ಮನೆ Latest News ಲಕ್ಷ್ಮೀ ಹೆಬ್ಬಾಳ್ಕರ್ ಕಾರನ್ನು ಬಟ್ಟೆ ಹಾಕಿ ಯಾಕೆ ಮುಚ್ಚಿದ್ದೀರಿ?: ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ...

ಲಕ್ಷ್ಮೀ ಹೆಬ್ಬಾಳ್ಕರ್ ಕಾರನ್ನು ಬಟ್ಟೆ ಹಾಕಿ ಯಾಕೆ ಮುಚ್ಚಿದ್ದೀರಿ?: ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

0

ಬೆಂಗಳೂರು: ಸಚಿವೆ ಹೆಬ್ಬಾಳ್ಕರ್ ಅವರ ಕಾರನ್ನು ಅಪಘಾತದ ಬಳಿಕ ಯಾಕೆ  ಬಟ್ಟೆ ಹಾಕಿ ಯಾಕೆ ಮುಚ್ಚಿದ್ದೀರಿ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಕೋಟ್ಯಾಂತರ ರೂಪಾಯಿ ಅದರಲ್ಲಿ ಸಾಗಿಸಲಾಗುತ್ತಿತ್ತು ಅಂತಾ ಜನ ಹೇಳುತ್ತಿದ್ದಾರೆ.ಸರ್ಕಾರ ಇದಕ್ಕೆ ಉತ್ತರ ಕೊಡಬೇಕು.ಜವಾಬ್ದಾರಿ ಜಾಗದಲ್ಲಿ ಇದ್ದವರು ಏನಾದರೂ ಮಾಡಿದಾಗ ಅನುಮಾನದ ಹುತ್ತ ಬೆಳೆಯುವುದು ಸಹಜ.ನೂರು ವರ್ಷಗಳ ಮಹಾತ್ಮ ಗಾಂಧಿಯವರ ಎಐಸಿಸಿ ಸಮ್ಮೇಳನದ ಅಧ್ಯಕ್ಷ ಸ್ಥಾನದ ಕೊಂಡಾಡುವ ಕಾರ್ಯಕ್ರಮ ಆಗಿದೆ.ಅಂಬೇಡ್ಕರ್ ರನ್ನು ಸೋಲಿಸಿ ಅಪಮಾನ ಮಾಡಿ ನೋಯಿಸಿ ಇಂದು ಅಂಬೇಡ್ಕರ್ ಅವರೇ ನಮ್ಮ ಅಸ್ಮಿತೆ ಎಂಬಂತೆ ಕಾಂಗ್ರೆಸ್ ಮಾತಾಡುತ್ತಿರುವುದು ದುರದೃಷ್ಟಕರ.ನಕಲಿ ಗಾಂಧಿಗಳು ಇಂದು ಕಾಂಗ್ರೆಸ್ ಅನ್ನು ನಡೆಸುತ್ತಿದ್ದಾರೆ. ಸಂವಿಧಾನ ಸಂಹಾರ ಮಾಡಿದ ಕಾಂಗ್ರೆಸ್ ಇಂದು ಸಂವಿಧಾನ ರಕ್ಷಕರಂತೆ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಟ್ಟಹಾಸ, ಆತ್ಮ ವಂಚನೆಯ ಮಾತುಗಳನ್ನು ಆಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ನಾವು ನೋಡಿದ ರೀತಿಯೇ ಬೇರೆ .ಎಐಸಿಸಿ ಅಧ್ಯಕ್ಷರಾದ ಬಳಿಕ ಅವರ ನಾಲಗೆಯಲ್ಲಿ ವಿಷ ಬರುವಂತಹ ಮಾತುಗಳನ್ನೇ ಆಡುತ್ತಿದ್ದಾರೆ. ಅವರ ನಾಲಗೆಗೆ ಯಾಕೆ ವಿಷ ಬಿತ್ತು? ಖರ್ಗೆ ಎಂದೂ ಕೂಡಾ ಇಷ್ಟು ಕೀಳು ಮಟ್ಟದ ಭಾಷೆ, ಸುಳ್ಳುಗಳನ್ನು ಹೇಳುವುದನ್ನು ನೋಡಿಲ್ಲ.ಅಧಿಕಾರದ ಹಪಹಪಿಯಲ್ಲಿ ಸಿದ್ದರಾಮಯ್ಯ ಮತ್ತು ಖರ್ಗೆ ಒಬ್ಬರನ್ನೊಬ್ಬರು ಮೀರಿಸುವ ರೀತಿ ಸುಳ್ಳು ಹೇಳುತ್ತಿದ್ದಾರೆ.

