ಮನೆ Latest News ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮತ್ತೆ ಆಕ್ರೋಶ ಹೊರ ಹಾಕಿದ ಸಚಿವ ಚೆಲುವರಾಯಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮತ್ತೆ ಆಕ್ರೋಶ ಹೊರ ಹಾಕಿದ ಸಚಿವ ಚೆಲುವರಾಯಸ್ವಾಮಿ

0

ಬೆಂಗಳೂರು; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮತ್ತೆ ಸಚಿವ ಚೆಲುವರಾಯಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೈ ತುಂಬಾ ಕೆಲಸ ಇದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಂತ ಹೇಳ್ತಾರೆ. ೨೫ ಸಾವಿರ ಕೋಟಿ ಹಣ ಕೊಡಿಸೋಕೆ ಹೇಳಿ. ಮೇಕೆದಾಟು ಬಗ್ಗೆ ಹೇಳ್ತಾರೆ, ಐದು ನಿಮಿಷ ದಲ್ಲೇ ಆದೇಶ ಕೊಡಿಸುತ್ತೇನೆ ಅಂತಾರೆ. ಚುನಾವಣೆ ಸಂದರ್ಭದಲ್ಲಿ ಮಾತಾಡಿದ್ದು, ಈಗ ತಿರುಗಿಸಿ ಮಾತಾಡಿದ್ದಾರೆ. ರಾಷ್ಟ್ರದಲ್ಲಿ ಯಾವುದೇ ರಾಜ್ಯಗಳೂ ತಮ್ಮ ಹಿತ ನೋಡುತ್ತಿವೆ. ಅವರು ಬುದ್ದಿ ವಂತರು, ನಾನು ಅವರಷ್ಟು ಬುದ್ದಿವಂತ ಅಲ್ಲ. ನನ್ನನ್ನ ಗೆಲ್ಲಿಸಿಕೊಡಿ ಮೇಕೆದಾಟು ಯೋಜನೆಯನ್ನು ಐದು ನಿಮಿಷದಲ್ಲೇ‌ ಮಾಡಿಸಿ ಕೊಡಿಸುತ್ತೇನೆ ಎಂದಿದ್ದಾರೆ ಎಂದರು.

ಇನ್ನು ಮಹಮದ್ ಘಜ್ನಿ ಎಂಬ ಹೆಚ್ಡಿಕೆ ಟ್ವೀಟ್ ಗೆ  ಚೆಲುವರಾಯಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಅವರಿಗೆ ಕೈ ತುಂಬಾ ಕೆಲಸ ಇದೆ, ಅದನ್ನ ಮಾಡಲಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಂತ ಹೇಳ್ತಾರೆ. ಬೆಂಗಳೂರಿನ ಮೇಲೆ ಅಷ್ಟೊಂದು ಕಾಳಜಿ ಇದ್ರೆ ೨೫ ಸಾವಿರ ಕೋಟಿ ಹಣ ಕೊಡಿಸೋಕೆ ಹೇಳಿ. ಮೇಕೆದಾಟು ಬಗ್ಗೆ ಹೇಳ್ತಾರೆ. ಐದು ನಿಮಿಷದಲ್ಲೇ ಆದೇಶ ಕೊಡಿಸುತ್ತೇನೆ ಅಂದಿದ್ರು. ಎಲೆಕ್ಷನ್ ನಲ್ಲಿ ಗೆಲ್ಲಿಸಿದ್ರೆ ಮೋದಿ ಬಳಿ ಮಾತಾಡಿ ಐದೇ ನಿಮಿಷದಲ್ಲಿ ಅನುಮತಿ ಕೊಡಿಸ್ತೀನಿ ಅಂದ್ರು.ಆಗ ಯಾವುದೇ ಕಂಡೀಷನ್ ಹಾಕಿರಲಿಲ್ಲ. ಈಗ ತಮಿಳುನಾಡಿನಿಂದ ಓಕೆ ಮಾಡಿಸಿಕೊಂಡು ಬನ್ನಿ ಅಂತಾರೆ. ಚುನಾವಣೆ ಸಂದರ್ಭದಲ್ಲಿ ಮಾತಾಡಿದ್ದು, ಈಗ ತಿರುಗಿಸಿ ಮಾತಾಡಿದ್ದಾರೆ. ರಾಷ್ಟ್ರದಲ್ಲಿ ಯಾವುದೇ ರಾಜ್ಯಗಳೂ ತಮ್ಮ ಹಿತ ನೋಡುತ್ತಿವೆ. ಅವರು ಬುದ್ದಿವಂತರು, ನಾನು ಅವರಷ್ಟು ಬುದ್ದಿವಂತ ಅಲ್ಲ. ರಾಜ್ಯದ ಪರವಾಗಿ ಕುಮಾರಸ್ವಾಮಿ ಕೆಲಸ ಮಾಡಲಿ ಎಂದಿದ್ದಾರೆ.

ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಸಚಿವರ ಹೆಸರು ಕೇಳಿ ಬಂದ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಬಿಐ ತನಿಖೆ ಮಾಡುತ್ತಿದೆ. ಸಚಿವರ ಪಾತ್ರ ಇದ್ರೆ ಅವರೆ ಹೇಳಲಿ. ನಮ್ಮ ಮಾಹಿತಿ ಪ್ರಕಾರ ಯಾರೂ ಸಹಾಯ ಮಾಡಿಲ್ಲ. ಪಾತ್ರ ಇದ್ರೆ ಸಿಬಿಐ ಹೇಳಲಿ. ಈ ಬಗ್ಗೆ ನಾವು ಕೂಡ ಚರ್ಚೆ ‌ಮಾಡಿದ್ದೇವೆ.ಯಾವುದೇ ಸಚಿವರು ಭಾಗಿಯಾಗಿಲ್ಲ.ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಬಿಜೆಪಿ ವಿರೋಧ ವಿಚಾರದ ಬಗ್ಗೆ ಮಾತನಾಡಿ  ನಾವು ಕಾನೂನು ಪ್ರಕಾರ ಈ ಸಮಿತಿ ಮಾಡಿದ್ದೇವೆ. ಕಾನೂನು ಬಾಹಿರವಾಗಿ ಮಾಡಿಲ್ಲ. ಗ್ಯಾರಂಟಿಗಳ ಅನುಷ್ಠಾನಕ್ಕೆ ಈ ಸಮಿತಿ ಮಾಡಲಾಗಿದೆ. ಇದರಲ್ಲಿ ಶಾಸಕರ ಹಕ್ಕು ಯಾಕೆ ಮೊಟಕು ಆಗುತ್ತೆ. ಆ ಸಮಿತಿ ಅದರ ಕೆಲಸ ಮಾಡುತ್ತೆ. ಶಾಸಕರು ಅವರ ಕೆಲಸ ಮಾಡುತ್ತಾರೆ.ಬಿಜೆಪಿಗೆ ಭಯ ಯಾಕೆ ಬಂದಿದೆ. ಸಿಎಂ ಈ ಬಾರಿ ಎಲ್ಲ ಶಾಸಕರಿಗೂ ೧೦ ಕೋಟಿ ಅನುದಾನ ಕೊಟ್ಟಿದ್ದಾರೆ. ವಿರೋಧ ಪಕ್ಷದ ಶಾಸಕರಿಗೂ ಕೊಟ್ಟಿದ್ದಾರೆ. ಈ ಬಗ್ಗೆ ಏನಾದರೂ ಬಿಜೆಪಿ ಶಾಸಕರು ಮಾತನಾಡಿದ್ದಾರೆ. ಸುಮ್ಮನೆ ರಾಜಕೀಯ ‌ಕಾರಣಕ್ಕೆ ಸಮಿತಿಗಳನ್ನು ವಿರೋಧ ಮಾಡಲಾಗುತ್ತಿದೆ ಎಂದರು.