ಬೆಂಗಳೂರು; ಕಲ್ಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ಅಟ್ಟಹಾಸ ಜೋರಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕಲ್ಬುರ್ಗಿಯಲ್ಲಿ ಆಡಳಿತ ಕುಸಿದಿದೆ. ಕಲ್ಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ಅಟ್ಟಹಾಸ ಜೋರಾಗಿದೆ. ತಮಗೆ ಬೇಕಾದವರನ್ನು ಸಹಚರರನ್ನಾಗಿ ನೇಮಿಸಿಕೊಂಡು ಎಲ್ಲಾ ದಂಧೆಯಲ್ಲಿ ತೊಡಗಿದ್ದಾರೆ. ಈ ಕಾರಣಕ್ಕಾಗಿ ಸಚಿನ್ ಆತ್ಮಹತ್ಯೆ ಆಗಿದೆ. ಹೀಗಾಗಿ ಇದು ತನಿಖೆಯಾಗಲೇಬೇಕು. ಸಚಿನ್ ಗೆ ಧೈರ್ಯ ಸಾಕಾಗಿಲ್ಲ, ಪತ್ರ ಬರೆದಿಟ್ಟು ಸತ್ತು ಹೋಗಿದ್ದೇನೆ.ಇದು ರಿಪಬ್ಲಿಕ್ ಆಫ್ ಕಲ್ಬುರ್ಗಿ ಆಗಿದೆ. ಅಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದೇ ಆಡಳಿತ. ಕರ್ನಾಟಕದ ಆಡಳಿತವೇ ವೇಳೆ, ಕಲ್ಬುರ್ಗಿ ಆಡಳಿತವೇ ಬೇರೆ. ಕೂಡಲೇ ಪ್ರಿಯಾಂಕ್ ಖರ್ಗೆಯವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಕೂಡಲೇ ಪ್ರಿಯಾಂಕ್ ಖರ್ಗೆ ಅವರನ್ನು ಬಂಧಿಸಬೇಕು ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಯನಾಡಿನಲ್ಲಿ ಕಾಂಗ್ರೆಸ್ ಅಪಮಾನ ಮಾಡಿತ್ತು. ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಬಂದಾಗ ಡಿ.ಕೆ. ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಳ್ಳಿದ್ದಾರೆ. ಇದು ಕಾಂಗ್ರೆಸ್ ದಲಿತರಿಗೆ ಕೊಡುವ ಗೌರವ. ಆದರೆ ಕೆಲವು ಸಂಘಟನೆಗಳು ಇತ್ತೀಚೆಗೆ ಕಾಂಗ್ರೆಸ್ ಪರವಾಗಿಯೇ ನಿಲ್ಲುತ್ತಿವೆ. ಅವರಿಗೆ ಅರ್ಥ ಆಗಿದೆಯೋ ಇಲ್ಲವೋ ಅಂತಾ ನನಗೆ ಅರ್ಥವಾಗುತ್ತಿಲ್ಲ. ಅಂಬೇಡ್ಕರ್, ಜಗಜೀವನರಾಂ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿದ್ದು ಈ ಸಂಘಟನೆಗಳಿಗೆ ಗೊತ್ತಿಲ್ವಾ?. ಕಾಂಗ್ರೆಸ್ ನ ಪಾಪದ ಕೊಡ ತುಂಬಿದೆ ಎಂದರು.
ಇನ್ನು ಮುಂದೆ ಕಾಂಗ್ರೆಸ್ ನ ಎಲ್ಲಾ ಸಂಭ್ರಮಾಚರಣೆಗಳು ಸಂತಾಪ ಸಭೆಗಳಾಗಿ ಬದಲಾಗುತ್ತದೆ. ಮನಮೋಹನ್ ಸಿಂಗ್ ಅದೇ ದಿನ ಪ್ರಾಣ ತ್ಯಾಗ ಮಾಡುತ್ತಾರೆ ಅಂದರೆ ಅರ್ಥ ಮಾಡಿಕೊಳ್ಳಬೇಕು. ಮನಮೋಹನ್ ಸಿಂಗ್ ಅವರಿಗೂ ನೋವು ಇತ್ತು. ಕಾಂಗ್ರೆಸ್ ನಲ್ಲಿ ಇವರ ಚೇಲಾಗಿರಿ ಮಾಡಿದರೆ ಮಾತ್ರ ಅವಕಾಶ. ಇನ್ನು ಮುಂದೆ ಕಾಂಗ್ರೆಸ್ ನವರಿಗೆ ಸಂಭ್ರಮದ ದಿನಗಳು ಇಲ್ಲ. ಇನ್ನು ಎಲ್ಲಾ ದಿನಗಳೂ ಅವರಿಗೆ ಸಂತಾಪದ ದಿನಗಳೇ ಎಂದಿದ್ದಾರೆ.