ಮನೆ Latest News ಹೈಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದೇನು?

ಹೈಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದೇನು?

0

ಬೆಂಗಳೂರು;  ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಾನು ಹಾಕಿದ್ದ ರೀಟ್ ಪಿಟಿಷನ್ ಮೇಲೆ ಹೈಕೋರ್ಟ್ ಆದೇಶ ನೀಡಿದೆ.ನಾನು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದೆ.ಅದರ ಮೇಲೆ‌ ವಾದ ಪ್ರತಿವಾದ ನಡೆದಿದೆ.ಈಗ ಆದೇಶ ಬಂದಿದೆ.ಆದ್ರೆ ಪೂರ್ಣ ತೀರ್ಪು ಓದೋಕೆ ಆಗಿಲ್ಲ. ನೋಡಿದ್ಮೇಲೆ ಪೂರ್ಣ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

ರಾಜ್ಯಪಾಲರು ದೂರುದಾರರ ಮೇಲೆ ೧೭ಎ, ೨೧೮ ಬಿಎನ್ ಎಸ್ ಎಸ್ ಮತ್ತು ೧೯ ಪಿಸಿ ಆ್ಯಕ್ಟ್ ಅದರ ಮೇಲೆ ಸ್ಯಾಕ್ಷನ್ ಕೂಡಿ ಅಂತ ಕೇಳಿದ್ವಿ.ಆದ್ರೆ ನ್ಯಾಯಮೂರ್ತಿ ಗಳು ೨೧೮ ಬಿಎನ್ ಎಸ್ ಎಸ್ ಅದನ್ನ ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಗೆ ೨೧೮ ಬಿಎನ್ ಎಸ್ಎಸ್ ಪ್ರಕಾರ ಕೊಟ್ಟಿಲ್ಲ.ಆದ್ರೆ ೧೭ಎ ಪ್ರಕಾರ ತನಿಖೆಗೆ ಅನುಮತಿ ಕೊಟ್ಟಿದ್ದಾರೆ.ಇದರ ಮೇಲೆ ಯಾವ ರೀತಿ ಹೋರಾಟ ಮಾಡಬೇಕು ಅಂತ ಕಾನೂನು ತಜ್ಞರ ಜೊತೆ ಚರ್ವೆ ಮಾಡಿ ಮುಂದಿನ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ನಾನು, ಕೆಪಿಸಿಸಿ ಅಧ್ಯಕ್ಷರು ಸೇರಿ ಎಲ್ಲರು ಚರ್ಚೆ ಮಾಡುತ್ತೇವೆ.ಬಿಜೆಪಿ ಜೆಡಿಎಸ್ ನವರ ಸಂಚು ಒಳ ಸಂಚು, ರಾಜಭವನ ದುರ್ಬಳಕೆಗೆ ನಾವು ಹೆದರಲ್ಲ.ನಮ್ಮ ರಾಜ್ಯದ ಜನ ನಮ್ಮ ಪರ ಇದೆ.ಜನರ ಆಶೀರ್ವಾದ ನಮ್ಮ ಪರ ಇದೆ.ಡಿಸಿಎಂ ಡಿಕೆ ಆದಿಯಾಗಿ ಸಚಿವರು, ಶಾಸಕರು ಕಾರ್ಯಕರ್ತರು ಮತ್ತು ಹೈಕಮಾಂಡ್ ನನ್ನ ಜೊತೆ ಇದೆ.ಕಾನೂನು ಹೋರಾಟಕ್ಕೆ ಸಾಥ್ ಕೊಡುತ್ತಾರೆ ಎಂದು ಹೇಳಿದ್ದಾರೆ.

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಡೀ ದೇಶದಲ್ಲಿ ಸೇಡಿನ ರಾಜಕೀಯ ಮಾಡುತ್ತಿದೆ.ವಿರೋಧ ಪಕ್ಷಗಳು ಇರುವ ರಾಜ್ಯದಲ್ಲಿ ಸೇಡಿನ ರಾಜಕಾರಣ ಮಾಡುತ್ತಾರೆ.ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ನವರು ಸ್ವಂತ ಕಾಲದಲ್ಲಿ ಅಧಿಕಾರಕ್ಕೆ ಬಂದಿಲ್ಲ.ಅವರು ಅಧಿಕಾರಕ್ಕೆ ಬಂದಿರೋದು ಹಣಬಲ, ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ.ನಾವು ೧೩೬ ಗೆದ್ದಮೇಲೆ ಆಪರೇಷನ್ ಕಮಲ ಮಾಡೋಕೆ ಪ್ರಯತ್ನ ಮಾಡಿದರು.ದುಡ್ಡು ಕೊಟ್ಟು ಶಾಸಕರನ್ನ ಸೆಳೆಯೋಕೆ ಪ್ರಯತ್ನ ಮಾಡಿದರು.ಆದ್ರೆ ನಮ್ಮ ಶಾಸಕರು ಬಿಜೆಪಿಯವರು ಆಮಿಷಕ್ಕೆ ಒಳಗಾಗಲಿಲ್ಲ, ಸಫಲ ಆಗಿಲ್ಲ. ನಮ್ಮ ಕಾರ್ಯಕ್ರಮ ಗಳನ್ನ ವಿರೋಧ ಮಾಡುತ್ತಿದ್ದಾರೆ.ನಮ್ಮ ಗ್ಯಾರಂಟಿ ಯೋಜನೆ ವಿರೋಧಿಸುತ್ತಿದ್ದಾರೆ.ಎಲ್ಲಾ ಭಾಗ್ಯಗಳನ್ನ ವಿರೋಧ ಮಾಡುತ್ತಿದ್ದಾರೆ.ಸಾಮಾಜಿಕ ನ್ಯಾಯ ಹಾಗೂ ಬಡವರಿಗೆ ವಿರುದ್ದವಾಗಿವವರು.ಸರ್ಕಾರಕ್ಕೆ ಕಪ್ಪು ಮಸಿ ಬಳಿಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ.ಇನ್ನೂ ಹೈಕೋರ್ಟ್ ತೀರ್ಪಿನ್ನ ಓದೋಕೆ ಆಗಿಲ್ಲ.ಓದಿ ನಂತ್ರ ಮತ್ತಷ್ಟು ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಈ ಮೂಲಕ ರಾಜ್ಯಪಾಲರು ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ಶಾಕ್ ಕೊಟ್ಟಿದೆ.

ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಇಂದು  ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದ ಸಂಬಂಧ ತೀರ್ಪನ್ನು ಪ್ರಕಟಿಸಿದೆ.