ಬೆಂಗಳೂರು; ರಾಜ್ಯ ಸರ್ಕಾರ, ಗ್ಯಾರಂಟಿ ತಲೆಮೇಲಿಟ್ಟುಕೊಂಡು,ಭಾರವನ್ನ ಇಳಿಸಲಾಗದೆ ಪ್ರತೀಯೊಂದರ ದರ ಏರಿಕೆ ಮಾಡ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮೆಟ್ರೋ ದರ ಹೆಚ್ಚಳ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿರೋ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ತಲೆಮೇಲಿಟ್ಟುಕೊಂಡು, ಭಾರವನ್ನ ಇಳಿಸಲಾಗದೆ ಪ್ರತೀಯೊಂದರ ದರ ಏರಿಕೆ ಮಾಡ್ತಿದೆ.ಮೆಟ್ರೋ ದರವನ್ನೂ ಹೆಚ್ಚಳ ಮಾಡಿದೆ. ಸ್ಟ್ಯಾಂಪ್ ಡ್ಯೂಟಿ, ಹಾಲು, ನೀರು ಎಲ್ಲದರ ದರ ಹೆಚ್ಚಳ ಆಗಿದೆ.ಇನ್ನು ಯಾವುದೂ ದರ ಹೆಚ್ಚಿಸೋದಿಲ್ಲ. ಹರಿಪ್ರಸಾದ್ ನಿನ್ನೆ ಹೇಳಿಕೆ ಕೊಟ್ಟಿದ್ದಾರೆ.ಗ್ಯಾರಂಟಿ ಹೊಡೆತ ಇದೆ ಅಂತ.ಈ ಸರ್ಕಾರ ಎಲ್ಲದರಲ್ಲೂ ಕೈ ಚೆಲ್ಲಿ ಕುಳಿತಿದೆ.ಬೆಲೆ ಏರಿಕೆ ಜನರ ತಲೆ ಬೋಳಿಸುವ ಕೆಲಸ ಮಾಡಿದೆ ಎಂದ್ರು.
ಮಾಜಿ ಸಂಸದ ಉಗ್ರಪ್ಪ ಸಿಲ್ಲಿ ರೀಸನ್ ಅಂತ ರಾಜ್ಯಪಾಲರ ಮೇಲೆ ಹೇಳಿಕೆ ಕೊಟ್ಟ ಬಗ್ಗೆ ಮಾತನಾಡಿದ ಅವರು ಸಿಲ್ಲಿ ಪೀಪಲ್ ಟಾಕ್ ಆಲ್ವೇಸ್ ಸಿಲ್ಲಿ ಟಾಕ್.ಇವರು ಸುಗ್ರೀವಾಜ್ಞೆ ಮಾಡಿದ ಕೂಡಲೇ ಒಳ್ಳೆಯ ಹೆಸರು ಎಲ್ಲಿ ಬರಲಿದೆ.?.ಮೈಕ್ರೋ ಫೈನಾನ್ಸ್ ಮಾಡೋರಿಗೂ, ರಾಜ್ಯಪಾಲರಿಗೂ ಏನು ಸಂಬಂಧ ಇದೆ.ಹತ್ತು ವರ್ಷಗಳ ಕಾಲಶಿಕ್ಷೆ ಅಂತ ನಮೂದು ಮಾಡಿದ್ದಾರೆ.ಇಂತ ತೀರ್ಮಾನ ಆಗಬೇಕಾದ್ರೆ ಸದನದಲ್ಲಿ ಚರ್ಚೆಯಾಗಬೇಕು.ಸದನದಲ್ಲಿ ಚರ್ಚೆಯಾಗದೆ ಹೇಗೆ ತೀರ್ಮಾನ ಆಗಲಿದೆ.ಮೈಕ್ರೋ ಫೈನಾನ್ಸ್ ಮಾಡೋರ ಜೊತೆ ಸರ್ಕಾರದ ಸಂಬಂಧ ಇದೆ ಹೊರತು, ರಾಜ್ಯಪಾಲರಿಗಲ್ಲ.ಉಗ್ರಪ್ಪ ಅವರು ಸಂಡೆ ಲಾಯರ್.ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಸಂಧರ್ಭದಲ್ಲಿ ಅಂಕಿ ಅಂಶ ಹೇಳೋದು, ಉಗ್ರಪ್ಪ ಸೆಕ್ಷನ್ ಬಗ್ಗೆ ಹೇಳೋದು ಒಂದೇ.ಅವರು ಹೇಳೋದು ಯಾರಿಗೂ ಗೊತ್ತಾಗಲ್ಲ.ಉಗ್ರಪ್ಪ ಹೇಳಿದ್ದೇ ಸೆಕ್ಷನ್, ಅದು ಜನರಿಗೆ ಅರ್ಥ ಆಗಲ್ಲ.ರಾಜ್ಯಪಾಲರ ಮೇಲೆ ಗೂಬೆ ಕೂರಿಸೋದು ಬಿಡಿ.ಮುಂದಿನ ಸದನದಲ್ಲಿ ಮಂಡಿಸಿ, ಯಾರು ಬೇಡ ಅಂದ್ರು ಎಂದು ಉಗ್ರಪ್ಪಗೆ ಛಲವಾದಿ ನಾರಾಯಣಸ್ವಾಮಿ ಟಾಂಗ್ ನೀಡಿದ್ದಾರೆ.
ದೆಹಲಿ ರಿಸಲ್ಟ್ ಬಂದಿದೆ.ಬಿಜೆಪಿ ಪರವಾಗಿ ಇರೋರು ಬಿಜೆಪಿ ಪರ ಸಂಭ್ರಮ ಮಾಡ್ತಿದ್ರೆ.ಕಾಂಗ್ರೆಸ್ ಶೂನ್ಯ ಬಂದಿರೋದಕ್ಕೆ ಹೆಚ್ಚು ಸಂಭ್ರಮ ಪಡ್ತಿದ್ದಾರೆ.ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷವನ್ನ ವಿಸರ್ಜನೆ ಮಾಡಿ ಅಂದ್ರು.ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಟ್ಟಿದ್ದು ಕಾಂಗ್ರೆಸ್ ಅಂತ ಹೇಳಿದ್ರು.ಈಗ ಗಾಂಧೀಜಿ ಮಾತು ಜನರಿಗೆ ಪ್ರೇರಣೆಯಾಗಿದೆ.ಹಾಗಾಗಿ ಶೂನ್ಯ ಸಂಪಾದನೆ ನೀಡಿದ್ದಾರೆ.ಕಾಂಗ್ರೆಸ್ಗೆ ಮೂರು ಕಡೆ ಮಾತ್ರ ಅಸ್ತಿತ್ವ ಇದೆ.ಮುಂದೆ ಆ ಅಸ್ಥಿತ್ವವೂ ಕಳೆದುಕೊಳ್ಳಲಿದೆ ಎಂದು ತಿಳಿಸಿದ್ರು.