತೀರ್ಪು ನೀಡಿದೆ.ಕಾರಣ ನೀಡಿಯೇ ರಾಜ್ಯಪಾಲರು ತೀರ್ಮಾನಿಸಿದ್ದಾರೆ.ಎಂ.ಪಿ. ತೀರ್ಪು ಈ ಕೇಸಿಗೆ ನೇರವಾಗಿ ಹೊಂದುತ್ತದೆ.ಹೀಗಾಗಿ ಯಾವುದೇ ಮಧ್ಯಂತರ ತಡೆ ನೀಡಬಾರದು ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಬಾರದು.ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಬಾರದು.ಎಲ್ಲಾ ಕಾನೂನಿನ ಪಾಂಡಿತ್ಯ ಇರುವ ಉತ್ತರ ನೀಡಲಾಗಿದೆ.ಹೀಗಾಗಿ ಯಾವುದೇ ಮಧ್ಯಂತರ ತಡೆ ನೀಡಬಾರದು.ರಾಜ್ಯಪಾಲರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಬಾರದು ಎಂದರು.

ನಾನು ಯಾವ ಆಧಾರದ ಮೇಲೆ ರಾಜೀನಾಮೆ ನೀಡಬೇಕು?;ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು; ಗವರ್ನರ್ ವಿರುದ್ಧ ಸಿದ್ದರಾಮಯ್ಯ ಗರಂ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಪ್ರಾಸಿಕ್ಯುಷನ್ ವಿರುದ್ದ ಕಾನೂನಾತ್ಮಕ ಹೋರಾಟ ಮಾಡ್ತೇವೆ.ಪೂರ್ಣ ರಾಜಕೀಯ ದುರುದ್ದೇಶದಿಂದ ಮಾಡಿರುವ ತೀರ್ಮಾನ ಇದು.ಚುನಾಯಿತ ಸರ್ಕಾರ ಕಿತ್ತು ಹಾಕುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಸರ್ಕಾರ ಬಡವರ ಪರವಾಗಿ ಇರುವ ಸರ್ಕಾರ.ಹೀಗಾಗಿ ಇದನ್ನು ಕಿತ್ತೊಗೆಯಲು ಪ್ರಯತ್ನ ಮಾಡ್ತಿದ್ದಾರೆ.ಗ್ಯಾರಂಟಿ ಗಳ ವಿರುದ್ದ ಇರುವವರು ಅವರು.ಬಡವರ ಪರ ನಾವು ಕೆಲಸ ಮಾಡ್ತಿದ್ದೇವೆ ಅಂತ ಅವರು ಹೀಗೆ ಮಾಡ್ತಿದ್ದಾರೆ.ಈ ಪ್ರಯತ್ನ ಯಶಸ್ವಿ ಆಗಿಲ್ಲ.ನಾಡಿನ ಜನರ ಆಶೀರ್ವಾದ ನನ್ನ ಮೇಲೆ ಪಕ್ಷದ ಮೇಲೆ‌ ಇದೆ.ಕುಟಿಲ ಪ್ರಯತ್ನ, ಅಸ್ಥಿರ ಗೊಳಿಸುವುದು ಅವರ ಭ್ರಮೆ.೧೩೫ ಸ್ಥಾನ ನಾವು ಗೆದ್ದಿದ್ದೇವೆ, ಇದು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದರು.

ಬೇರೆ ಪ್ರಕರಣಗಳಲ್ಲಿ ಪಿಟಿಷನ್ ಗಳಿಗೆ ಇದುವರೆಗೆ ರಾಜ್ಯಪಾಲರು ಸ್ಯಾಂಕ್ಷನ್ ನೀಡಿಲ್ಲ.ಶಶಿಕಲಾ ಜೊಲ್ಲೆ ವಿರುದ್ದ ೯-೧೨-೨೦೨೧ ರಲ್ಲಿಯೇ ಲೋಕಾಯುಕ್ತ ರಾಜ್ಯಪಾಲರ ಸ್ಯಾಂಕ್ಷನ್ ಕೇಳಿದೆ .ಇದುವರೆಗೆ ನೀಡಿಲ್ಲ.ಎಚ್ ಡಿ ಕುಮಾರಸ್ವಾಮಿ ವಿರುದ್ದ ಲೋಕಾಯುಕ್ತ ರಾಜ್ಯಪಾಲರ ಸ್ಯಾಂಕ್ಷನ್ ಕೇಳಿದೆ.ಕುಮಾರಸ್ವಾಮಿ ಕೇಸ್ ನಲ್ಲಿ ಲೂಟಿಯಲ್ಲಿ ಇವರ ಪಾತ್ರ ಇರುವುದು ಸಾಬೀತಾಗಿದೆ ಎಂದು ಲೋಕಾಯುಕ್ತ ಹೇಳಿದೆ. ಇವರ ಪಾತ್ರ ಇರುವುದು ಗೊತ್ತಾಗಿದ್ದರೂ ರಾಜ್ಯಪಾಲರು ಪ್ರಾಸಿಕ್ಯುಷನ್ ಗೆ ಕೇಳಿಲ್ಲ.ವಿಜಯೇಂದ್ರ ಅಶೋಕ ಕುಮಾರಸ್ವಾಮಿ ಇವರ ಮಾತು ಕೇಳಿಕೊಂಡು ರಾಜ್ಯಪಾಲರು ನನಗೆ ಹೀಗೆ ಮಾಡಿದ್ದಾರೆ.೨೬-೨-೨೦೨೪ ರಲ್ಲಿ ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯುಷನ್ ಕೇಳಲಾಗಿದೆ.ಜನಾರ್ಧನ ರೆಡ್ಡಿ ವಿರುದ್ದವೂ ಕೂಡ ರಾಜ್ಯಪಾಲರ ಮುಂದೆ ಅನುಮತಿ ಬಾಕಿ ಇದೆ.ಇಷ್ಟೆಲ್ಲ ಗಂಭೀರ ಪ್ರಕರಣ ಇದ್ರೂ ರಾಜ್ಯಪಾಲರ ಪ್ರಾಸಿಕ್ಯುಷನ್ ಇಲ್ಲ. ನಮ್ಮದು ತನಿಖೆಯೇ ಇಲ್ಲ ಯಾವುದೇ ರಿಪೋರ್ಟ್ ಇಲ್ಲ ತನಿಕೆ ಇಲ್ಲ.ನಾನು ಯಾವುದೇ ತೀರ್ಮಾನ ಮಾಡಿಲ್ಲ, ನನ್ನ ಸಹಿ ಇಲ್ಲ ಎಂದ್ರು.

ನಾನು ಯಾಕೆ ರಾಜೀನಾಮೆ ನೀಡಬೇಕು? ಯಾವ ಆಧಾರದ ಮೇಲೆ ರಾಜೀನಾಮೆ ನೀಡಬೇಕು?.ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದಿದ್ದಾರೆ.