ಬೆಂಗಳೂರು : ವಸತಿ ಯೋಜನೆಗಳಲ್ಲಿ ಮುಸ್ಲಿಂ ಮೀಸಲಾತಿ ಹೆಚ್ಚಳ ಕುರಿತು ಸಚಿವ ಸಂಪುಟ ನಿರ್ಧಾರ ಮಾಡಿದ್ದು ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಮೀಸಲಾತಿ ಹೆಚ್ಚಳ ಅತ್ಯಂತ ಕಳವಳಕಾರಿ ಬೆಳವಣಿಗೆ. ಯಾವುದೇ ತಜ್ಞರ ವರದಿ ನೀಡದೇ ಮುಸಲ್ಮಾನರ ತುಷ್ಟೀಕರಣಕ್ಕೆ ಕಾಂಗ್ರೆಸ್ ನಿಂದ ಮೀಸಲಾತಿ ದುರುಪಯೋಗವಾಗುತ್ತಿದೆ. ತುರ್ತು ಪರಿಸ್ಥಿತಿ ಮೂಲಕ ಸಂವಿಧಾನವನ್ನು ವಿಕೃತಗೊಳಿಸಿದ್ದು ಕಾಂಗ್ರೆಸ್. ಕರ್ನಾಟಕ ಕಾಂಗ್ರೆಸ್ ಧರ್ಮಾಧಾರಿತ ಮೀಸಲಾತಿಗೆ ಕೈ ಹಾಕಿದೆ. ಸರ್ಕಾರದ ನಡೆ ನೋಡಿದರೆ ಸರ್ಕಾರವನ್ನು ಮೌಲ್ವಿಗಳ ಸಲಹೆ ಇಟ್ಟುಕೊಂಡು ಆಡಳಿತ ನಡೆಸುತ್ತಿರುವ ರೀತಿ ಅನ್ನಿಸುತ್ತಿದೆ. ಬಡವರಿಗೆ ಮನೆ ಕೊಡಬೇಕೇ ಹೊರತು ಮುಸಲ್ಮಾನರಿಗೆ ಕೊಟ್ಟು ಓಲೈಸುವ ಪ್ರಯತ್ನ ಮಾಡುತ್ತಿದೆ.ಇವರ ಬದ್ಧತೆ ಕೇವಲ ಮುಸಲ್ಮಾನರ ಪರವಾಗಿ ಇದೆ ಅನ್ನಿಸುತ್ತಿದೆ ಎಂದಿದ್ದಾರೆ. ಅಧಿವೇಶನದಲ್ಲಿ ಸರ್ಕಾರದ ನಿಲುವನ್ನು ನಾವು ಪ್ರಶ್ನೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ
ಮತೀಯ ಆಧಾರಿತ ಮೀಸಲಾತಿಯನ್ನು ಅಂಬೇಡ್ಕರ್ ನಿರಾಕರಿಸಿದ್ದರು. ಕಾಂಗ್ರೆಸ್ ಸರ್ಕಾರ ಮತೀಯ ಆಧಾರಿತ ಮೀಸಲಾತಿ ಕೊಟ್ಟಿದ್ದಲ್ಲದೇ ಅದನ್ನು ಯೋಜನೆಗಳಿಗೆ ವಿಸ್ತರಿಸಿ ಕರ್ನಾಟಕದ ಜನರನ್ನು ಮಾತ್ರ ಕೆಣಕುತ್ತಿಲ್ಲ. ಇವರು ಅಂಬೇಡ್ಕರ್ ಆಶಯಗಳನ್ನೂ ಕೆಣಕುತ್ತಿದ್ದಾರೆ. ತಪ್ಪಿನಿಂದ ಪಾಠ ಕಲಿಯದ ಕಾಂಗ್ರೆಸ್ ಮತೀಯ ಆಧಾರದ ವಿಭಜನೆಗೆ ಪ್ರಯತ್ನಿಸುತ್ತಿದೆ. ಮನೆಯಿಲ್ಲದ ಬಡವರು ಎಲ್ಲಾ ಜಾತಿಯಲ್ಲೂ ಇದ್ದಾರೆ. ಜಾತಿ ಮತ್ತು ಮತದ ಆಧಾರದಲ್ಲಿ ಸಮಾಜ ಒಡೆಯುವುದು ಕಾಂಗ್ರೆಸ್ ಜಾತ್ಯಾತೀತತೆಯಾ?. ರೋಹಿಂಗ್ಯಾ ಮುಸಲ್ಮಾನರಿಗೆ ಮನೆ ಮಾಡಿಕೊಟ್ಟು ದೇಶವನ್ನು ಅಪಾಯಕ್ಕೆ ದೂಡಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ನಿರ್ಧಾರ ವಾಪಸ್ ಪಡೆಯಲಿ, ಸರ್ಕಾರ ಒಡೆಯುವುದು ಬೇಡ. ಬಾಂಗ್ಲಾ ಅಕ್ರಮ ನುಸುಳುಕೋರರನ್ನು ಸೆಟಲ್ ಮಾಡಲು ನೀವು ಹುನ್ನಾರ ಮಾಡುತ್ತಿದ್ದೀರಿ. ಬೆಂಗಳೂರಿನಲ್ಲಿ ನೀವು ಮತ ಬ್ಯಾಂಕ್ ಕಳೆದುಕೊಳ್ಳುತ್ತಿದ್ದೀರಿ ಬಿಜೆಪಿ ಹೆಚ್ಚು ಕಡೆ ಗೆಲ್ಲುತ್ತಿದೆ, ಅದಕ್ಕೆ ನಿಮ್ಮ ವೋಟ್ ಬ್ಯಾಂಕ್ ಗೆ ಮಾಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಯಾವುದೇ ಧರ್ಮಾಧಾರಿತ ಮೀಸಲಾತಿ ಅಸಾಂವಿಧಾನಿಕ ಅಂತಾ ಸುಪ್ರೀಂ ಕೋರ್ಟ್ ತೀರ್ಪು ಇದೆ. ಮತ್ತೊಂದು ಅಸಾಂವಿಧಾನಿಕ ತೀರ್ಮಾನವನ್ನು ಇಂದು ತೆಗೆದುಕೊಂಡಿದೆ. ವಸತಿ ಯೋಜನೆಯಲ್ಲಿ ಬಹುಪಾಲು ಹಣ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬರುತ್ತದೆ. ಸರ್ಕಾರ ತುಷ್ಟೀಕರಣಕ್ಕೆ ಸರ್ಕಾರದ ಹಣವನ್ನು ಕೊಡುತ್ತಾ ಹೋಗುತ್ತಿದೆ. ಕಾನೂನು ಹೋರಾಟದ ಬಗ್ಗೆ ಕೂಡಾ ನಾವು ಚಿಂತನೆ ಮಾಡುತ್ತೇವೆ ಏನಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಸರ್ಕಾರ ಆಗಿದೆ. ಈ ಸರ್ಕಾರದಲ್ಲಿ ಮುಸ್ಲಿಮರಿಗೆ ಮೀಸಲಾತಿಗಳು ಹೆಚ್ಚಳ ಆಗುತ್ತಲೇ ಇದೆ. ಎಸ್ಸಿ, ಎಸ್ಟಿ, ಒಬಿಸಿಗಳಿಗೆ ರಾಜ್ಯ ಸರ್ಕಾರ ಅನ್ಯಾಯ. ಅನುಕೂಲತೆಗಳು ಅಲ್ಪಸಂಖ್ಯಾತರಿಗೆ ಮಾತ್ರ ಸಿಗುತ್ತಿವೆ. ಎಸ್ಸಿ, ಎಸ್ಟಿಗಳ ಹಣವನ್ನು ಗ್ಯಾರಂಟಿ ಸ್ಲೀಮ್, ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ಕಾಲದ ಆಡಳಿತವನ್ನು ಅಳವಡಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.