ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತದ ಬಳಿಕ ಅವರ ಕಾರನ್ನು ಯಾಕೆ ಬಟ್ಟೆ ಹಾಕಿ ಮುಚ್ಚಿದ್ರಿ ಎಂಬ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆಗೆ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಛಲವಾದಿ ನಾರಾಯಣಸ್ವಾಮಿ ಹೇಳಿದ ಮಾತು ಕೇಳಿದೆ. ವಿಪಕ್ಷ ನಾಯಕರು ಹೌದು ಅವರ ಮೇಲೆ ಗೌರವ ಇತ್ತು. ನಿನ್ನೆ ಮಾತನಾಡಿದ್ದು ಕೇಳಿದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಯಾರದೋ ಮುಲಾಜಿಗೆ ಪ್ರಭಾವಕ್ಕೆ ಒಳಗಾಗಿ ಛಲವಾದಿ ಆರೋಪ ಮಾಡಿದ್ದಾರೆ. ಒಬ್ಬ ಮಹಿಳೆಗೆ ಅಪಘಾತ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರೋಪ ಮಾಡಿದ್ದಾರೆ. ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಸರ್ಕಾರಿ ವಾಹನದಲ್ಲಿ ಪ್ರಯಾಣ ಬೆಳೆಸಿದ್ದು. ಸರ್ಕಾರಿ ಚಾಲಕ, ಸರ್ಕಾರಿ ಗನ್ ಮ್ಯಾನ್ ಕೂಡ ಇದ್ರು. ೧೧ ಕ್ಕೆ ಬೆಂಗಳೂರು ಬಿಟ್ಟಿದ್ದು. ಬೆಳಗ್ಗೆ ಸಂಕ್ರಾಂತಿ ಕಾರಣ ಬಿಟ್ಟಿದ್ದು. ಎಸ್ಕಾರ್ಟ್ ಬೇಡ ಅಂತ ಹೊರಟೆವು. ಇದರಲ್ಲಿ ತಪ್ಪು ಹುಡುಕುವ ಕೆಲಸ ಮಾಡಬಾರದು ಎಂದಿದ್ದಾರೆ.
ನಾವು ಟಿಪಿ ಹಾಕಿಲ್ಲ ಅದರಲ್ಲಿ ತಪ್ಪೆನು ಇದೆ. ಸರ್ಕಾರದ ಕಾರ್ಯಕ್ರಮ ಇದ್ದಾಗ ಮಾತ್ರ ಟಿಪಿ ಹಾಕುವುದು. ಶಾಕ್ ನಲ್ಲಿ ಇದ್ವಿ, ಆ ವೇಳೆ ಮಹಜರ್ ಮಾಡಿಸುವುದು ತಲೆಯಲ್ಲಿ ಬರಲಿಲ್ಲ. ನಾವೇ ಪೊಲೀಸ್ ಗೆ ಮಾಹಿತಿ ನೀಡಿದ್ದು. ಆಸ್ಪತ್ರೆಗೆ ಹೋಗುವ ಬಗ್ಗೆ ಮಾಹಿತಿ ನೀಡಿದ್ದು. ನಾವೇ ಕಾಲ್ ಮಾಡಿ ಮಾಹಿತಿ ಹೇಗೆ ಮುಚ್ಚಿಡಲಾಗುತ್ತೆ. ಇದು ಪೂರ್ವನಿಯೋಜಿತ ಕೃತ್ಯ ಇರಲಿಲ್ಲ. ಕಾರ್ ನಲ್ಲಿ ಯಾವುದೇ ಹಣ ಇರಲಿಲ್ಲ. ಹಣ ಸಾಗಿಸುವ ಅವಶ್ಯಕತೆ ಕೂಡ ಇಲ್ಲ. ಹೆಬ್ಬಾಳ್ಕರ್ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಬಿಜೆಪಿಯ ಕೆಟ್ಟ ಸ್ಥಿತಿ ಬಗ್ಗೆ ಕನಿಕರ ಬರುತ್ತದೆ ಎಂದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಕಾರನ್ನು ಬಟ್ಟೆ ಹಾಕಿ ಯಾಕೆ ಮುಚ್ಚಿದ್ದೀರಿ?: ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ
ಬೆಂಗಳೂರು: ಸಚಿವೆ ಹೆಬ್ಬಾಳ್ಕರ್ ಅವರ ಕಾರನ್ನು ಅಪಘಾತದ ಬಳಿಕ ಯಾಕೆ ಬಟ್ಟೆ ಹಾಕಿ ಯಾಕೆ ಮುಚ್ಚಿದ್ದೀರಿ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಕೋಟ್ಯಾಂತರ ರೂಪಾಯಿ ಅದರಲ್ಲಿ ಸಾಗಿಸಲಾಗುತ್ತಿತ್ತು ಅಂತಾ ಜನ ಹೇಳುತ್ತಿದ್ದಾರೆ.ಸರ್ಕಾರ ಇದಕ್ಕೆ ಉತ್ತರ ಕೊಡಬೇಕು.ಜವಾಬ್ದಾರಿ ಜಾಗದಲ್ಲಿ ಇದ್ದವರು ಏನಾದರೂ ಮಾಡಿದಾಗ ಅನುಮಾನದ ಹುತ್ತ ಬೆಳೆಯುವುದು ಸಹಜ.ನೂರು ವರ್ಷಗಳ ಮಹಾತ್ಮ ಗಾಂಧಿಯವರ ಎಐಸಿಸಿ ಸಮ್ಮೇಳನದ ಅಧ್ಯಕ್ಷ ಸ್ಥಾನದ ಕೊಂಡಾಡುವ ಕಾರ್ಯಕ್ರಮ ಆಗಿದೆ.ಅಂಬೇಡ್ಕರ್ ರನ್ನು ಸೋಲಿಸಿ ಅಪಮಾನ ಮಾಡಿ ನೋಯಿಸಿ ಇಂದು ಅಂಬೇಡ್ಕರ್ ಅವರೇ ನಮ್ಮ ಅಸ್ಮಿತೆ ಎಂಬಂತೆ ಕಾಂಗ್ರೆಸ್ ಮಾತಾಡುತ್ತಿರುವುದು ದುರದೃಷ್ಟಕರ.ನಕಲಿ ಗಾಂಧಿಗಳು ಇಂದು ಕಾಂಗ್ರೆಸ್ ಅನ್ನು ನಡೆಸುತ್ತಿದ್ದಾರೆ. ಸಂವಿಧಾನ ಸಂಹಾರ ಮಾಡಿದ ಕಾಂಗ್ರೆಸ್ ಇಂದು ಸಂವಿಧಾನ ರಕ್ಷಕರಂತೆ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಟ್ಟಹಾಸ, ಆತ್ಮ ವಂಚನೆಯ ಮಾತುಗಳನ್ನು ಆಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ನಾವು ನೋಡಿದ ರೀತಿಯೇ ಬೇರೆ .ಎಐಸಿಸಿ ಅಧ್ಯಕ್ಷರಾದ ಬಳಿಕ ಅವರ ನಾಲಗೆಯಲ್ಲಿ ವಿಷ ಬರುವಂತಹ ಮಾತುಗಳನ್ನೇ ಆಡುತ್ತಿದ್ದಾರೆ. ಅವರ ನಾಲಗೆಗೆ ಯಾಕೆ ವಿಷ ಬಿತ್ತು? ಖರ್ಗೆ ಎಂದೂ ಕೂಡಾ ಇಷ್ಟು ಕೀಳು ಮಟ್ಟದ ಭಾಷೆ, ಸುಳ್ಳುಗಳನ್ನು ಹೇಳುವುದನ್ನು ನೋಡಿಲ್ಲ.ಅಧಿಕಾರದ ಹಪಹಪಿಯಲ್ಲಿ ಸಿದ್ದರಾಮಯ್ಯ ಮತ್ತು ಖರ್ಗೆ ಒಬ್ಬರನ್ನೊಬ್ಬರು ಮೀರಿಸುವ ರೀತಿ ಸುಳ್ಳು ಹೇಳುತ್ತಿದ್ದಾರೆ.