ನಾವು ಬೆಂಕಿ ಇದ್ದಂತೆ, ಸುಟ್ಟು ಹೋಗುತ್ತೀರಿ ಎಂದು ಖರ್ಗೆ ಹೇಳಿರುವುದು ಯಾವ ಗಾಂಧಿಯ ತತ್ವ?.ಖರ್ಗೆಯವರೇ ಬಿಜೆಪಿಯಲ್ಲಿ ಬೆಂಕಿಯೂ ಇದೆ, ಬಿರುಗಾಳಿಯೂ ಇದೆ. ‌ಬೆಂಕಿ ಆರಿಸುವ ಜಲಶಕ್ತಿ, ಜನಶಕ್ತಿಯೂ ಬಿಜೆಪಿಯಲ್ಲಿ ಇದೆ.ಕಿತ್ತೂರು ಚೆನ್ನಮ್ಮ ಅವರಿಗೆ ಪ್ರಿಯಾಂಕಾ ಗಾಂಧಿಯನ್ನು ಹೋಲಿಕೆ ಮಾಡಿದ್ದೀರಿ. ಯಾರ ಓಲೈಕೆಗಾಗಿ ಈ ಹೋಲಿಕೆ ಮಾಡಿದ್ದೀರಿ?.ದಲಿತರ ಪರವಾಗಿ ಧ್ವನಿ ಎತ್ತದ ನೀವು ಒಂದು ಬಾರಿಯಾದರೂ ಇಂದಿರಾ ಗಾಂಧಿ ಮಾಡಿದ್ದು ತಪ್ಪು ಎಂದು ಹೇಳಿದ್ದೀರಾ? .ಕಾಂಗ್ರೆಸ್ ಸುಡುವ ಮನೆ ಅಂತಾ ಅಂಬೇಡ್ಕರ್ ಹೇಳಿದ್ದಾರೆ. ನನ್ನ ಗೆಲ್ಲಿಸಿದವರು ಕಾಂಗ್ರೆಸ್, ಸೋಲಿಸಿದವರು ಜನಸಂಘ ಅಂತಾ ಯಾವ ನಾಲಿಗೆಯಲ್ಲಿ ನಿನ್ನೆ ಹೇಳಿದ್ದೀರಿ? .ಆತ್ಮವಂಚನೆಯ ರಾಜಕಾರಣ ಮಾಡಿ ನಕಲಿ ಗಾಂಧಿಗಳ ಓಲೈಕೆ ನಿಮ್ಮ ರಾಜಕೀಯ ಜೀವನದ ಎತ್ತರಕ್ಕೆ ಸರಿಯೇ? ಕರ್ನಾಟಕದಲ್ಲಿ ದಲಿತರ ಸಮಾಧಿಯಾಗುತ್ತಿದೆ.ನಾನು ಸಿಎಂ ಆಗಬೇಕು ಅಂತಾ ನಡೆಯುತ್ತಿದೆ.ಯಾರನ್ನು ಬೇಕಾದರೂ ಸಿಎಂ ಮಾಡಿಕೊಳ್ಳಿ .ನಿಮ್ಮ ಕುಲದ ಕೋತಿಯನ್ನಾದರೂ ಮಾಡಿಕೊಳ್ಳಿ ನಮ್ಮ ಅಭ್ಯಂತರ ಇಲ್ಲ.ಪರಮೇಶ್ವರ್ ಅವರನ್ನು ಯಾರಿಗಾಗಿ ಮೂಲೆಗುಂಪು ಮಾಡುತ್ತೀರಿ?.ವಿಷದ ಭಾಷೆಗಳನ್ನು ಬಿಟ್ಟು ಉತ್ತಮ ರಾಜಕಾರಣ ಮಾಡಿ ಎಂದರು.

ಯತ್ನಾಳ್ ಬಗ್ಗೆ ನಾನೇನು ಮಾತನಾಡಲ್ಲ: ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಹೇಳಿಕೆ

ಬೆಂಗಳೂರು:  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಹಿನ್ನೆಲೆ ಶಾಸಕ ಡಾ. ಅಶ್ವಥ್ ನಾರಾಯಣ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಶತಮಾನೋತ್ಸವ ಆಚರಣೆಗೆ ರಾಜ್ಯ ಬಿಜೆಪಿಯಿಂದ ಸಮಿತಿ ರಚಿಸಲಾಗಿದೆ.ಮಾಜಿ ಎಂಎಲ್ಸಿ ಡಾ. ಶಿವಯೋಗಿ ಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.ವಾಜಪೇಯಿ ಅವರ ಬರವಣಿಗೆಗಳನ್ನು ಪಟ್ಟಿ ಮಾಡಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುತ್ತದೆ.ವಾಜಪೇಯಿ ಸ್ಮೃತಿ ಸಂಕಲನ ಮತ್ತು ಅಭಿಯಾನ ನಡೆಯಲಿದೆ.ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.ಫೆಬ್ರವರಿ 15 ರಿಂದ ಮಾರ್ಚ್ 15 ರವರೆಗೆ ಜಿಲ್ಲಾ ಮಟ್ಟದಲ್ಲಿ ಅಟಲ್ ವಿರಾಸತ್ ನಡೆಯಲಿದೆ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿಯಲ್ಲಿನ ಗೊಂದಲಗಳ ವಿಚಾರದ ಬಗ್ಗೆ ಮಾತನಾಡಿದ ಅವರು ನಿನ್ನೆ ಸ್ಪಷ್ಟವಾಗಿ ಸಭೆ ಆರಂಭಕ್ಕೂ ಮುನ್ನವೇ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಸಭೆ ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ನಿನ್ನೆಯ ಸಭೆಗಳಲ್ಲಿ ಸಂಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಅಸಮಾಧಾನಗಳು ಸಂಪೂರ್ಣ ಸ್ಥಗಿತವಾಗಿ ಕೊನೆಯಾಗುತ್ತದೆ ಎಂಬ ವಿಶ್ವಾಸವಿದೆ.ಚುನಾವಣಾ ಪ್ರಕ್ರಿಯೆ ಸಹಜವಾಗಿ ಸಹಮತದಲ್ಲೇ ನಡೆಯುತ್ತದೆ, ಚುನಾವಣೆ ಅಂತಾದರೆ ಚುನಾವಣಾಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದರು.

ತಮ್ಮನ್ನು ಪರಿಗಣಿಸುತ್ತಿಲ್ಲ ಎಂಬ ಮಾಜಿ ಶಾಸಕರ ಆಕ್ಷೇಪದ ಬಗ್ಗೆ ಮಾತನಾಡಿ ಹಾಲಿ ಶಾಸಕ, ಸೋತವರು ಎಲ್ಲರನ್ನೂ ಒಳಗೊಂಡಂತೆ ಪಕ್ಷವನ್ನು ಕಟ್ಟುವ ಕೆಲಸ ಆಗುತ್ತದೆ.ಶಾಸಕಾಂಗ ಪಕ್ಷದ ಸಭೆಗೆ ಚುನಾಯಿತ ಜನಪ್ರತಿನಿಧಿಗಳನ್ನೇ ಕರೆಯಬೇಕಾಗುತ್ತದೆ ಎಂದರು, ಬಿಜೆಪಿಯಲ್ಲಿ ಪರ-ವಿರೋಧ ಹೇಳಿಕೆಗಳು ಮುಂದುವರಿದಿರುವ ವಿಚಾರದ ಬಗ್ಗೆ ಮಾತನಾಡಿ ಸದ್ಯಕ್ಕೆ ಕೋಲ್ಡ್ ವಾರ್, ಇನ್ನೊಂದು ವಾರ್ ಏನೂ ಇಲ್ಲ. ಸದ್ಯಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಅಂತಾ ಅಷ್ಟೇ. ಚುನಾವಣೆ ನಂತರ ಎಲ್ಲದಕ್ಕೂ ತೆರೆ ಆಗುತ್ತದೆ. ಪಕ್ಷದಲ್ಲಿ ಯಾರನ್ನೂ ಕಡೆಗಣಿಸುವ ಕೆಲಸ ಆಗಿಲ್ಲ. ಪಕ್ಷ ಕಟ್ಟುವುದು ಅಧಿಕಾರ ಎನ್ನುವುದಕ್ಕಿಂತ ಹೆಚ್ಚಾಗಿ ಜವಾಬ್ದಾರಿ ಎಂದು ತಿಳಿಸಿದ್ರು.