ನಾವು ಬೆಂಕಿ ಇದ್ದಂತೆ, ಸುಟ್ಟು ಹೋಗುತ್ತೀರಿ ಎಂದು ಖರ್ಗೆ ಹೇಳಿರುವುದು ಯಾವ ಗಾಂಧಿಯ ತತ್ವ?.ಖರ್ಗೆಯವರೇ ಬಿಜೆಪಿಯಲ್ಲಿ ಬೆಂಕಿಯೂ ಇದೆ, ಬಿರುಗಾಳಿಯೂ ಇದೆ. ಬೆಂಕಿ ಆರಿಸುವ ಜಲಶಕ್ತಿ, ಜನಶಕ್ತಿಯೂ ಬಿಜೆಪಿಯಲ್ಲಿ ಇದೆ.ಕಿತ್ತೂರು ಚೆನ್ನಮ್ಮ ಅವರಿಗೆ ಪ್ರಿಯಾಂಕಾ ಗಾಂಧಿಯನ್ನು ಹೋಲಿಕೆ ಮಾಡಿದ್ದೀರಿ. ಯಾರ ಓಲೈಕೆಗಾಗಿ ಈ ಹೋಲಿಕೆ ಮಾಡಿದ್ದೀರಿ?.ದಲಿತರ ಪರವಾಗಿ ಧ್ವನಿ ಎತ್ತದ ನೀವು ಒಂದು ಬಾರಿಯಾದರೂ ಇಂದಿರಾ ಗಾಂಧಿ ಮಾಡಿದ್ದು ತಪ್ಪು ಎಂದು ಹೇಳಿದ್ದೀರಾ? .ಕಾಂಗ್ರೆಸ್ ಸುಡುವ ಮನೆ ಅಂತಾ ಅಂಬೇಡ್ಕರ್ ಹೇಳಿದ್ದಾರೆ. ನನ್ನ ಗೆಲ್ಲಿಸಿದವರು ಕಾಂಗ್ರೆಸ್, ಸೋಲಿಸಿದವರು ಜನಸಂಘ ಅಂತಾ ಯಾವ ನಾಲಿಗೆಯಲ್ಲಿ ನಿನ್ನೆ ಹೇಳಿದ್ದೀರಿ? .ಆತ್ಮವಂಚನೆಯ ರಾಜಕಾರಣ ಮಾಡಿ ನಕಲಿ ಗಾಂಧಿಗಳ ಓಲೈಕೆ ನಿಮ್ಮ ರಾಜಕೀಯ ಜೀವನದ ಎತ್ತರಕ್ಕೆ ಸರಿಯೇ? ಕರ್ನಾಟಕದಲ್ಲಿ ದಲಿತರ ಸಮಾಧಿಯಾಗುತ್ತಿದೆ.ನಾನು ಸಿಎಂ ಆಗಬೇಕು ಅಂತಾ ನಡೆಯುತ್ತಿದೆ.ಯಾರನ್ನು ಬೇಕಾದರೂ ಸಿಎಂ ಮಾಡಿಕೊಳ್ಳಿ .ನಿಮ್ಮ ಕುಲದ ಕೋತಿಯನ್ನಾದರೂ ಮಾಡಿಕೊಳ್ಳಿ ನಮ್ಮ ಅಭ್ಯಂತರ ಇಲ್ಲ.ಪರಮೇಶ್ವರ್ ಅವರನ್ನು ಯಾರಿಗಾಗಿ ಮೂಲೆಗುಂಪು ಮಾಡುತ್ತೀರಿ?.ವಿಷದ ಭಾಷೆಗಳನ್ನು ಬಿಟ್ಟು ಉತ್ತಮ ರಾಜಕಾರಣ ಮಾಡಿ ಎಂದರು.