ನಿನ್ನೆ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕ್ ಗಾಂಧಿಯನ್ನು ಕಿತ್ತೂರು ಚೆನ್ನಮ್ಮಗೆ ಹೋಲಿಕೆ ಬಗ್ಗೆ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಹೊಗಳು ಭಟರಿಗೆ ಏನೂ ಕಡಿಮೆ ಇಲ್ಲ. ಚೆನ್ನಮ್ಮ ಅವರಿಗೂ ಇವರಿಗೂ ಏನು ಹೋಲಿಕೆ?.ರಾಣಿ ಚೆನ್ನಮ್ಮ ತರಹ ಇವರೂ ಜೀವನ ನಡೆಸಿ ಸಾಧನೆ ಮಾಡಲಿ.ಚೆನ್ನಮ್ಮ ಅವರ ದಾರಿಯಲ್ಲಿ ಸಾಗಲು ಇವರು ಇನ್ನೂ ಪ್ರಾರಂಭವನ್ನೇ ಮಾಡಿಲ್ಲ. ಆಗಲೇ ತೆಗೆದುಕೊಂಡು ಹೋಗಿ ರಾಣಿ ಚೆನ್ನಮ್ಮ ಮಾಡಿ ಕೂರಿಸಿಬಿಟ್ಟರೆ? .ಅವರು ರಾಣಿ ಚೆನ್ನಮ್ಮ ತರಹ ಆಗಲಿ ಅಂತಾ ನಾವೂ ಬಯಸುತ್ತೇವೆ.ಒಬ್ಬರು ಹಿರಿಯರೇ ಈ ರೀತಿ ಹೊಗಳು ಭಟರಾದರೆ ತಪ್ಪು ಸಂದೇಶ ಹೋಗುತ್ತದೆ.ನಾವು ದೇಶ ಮೊದಲು ಎನ್ನುವವರು.ಕಾಂಗ್ರೆಸ್ ನವರಂತೆ ಪಕ್ಷ ಮೊದಲು ಎನ್ನುವುದಿಲ್ಲ.ಕಾಂಗ್ರೆಸ್ ನಲ್ಲೂ ಒಳ್ಳೆಯ ನಾಯಕರು ಬಂದರೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದೇ.ದೇಶಕ್ಕೆ ಒಳ್ಳೆಯದಾದರೆ ಸಾಕು, ಕುಟುಂಬಕ್ಕೆ ಒಳ್ಳೆಯದು ಆದರೆ ಸಾಕು ಅಂತಾ ಅಲ್ಲ ಎಂದರು.

ನನ್ನ, ಯತ್ನಾಳ್ ನ‌ ಉಚ್ಛಾಟನೆ ಮಾಡಲು ಧಮ್ ಬೇಕು ಎಂಬ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅವರು ಬೆಳೆದಿರುವ ನಾಯಕರು.ಅವರ ಬಗ್ಗೆ ನಾವೇನೂ ಮಾತಾಡುವುದು ಇಲ್ಲ.ನಾಯಕರಾಗಿ ಬೆಳೆದು ಎಲ್ಲರಿಗೂ ಒಳ್ಳೆಯದು ಮಾಡಲಿ ಅಷ್ಟೇ.  ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಭಾಗಿಯಾದ ಬಗ್ಗೆ ಮಾತನಾಡಿ ಪಕ್ಷದ ಚುನಾವಣಾ ಪ್ರಕ್ರಿಯೆ ‌ನಡೆದ ಬಳಿಕವೇ ಎಲ್ಲಾ ಕ್ರಮ, ನಿಲುವು ಎಲ್ಲವೂ .ಅಲ್ಲಿಯವರೆಗೂ ಬರೀ ಚುನಾವಣೆ ಅಷ್ಟೇ ಎಂದರು. ಕೋರ್ ಕಮಿಟಿಯಲ್ಲಿ ಜಿಲ್ಲಾಧ್ಯಕ್ಷರ ನೇಮಕ ಕುರಿತು ಚರ್ಚೆ ಬಗ್ಗೆ ಮಾತನಾಡಿ ಯಾವುದೇ ಚರ್ಚೆ ಆಗಿಲ್ಲ.ಬಂದಿರುವ ಹೆಸರುಗಳನ್ನು ಓದಿದ್ದು, ಕೇಳಿಸಿಕೊಂಡಿದ್ದು ಅಷ್ಟೇ. ಚುನಾವಣಾಧಿಕಾರಿಗಳು ಪಟ್ಟಿ ಮಾಡಿ ಕೋರ್ ಕಮಿಟಿ ಮುಂದೆ ಇಟ್ಟಿದ್ದರು.23 ಜಿಲ್ಲೆಯದ್ದು ಮಾತ್ರ ನಿನ್ನೆ ಪಟ್ಟಿ ಬಂದಿತ್ತು. ನೇಮಕಕ್ಕೆ ಕೆಲವು ಮಾನದಂಡಗಳನ್ನು ಇಟ್ಟುಕೊಳ್ಳಲಾಗಿದೆ. ಇವರು ಬೇಕು, ಅವರನ್ನು ಬದಲಾಯಿಸಬೇಕು ಎಂಬ‌ ಯಾವುದೇ ಚರ್ಚೆ ಆಗಿಲ್ಲ.ಮೂರು ಜನರ ಪಟ್ಟಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದರು.